ವಿಧ: ರುಚಿ
October 01, 2021
ಬಾಳೆ ಕಾಯಿ ಸಿಪ್ಪೆಯನ್ನು ತೆಗೆದು ಅರಶಿನ ಹುಡಿ ಬೆರೆಸಿದ ನೀರಿನಲ್ಲಿ ಹತ್ತು ನಿಮಿಷ ಇಡಬೇಕು. ನಂತರ ನೀರನ್ನೆಲ್ಲ ಬಸಿಯಬೇಕು. ಒಂದು ಸ್ವಚ್ಛ ಬಟ್ಟೆಯಲ್ಲಿ ಹರವಿದರೆ ನೀರಿನಂಶ ಬೇಗ ಆರುತ್ತದೆ. ಕಾದ ಎಣ್ಣೆಗೆ ಚಿಪ್ಸ್ ಸ್ಲ್ಯೆಸರಲ್ಲಿ ನೇರವಾಗಿ ಕತ್ತರಿಸಿ ಹಾಕಿ ಕರಿಯಿರಿ, ಹದ ಕರಿದಾಗ ಉಪ್ಪು ನೀರು ಚಿಮುಕಿಸಿ ಪುನಃ ಸ್ವಲ್ಪ ಹೊತ್ತು ಕಾಯಿಸಬೇಕು. ಗರಿಗರಿಯಾದಾಗ ಎಣ್ಣೆಯಿಂದ ಹೊರ ತೆಗೆಯಿರಿ. (ಖಾರ ಬೇಕಾದಲ್ಲಿ ಉಪ್ಪು ನೀರಿಗೆ ಮೆಣಸಿನ ಹುಡಿ, ಅರಶಿನಹುಡಿ ಅಥವಾ ಸಾಂಬಾರ್ ಪೌಡರ್ ಮಿಶ್ರ…
ವಿಧ: ಪುಸ್ತಕ ವಿಮರ್ಶೆ
September 30, 2021
‘ಲೋಲ' ಎಂಬುವುದು ಗುರುಪ್ರಸಾದ ಕಾಗಿನೆಲೆ ಅವರ ಕಥಾ ಸಂಕಲನ. ಪುಸ್ತಕದ ಬೆನ್ನುಡಿಯಲ್ಲಿರುವ ಮಾತುಗಳು “ವ್ಯಥೆಗಳೇ ಕತೆಗಳಾಗುವುದು ಅನ್ನುವುದಾದರೆ ಆಸ್ಪತ್ರೆಯೊಂದು ಕಥಾಸರಿತ್ಸಾಗರ. ಲಿಕ್ಕಾಚಾರದ ಬದುಕಿನಲ್ಲಿ ಮೈಮರೆತ ನಮ್ಮನ್ನು ಆಗಾಗ್ಗೆ ನಿಲ್ಲಿಸಿ ವಿಶಾಲ ದೃಷ್ಟಿಯನ್ನು ದಯಪಾಲಿಸಿ ಹುಷಾರಾಗಿಸುವುದು ಆಸ್ಪತ್ರೆ. ಈ ಹೊಸ ನೋಟ ಅಥವಾ ಹೊಸ ಪಾಠವನ್ನು ಅದು ಕೊಡುವುದು ಕಥೆಗಳ ರೂಪದಲ್ಲಿ. ಜನರಲ್ ವಾರ್ಡಿನ ಕಬ್ಬಿಣದ ಮಂಚದ ತುದಿಗೆ ಕೂತ ಇಬ್ಬರು ಹಂಚಿಕೊಳ್ಳುವ ವಿವರಗಳೆಲ್ಲವೂ ಕತೆಗಳೇ. ಇಲ್ಲಿನ…
ವಿಧ: ಪುಸ್ತಕ ವಿಮರ್ಶೆ
September 28, 2021
ಹೆಸರಾಂತ ಲೇಖಕಿ ನೇಮಿಚಂದ್ರ ಇವರ ಪ್ರವಾಸ ಕಥನವೇ ‘ಒಂದು ಕನಸಿನ ಪಯಣ' ಎಂಬ ಪುಸ್ತಕ. ‘ಪೆರುವಿನ ಪವಿತ್ರ ಕಣಿವೆಯಲ್ಲಿ' ಪ್ರವಾಸ ಕಥನದ ಲೇಖಕಿ ನೇಮಿಚಂದ್ರ ಅವರ ಪ್ರಥಮ ಪ್ರವಾಸದ ಕಥನ ‘ಒಂದು ಕನಸಿನ ಪಯಣ' ಸುಮಾರು ಕಾಲು ಶತಮಾನದ ಹಿಂದೆ ಮಹಿಳೆಯರಿಬ್ಬರು, ತಮ್ಮಂತೆ ತಾವು ಇಂಗ್ಲೆಂಡ್ ಮತ್ತು ಯುರೋಪು ಅಲೆದು ಬಂದ ರೋಮಾಂಚನದ ಕತೆ ಇಲ್ಲಿದೆ. ಅಲ್ಪ ಹಣದಲ್ಲಿ ಅಗಾಧ ಅನುಭವಗಳನ್ನು ಜೋಳಿಗೆಯಲ್ಲಿ ಹೊತ್ತು ಬಂದ ಲೇಖಕಿ ‘ಕನಸು ಕಂಡರೆ ಸಾಕು, ಹಾರಲಿಕ್ಕೆ ರೆಕ್ಕೆಗಳು ಮೊಳೆಯುತ್ತವೆ' ಎನ್ನುತ್ತಾರೆ.
ಈ…
ವಿಧ: ಪುಸ್ತಕ ವಿಮರ್ಶೆ
September 25, 2021
ಗುರುಪ್ರಸಾದ ಕಾಗಿನೆಲೆ ಇವರು ಬರೆದ ‘ಕಾಯಾ’ ಕಾದಂಬರಿ ಇತ್ತೀಚೆಗೆ ಅಂಕಿತ ಪುಸ್ತಕದಿಂದ ಪ್ರಕಾಶಿತವಾಗಿದೆ. ಈ ಪುಸ್ತಕದ ಬೆನ್ನುಡಿಯಲ್ಲಿ ಇಬ್ಬರು ಸಾಹಿತಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ. ಕಾವ್ಯಾ ಕಡಮೆ ಇವರ ಪ್ರಕಾರ “ ಕಾಯಾ ಕಾದಂಬರಿ ಬಗೆದು ತೋರಲು ಹೊರಟಿರುವುದು ಮನುಷ್ಯ ಬಾಳ್ವೆಯಲ್ಲೇ ಬೆರೆತು ಹೋಗಿರುವ ಹಪಾಪಿತನವನ್ನು. ಇಲ್ಲಿನ ಮಲೀಕ್, ಕಸ್ತೂರಿ, ಪರಿ, ಸಮಂತಾ, ಹನಿ ಕನ್ನಡ ಭೂಮಿಕೆಗೆ ಹೊಸತಾಗಿ ನಡೆದು ಬಂದವರಾದರೂ ತಮಗೇ ಗೊತ್ತಿಲ್ಲದೇ ಕನ್ನಡತನದಲ್ಲಿ ಆಳವಾಗಿ…
ವಿಧ: ಪುಸ್ತಕ ವಿಮರ್ಶೆ
September 23, 2021
ಸಾಹಿತ್ಯಲೋಕ ಪಬ್ಲಿಕೇಷನ್ಸ್ ಪ್ರಕಟಿಸುತ್ತಿರುವ ಆಶಾರಘು ಅವರ ಹೊಸ ಕಾದಂಬರಿ "ಮಾಯೆ ". ಪುಸ್ತಕಕ್ಕೆ ಖ್ಯಾತ ಕಾದಂಬರಿಕಾರರಾದ ಡಾ. ಕೆ.ಎನ್ ಗಣೇಶಯ್ಯ ಅವರು ಬೆನ್ನುಡಿ ಬರೆದಿದ್ದಾರೆ.
“ಸುಖ ಪಡೆಯಲೆಂದು ಹೆಣ್ಣು, ಹೊನ್ನು ಮತ್ತು ಮಣ್ಣುಗಳ ಹಿಂದೆ ಬಿದ್ದ ಜೀವಕ್ಕೆ ಆ ಸುಖವು ಎಂದೂ ಮರೀಚಿಕೆಯಾಗಿಯೇ ಉಳಿಯುತ್ತದೆ ಎನ್ನುವುದು ಚಿರಪರಿಚಿತ ಬೋಧನೆಯಷ್ಟೇ ಅಲ್ಲದೆ ಮಾನವನ ಚರಿತ್ರೆಯುದ್ದಕ್ಕೂ ಪುನರಾವರ್ತಿತವಾಗಿ ಗೋಚರಿಸುವ ಸತ್ಯ ಕೂಡ, ಇದರ ಇನ್ನೊಂದು ಮಗ್ಗುಲಾಗಿ ನೆಲೆಯಾಗಿರುವ ಮತ್ತೊಂದು…
ವಿಧ: ಪುಸ್ತಕ ವಿಮರ್ಶೆ
September 21, 2021
ವಸುಮತಿ ಉಡುಪ ಇವರು ಬರೆದ ಕಥೆಗಳ ಸಂಕಲನವೇ ‘ಬೊಗಸೆ ತುಂಬಾ ನಕ್ಷತ್ರಗಳು. ಕಳೆದ ಮೂರು ದಶಕಗಳಲ್ಲಿ ಸಾಪ್ತಾಹಿಕ, ವಾರ ಪತ್ರಿಕೆ, ಮಾಸಿಕ ವಿಶೇಷಾಂಕಗಳಲ್ಲಿ ಪದೇ ಪದೇ ಕಾಣಿಸುವ ಹೆಸರು ವಸುಮತಿ ಉಡುಪ ಅವರದು. ಯಾವುದೇ ಕ್ಲಿಷ್ಟತೆಯಿಲ್ಲದ ಸರಳ ಭಾಷೆ, ನಿರೂಪಣೆ, ನೇರ ಕತೆಗಾರಿಕೆಗಳಿಂದ ಒಮ್ಮೆಲೆ ಓದುಗನ ಮನದಾಳಕ್ಕಿಳಿದು ಬಿಡುತ್ತಾರೆ. ಮಹಿಳಾ ಓದುಗರಿಗಂತೂ ವಸುಮತಿಯವರ ಕತೆಗಳೆಂದರೆ ಪಂಚಪ್ರಾಣ.
ಮಲೆನಾಡಿನ ಪರಿಸರ, ಭಾಷೆ, ಜೀವನ ಶೈಲಿ ಇವರ ಬಹುತೇಕ ಕತೆಗಳ ವಸ್ತು. ‘ಬಂದನಾ ಹುಲಿರಾಯ', ‘ಅಗ್ನಿ…
ವಿಧ: ಪುಸ್ತಕ ವಿಮರ್ಶೆ
September 18, 2021
‘ಮಿಹಿರಕುಲಿ' ಎನ್ನುವ ವಿಶಿಷ್ಟ ಹೆಸರನ್ನು ಹೊಂದಿರುವ ಈ ಪುಸ್ತಕವನ್ನು ಬರೆದವರು ಸದ್ಯೋಜಾತ ಭಟ್ಟ ಇವರು. ಇವರ ಹಾಗೂ ಈ ಪುಸ್ತಕದ ಬಗ್ಗೆ ಎಸ್.ಎನ್.ಸೇತುರಾಮ್ ಇವರು ತಮ್ಮ ಬೆನ್ನುಡಿಯಲ್ಲಿ ಹೀಗೆ ಬರೆದಿದ್ದಾರೆ “ಸದ್ಯೋಜಾತ ಭಟ್ಟರ ಹೊಸ ಪುಸ್ತಕ ‘ಮಿಹಿರಕುಲಿ', ಮೊದಲ ಮೂರು ಪುಸ್ತಕಗಳಾದ ‘ಶಿಲೆಯಲ್ಲಡಗಿದ ಸತ್ಯ', ‘ನಾಸತ್ಯ' ಮತ್ತು ‘ಕಾಲಯಾನ' ಕೆದಕಿ ಬಿಟ್ಟಂತಹ ಭಾವಗಳಿಗೆ, ಈ ಪುಸ್ತಕ ಮೂರ್ತರೂಪ ಕೊಟ್ಟಿದೆ. ಓದಿ ಮುಗಿಸಿದಾಗ ಮೊದಲು ಕಾಡುವ ಭಾವ ವಿಷಾದ.
ಭಾರತದ ಪ್ರಜೆಯಾದ ನನಗೆ, ದೇಶ ನನ್ನ…
ವಿಧ: ರುಚಿ
September 17, 2021
ಚಿಕನ್ 65, ಗೋಬಿ 65 ಮುಂತಾದ ಖಾದ್ಯಗಳಂತೆ ನೆಲಕಡಲೆಯಿಂದಲೂ ಇದೇ ರೀತಿಯ ತಿನಸನ್ನು ತಯಾರಿಸಬಹುದು. ಇಲ್ಲಿದೆ ನೋಡಿ ಸುಲಭ ವಿಧಾನ.
ರಾತ್ರಿ ನೆನೆಸಿಟ್ಟ ನೆಲಕಡಲೆ ಬೀಜದ ಜೊತೆಗೆ ಸಣ್ಣ ತುಂಡು ಶುಂಠಿ, ಸ್ವಲ್ಪ ಪುದೀನಾ ಸೊಪ್ಪು ಹಾಗೂ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಮಿಕ್ಸಿಗೆ ಹಾಕಿ, ನೀರು ಹಾಕದೇ ತರಿ ತರಿಯಾಗಿ ರುಬ್ಬಿಕೊಂಡಿರಿ. ಒಂದು ನೀರುಳ್ಳಿಯನ್ನು ಸಣ್ಣಗೆ ತುಂಡರಿಸಿ (ಮುಕ್ಕಾಲು ಕಪ್) ಅದನ್ನು ಮೊದಲು ರುಬ್ಬಿಕೊಂಡ ಮಿಶ್ರಣದೊಂದಿಗೆ ಬೆರೆಸಿ. ಈ ಮಿಶ್ರಣಕ್ಕೆ ಅರಸಿನ ಹುಡಿ, ಗೋಬಿ 65 (…
ವಿಧ: ಪುಸ್ತಕ ವಿಮರ್ಶೆ
September 16, 2021
ಜಯಂತ್ ಕಾಯ್ಕಿಣಿ ಕತೆಗಳೆಂದರೆ ಒಂಥರಾ ಮುದ್ದು ಮುದ್ದಾಗಿರುತ್ತದೆ. ಕತೆಗಳನ್ನು ಓದುತ್ತಾ ಓದುತ್ತಾ ಆ ಊರು, ಜನರು, ಸನ್ನಿವೇಶಗಳಲ್ಲಿ ನಾವು ಕಳೆದೇ ಹೋಗುತ್ತೇವೆ ಎಂದೇನೋ ಅನಿಸಿಬಿಡುತ್ತದೆ. ಅದೇ ರೀತಿಯ ೯ ಕತೆಗಳನ್ನು ಜಯಂತ್ ಕಾಯ್ಕಿಣಿಯವರು ‘ಅನಾರ್ಕಲಿಯ ಸೇಫ್ಟಿಪಿನ್' ಕಥಾಸಂಕಲನದಲ್ಲಿ ನೀಡಿದ್ದಾರೆ.
ತಮ್ಮ ಮುನ್ನುಡಿಯಾದ ‘ಅರಿಕೆ’ಯಲ್ಲಿ ಅವರು ಬರೆದದ್ದು ಹೀಗೆ “ಸುಗ್ಗಿ ಹಬ್ಬದ ‘ಹಗರಣ'ದ ಹುಣ್ಣಿಮೆಯ ದಿನ. ರಥಬೀದಿಯಲ್ಲಿ ಮರಕಾಲು ಕಟ್ಟಿಕೊಂಡ ವೇಷಗಳು ಮೆರವಣಿಗೆಯಲ್ಲಿ ಬರುತ್ತಿದ್ದವು.…
ವಿಧ: ಪುಸ್ತಕ ವಿಮರ್ಶೆ
September 14, 2021
ಲೇಖಕ ಹಾಗೂ ಚಿಂತಕ ಅವಿ ಯೋರಿಶ್ ಅವರು ಇಸ್ರೇಲ್ ದೇಶದ ಬಗ್ಗೆ ಬರೆದ ಪುಸ್ತಕವೇ ‘ಆವಿಷ್ಕಾರದ ಹರಿಕಾರ'. ಮುಖಪುಟದಲ್ಲೇ ಬುದ್ದಿಶಾಲಿ ಇಸ್ರೇಲಿಗಳು ವಿಶ್ವವನ್ನು ಬದಲಿಸಿದ ಪರಿ ಎಂದು ಬರೆವ ಮೂಲಕ ಪುಸ್ತಕದ ಕಥಾ ವಸ್ತುವಿನ ಬಗ್ಗೆ ಕುತೂಹಲ ಮೂಡಿಸಿದ್ದಾರೆ ಈ ಪುಸ್ತಕದ ಅನುವಾದ ಮಾಡಿದ ವಿಶ್ವೇಶ್ವರ ಭಟ್ ಇವರು. ಮೂಲತಃ ಉದ್ಯಮಿಯಾದ ಅವಿ ಯೋರಿಶ್ ಅವರ ಈ ಕೃತಿ ವಿಶ್ವದ ನಲ್ವತ್ತಕ್ಕೂ ಅಧಿಕ ಭಾಷೆಗೆ ಅನುವಾದವಾಗಿರುವುದು ಈ ಪುಸ್ತಕದ ಹೆಗ್ಗಳಿಕೆ.
ಈ ಪುಸ್ತಕವು ಇಸ್ರೇಲ್ ಎಂಬ ಪುಟ್ಟ ದೇಶದ ಬಗ್ಗೆ…