ಮುಖ್ಯವಾಹಿನಿಯ ಪ್ರಜಾಪ್ರಭುತ್ವದ ರಾಜಕೀಯ ಮಾರ್ಗ ಒಳ್ಳೆಯ ಆಯ್ಕೆಯಾಗಬಹುದಲ್ಲವೇ? ಎನ್ಕೌಂಟರ್, ಛತ್ತೀಸ್ಗಡದಲ್ಲಿ 29 ನಕ್ಸಲರ ಹತ್ಯೆ ಆಗಾಗ ಈ ರೀತಿಯ ಸುದ್ದಿಗಳು ಆಂಧ್ರಪ್ರದೇಶ, ತೆಲಂಗಾಣ, ಜಾರ್ಖಂಡ್, ಛತ್ತೀಸ್ಗಡ, ಬಿಹಾರ, ಒರಿಸ್ಸಾ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ ಬಿಹಾರದ ಕೆಲವು ಭಾಗಗಳು ಮುಂತಾದ ಕಡೆ ಕೇಳಿ ಬರುತ್ತದೆ. ಸೈದ್ಧಾಂತಿಕ ಸ್ಪಷ್ಟತೆ ಇದ್ದರೂ ಮಾರ್ಗದಲ್ಲಿ ಎಡವುತ್ತಿರುವ ನಕ್ಸಲರು, ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರವೂ ಪ್ರಜಾಪ್ರಭುತ್ವ ಇಷ್ಟೊಂದು ಗಟ್ಟಿಯಾಗಿ, ಆಳವಾಗಿ, ತಾಂತ್ರಿಕವಾಗಿ ಮುಂದುವರಿದಿರುವಾಗ, ಸಮೂಹ ಸಂಪರ್ಕ ಕ್ರಾಂತಿಯಾಗಿರುವಾಗ, ಈಗಲೂ ಶಸ್ತ್ರಾಸ್ತ್ರ ಹೋರಾಟ ಮಾಡುತ್ತಾ, ಹಿಂಸೆಯನ್ನು ನಂಬಿಯೇ ತಮ್ಮ ಹೋರಾಟ ಮಾಡುವ ಈ ಚಳವಳಿ ನಿಜಕ್ಕೂ ವಿಷಾದನೀಯ ಮತ್ತು ಅತ್ಯಂತ ಮೂರ್ಖತನದ್ದು.
ಭಾರತದಂತ ಬೃಹತ್ ಶಕ್ತಿಯುತ ಸೈನಿಕ ಮತ್ತು ಪೊಲೀಸ್ ವ್ಯವಸ್ಥೆಯ ವಿರುದ್ಧ ಕೆಲವೇ ಜನ, ಕೆಲವೇ ಶಸ್ತ್ರಾಸ್ತ್ರಗಳ ಮೂಲಕ ಹೆದರಿಸುವ, ಬೆದರಿಸುವ ಮಾರ್ಗಗಳಿಂದ ತಮ್ಮ ಯೋಜನೆ ಕಾರ್ಯರೂಪಕ್ಕೆ ತರುವ ಯೋಚನೆಯೇ ಅತ್ಯಂತ ಬಾಲಿಶವಾದದ್ದು. ಅನ್ಯಾಯದ ವಿರುದ್ಧ, ಶೋಷಣೆಯ ವಿರುದ್ಧ, ದುರ್ಬಲರ ಪರವಾಗಿ ತಮ್ಮ ತನು ಮನ ಧನವನ್ನು ಧಾರೆ ಎರೆದು ಹೋರಾಡುವುದು ಉತ್ತಮ ಮಾರ್ಗವೇನೋ ನಿಜ. ಆದರೆ ಅದಕ್ಕಾಗಿ ಶಸ್ತ್ರ ಮತ್ತು ಅದರ ಮೂಲಕ ಹಿಂಸೆಯನ್ನು ಖಂಡಿತವಾಗಿಯೂ ಈ ನೆಲದ ಯಾವ ನಾಗರಿಕರು ಒಪ್ಪಲು ಸಾಧ್ಯವಿಲ್ಲ. ನಿಜಕ್ಕೂ ನಕ್ಸಲರಿಗೆ ಆದರ್ಶಗಳಾಗಿ, ಸೈದ್ಧಾಂತಿಕ ಮಾದರಿಯಾಗಿ, ದಾರಿ ತೋರಬಹುದಾದ ಇಬ್ಬರು ವ್ಯಕ್ತಿಗಳೆಂದರೆ ಮಹಾತ್ಮಾ ಗಾಂಧಿ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್.
ಒಂದು ಚಳವಳಿ, ಅದರ ಹಿನ್ನೆಲೆ, ಅದರ ಮಾರ್ಗ, ಅದರ ಗುರಿ, ಅದನ್ನು ಸಾಧಿಸುವ ರೀತಿ ನೀತಿ, ಸ್ಪಷ್ಟತೆ, ಪ್ರಾಮಾಣಿಕತೆ ಈ ವ…
ಮುಂದೆ ಓದಿ...