ಮುನಿಸು ತೋರಿತೇ ಪ್ರಕೃತಿಯು
19 hours 14 minutes ago - ಬರಹಗಾರರ ಬಳಗ
ನಿಸರ್ಗದ ನಡುವೆ ಬೆಚ್ಚಗೆ ಆಶ್ರಯಿಸಿದ್ದ ಸಕಲ ಜೀವಿಗಳನ್ನು ಪೋಷಿಸಿದ್ದ ಪ್ರಕೃತಿ, ಅದೇಕೋ ಒಮ್ಮೆಲೇ ತನ್ನೊಡಲ ನೋವನ್ನು ಹೊರಹಾಕಿತೋ ಅಥವಾ ಮನುಷ್ಯನ ಸ್ವಾರ್ಥಕ್ಕೆ ತನ್ನ ಮುನಿಸು ತೋರಿತೋ, ಆದರೆ ಅದರ ಪರಿಣಾಮ ಮಾತ್ರ ಘನಘೋರ, ನೆಮ್ಮದಿಯಾಗಿ ಮಲಗಿದ್ದವರೆಲ್ಲರಿಗೂ ಆಘಾತವಾಗಿತ್ತು. ಒಮ್ಮೆಲೇ ಸುರಿದ ವರುಣಾಗಮನ ಬದುಕನ್ನೇ ಬೀದಿ ಪಾಲಾಗಿಸಿದ್ದರೆ, ಇನ್ನೊಂಡೆಗೆ ನಾಳೆಗಳ ಕನಸು ಕಾಣುತ್ತ ಮಲಗಿದ್ದ ಅದೆಷ್ಟೋ ಮಂದಿಯ ಬದುಕು ನಿದಿರೆಯಲ್ಲೇ ಕೊನೆಯಾಗಿತ್ತು. ಆ ದೃಶ್ಯ ನೋಡುವುದಿರಲಿ ಕೇಳಲು ಭಯಾನಕವೆನಿಸುತ್ತದೆ. ಆದರೆ ಅದನ್ನು ಅನುಭವಿಸಿದವರ ಸಂಕಟ ಎಷ್ಟಿರಬಹುದು? ವರುಷವೆಲ್ಲ ಬೆಳೆದ ರೈತರ ಶ್ರಮದ ಬೆಳೆ ಹೊಳೆಯ ಪಾಲಾಗಿತ್ತು. ವೃಕ್ಷಗಳಲ್ಲೇ ಗೂಡು ಕಟ್ಟಿದ್ದ ಪುಟ್ಟ ಹಕ್ಕಿಗಳು, ವನ್ಯ ಜೀವಿಗಳು ಎಲ್ಲವೂ ಒಂದೇ ತಾಸಿನೊಳಗೆ ನಾಶವಾಗಿತ್ತು.
ಆದರೆ ಇದಕ್ಕೆಲ್ಲ ಕಾರಣ ಏನಿರಬಹುದು? ಒಂದೊಮ್ಮೆ ಮನುಷ್ಯನ ಸ್ವಾರ್ಥಕ್ಕೆ ಪರಿಸರದ ಮುನಿಸು ಎಂದರೂ, ಅದನ್ನು ಹೇಗೆ ಸ್ವೀಕರಿಸಬಹುದು? ಹಾಗೆ ನೋಡಿದರೆ ಅಲ್ಲಿ ನೊಂದವರಾರು ಆ ಪ್ರಕೃತಿಯನ್ನು ನಶಿಸಿದವರಲ್ಲ. ಯಾರದೋ ಸಂಪಾದನೆಗೆ, ಯಾವುದೋ ಅಭಿವೃದ್ಧಿಯ ಹೆಸರಲ್ಲಿ ಗುಡ್ಡಗಾಡುಗಳನ್ನು ನಶಿಸಿದ್ದು ಯಾರೋ, ಆದರೆ ಅದಕ್ಕೆ ಬಲಿಯಾದವರು ನಿಜಕ್ಕೂ ಅಮಾಯಕರು. ಅದರಲ್ಲೂ ಪುಟ್ಟ ಕಂದಮ್ಮಗಳು, ಈಗಿನ್ನೂ ಹೆತ್ತವರ ಮಡಿಲಲ್ಲಿದ್ದ ಆ ಮುಗ್ಧ ಜೀವಗಳಿಗೆ ಯಾವ ಸ್ವಾರ್ಥವಿತ್ತು ಹೇಳಿ? ಸಿಕ್ಕಿದ್ದನ್ನು ಹೆಕ್ಕಿ ತಿನ್ನುವ ಹಕ್ಕಿಗಳು, ಉಳಿದ ಆಹಾರ ತಿನ್ನುವ ಶ್ವಾನಗಳು, ಮುಗ್ಧ ಗೋವುಗಳು ಇವೆಲ್ಲವೂ ಮಾಡಿದ ತಪ್ಪಾದರೂ ಏನು?
ಜೀವನವೆಲ್ಲ ಶ್ರಮಪಟ್ಟು ಕಟ್ಟಿದ್ದ ಅದೊಂದೆ ಸೂರು ಹೊಳೆಯಾಗಿ ಹರಿದು ಹೋಗಿದ್ದರೆ, ತಮ್ಮನ್ನು ಗುರುತಿಸಬಲ್ಲ ಯಾವುದೇ ಕಾಗದ ಪತ್ರಗಳು ಉಳಿದಿಲ್ಲ. ಪರಿಹಾರದ ಭ… ಮುಂದೆ ಓದಿ...