ನೇಸರ...!.

ನೇಸರ...!.

ಮೂಡಲ ಬಾಗಿಲಿನಿಂದ

ಅರುಣೋದಯ ನೇಸರ ಬಂದ

ಕತ್ತಲು ಕವಿದ ಮನಕೆ

ಶೈತನ್ಯದ ಬೆಳಕತಂದ.

 

ಗಿರಿ ಶಿಖರಗಳ ಮೇಲೆ ಹೇರಿ

ಸುಮ ಲತೆಗಳ ಮನವ ಗೆದ್ದ

ಹಸಿರಮ್ಮನ ಗುಡಿಯ ಹೊಕ್ಕು

ಕಲರವಗಳನು ನೀಡಿದ.

 

ಜುಳು ಜುಳನೆ ಹರಿವ ಝರಿಗೆ

ದಾರಿತೋರೊ ದಾತನಾದ.

ತನಗಾಗಿ ಕಾದ ಪದ್ಮಕೆ

ಹೊಸ ಹುರುಪಿನ ಕಾಂತಿತಂದ.

 

ಸಮಯಕ್ಕೆ ತಕ್ಕ ಚಲನೆ

ಒಂದುಗಳಿಗೆ ಸುಮ್ಮನಿರನು

ಧರೆ ಕಾಯೋ ಧೀರನಿವನು

ದಿಟ್ಟ ತನದಿ ಮೆರೆವನು.

 

ಮೂಡಣದಿ ಹುಟ್ಟಿ ಬೆಳೆದು

ಪಡುವಣದಲಿ ಮುಳುಗುವ.

ನವಶೈತನ್ಯದಿ ಜನ್ಮಪಡೆದು

ಮತ್ತೆ ಬೆಳಕ ತೋರುವ.

 

                                    ವಸಂತ್

 

ಚಿತ್ರಕೃಪೆ. http://lh5.ggpht.com

Rating
No votes yet

Comments