ಎಲ್ಲ ಪುಟಗಳು

ಲೇಖಕರು: addoor
ವಿಧ: ಪುಸ್ತಕ ವಿಮರ್ಶೆ
November 25, 2021
ಉತ್ತರ ಕರ್ನಾಟಕದ ಕನ್ನಡ ಭಾಷೆಯ ಸೊಗಡು ತಿಳಿಯಬೇಕಾದರೆ ಓದಬೇಕು ಈ ಪುಸ್ತಕ. ಸರಾಗವಾಗಿ, ಸುಲಲಿತವಾಗಿ ಆಡುಮಾತಿನಲ್ಲಿ ಹಲವು ಸಂಗತಿಗಳ ಬಗ್ಗೆ ಬರೆದಿದ್ದಾರೆ ಪ್ರಶಾಂತ ಆಡೂರ. ಈಗಲೂ ಈ ಧಾಟಿಯಲ್ಲಿ ದಿನಪತ್ರಿಕೆಯಲ್ಲಿ ಅಂಕಣ ಬರೆಯುತ್ತಿರುವ ಪ್ರಶಾಂತ ಆಡೂರ, ತಾನು ಹೇಗೆ ಬರೆಯಲು ಶುರು ಮಾಡಿದೆ ಎಂದು ಪುಸ್ತಕದ ಕೊನೆಯ ಬರಹ "ಭಿಡೆ ಬಿಟ್ಟ ಬರದಿದ್ದೆ ಬರಹ"ದಲ್ಲಿ ಹೀಗೆ ಹಂಚಿಕೊಂಡಿದ್ದಾರೆ: "ನನ್ನ ಜೀವನದಾಗ ನಾ ಕನ್ನಡದಾಗ ಬರಿತೇನಿ ಎಂತ ಎಂದೂ ಅನ್ಕೊಂಡಿದ್ದಿಲ್ಲ……. ಒಂದ ದಿವಸ ಮಧ್ಯಾಹ್ನ ನಾನೂ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
November 23, 2021
೧೮೫೯ರ ನವೆಂಬರ್ ನಲ್ಲಿ ಜೀವ ವಿಜ್ಞಾನಿ ಚಾರ್ಲ್ಸ್ ಡಾರ್ವಿನ್ ಅವರ ‘ಜೀವ ಸಂಕುಲಗಳ ಉಗಮ' ಎಂಬ ಸಂಶೋಧನಾ ಗ್ರಂಥ ಬಿಡುಗಡೆಯಾಯಿತು. ಇದರ ಎಲ್ಲಾ ೧೨೫೦ ಪ್ರತಿಗಳು ಮೊದಲನೇ ದಿನವೇ ಖರ್ಚಾದುವಂತೆ. ಮುಂದೆ ಮಾನವ ಜ್ಞಾನ ಭಂಡಾರಕ್ಕೆ ಅಮೂಲ್ಯವಾದ ಕೊಡುಗೆ ಎನಿಸಿಕೊಂಡ ಈ ಗ್ರಂಥ ಅಂದು ಇಡೀ ಯುರೋಪ್ ದೇಶವನ್ನು ತಲ್ಲಣಗೊಳಿಸಿತು. ಈ ಜಗತ್ತು ಒಂದು ಪರಮ ಶಕ್ತಿಯ ಸೃಷ್ಟಿ ಎಂಬ ಸೃಷ್ಟಿವಾದದ ಪರವಾಗಿ ಮತ್ತು ವಿರುದ್ಧವಾಗಿ ನಡೆದುಕೊಂಡು ಬಂದಿರುವ ವಾದ-ವಿವಾದಗಳ ಹಿನ್ನಲೆಯಲ್ಲಿ ಇದೊಂದು ಮಹತ್ವದ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
November 20, 2021
 ಇದು 45 ಪುಟದ ಕತೆಯಾಗಿದ್ದು ಮರಾಠಿ ಕತೆಯ ಆಧಾರಿತವಂತೆ. ಮೊದಲ ಅರ್ಧದಲ್ಲಿ  ಬಡವರಾದ ಗಂಡ ಹೆಂಡತಿಯು ಇದ್ದದ್ದರಲ್ಲಿ ಹೇಗೆ ತೃಪ್ತಿಯಿಂದ ಪ್ರೀತಿಯಿಂದ ಇದ್ದರು ಎಂಬ ಸಂಗತಿ ಇದೆ. ನಂತರವಷ್ಟೇ ಮುಖ್ಯಕತೆ ಇದೆ.         ವಿಜಯನಗರದ ಕೃಷ್ಣದೇವರಾಯನು ಆಗಿನ್ನೂ ರಾಜನಾಗಿರಲಿಲ್ಲ . ರಾಜಕುಮಾರ ಇದ್ದನಷ್ಟೇ.  ( ನಂತರ  ಇತಿಹಾಸದಲ್ಲಿ  ಅವನ ದುಡುಕುತನ, ಮುಂಗೋಪಗಳು ಪ್ರಸಿದ್ಧವಾಗುತ್ತವಷ್ಟೇ ?) ಅವನಿಗೆ ಒಂದು ಪ್ರಸಂಗದಲ್ಲಿ ಅರಣ್ಯದಲ್ಲಿ ಈ ಬಡವನಿಗೆ ಇದಿರಾಗಿ  ಒಂದು ಕೆಲಸ ಹೇಳುತ್ತಾನೆ. ಒಳ್ಳೆಯ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
November 20, 2021
ಚೆನ್ನಭೈರಾದೇವಿ ಈಕೆ ಕರಿಮೆಣಸಿನ ರಾಣಿ ಎಂಬ ಖ್ಯಾತಿ ಹೊತ್ತವಳು. ನಮ್ಮ ಇತಿಹಾಸಕಾರರು ಈಕೆಯನ್ನು ಗುರುತಿಸಿ ಪರಿಚಯಿಸಿದ್ದು ಕಡಿಮೆ. ಆ ಕರಿಮೆಣಸಿನ ರಾಣಿಯ ಅಕಳಂಕ ಚರಿತ್ರೆಯನ್ನು ನಿಮ್ಮ ಮುಂದೆ ಇಟ್ಟಿದ್ದಾರೆ ಲೇಖಕರಾದ ಡಾ. ಗಜಾನನ ಶರ್ಮ ಇವರು.  ಈ ಪುಸ್ತಕದ ಬಗ್ಗೆ ಖ್ಯಾತ ಅಂಕಣಕಾರ, ಪತ್ರಕರ್ತ ಜೋಗಿ ತಮ್ಮ ಬೆನ್ನುಡಿಯಲ್ಲಿ ಹೀಗೆ ಬರೆದಿದ್ದಾರೆ. “ ಸಂಕಷ್ಟದಲ್ಲಿರುವವರಿಗೆ ದೂರದಲ್ಲೇ ಇದ್ದು ಕಾಪಾಡುವ ಅವ್ವರಸಿ, ಹತ್ತಿರದಿಂದ ಕಂಡವರಿಗೆ ಸಣ್ಣಮ್ಮ, ಶತ್ರುಗಳ ಪಾಲಿಗೆ ಎದೆನಡಗಿಸುವ…
ವಿಧ: ಬ್ಲಾಗ್ ಬರಹ
November 19, 2021
ನೋಡಿದೊ ಅರಸನೆ ನನ್ನೆದೆ ಕೊತ್ತಲ ನಾಡಿಯ ಕಲ್ಲಿನ ಗೋಡೆಯ ಸುತ್ತಲ ಕಣಕಣ ಕರೆತಿದೆ ನಿನ್ನನು ಕೂಗುತ ಕುಣಿತಿವೆ ಕನಸವು ನನ್ನೊಳ ಮಾಗತ ಪ್ರೇಮದ ಆನೆಯ ಘೀಳನ ಇಕ್ಕುತ ಸೀಮೆಯ ಸುಂದರ ಗಡಿಗಳ ಗೆಲ್ಲತ ಬೇಲಿಯ ಕಟ್ಟಿಸ ತುಡಿತಕೆ ನನ್ನಯ ಸೋಲುತ ನೆಡೆವೆನು ವಿಜಯಕೆ ನಿನ್ನಯ ಮೋಹದ ಖತ್ತಿಯ ಕಣ್ಣಲೆ ಬೀಸತ ದಾಹದಿ ಒಲವಿಲೆ ರಾಜ್ಯವ ಕಟ್ಟುತ ಬಿತ್ತುತ ಖುಷಿಗಳ ಒಕ್ಕುವ ಮುತ್ತನು ಸುತ್ತಲ ಬಾನಿಗು ಹಂಚುವ ತುತ್ತನು ಮನವಿದ ಅಶ್ವವು ಏರುತ ಅಲೆವುದು ನೆನೆಯತ ನಿನ್ನನು ಬಿತ್ತಿಗೆ ಸೆಲೆವುದು ಹಬ್ಬುತ ಮಂಜಿನ ಹನಿಗಳ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
November 19, 2021
ಐವತ್ತು ವರ್ಷಗಳ ಹಿಂದೆ ಪ್ರಕಟವಾದ ಖ್ಯಾತ ಕಾದಂಬರಿಕಾರ ಶರಶ್ಚಂದ್ರ ಚಟರ್ಜಿಯವರ ನೀಳ್ಗತೆಯೇ ಮಂಗಲಸೂತ್ರ. ಈ ಕತೆಯನ್ನು ಗುರುನಾಥ ಜೋಶಿಯವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಬಹಳ ಸರಳವಾದ ಕಥೆಯಾದರೂ ಮಹತ್ವದ ಅರ್ಥವನ್ನು ಹೊಂದಿದೆ. ಐದು ದಶಕಗಳ ಹಿಂದಿನ ಕತೆಯಾದುದರಿಂದ ಆ ಸಮಯದ ಕೆಲವೊಂದು ಸಾಮಾಜಿಕ ಕಟ್ಟುಪಾಡುಗಳು, ಕೆಲವು ಭಾಷಾ ಪದಗಳ ಬಳಕೆ, ಬಾಲ್ಯ ವಿವಾಹದ ಸಂಸ್ಕೃತಿ ಎಲ್ಲವೂ ವಿಭಿನ್ನವೆಂದು ತೋರುತ್ತದೆ. ಈ ಕಥೆ ಸತ್ಯೇಂದ್ರ ಚೌಧರಿ ಎಂಬ ಒಬ್ಬ ಯುವಕನದ್ದು. ಕಲ್ಕತ್ತಾದಲ್ಲಿ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
November 18, 2021
ಮಕ್ಕಳಿಗೆ ಕಥೆಗಳ ಮೂಲಕ ನೀತಿಯನ್ನು ಬೋಧಿಸುವ ಪುಸ್ತಕ ಇದು. ಇದನ್ನು ಎಂ ಎಸ್ ಪುಟ್ಟಣ್ಣನವರು 135 ವರ್ಷಗಳ ಹಿಂದೆ ಬರೆದರು.ಈ ಪುಸ್ತಕ ಈತನಕ 33 ಮುದ್ರಣಗಳನ್ನು ಕಂಡಿದೆ.ಈ ಪುಸ್ತಕದ ಭಾಷೆಯನ್ನು ಇಂದಿನ ಕನ್ನಡ ತಕ್ಕಂತೆ ಪರಿವರ್ತಿಸಿ ಕಥೆಗಾರ ಎಸ್ ದಿವಾಕರ್ ಅವರು ಹತ್ತು ವರ್ಷಗಳ ಹಿಂದೆ ಬರೆದಿದ್ದಾರೆ.ಸುಮಾರುಸುಮಾರು 200 ಪುಟಗಳ ಪುಸ್ತಕ ಇದು. ಸುಮಾರು ಒಂದು ನೂರು ಕಥೆಗಳು ಇದರಲ್ಲಿ ಇರಬಹುದು. ಈ ಕಥೆಗಳೊಂದಿಗೆ ಸಂಬಂಧಿಸಿದ ನೀತಿಯನ್ನು  (ಕೆಲವೆಡೆ ಅದು ಕಥೆಗೆ ಸೂಕ್ತ ಅನಿಸುವುದಿಲ್ಲ ) …
ಲೇಖಕರು: addoor
ವಿಧ: ಪುಸ್ತಕ ವಿಮರ್ಶೆ
November 18, 2021
ಅಮೆರಿಕ ಕನ್ನಡ ಕೂಟಗಳ ಆಗರ (“ಅಕ್ಕ”) ೮ನೇ ವಿಶ್ವ ಕನ್ನಡ ಸಮ್ಮೇಳನದ ಸಂದರ್ಭದಲ್ಲಿ ಪ್ರಕಟಿಸಿದ ಒಂಬತ್ತು ಆಹ್ವಾನಿತ ಕತೆಗಳ ಸಂಕಲನ ಇದು. ಇದರ ಬಗ್ಗೆ ಸಂಪಾದಕ ಮಂಡಲಿಯ ಪರವಾಗಿ ಪ್ರಧಾನ ಸಂಪಾದಕರು ಬರೆದ ಕೆಲವು ಮಾತುಗಳು: “ಈ ಕಥಾಸಂಕಲನಕ್ಕಾಗಿ ನಮಗೆ ಲಭ್ಯವಿದ್ದ ಅನುಕೂಲತೆಗಳ ಇತಿಮಿತಿಯಲ್ಲಿ ಪ್ರಚಲಿತ ಲೇಖಕರನ್ನು ಸಂಪರ್ಕಿಸಿ ಈ ಕಥೆಗಳನ್ನು ಪಡೆದುಕೊಳ್ಳಲಾಯಿತು. ಬೊಗಸೆಯಲ್ಲಿ ಸಾಗರದ ನೀರನ್ನು ಹಿಡಿದು, ಇದೇ ಸಾಗರವೆನ್ನುವುದು ದುಸ್ಸಾಹಸವಾದಿತು. ಒಟ್ಟು ಒಂಬತ್ತು ಕಥೆಗಳ ಈ ಕಥಾಸಂಕಲನವನ್ನು…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
November 17, 2021
1)  ಅನಿರೀಕ್ಷಿತವಾಗಿ, ಶಕುಂತಲೆಯ ಬಗ್ಗೆ ಸಹಾನುಭೂತಿಯಿಂದ ಹೇಳುವಾಗೊಬ್ಬ ಪುಣ್ಯಾತ್ಮರು “ ದೂರ್ವಾಸನ ಶಾಪ ದಿಂದ ಗರ್ಭವತಿಯಾಗಿದ್ದ ಶಕುಂತಲೆಗೆ ಎಂತೆಂತಹ ಸಂಕಷ್ಟಗಳು ಬಂದೊದ ಗಿದವು, ಬಲ್ಲಿರಾ ? ” ಎಂದಿದ್ದರು.( ಹಳೆಯ ಕಸ್ತೂರಿಯಿಂದ)   2)ಇನ್ನೊಬ್ಬರು “ ನಮ್ಮ ಕೋರಿಕೆಯ ಮೇರೆಗೆ ದಿವಂಗತರಾದ ಕೈಲಾಸಂರವರ ದಿನಾಚರಣೆಗಾಗಿ ಶ್ರೀ ಬೀಚಿ ಯವರು ಬಂದುದಕ್ಕೆ ನಾವು ತುಂಬಾ ಋಣಿಗಳು” ಎಂದು ಆಭಾರ ಮನ್ನಣೆ ಮುಗಿಸಿದ್ದರು.  (ಹಳೆಯ ಕಸ್ತೂರಿಯಿಂದ)   3) ಒಂದು ಪಾಪಿಂಗ್ ಕಾಂಪ್ಲೆಕ್ಸ ಬಳಿಯ ಬೋರ್ಡು…
ವಿಧ: ರುಚಿ
November 17, 2021
ಬಾಳೆ ದಿಂಡನ್ನು ತೆಳುವಾಗಿ ವೃತ್ತಾಕಾರದಲ್ಲಿ ತುಂಡರಿಸಬೇಕು. ತುಂಡರಿಸುವಾಗ ನಡುವೆ ಸಿಗುವ ನೂಲಿನಂತಹ ವಸ್ತುವನ್ನು ತೆಗೆದು ಬಿಸಾಕಿ. ಕತ್ತರಿಸಿದ ತುಂಡುಗಳನ್ನು ನೀರಿನಲ್ಲಿ ಹಾಕಿ. ಇಲ್ಲವಾದರೆ ತುಂಡುಗಳು ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಸುಮಾರು ೧೫ ತುಂಡುಗಳು ಸಾಕು. ಬಾಳೆದಿಂಡನ್ನು ಬಟ್ಟೆಗೆ ತಾಗಿಸಬೇಡಿ. ಕಲೆಯಾಗುತ್ತದೆ. ಕತ್ತರಿಸಿಕೊಂಡ ತುಂಡುಗಳನ್ನು ನೀರಿನಿಂದ ಹೊರ ತೆಗೆದು ಒಂದು ಪಾತ್ರೆಗೆ ಹಾಕಿಡಿ.  ಮತ್ತೊಂದು ಪಾತ್ರೆಯಲ್ಲಿ ಮೊಸರನ್ನು ತೆಗೆದುಕೊಂಡು ಅದಕ್ಕೆ ಅರಸಿನ ಹುಡಿ, ಗರಂ…