ವಿಧ: ಪುಸ್ತಕ ವಿಮರ್ಶೆ
October 21, 2021
೮೦ರ ದಶಕದಲ್ಲಿ ಮನೆ ಮಾತಾಗಿದ್ದ ರೋಚಕ ಕಾದಂಬರಿ ತುಳಸೀದಳ. ಇದನ್ನು ಬರೆದವರು ಖ್ಯಾತ ತೆಲುಗು ಲೇಖಕರಾದ ಯಂಡಮೂರಿ ವೀರೇಂದ್ರನಾಥ ಇವರು. ಪುಸ್ತಕದ ಬೆನ್ನುಡಿಯಲ್ಲಿ ಪ್ರಕಾಶಕರು ಚಲನಚಿತ್ರವಾಗುತ್ತಿರುವ ತುಳಸೀದಳ ಎನ್ನುವ ಶಿರೋನಾಮೆಯಲ್ಲಿ “ಹತ್ತು ವರ್ಷದ ಪಾಪುವಿನ ಮೇಲೆ ಭಯಂಕರವಾದ ಕ್ಷುದ್ರ ಶಕ್ತಿ ಕಾಷ್ಮೋರಾದ ಪ್ರಯೋಗ ! ಇಪ್ಪತ್ತೊಂದು ದಿನ ! ಪಾಪುವಿನ ಸಾವಿಗೆ ಇನ್ನು ಇಪ್ಪತ್ತೊಂದು ದಿನ !! ದಿನಕ್ಕೊಂದು ಬಗೆಯ ಹೊಸ ವ್ಯಾಧಿ ! ಪ್ರತ್ಯಕ್ಷ ನರಕ! ಕಾಷ್ಮೋರಾ ಪಾಪುವನ್ನು ಕಬಳಿಸುತ್ತಿತ್ತು.…
ವಿಧ: ಪುಸ್ತಕ ವಿಮರ್ಶೆ
October 19, 2021
ಮಲೆನಾಡಿನ ರೋಚಕ ಕಥೆಗಳು ಸರಣಿಯ ೧೧ನೆಯ ಭಾಗವಾದ ‘ಬಲ್ಲಾಳ ದುರ್ಗದ ಭೀಕರ ಕಮರಿ' ಪುಸ್ತಕ ನಿಮ್ಮ ಕೈಯಲ್ಲಿದೆ. ಇದು ೧೩ ಕಥೆಗಳನ್ನು ಹೊಂದಿರುವ ಕಥಾ ಸಂಕಲನ. ಎಂದಿನಂತೆ ಮಲೆನಾಡಿನ ಸುಂದರ ಪ್ರಕೃತಿ ಸೌಂದರ್ಯ ಜೊತೆಗೆ ಅಲ್ಲಿನ ರೋಚಕತೆಯನ್ನು ಒಳಗೊಂಡಿದೆ.
ಲೇಖಕರಾದ ಗಿರಿಮನೆ ಶ್ಯಾಮರಾವ್ ಅವರೇ ತಮ್ಮ ಪುಸ್ತಕದ ಬೆನ್ನುಡಿಯಲ್ಲಿ ಬರೆದಿರುವಂತೆ “ಮಲೆನಾಡಿನ ಪ್ರಕೃತಿ ಹೇಗೆ ವೈವಿಧ್ಯವೋ ಹಾಗೇ ಇಲ್ಲಿನ ಜನರ ಬದುಕೂ ವೈವಿಧ್ಯಮಯ. ಗಮನಿಸುವ ಕಣ್ಣಿದ್ದರೆ ಇಲ್ಲಿ ನಡೆಯುವ ರೋಚಕ ಘಟನೆಗಳಂತೂ ಬರೆದು…
ವಿಧ: ಪುಸ್ತಕ ವಿಮರ್ಶೆ
October 16, 2021
ಕಲಬುರ್ಗಿ ನೂತನ ಪದವಿ ಮಹಾವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಡಾ.ಮಲ್ಲಿನಾಥ ಶಿ. ತಳವಾರರದು ಮೇರು ವ್ಯಕ್ತಿತ್ವ. ಸರಳ ಸಜ್ಜನಿಕೆಗೆ ಮತ್ತೊಂದು ಹೆಸರು ಡಾ.ತಳವಾರರು. ಇವರೊಬ್ಬ ಮಹಾನ್ ಸಾಹಿತಿ ಮಾತ್ರವಲ್ಲ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸುತ್ತಿರುವ ಮಹಾನ್ ಕವಿ ಎಂಬುದರಲ್ಲಿ ಎರಡು ಮಾತಿಲ್ಲ. ಕನ್ನಡ ಸಾರಸ್ವತ ಲೋಕದಲ್ಲಿ ತನ್ನದೇ ಛಾಪು ಮೂಡಿಸಿದವರು ಡಾ.ಮಲ್ಲಿನಾಥರು. ಗಜಲ್ ಕಾವ್ಯಕನ್ನಿಕೆಯನ್ನು ಕೈವಶ ಮಾಡಿಕೊಂಡು ಗಜಲ್ ಕಲಿಕಾರ್ಥಿಗಳಿಗೆ…
ವಿಧ: ಪುಸ್ತಕ ವಿಮರ್ಶೆ
October 15, 2021
ಡಾ.ಚಂದ್ರಶೇಖರ ಕಂಬಾರರು ನಂಬಿಕೆಯಲ್ಲಿ ಆಸ್ತಿಕರು. ಕೊನೆಗೂ ಈ ಲೋಕದಲ್ಲಿ ಕೇಡಿನ, ದುಷ್ಟಶಕ್ತಿಗಳ ವಿರುದ್ಧ ಸಾತ್ವಿಕ ಶಕ್ತಿ ಗೆಲ್ಲುತ್ತದೆ ಎಂಬುದು ಅವರ ಪೂರ್ಣ ವಿಶ್ವಾಸ. ಆದರೆ, ಈ ವಿಶ್ವಾಸ ಆಧುನಿಕ ಬದುಕಿನ ಸಂಕೀರ್ಣ ಅನುಭವ, ಕೆಡುಕಿನ ಅಪರಿಮಿತ ಸಾಧ್ಯತೆಗಳಿಗೆ ಕುರುಡಾಗುವುದಿಲ್ಲ. ಸಾತ್ವಿಕ ಶಕ್ತಿಗಳ ಕೊನೆಯ ವಿಜಯದ ಮೆಟ್ಟಿಲೇರುವ ಮೊದಲು ಅನುಭವಿಸಬೇಕಾದ ಸೋಲುಗಳನ್ನು ಕಡೆಗಣಿಸುವುದಿಲ್ಲ. ಚರಿತ್ರೆ ಮತ್ತು ವರ್ತಮಾನ ಮೌಲ್ಯಗಳ ಪರಸ್ಪರ ಸಂಘರ್ಷವನ್ನು ನಿರೂಪಿಸಲು ಡಾ.ಕಂಬಾರರು ಚಾಂದಬೀ…
ವಿಧ: ಪುಸ್ತಕ ವಿಮರ್ಶೆ
October 12, 2021
ಛಂದ ಪುಸ್ತಕ ಪ್ರಕಾಶನ ಇವರು ಪ್ರತೀ ವರ್ಷ ಉದಯೋನ್ಮುಖ ಕಥೆಗಾರರ ಹಸ್ತ ಪ್ರತಿಗಳ ಸ್ಪರ್ಧೆ ನಡೆಸುತ್ತಾರೆ. ಬಹುಮಾನ ವಿಜೇತರ ಕಥಾ ಸಂಕಲನವನ್ನೂ ಹೊರತರುತ್ತಾರೆ. ಈ ವರ್ಷ ಕತೆಗಾರ್ತಿ ಕಾವ್ಯಾ ಕಡಮೆ ಅವರ ‘ಮಾಕೋನ ಏಕಾಂತ' ಎಂಬ ಕಥಾ ಸಂಕಲನದ ಹಸ್ತಪ್ರತಿಗೆ ಬಹುಮಾನ ದೊರೆತಿದೆ. ಈ ಸ್ಪರ್ಧೆಗೆ ತೀರ್ಪುಗಾರರಾಗಿದ್ದವರು ಹಿರಿಯ ವಿಮರ್ಶಕರಾದ ಟಿ.ಪಿ.ಅಶೋಕ ಇವರು.
ಇವರು ತಮ್ಮ ಮುನ್ನುಡಿಯಲ್ಲಿ “ತಮ್ಮ ಕವಿತೆ, ಕಾದಂಬರಿ ಹಾಗೂ ನಾಟಕಗಳಿಂದ ಈಗಾಗಲೇ ಪ್ರಸಿದ್ಧರಾಗಿರುವ, ಹಲವು ಪ್ರಶಸ್ತಿಗಳಿಂದ…
ವಿಧ: ಪುಸ್ತಕ ವಿಮರ್ಶೆ
October 09, 2021
ನನ್ನ ಗೆಳತಿ ಹಾಗೂ ಕಾಲೇಜೊಂದರಲ್ಲಿ ಉಪನ್ಯಾಸಕಿಯಾಗಿರುವ ಶ್ರೀಮತಿ ಸೀಮಾ ಗುರುದತ್ ಇವರ ವಾಟ್ಸಾಪ್ ಸ್ಟೇಟಸ್ ನಲ್ಲಿ ದಿನಾಲೂ ಒಂದು ಪುಟ್ಟ ಕತೆ ಪ್ರಕಟವಾಗುತ್ತಿತ್ತು. ಕತೆಯ ಕೊನೆಗೆ ಧೀರಜ್ ಬೆಳ್ಳಾರೆ ಎಂಬ ಹೆಸರು ಇರುತ್ತಿತ್ತು. ಪುಟ್ಟ ಪುಟ್ಟ ಕತೆಗಳನ್ನು ಓದಲು ಸುಲಭ ಆದರೆ ಬರೆಯುವುದು ಬಹಳ ಕಷ್ಟ, ಮೊಬೈಲ್ ಸ್ಕ್ರೀನ್ ನ ಒಂದು ಪುಟದಲ್ಲಿ ಕತೆ ಮುಗಿಯಬೇಕು. ಅದರಲ್ಲೇ ಕತೆಯ ವಿಷಯ, ಸಂದೇಶ ಕೊಟ್ಟು ಮುಗಿಸಬೇಕು. ಇದು ಪುಟ್ಟ ಕತೆ ಬರೆಯುವ ಕಥೆಗಾರರಿಗೆ ಇರುವ ಸವಾಲು. ಕೆಲ ಸಮಯ ಹೀಗೇ ಕತೆಗಳನ್ನು…
ವಿಧ: ಪುಸ್ತಕ ವಿಮರ್ಶೆ
October 07, 2021
"‘ದೇವಯಾನಿ’ ಎಂಬ ಹೆಸರಿನಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಸೃಜನಶೀಲ ಬರಹಗಳ ಮೂಲಕ ತಮ್ಮನ್ನು ತೊಡಗಿಸಿಕೊಂಡ ಶುಭಾ ಎ ಆರ್ ಅವರ ಮತ್ತೊಂದು ಮಹತ್ವದ ಆಸಕ್ತ ಕ್ಷೇತ್ರ ಅನುವಾದ. ಇವರು ಆಂಗ್ಲಭಾಷೆಯಿಂದ ಕನ್ನಡಕ್ಕೆ ಅನುವಾದಿಸಿರುವ ಹಲವು ಕಥೆಗಳು ಈಗಾಗಲೇ ತುಷಾರ, ಮಯೂರಗಳಲ್ಲಿ ಪ್ರಕಟಗೊಂಡಿವೆ.
ವಿಜ್ಞಾನ ಮತ್ತು ಗಣಿತ ಶಿಕ್ಷಕಿಯಾಗಿ ಅಸಂಖ್ಯಾತ ವಿದ್ಯಾರ್ಥಿಗಳ ಅರಿವಿಗೆ ನೀರೆರೆವ ಮಕ್ಕಳಿಗಾಗಿಯೇ ವಿಜ್ಞಾನ ನಾಟಕಗಳನ್ನೂ ಬರೆದು ‘ಧರೆಯನುಳಿಸುವ ಬನ್ನಿರಿ' ಎಂಬ ಮೂರು ವೈಜ್ಞಾನಿಕ ನಾಟಕಗಳುಳ್ಳ…
ವಿಧ: ರುಚಿ
October 06, 2021
ಮೊದಲಿಗೆ ಪನ್ನೀರ್ ಅನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಕತ್ತರಿಸಬೇಕು. (ಕತ್ತರಿಸಿದ ಪನ್ನೀರ್ ಸಹಾ ಸಿಗುತ್ತದೆ). ನಂತರ ಹಿಟ್ಟಿನ ಮಿಶ್ರಣ ಮಾಡಿಕೊಳ್ಳಲು ಕಾರ್ನ್ ಫ್ಲೋರ್, ಕಡಲೇ ಹಿಟ್ಟು, ತಲಾ ಕಾಲು ಚಮಚದಷ್ಟು ಗರಂ ಮಸಾಲೆ, ಕೊತ್ತಂಬರಿ ಹುಡಿ, ಜೀರಿಗೆ ಹುಡಿ, ಕರಿಮೆಣಸಿನ ಹುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಎಲ್ಲವನ್ನೂ ಸ್ವಲ್ಪ ನೀರು ಸೇರಿಸಿ ಕಲಸಿ ಪೇಸ್ಟಿನಂತೆ ಮಾಡಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಆ ಮಿಶ್ರಣಕ್ಕೆ ಕತ್ತರಿಸಿಟ್ಟುಕೊಂಡ ಪನ್ನೀರನ್ನು ಹಾಕಿ ಮಿಶ್ರ ಮಾಡಿ.…
ವಿಧ: ಪುಸ್ತಕ ವಿಮರ್ಶೆ
October 05, 2021
‘ವರ್ಣಕ' -ತಕ್ಷಶಿಲೆಯಲ್ಲಿ ಮತ್ತೆ ಜೀವತಳೆದ ಭಾಷಾ ವಿಲಾಸ ಎಂಬ ಪುಸ್ತಕವನ್ನು ಬರೆದವರು ಕೆ.ಪಿ.ರಾವ್ ಇವರು. ಪುಸ್ತಕದ ಬೆನ್ನುಡಿಯಲ್ಲಿ “ಮಹೇಶ್ವರರು ತಮ್ಮ ಡಮರುಗವನ್ನು ನುಡಿಸಿದರು. ಅ ಇ ಉ ಮೊದಲಾಗಿ ಹಲ್ ವರೆಗಿನ ಸ್ವರ ವ್ಯಂಜನಗಳ ದಿವ್ಯ ನಾದ ತರಂಗ ಲೋಕವನ್ನೆಲ್ಲಾ ಎಚ್ಚರಿಸಿ, ಉದ್ಧರಿಸಿತು. ನಡೆಯಲು ಅಸಹಾಯಕರಾದ ಸುಕೇಶಕರಿಗೆ ಮೋಕ್ಷ ಪ್ರಾಪ್ತಿಯಾಯಿತು. ಪಾಣಿನಿ, ಪಿಂಗಲ, ಉಪವರ್ಷರನ್ನು ಅದುವೇ ಶಬ್ಧ ಪ್ರವಾಹ ತನ್ನ ಸೂತ್ರಗಳಲ್ಲಿ ಬಂಧಿಸಿತು. ಮಳೆ ನಿಂತಿತ್ತು. ಮೂಡುವ ಸೂರ್ಯನ ಉಜ್ವಲ ಹಳದಿ…
ವಿಧ: ಪುಸ್ತಕ ವಿಮರ್ಶೆ
October 02, 2021
‘ಅಕ್ಕ ಮಹಾದೇವಿ' ಎಂಬ ಕಾದಂಬರಿಯನ್ನು ರಚಿಸಿದ್ದಾರೆ ಸು.ರುದ್ರಮೂರ್ತಿ ಶಾಸ್ತ್ರಿ ಇವರು. ‘ಅಕ್ಕ ಕೇಳವ್ವ ನಾನೊಂದು ಕನಸ ಕಂಡೆ’ ಎಂದು ಮುಖಪುಟದಲ್ಲೇ ಟ್ಯಾಗ್ ಲೈನ್ ಮುದ್ರಿಸುವ ಮೂಲಕ ಕಾದಂಬರಿಯ ಬಗ್ಗೆ ಕುತೂಹಲ ಮೂಡಿಸಿದ್ದಾರೆ. ಪುಸ್ತಕದ ಬೆನ್ನುಡಿಯಲ್ಲಿ ವಚನಗಳನ್ನು ನೀಡಲಾಗಿದೆ. ಅದರಲ್ಲಿ
“ಕಾಯಕ್ಕೆ ನೆಳಲಾಗಿ ಕಾಡಿತ್ತು ಮಾಯೆ!
ಪ್ರಾಣಕ್ಕೆ ಮನವಾಗಿ ಕಾಡಿತ್ತು ಮಾಯೆ!
ಮನಕ್ಕೆ ನೆನಹಾಗಿ ಕಾಡಿತ್ತು ಮಾಯೆ
ನೆನಹಿಂಗೆ ಅರಿವಾಗಿ ಕಾಡಿತ್ತು ಮಾಯೆ!
ಜಗವ ಜಂಗುಳಿಗೆ ಬೆಂಗೋಲನೆತ್ತಿ ಕಾಡಿತ್ತು…