ಎಲ್ಲ ಪುಟಗಳು

ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
December 28, 2021
ಅನಿಲ್ ಲಾಡ್ ಮತ್ತು ನಲವತ್ತು ಕಳ್ಳರು ಪುಸ್ತಕ ಬರೆದವರು ಪತ್ರಕರ್ತರಾದ ರವಿ ಬೆಳಗೆರೆ ಇವರು. ಇವರು ತಮ್ಮ ಪುಸ್ತಕದ ಬೆನ್ನುಡಿಯಲ್ಲಿ ಹೀಗೆ ಬರೆಯುತ್ತಾರೆ “ಇಲ್ಲಿ ಆರು ದಶಕ ಅವಿಚ್ಛಿನ್ನವಾಗಿ ಹಾರಿದ್ದು ಕಾಂಗ್ರೆಸ್ ಪತಾಕೆ. ನನ್ನ ಜಿಲ್ಲೆಯ ಕೆನ್ನೆ, ಬೆಟ್ಟಗಳ ಎದೆಗೆ ಮೊದಲ ಹಾರೆ ಹಾಕಿದ್ದೂ ಕಾಂಗ್ರೆಸಿಗರೇ. ಇಂದಿರಾ ಗಾಂಧಿಯಿಂದ ಹಿಡಿದು ಸೋನಿಯಾ ಗಾಂಧಿಯ ತನಕ ನಿರಂತರವಾಗಿ ಕಾಂಗ್ರೆಸ್ ಅಧಿನಾಯಕರು ಹೇಳಿದ ಸರಣಿ ಸುಳ್ಳುಗಳನ್ನು ನಮ್ಮ ಜನ ಕೇಳಿಸಿಕೊಂಡೇ ಬಂದಿದ್ದಾರೆ. ಬಡತನ ಮತ್ತು ಅಮಾಯಕತೆ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
December 24, 2021
ಪತ್ರಕರ್ತರಾದ ರವಿ ಬೆಳಗೆರೆ ಮತ್ತು ಜೋಗಿಯವರು ‘ಹಾಯ್ ಬೆಂಗಳೂರು' ಪತ್ರಿಕೆಯಲ್ಲಿ ಬರೆದ ಲೇಖನಗಳ ಸಂಗ್ರಹವೇ ‘ರವಿ ಕಂಡದ್ದು-ರವಿ ಕಾಣದ್ದು’. ರವಿ ಕಂಡದ್ದು ವಿಭಾಗದಲ್ಲಿ ರವಿ ಬೆಳಗೆರೆಯವರ ಲೇಖನಗಳಿವೆ. ಇವುಗಳ ವೈಶಿಷ್ಟ್ಯವೆಂದರೆ ಬದುಕನ್ನು ತಲಸ್ಪರ್ಶಿಯಾಗಿ ನೋಡುವ ಕ್ರಮ. ಕಂಡದ್ದನ್ನು ಚುರುಕಾಗಿ, ಆಸಕ್ತ ಪೂರ್ಣವಾಗಿ ದಾಖಲಿಸುವ ಅಭಿವ್ಯಕ್ತಿ ವಿಧಾನ ಮತ್ತು ಇವೆಲ್ಲಕ್ಕೂ ಒಂದು ಆರೋಗ್ಯಪೂರ್ಣ ವ್ಯಂಗ್ಯವನ್ನು ಬೆರೆಸಿ ಹೇಳಬಲ್ಲ ಜೀವಂತ ಶೈಲಿ. ಲಾಲ್ ಬಾಗ್ ಪ್ರೇಮಿಗಳ ಬಗ್ಗೆಯಾಗಲೀ, ಶೆಟ್ಟರುಗಳ…
ಲೇಖಕರು: addoor
ವಿಧ: ಪುಸ್ತಕ ವಿಮರ್ಶೆ
December 23, 2021
ಜಯಶ್ರೀ ಕಾಸರವಳ್ಳಿ ಅವರ ಎರಡನೆಯ ಕಥಾ ಸಂಕಲನ ಇದು. ಶಿವಮೊಗ್ಗದಲ್ಲಿ ಬಾಲ್ಯದ ಶಿಕ್ಷಣ ಪಡೆದ ಅವರು, ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಗಳಿಸಿದವರು. ಹಲವು ವರುಷ ಚೆನ್ನೈಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿ, ಅನಂತರ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ವಿಶಿಷ್ಟ ಸಂವೇದನೆಯ ಕತೆಗಾರ್ತಿಯೆಂದು ಗುರುತಿಸಲ್ಪಟ್ಟಿರುವ ಜಯಶ್ರೀ, "ನನ್ನ ಮಾತಿ"ನಲ್ಲಿ ಬಾಲ್ಯದ ಘಟನೆಯೊಂದನ್ನು ಹಂಚಿಕೊಂಡು (ಮೂರು ಹೆಣ್ಣು ಮಕ್ಕಳನ್ನು ಹೆತ್ತ ತಾಯಿಯೊಬ್ಬಳು, ಗಂಡು ಮಗುವಿಗಾಗಿ ಮನೆಯವರೆಲ್ಲರ ಒತ್ತಾಯಕ್ಕೆ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
December 21, 2021
ಹೆಸರೇ ಹೇಳುವಂತೆ ಇದೊಂದು ಅಡುಗೆ ಪುಸ್ತಕ. ಚಪಾತಿಗೆ ಸೂಕ್ತವೆನಿಸುವ ೧೦೦ ಕರಿಗಳನ್ನು ಅಥವಾ ಮೇಲೋಗರಗಳನ್ನು ಲೇಖಕಿಯವರು ಈ ಪುಸ್ತಕದಲ್ಲಿ ನೀಡಿದ್ದಾರೆ. ದಿನಕ್ಕೊಂದು ಕರಿಯನ್ನು ಮಾಡಿದರೂ ನೂರು ದಿನಕ್ಕೆ ತೊಂದರೆಯಿಲ್ಲ.   ಕರ್ನಾಟಕ ಸರಕಾರದಲ್ಲಿ ಸಚಿವೆಯಾಗಿದ್ದ ರಾಣಿ ಸತೀಶ್ ಅವರು ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ. ಅವರು ತಮ್ಮ ಮುನ್ನುಡಿಯಲ್ಲಿ “ ಹದವರಿತು ಅಡುಗೆ ಮಾಡುವುದು ಒಂದು ಕಲೆ. ಅಡುಗೆಯಲ್ಲಿ ವೈವಿಧ್ಯತೆಯನ್ನು ಕಾಣಿಸುವ ಕಲಾವಂತಿಕೆಯ ಜೊತೆಗೆ ಬದುಕಿಗೆ ಶಕ್ತಿ ಕೊಡುವ,…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
December 20, 2021
ಕನ್ನಡದಲ್ಲಿ ಲೇಖಕ-ಪ್ರಕಾಶಕ-ಓದುಗರ ನಡುವೆ ಗಾಢ ಸಂಬಂಧವನ್ನು ಏರ್ಪಡಿಸುತ್ತಾ, ಶ್ರೀಸಾಮಾನ್ಯರಲ್ಲಿ ಉತ್ತಮ ವಾಚನಾಭಿರುಚಿಯನ್ನು ಹಾಗೂ ಪುಸ್ತಕ ಪ್ರೀತಿಯನ್ನು ಮೂಡಿಸುತ್ತಾ ರಾಜ್ಯಾದ್ಯಂತ ಓದುಗರಿಗೆ ಒಳ್ಳೆಯ ಪುಸ್ತಕಗಳು ಸುಲಭ ಬೆಲೆಯಲ್ಲಿ ದೊರೆಯುವಂಥ ಸ್ಥಾಯೀ ವ್ಯವಸ್ಥೆಯೊಂದನ್ನು ರೂಪಿಸಿ, ಕನ್ನಡ ಪುಸ್ತಕೋದ್ಯಮವನ್ನು ಜನಪರವಾಗಿ ಮತ್ತು ಧೃಢವಾಗಿ ಬೆಳೆಸುವ ಉದ್ದೇಶದಿಂದ ‘ಕನ್ನಡ ಪುಸ್ತಕ ಪ್ರಾಧಿಕಾರ' ಎಂಬ ದೀರ್ಘಕಾಲಿಕ ಯೋಜನೆಯೊಂದನ್ನು ಸರ್ಕಾರವು ರೂಪಿಸಲು ಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ…
ವಿಧ: ಪುಸ್ತಕ ವಿಮರ್ಶೆ
December 18, 2021
ಇತ್ತೀಚೆಗೆ ಮಹಾತ್ಮ ಗಾಂಧೀಜಿಯವರ ಬಗೆಗೆ ವಿಪುಲವಾದ ಸಾಹಿತ್ಯ ಪ್ರಕಟಗೊಳ್ಳುತ್ತಿರುವುದು ಸ್ವಾಗತಾರ್ಹ. ಸಾಮಾನ್ಯವಾಗಿ ಗಾಂಧಿಯ ಬಗೆಗೆ ಬರೆಯುವವರು ಎರಡು ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಒಂದು ಗಾಂಧಿ ಚರಿತ್ರೆಗೆ ಸಂಬಂಧಿಸಿದ್ದು, ಮತ್ತೊಂದು ಗಾಂಧಿವಾದಕ್ಕೆ ಸಂಬಂಧಿಸಿದ್ದು. ಆದರೆ ಉದಯ ಕುಮಾರ ಹಬ್ಬು ಅವರು ಇವೆರಡಕ್ಕಿಂತ ಭಿನ್ನವಾದ, ಇದುವರೆಗೆ ಯಾರೂ ಬರೆಯದ ಕಥನ ಮಾರ್ಗದ ಮೂಲಕ ಗಾಂಧಿಯ ಅಗೋಚರ, ಅಪರಿಚಿತ ಹಾಗೂ ಅಪರೂಪದ ಮಾರ್ಗ ಹಿಡಿದಿರುವುದು ವಿಶೇಷ. ಇಲ್ಲಿ ಮಹಾತ್ಮ ಗಾಂಧಿಯವರ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
December 17, 2021
ಕನ್ನಡದಲ್ಲಿ ಲೇಖಕ-ಪ್ರಕಾಶಕ-ಓದುಗರ ನಡುವೆ ಗಾಢ ಸಂಬಂಧವನ್ನು ಏರ್ಪಡಿಸುತ್ತಾ, ಶ್ರೀಸಾಮಾನ್ಯರಲ್ಲಿ ಉತ್ತಮ ವಾಚನಾಭಿರುಚಿಯನ್ನು ಹಾಗೂ ಪುಸ್ತಕ ಪ್ರೀತಿಯನ್ನು ಮೂಡಿಸುತ್ತಾ ರಾಜ್ಯಾದ್ಯಂತ ಓದುಗರಿಗೆ ಒಳ್ಳೆಯ ಪುಸ್ತಕಗಳು ಸುಲಭ ಬೆಲೆಯಲ್ಲಿ ದೊರೆಯುವಂಥ ಸ್ಥಾಯೀ ವ್ಯವಸ್ಥೆಯೊಂದನ್ನು ರೂಪಿಸಿ, ಕನ್ನಡ ಪುಸ್ತಕೋದ್ಯಮವನ್ನು ಜನಪರವಾಗಿ ಮತ್ತು ಧೃಢವಾಗಿ ಬೆಳೆಸುವ ಉದ್ದೇಶದಿಂದ ‘ಕನ್ನಡ ಪುಸ್ತಕ ಪ್ರಾಧಿಕಾರ' ಎಂಬ ದೀರ್ಘಕಾಲಿಕ ಯೋಜನೆಯೊಂದನ್ನು ಸರ್ಕಾರವು ರೂಪಿಸಲು ಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ…
ಲೇಖಕರು: addoor
ವಿಧ: ಪುಸ್ತಕ ವಿಮರ್ಶೆ
December 16, 2021
ಜೆ. ಆರ್. ಲಕ್ಷ್ಮಣ ರಾವ್ ಬರೆದಿರುವ ಈ ಪುಸ್ತಕ ವಿಜ್ನಾನಿಗಳ ಬಗೆಗಿನ ನಮ್ಮ ಕಲ್ಪನೆಗಳನ್ನೇ ಬುಡಮೇಲು ಮಾಡುತ್ತದೆ. ವಿಜ್ನಾನಿಗಳು ಮಹಾಮೇಧಾವಿಗಳು ಎಂಬುದು ಖಂಡಿತ. ಜಗತ್ತಿನಲ್ಲಿ ಯಾರಿಗೂ ಹೊಳೆಯದ ಐಡಿಯಾಗಳು ಅವರಿಗೆ ಹೊಳೆಯುತ್ತವೆ. ಯಾರಿಗೂ ದಕ್ಕದ ಒಳನೋಟಗಳು ಅವರ ಮನದಲ್ಲಿ ಮಿಂಚುತ್ತವೆ. ಆದರೆ, ಬೇರೆ ಹಲವಾರು ವಿಷಯಗಳಲ್ಲಿ, ನಡವಳಿಕೆಗಳಲ್ಲಿ ಅವರು ನಮ್ಮೆಲ್ಲರಂತೆಯೇ. ಅವರಿಗೂ ಮರೆವು ಸಹಜ. ಎಲ್ಲಿಯ ವರೆಗೆಂದರೆ, ಒಬ್ಬ ವಿಜ್ನಾನಿಗೆ ಅಂಚೆಕಚೇರಿಯಲ್ಲಿ ಒಂದು ಪತ್ರ ಬರೆಯುತ್ತಿರುವಾಗ ತನ್ನ…
ವಿಧ: ರುಚಿ
December 16, 2021
ರಾತ್ರಿ ನೆನೆಹಾಕಿದ ಕುಚುಲಕ್ಕಿಯನ್ನು ಮರುದಿನ ಬೆಳಿಗ್ಗೆ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ನಯವಾಗಿ ರುಬ್ಬಿ, ಹಿಟ್ಟನ್ನು ಕಾಯಿಸಿ, ಉಂಡೆಗಳನ್ನಾಗಿ ಮಾಡಿ, ಹಬೆಯಲ್ಲಿ ೪೦ ನಿಮಿಷ ಬೇಯಿಸಬೇಕು. ನಂತರ ಶ್ಯಾವಿಗೆ ಮಣೆಯಲ್ಲಿ ಒಂದೊಂದೇ ಉಂಡೆಗಳನ್ನು ಹಾಕಿ ಒತ್ತಬೇಕು. ಶ್ಯಾವಿಗೆ ರೆಡಿ. ತೆಂಗಿನಕಾಯಿ ತುರಿಯನ್ನು ರುಬ್ಬಿ ಹಾಲು ಸೋಸಿ ತೆಗೆದು, ಬೆಲ್ಲದ ಹುಡಿ, ಏಲಕ್ಕಿ, ಚಿಟಿಕೆ ಉಪ್ಪು ಹಾಕಿ ತೆಂಗಿನಕಾಯಿ ಹಾಲು ತಯಾರಿಸಬೇಕು. ಬೀನ್ಸ್ ಸಾಂಬಾರ್ ಜೊತೆಗೆ ತಿನ್ನಲು ಹಿತಕಾರಿ. ನಮ್ಮ ದಕ್ಷಿಣ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
December 14, 2021
ಬಂಗಾಲಿ ಭಾಷೆಯ ಕಥಾ ಸಾಮ್ರಾಟರಾದ ಶರಶ್ಚಂದ್ರ ಚಟ್ಟೋಪಾಧ್ಯಯ ಅವರ ಪುಟ್ಟ ಕಾದಂಬರಿಯೇ ‘ಅನುಪಮೆಯ ಪ್ರೇಮ'. ಇದು ಶರಶ್ಚಂದ್ರರ ಮೂರನೆಯ ಕಾದಂಬರಿ. ‘ಬಿರಾಜ್ ಬಹೂ’ (ಕುಲವಧು) ಎಂಬ ಹೆಸರಿನಲ್ಲಿ ಬರೆದ ಈ ಕಾದಂಬರಿಯು ಮೊದಲ ಬಾರಿಗೆ ೧೯೧೪ರಲ್ಲಿ ಪ್ರಕಟವಾಯಿತು. ನಂತರದ ದಿನಗಳಲ್ಲಿ ಹಲವಾರು ಭಾಷೆಗಳಲ್ಲಿ ಅನುವಾದವೂ ಆಗಿದೆ. ಶರಶ್ಚಂದ್ರರ ಕಾದಂಬರಿಗಳನ್ನು ಓದುತ್ತಿದ್ದಂತೆ ನೀವು ಶತಮಾನಗಳಷ್ಟು ಹಳೆಯದಾದ ಬಂಗಾಲಕ್ಕೆ ಹೋಗುತ್ತೀರಿ. ಆಗಿನ ರೀತಿ ರಿವಾಜುಗಳು, ವೈವಾಹಿಕ ಜೀವನದ ಕ್ರಮ, ವಿಧವೆಯರ ಜೀವನ…