ಸ್ವಾಮೀ ವಿವೇಕಾನಂದ
(ಜನವರಿ ೧೨ ಸ್ವಾಮೀ ವಿವೇಕಾನಂದರ ಜನ್ಮದಿನ ತನ್ಮಿತ ವಿಶೇಷ ಲೇಖನ)
ಸ್ವಾಮೀ ವಿವೇಕಾನಂದ
ಯುವಕರೆ ಎದ್ದೇಳಿ ಗುರಿ ಮುಟ್ಟುವವರೆಗೆ ಮುನ್ನಡೆಯಿರಿ ಎಂಬ ಸೂಕ್ತಿಯ ಮೂಲಕ ಯುವ ಪೀಳಿಗೆಯಲ್ಲಿ ನಿರ್ಭಯತೆ, ಆಶಾವಾದವನ್ನು ಮೂಡಿಸಿದ ಸ್ವಾಮೀ ವಿವೇಕಾನಂದರು ನಾಡಿಗೆ ನೀಡಿದ ಕೊಡುಗೆ ಅಭೂತಪೂರ್ವ. ಇವರ ಜನ್ಮದಿನವಾದ ಜನವರಿ ೧೨ ನ್ನು ರಾಷ್ಟ್ರೀಯ ಯುವದಿನ ಎಂದು ಆಚರಿಸಲಾಗುತ್ತಿದೆ.
ಹುಟ್ಟುತ್ತಾ ವಿರೇಶ್ವರರಾಗಿ, ಬೆಳೆಯುತ್ತಾ ನರೇಂದ್ರರಾಗಿ ಜನರ ಮನತಟ್ಟಿದಂತ ಧೀಮಂತ ವ್ಯಕ್ತಿ ಸ್ವಾಮಿ ವಿವೇಕಾನಂದರು. ಬಾಲ್ಯದಲ್ಲಿಯೇ ಚುರುಕಾದ ವ್ಯಕ್ತಿತ್ವವನ್ನುಹೊಂದಿದ್ದ ಇವರು ಯಾವುದೇ ವಿಷಯವಾದರು ಸರಿ, ಅದು ಸರಿಯಾಗಿ ಮನದಟ್ಟಾಗುವರೆಗೆ ಬಿಡುತ್ತಿರಲಿಲ್ಲವಂತೆ. ಒಮ್ಮೆ ಹರಿಕಥೆಯನ್ನು ಹೇಳುವವರು, ಹನುಮಂತನು ಚಿರಂಜೀವಿ, ಈಗಲೂ ರಾತ್ರಿ ಬಾಳೆಯ ತೋಟದಲ್ಲಿ ಇರುತ್ತಾನೆ ಎಂದಿದ್ದರಂತೆ. ಈ ವಿಷಯವನ್ನು ಕೇಳಿದ ಬಾಲಕ ಅರ್ಧರತ್ರಿಯವರೆಗು ಬಾಳೆಯ ತೋಟದಲ್ಲಿ ಹನುಮಂತನನ್ನು ಹುಡುಕಿ ಮರಳಿ ಬಂದು ತಾಯಿ ಭುವನೇಶ್ವರಿಯ ಹತ್ತಿರ ಬಾಳೆಯ ತೋಟದಲ್ಲಿ ಹನುಮಂತನಿಲ್ಲ ಎಂದರಂತೆ.
ಮಹಾನ್ ಚಿಂತಕರಾಗಿ, ತತ್ವಜ್ಞಾನಿಗಳಾಗಿ ಹೆಸರು ಪಡೆದ ಇವರು ವಿಶ್ವ ಪ್ರವಾಸ ಕೈಗೊಂಡು ಆತ್ಮಜ್ಞಾನ, ಕರ್ಮಯೋಗ, ಜ್ಞಾನಯೋಗ, ವೇದಾಂತ ತತ್ವ ಈ ಮೊದಲಾದ ವಿಷಯಗಳ ಕುರಿತು ನ್ಯೂಯಾರ್ಕ, ಲಂಡನ್, ಅಮೇರಿಕಾಗಳಲೆಲ್ಲಾ ಉಪನ್ಯಾಸ ನೀಡಿ ಜನರ ಮೆಚ್ಚುಗೆಗೆ ಪಾತ್ರರಾದರು. ಬಡಜನರ ಸೇವೆ ಮಾಡಿದರೆ ದೇವರ ಸೇವೆ ಮಾಡಿದಂತೆ ಎಂಬುದು ಇವರ ಮೂಲ ತತ್ತವವಾಗಿತ್ತು. ಭಾರತದಲ್ಲಿ ರಾಮಕೃಷ್ಣ ಮಿಶನ್ ಸ್ಥಾಪಿಸಿ ಆತ್ಮನೋ ಮೋಕ್ಷಾರ್ಥಂ, ಜಗದ್ ಹಿತಾಯ ಚ (ಸ್ವ ಮೋಕ್ಷಕ್ಕಾಗಿ ಮತ್ತು ಜಗತ್ತಿನ ಹಿತಕ್ಕಾಗಿ) ಎಂಬ ತತ್ವವನ್ನು ಪ್ರತಿಪಾದಿಸಿದರು. ಯಾವೊದೋ ಶ್ರೇಷ್ಠ ಕಾರ್ಯಕ್ಕಾಗಿ ಅವತರಿಸಿದ ಈ ಮಹಾನ್ ಚೇತನ ತನ್ನ ದ ಕೈಂಕರ್ಯವನ್ನೆಲ್ಲಾ ಮುಗಿಸಿ ಜೂಲೈ ೦೪ -೧೯೦೨ ರಂದು ಅಂತರಿಕ್ಷದಲ್ಲಿ ಲೀನವಾಯಿತು. ವ್ಯಕ್ತಿ ನಮ್ಮಿಂದ ದೂರವಾದರು ಅವರು ಉಪದೇಶಿಸಿದ ಅಮರ ಸಂದೇಶ, ಅಮೃತ ತತ್ವಗಳೂ ಇಂದಿಗೂ ಯುವ ಪೀಳಿಗೆಗೆ ಮಾಧರಿಯಾಗಿದೆ.
***
ರೇಷ್ಮಾ ನಾಯಕ ಅಂಕೋಲಾ
Comments
ಉ: ಸ್ವಾಮೀ ವಿವೇಕಾನಂದ
In reply to ಉ: ಸ್ವಾಮೀ ವಿವೇಕಾನಂದ by ಸುಮ ನಾಡಿಗ್
ಉ: ಸ್ವಾಮೀ ವಿವೇಕಾನಂದ