ಪ್ರಜಾಪ್ರಭುತ್ವ

ಪ್ರಜಾಪ್ರಭುತ್ವ

ಜನರಿಂದ ಜನರಿಗಾಗಿ
ಜನರದ್ದೇ ಈ ಸರಕಾರ,
ಇದಕಿಲ್ಲ ಕಿವಿ ಕೇಳಲು
ಜನರ ಹಾಹಾಕಾರ..

ಹರಿಯುತಿಹುದು ಬಡವರ
ಜೇಬಿಂದ ನೋಟು,
ತುಂಬುತಿಹುದು ರಾಜಕಾರಣಿಗಳ
ಬೀರುವಿನ ಸ್ಲಾಟು..

ರೈತನಿಗೆ ಹೊಟ್ಟೆಗೆ
ಹಿಟ್ಟಿಲ್ಲ್ದದಿರೂ ಸರಿಯೇ,
ವಿದೇಶೀ ಕಾರಿಲ್ಲದ
ಮಂತ್ರಿಪುತ್ರನ ನಾನರಿಯೆ..

ಅರ್ಧ ಜನಕಿಲ್ಲ ಇಲ್ಲಿ
ರೋಝಿ ರೋಟಿ,
ಆದರೆ ಪ್ರತಿ ಶಾಸಕನ ಹತ್ತಿರ
ಕನಿಷ್ಠ ೫೦ ಕೋಟಿ...

ಈ ಕ್ಷೇತ್ರದಿ ಮುದುಕರದೇ
ದರಬಾರು,
ಪ್ರತಿಯೊಬ್ಬನ ಹೆಸರಲ್ಲೂ
ಗಲ್ಲಿ ಗಲ್ಲಿಯಲೊಂದು ಬಾರು..

ರೈತ ಸಾಲ ತೀರಿಸದೇ
ಸತ್ತರೂ ಸೈ,
ಈ ರಾಜಕಾರಣಿಯದು
ಎಮ್ಮೆಯ ಮೈ...

ಐದು ವರ್ಷಕ್ಕೆ ಬದಲಾಗುವದು
ರಕ್ತಹೀರುವ ಪಾಳಿ,
ಸದೆಬಡಿಯಲಾರೆವೆ ಇವರ
ಹೊಮ್ಮಿಸಿ ಬದಲಾವಣೆಯ ಗಾಳಿ...

ಹುಹ್!!!! ಎಲ್ಲ ನೋಡಿ ಸುಮ್ಮನಿರುವದೇ
ನಮ್ಮ ತತ್ವ,
ಇದೇ ಸ್ವಾಮಿ ನಮ್ಮ್ರರ್ಥದಲ್ಲಿ
ಪ್ರಜಾಪ್ರಭುತ್ವ.

Rating
No votes yet