" ಪ್ರೀತಿಯಿಂದ ರಮೇಶ್"

" ಪ್ರೀತಿಯಿಂದ ರಮೇಶ್"

ಕಸ್ತೂರಿ ಕನ್ನಡ ವಾಹಿನಿಯ ವಿಭಿನ್ನ ಹಾಗೂ ವಿಶೇಷ ಕಾರ್ಯಕ್ರಮವೇ ಪ್ರೀತಿಯಿಂದ ರಮೇಶ್.
ಕಿರುತೆರೆಯ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ನಾಯಕ-ನಟ, ನಿರ್ದೇಶಕ ರಮೇಶ್ ಅರವಿಂದ್ ಈ ಕಾರ್ಯಕ್ರಮವನ್ನು ನಿರೂಪಿಸುತ್ತಿದ್ದಾರೆ. ಕನ್ನಡ ಚಿತ್ರರಂಗದ ಅತಿರಥ ಮಹಾರಥರನ್ನು ಪರಿಚಯಿಸುವ ಒಂದು ಪ್ರಮಾಣಿಕ ಪ್ರಯತ್ನವೇ ’ ಪ್ರೀತಿಯಿಂದ ರಮೇಶ್ ಕನ್ನಡ ಚಿತ್ರರಂಗದ ನಾಯಕ- ನಟ, ನಾಯಕಿಯರು, ನಿರ್ದೇಶಕರು, ತಂತ್ರಜ್ನರನ್ನು ಈ ಕಾರ್ಯಕ್ರಮದಲ್ಲಿ ಸಂದರ್ಶಿಸಲಾಗುವುದು.
ಈಗಾಗಲೇ ಈ ಕಾರ್ಯಕ್ರಮವು ಯಶಸ್ವಿಯಾಗಿ ೨೪ ಕಂತುಗಳನ್ನು ಪೂರ್‍ಯೆಸಿದ್ದು, ಕನ್ನಡ ಚಿತ್ರರಂಗದ ತಾರಾಸಮೂಹವನ್ನು ರಮೇಶ್ ವೀಕ್ಷಕರಿಗೆ ಪ್ರೀತಿಯಿಂದ ಪರಿಚಯಿಸಿದ್ದಾರೆ. ( ಜೂನ್ ೨೨ ರಂದು ’ಪ್ರೀತಿಯಿಂದ ರಮೇಶ್ಗೆ ೨೫ರ ಸಂಭ್ರಮ) ಈ ೨೫ ನೇ ಸಂಭ್ರಮಕ್ಕೆಂದು ಕಸ್ತೂರಿ ಕನ್ನಡ ವಾಹಿನಿ ವೀಕ್ಷಕರಿಗೆ ರಸದೌತಣವನ್ನು ನೀಡುತ್ತಿದೆ. ’ ಕ್ರೇಜಿ ಸ್ಟಾರ್’ ರವಿಚಂದ್ರನ್ ರವರನ್ನು ವಿಶೇಷ ಅಥಿತಿಯಾಗಿ ಆಹ್ವಾನಿಸಿ ಸಂದರ್ಶಿಸಿದೆ . ರವಿಚಂದ್ರನ್ ತಮ್ಮ ಮನದಾಳದ, ಅಂತರಾಳದ ಮಾತುಗಳನ್ನು ವೀಕ್ಷಕರೊಂದಿಗೆ ಹಂಚಿಕೊಳ್ಳಲಿದ್ದಾರೆ.ರವಿಚಂದ್ರನ್ ತಮ್ಮ ಬಾಲ್ಯದ ಸವಿನೆನಪುಗಳ ಬಗ್ಗೆ , ತಮ್ಮ ತಂದೆಯವರೊಂದಿಗಿನ ಒಡನಾಟದ ಬಗ್ಗೆ, ತಮ್ಮಏಳು ಬೀಳುಗಳ ಬಗ್ಗೆ ಮನಬಿಚ್ಚಿ ಮಾತಾನಾಡಿದ್ದಾರೆ. ಈ ಸಂದರ್ಶನವನ್ನು ಕಸ್ತೂರಿ ಕನ್ನಡ ವಾಹಿನಿಯು ಎರಡು ಕಂತುಗಳಲ್ಲಿ ಪ್ರಸಾರ ಮಾಡಲಿದ್ದು, ಮೊದಲನೇ ಕಂತು ಇದೇ ೨೨ ರಂದು ಭಾನುವಾರ ಬೆಳಿಗ್ಗೆ ೧೧:೦೫ ರಿಂದ ಮದ್ನಾಹ ೧೨:೦೦ ಗಂಟೆಯವರೆಗೂ ಪ್ರಸಾರವಾಗಲಿದೆ. ಎರಡನೆಯ ಕಂತನ್ನು ಜೂನ್ ೨೯ ರಂದು ಪ್ರಸಾರ ಮಾಡಲಿದೆ. .

Rating
No votes yet