ಈ ಬಾರಿ (೨೦೧೨ ರ) ನಮ್ಮ ನವರಾತ್ರಿ ಹಬ್ಬ ತಮಿಳು ನಾಡಿನಲ್ಲಿ !

ಈ ಬಾರಿ (೨೦೧೨ ರ) ನಮ್ಮ ನವರಾತ್ರಿ ಹಬ್ಬ ತಮಿಳು ನಾಡಿನಲ್ಲಿ !

ದಸರಾ ಹಬ್ಬ ಮೈಸೂರಿನಲ್ಲಿ ವಿಜೃಂಭಣೆಯಿಂದ ನಡೆಯುತ್ತದೆ. ಆ ಸಮಯದಲ್ಲಿ ಮನೆ ಮನೆಗಳಲ್ಲೂ  ಬೊಂಬೆಗಳನ್ನು ಕೂಡಿಸುತ್ತಾರೆ. ಇದನ್ನು ನೋಡಲು ಕಣ್ಣಿಗೆ ಹಬ್ಬ. ಪ್ರತಿಮನೆಯ ಬೊಂಬೆಗಳ ಪ್ರದರ್ಶನವೂ ಪ್ರತ್ಯೇಕ, ಹಾಗು ವೈವಿಧ್ಯಮಯ. ಈ ಸಲ ನಾವು ನವರಾತ್ರಿ ಹಬ್ಬದ ಸಮಯದಲ್ಲಿ ಚೆನ್ನೈ ನಗರದಲ್ಲಿದ್ದೆವು. ಅಲ್ಲಿನ ವಿವಿಧ ಮಂಟಪಗಳಲ್ಲಿ ಕೂಡಿಸಿದ್ದ ಬೊಂಬೆಗಳು ಅತಿ ಸುಂದರವಾಗಿದ್ದವು. ರಸ್ತೆ ರಸ್ತೆಗಳಲ್ಲೂ ಫುಟ್ಪಾತ್ ಮೇಲೆ ಬೊಂಬೆಗಳ ದಟ್ಟ ರಾಶಿಯೇ ಇರುತ್ತಿತ್ತು. ಗುಡಿಕಟ್ಟುವ ಕಲೆಯಲ್ಲಿ ದಕ್ಷಿಣ ಭಾರತಿಯರು ಪ್ರಸಿದ್ಧರು. ಅವರಲ್ಲಿ ತಮಿಳರು ಪ್ರಧಾನ ಪಾತ್ರ ವಹಿಸುತ್ತಾರೆ. ಮಧುರೆ ಮೀನಾಕ್ಷಿ ದೇವಾಲಯ, ರಾಮೇಶ್ವರಂನ ದೇವಾಲಯ, ಶ್ರೀರಂಗಂನ ದೇವಾಲಯ ಮೊದಲಾದವು ಅವರ ಕೈಚಳಕ ಹಾಗು ಪ್ರಾವೀಣ್ಯತೆಗೆ ನಿದರ್ಶನಗಳಾಗಿವೆ. ದೇವಿ ದೇವತೆಗಳ ಹಲವಾರು ಭಂಗಿಗಳನ್ನು ಅವರು ಹೊಸ ಹೊಸದಾಗಿ ಕಲ್ಪಿಸಿಕೊಂಡು ನಿರ್ಮಿಸುತ್ತಾರೆ. ಅವೆಲ್ಲಾ ಸುಂದರ ಶಿಲ್ಪ ಪ್ರಕಾರಗಳು. ನಮ್ಮ ಹಂಪೆಯ ವಿರುಪಾಕ್ಷ ದೇವಾಲಯ ಅಧ್ಬುತವಾಗಿದೆ. ಬೇಲೂರು, ಹಳೇಬೀಡುಗಳ ದೇವಸ್ಥಾನಗಳು ಕಲೆಯ ಆಗರಗಳಾಗಿವೆ.

ಈ ತರಹದ ಬೊಂಬೆಯ ಕಲ್ಪನೆ ನಿಜಕ್ಕೂ ಸುಂದರ. ಮಕ್ಕಳಿಗೆ ನಮ್ಮ ಕಲೆ ಶಿಲ್ಪಿ ಮತ್ತು ಆಚರಣೆಗಳಲ್ಲಿ ಆಸಕ್ತಿಯನ್ನು ಹುಟ್ಟಿಸುವ ದಿಕ್ಕಿನಲ್ಲಿ ಇವು ಪ್ರಮುಖ ಪಾತ್ರವಹಿಸುತ್ತವೆ.ನಾವು ಆ ಸಮಯದಲ್ಲಿ ಶ್ರೀರಂಗಂ, ಪಾಂಡಿಚೆರಿ, ತಂಜಾವೂರ್, ಮಹಾಬಲಿಪುರಂ, ಮತ್ತು ತ್ರಿವೆಂಡ್ರಂ ನಗರಗಳಲ್ಲಿ ಅಲ್ಲಿನ ಸುಂದರ ದೇವಾಲಯಗಳನ್ನು ವೀಕ್ಷಿಸುತ್ತಿದ್ದೆವು. ಅದೊಂದು ಅತ್ಯಂತ ಸುಂದರ ಎಂದೆಂದಿಗೂ  ಮರೆಯಲಾರದ ಅನುಭವವಾಗಿತ್ತು !

 

-ಚಿತ್ರ ಹಾಗೂ ವಿವರಣೆ,

-ಹೊರಂಲವೆಂ 

 

Rating
No votes yet