ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸಿಎಂ ಉಲಿದ ಸಾರ್ವಕಾಲಿಕ ಸತ್ಯ!

        “ಅಧಿಕಾರದಲ್ಲಿದ್ದಾಗ ಎಲ್ಲರೂ ತಪ್ಪು ಮಾಡಿದ್ದಾರೆ” ಎಂಬ ಮುಖ್ಯಮಂತ್ರಿಗಳ ಉಕ್ತಿಯನ್ನು ತಲೆಬರಹ ಮಾಡಿ, ನವೆಂಬರ್ 16ರ ವಿಜಯ ಕರ್ನಾಟಕ ವರದಿ ಪ್ರಕಟಿಸಿದೆ. ಸಿಎಂ ಆಡಿರುವ ಈ ನುಡಿ ಮೆಚ್ಚಬೇಕಾದ್ದು. “ಈಗ ತಪ್ಪು ಮಾಡುತ್ತಿದ್ದೇನೆ; ಅಧಿಕಾರ ಇರುವವರೆಗೆ ಮಾಡುತ್ತಲೂ ಇರುತ್ತೇನೆ” ಎಂಬ ಪ್ರಾಮಾಣಿಕ Confession ಧ್ವನಿ ಸಹ ಇದರಲ್ಲಿ ಕೇಳಿಸುತ್ತದೆ. ‘ಇಳೆಯ ಪಾಪವನ್ನೆಲ್ಲ ಅಳೆಸಿ, ಶುದ್ಧ ರಾಜಕೀಯದ ಉದ್ಧಾರಕ್ಕಾಗಿ ಉದ್ಭವಿಸಿದ ಅವತಾರ ಪುರುಷ’ ಎಂದು ಅವರು ಎಂದೂ Claim ಮಾಡಿದ್ದಿಲ್ಲವಲ್ಲಾ! ಇಲ್ಲಿ “ತಪ್ಪು” ಎನ್ನುವುದನ್ನು “ಅಪರಾಧ” ಎಂಬರ್ಥದಲ್ಲಿ ತೆಗೆದುಕೊಂಡಗ ವಿಷಯ ಇನ್ನಷ್ಟು ವಿಷದವಾಗುತ್ತದೆ. ರಾಜಕೀಯದ ಅಧಿಕಾರವಿರುವುದೇ “ಅಪರಾಧ” ಮಾಡಲಿಕ್ಕೆ; ಮತ್ತು ಮಾಡಿದ್ದನ್ನು ಜೀರ್ಣ ಮಾಡಿಕೊಳ್ಳಲಿಕ್ಕೆ ಎಂಬ “ಅಲಿಖಿತ ಸತ್ಯ” ಸೂಚ್ಯವಾಗಿ ನಮ್ಮೆಲ್ಲರಿಗೂ ಭಾಸವಾಗಿರುವುದೇ. ಅದು ಇಲ್ಲಿ ಬೀದಿಬಿಚ್ಚಾಗಿರುವುದು ವಿಶೇಷ!


ನಮಗೆ, ಅಂದರೆ ವೋಟು ಹಾಕುವ ಬಕರಾಗಳಿಗೆ ಇದು ಏನಾದರೂ ಹೊಸ “ದರ್ಶನ” ಮಾಡಿಸುವುದಿದೆಯೇ?

ಸಂಪದ ಸುಧೆ.

ಸಂಪದ ವೃಕ್ಷದ ಕೊಂಬೆಗಳು ನಾವು,
ಸಂಪದ ಬಳ್ಳಿಯ ಹೂವುಗಳು ನಾವು
ಸಂಪದ ಗೂಡಿನ ಜೇನುಗಳು ನಾವು
ಹರಿಯಲಿ ಬರಹದ ಸುಧೆ ಸದಾ ಸಂಪದದಲಿ.
ಹರಿಯಲಿ ಬರಹದ ಸುಧೆ ಸದಾ ಸಂಪದದಲಿ.

ಎಲ್ಲಿದ್ದರೂ ಹೇಗಿದ್ದರೂ ನಾವೆಲ್ಲರೂ ಸಂಪದಿಗರು.
ನಮ್ಮ ಬರಹಗಳಿಗೆ ಶೃಂಗಾರಗೊಂಡ ವೇದಿಕೆ ಈ ಸಂಪದ..
ಓದುವ ಮನಸಿಗೆ ಮುದ ನೀಡುವ ಬರಹಗಳು
ಬರೆಯುವ ಮನಸಿಗೆ ಉತ್ತೇಜನ ನೀಡುವ ಪ್ರತಿಕ್ರಿಯೆಗಳು
ಹರಿಯಲಿ ಬರಹದ ಸುಧೆ ಸದಾ ಸಂಪದದಲಿ.
ಹರಿಯಲಿ ಬರಹದ ಸುಧೆ ಸದಾ ಸಂಪದದಲಿ.

ಕನ್ನಡ ನಾಡಿನ ಸೊಗಡನ್ನು ಕನ್ನಡ ನುಡಿಯ ಕಂಪನು ಬೀರುತಿಹುದು
ಕಥೆ,ಕವನ, ಹಾಸ್ಯ, ಅನುಭವ, ಪ್ರವಾಸ, ಚರ್ಚೆ ಒಂದೇ ಎರಡೇ
ಒಂದೇ ಸಾಲಿನಲ್ಲಿ ಹೇಳಲಾಗದಷ್ಟು ವಿಷಯಗಳು

ಹೊಂದಿಸಿ ಬರೆಯಿರಿ...ಯಾರ್ಯಾರಿಗೆ ಯಾವ ಹಾಡು

ಇದು ಕೇವಲ ಹಾಸ್ಯಕ್ಕಾಗಿ.

ಅ) ಬಿ.ಜೆ.ಪಿ                ಅ) ಬಂದ ಬಂದ ಬಂದ ಕಿಂದರಿಜೋಗಿ ಹೋ ಕಿಂದರಿಜೋಗಿ
ಆ) ಜೆ.ಡಿ.ಎಸ್             ಆ) ಇದು ಯಾರು ಬರೆದ ಕಥೆಯೋ ನಮಗಾಗಿ ಬಂದ ವ್ಯಥೆಯೋ
ಇ) ಕಾಂಗ್ರೆಸ್               ಇ) ನನ್ನ ನೀನು ಗೆಲ್ಲಲಾರೆ ತಿಳಿದು ತಿಳಿದು ಛಲವೇತಕೆ..
ಈ) ಹಾಲಪ್ಪ                ಈ) ಬರಿ ಓಳು ಬರಿ ಓಳು
ಉ) ರೇಣುಕಾಚಾರ್ಯ       ಉ) ಸೀರೆ ಸೀರೆ ಸೀರೆ ಎಲ್ಲೆಲ್ಲು ಹಾರೈತೆ.
ಊ) ಯಡಿಯೂರಪ್ಪ         ಊ) ಯಾರೇ ಕೂಗಾಡಲಿ ಊರೇ ಹೋರಾಡಲಿ..
ಋ) ಸಿದ್ದರಾಮಯ್ಯ          ಋ) ಬಂದಾಳೋ ಬಂದಾಳೋ ಬಿಂಕದ ಸಿಂಗಾರಿ.
ೠ) ಶೋಭಾ              ೠ) ನಾನೊಬ್ಬ ಕಳ್ಳನು..ನಾನೊಬ್ಬ ಸುಳ್ಳನು ಬಲು ಮೋಸಗಾರನು..

ಸಾವೇ ಉತ್ತರವಲ್ಲ ನಮ್ಮೆಲ್ಲಾ ಸಮಸ್ಯೆಗಳಿಗೆ!



ನಾವೆಷ್ಟೇ ವಿದ್ಯಾವಂತರಾದರೂ, ಅಂತರ್ಯದಲಿ ನಾವೆಲ್ಲರೂ ಇನ್ನೂ ಮಕ್ಕಳೇ
ಮಾನಸಿಕ ಶಾಂತಿ ಮತ್ತು ಸ್ವಲ್ಪ ಸ್ವಾತಂತ್ರ್ಯ ಇವು ನಮ್ಮೆಲ್ಲರ ಆವಶ್ಯಕತೆಗಳೇ
 
ಮದುವೆ ಈಗ ಪವಿತ್ರ ಸಂಬಂಧವಾಗುಳಿದಿಲ್ಲ, ಆಗಿದೆ ಅದೂ ಒಂದು ವ್ಯವಹಾರ
ಕೊಡು-ಕೊಳ್ಳುವ ವ್ಯವಹಾರ ಸರಿ, ಕೊಡುವಿಕೆಯೇ ಅತಿಯಾದರಷ್ಟೇ ಸಂಚಕಾರ
 
ಕೊಂಚ ಪಕ್ಕಕ್ಕೆ ಸರಿದು ಹೊಚ್ಚ ಹೊಸ ಬಾಳನ್ನಾರಂಭಿಸಿ, ಜೊತೆ ದುಸ್ತರವಾದಾಗ
ಸಾವೇ ಉತ್ತರವಲ್ಲ ನಮ್ಮೆಲ್ಲಾ ಸಮಸ್ಯೆಗಳಿಗೆ, ಈ  ಬಾಳೇ ಕೊನೆಗೊಳ್ಳಬಾರದಾಗ
 
ಅಳಿದವರ ಆತ್ಮಕ್ಕೆ ಶಾಂತಿ ಸಿಗಲಿ, ಇದಷ್ಟೇ ನಾವೀಗ ಮಾಡಬಹುದಾದ ಪ್ರಾರ್ಥನೆ
ಧೈರ್ಯವಂತರಾಗಿ ಸಮಸ್ಯೆಗಳನು ಎದುರಿಸೋಣ, ಜೀವನದ ದಿನಗಳು ಕೆಲವೇನೇ

ಕಾಲದ ಕನ್ನಡಿ: ಅ೦ತೂ ಇ೦ತೂ ಬ೦ತು ಬಿಡುಗಡೆಯ ಭಾಗ್ಯ!!!

ನಮ್ಮ ನೆರೆಮನೆಯ ನಾಯಕಿ ಈಕೆ.ತನ್ನವರ ಸ್ವಾತ೦ತ್ರ್ಯಕ್ಕಾಗಿ ಹೋರಾಡಿದ್ದಕ್ಕಾಗಿ ಗೃಹಬ೦ಧನ! ಗ೦ಡ ಬ್ರಿಟೀಷ್ ಪ್ರಜೆ- ಹೆಸರು ಮೈಕೇಲ್ ಆರ್ಸಿ. ಗ೦ಡ ಬ್ರಿಟೀಷ್ ಎನ್ನುವುದೇ ಸಾಕಾಯಿತು ಸೇನಾಧಿಕಾರಿಗಳಿಗೆ. ಅ೦ತೂ ಮೊನ್ನೆ ೧೪ ಕ್ಕೆ ವಿಶ್ವ ಸ೦ಸ್ಠೆಯ, ದೊಡ್ಡಣ್ಣನ,ಜಗತ್ತಿನ ಅನೇಕ ಪ್ರಜಾಪ್ರಭುತ್ವ ರಾಷ್ಟ್ರಗಳ, ನಾಯಕರ ಒತ್ತಡಕ್ಕೆ ಮಣಿದು ಕಳೆದ ಸುಮಾರು ೨೦ ಕ್ಕೂ ಹೆಚ್ಚು ವರುಷಗಳಿ೦ದ ಒ೦ದೇ ಕೋಣೆಯಲ್ಲಿ “ಗೃಹ ಬ೦ಧಿತೆ“ಯಾಗಿದ್ದ ಬರ್ಮಾದ ಸ್ವಾತ೦ತ್ರ್ಯ ಹೋರಾಟಗಾರ್ತಿ ಅ೦ಗ್ಸಾನ್ ಸೂಕಿ“ ಗೆ ಬಿಡುಗಡೆಯ ಭಾಗ್ಯ ದೊರೆಯಿತು. ಜಗತ್ತಿನ ಎಲ್ಲಾ ಪ್ರಜಾತ೦ತ್ರ ರಾಷ್ಟ್ರಗಳ ಜನರು ಸ೦ಭ್ರಮೋಲ್ಲಾಸದಿ೦ದ ಕುಣಿದರು. ಪ್ರಜಾತ೦ತ್ರಕ್ಕೆ ದೊರೆತ ಮತ್ತೊ೦ದು ವಿಜಯವಾಯಿತು!