ನೀ ನನ್ನನ್ನು ನೆನೆಸಿಕೊಳ್ಳುವಂತೆ ಮಾಡಿ ಹೋಗುತ್ತೇನೆ!!!

ನೀ ನನ್ನನ್ನು ನೆನೆಸಿಕೊಳ್ಳುವಂತೆ ಮಾಡಿ ಹೋಗುತ್ತೇನೆ!!!

ಸಖೀ,
ಹುಡುಕಬೇಡ
ನನ್ನ ಕವನಗಳಲಿ
ಕುವೆಂಪು, ಬೇಂದ್ರೆ
ನರಸಿಂಹಸ್ವಾಮಿಯವರನ್ನು,
ಶಿವರುದ್ರಪ್ಪ, ಅಡಿಗ,
ದೊಡ್ಡ ರಂಗೇಗೌಡರನ್ನು;


ಹುಡುಕಬೇಡ
ನನ್ನ ಬರಹಗಳಲಿ
ಭೈರಪ್ಪ, ಕಾರಂತ,
ಅನಂತಮೂರ್ತಿಯವರನ್ನು
ಲಂಕೇಶ, ಪ್ರತಾಪ ಸಿಂಹ
ರವಿ ಬೆಳಗರೆಯವರನ್ನು;


ನಾನು ಬರೇ
ನಾನಾಗಿರುತ್ತೇನೆ
ನಾನಾಗಿಯೇ
ಬರೆಯುತ್ತೇನೆ,
ನಾನು ನನ್ನದಾದ
ಹೊಸ ಛಾಪನ್ನು
ಇಲ್ಲಿ ಉಳಿಸಿ
ಹೋಗುತ್ತೇನೆ;


ನಾನಳಿದ ಮೇಲೆ
ಮುಂದೊಂದು ದಿನ
ಇನ್ನಾರದೋ ಕವನ
ಇನ್ನಾರದೋ ಬರಹ
ಓದಿದ ನೀನು
ಅಲ್ಲಿ ಈ ನಿನ್ನ ನನ್ನನ್ನು
ನೆನೆಸಿಕೊಳ್ಳುವಂತೆ
ಮಾಡಿ ಹೋಗುತ್ತೇನೆ!!!
***********


- ಆತ್ರಾಡಿ ಸುರೇಶ್ ಹೆಗ್ಡೆ

Rating
No votes yet

Comments