ಮತ್ತೊಂದು ದಿವ್ಯ ಸಮ್-ದರ್ಶನ

ಮತ್ತೊಂದು ದಿವ್ಯ ಸಮ್-ದರ್ಶನ

 

ಇವತ್ತು ನನ್ನ ತಮ್ಮನ ೫೦ ನೇ ಹುಟ್ಟುಹಬ್ಬ.
ಅದಕ್ಕೆಂದೇ ಕೆಲಸಕ್ಕೆ ರಜೆ ಹಾಕಿ ಬೆಳಿಗ್ಗೆನೇ ಮಡದಿಯೊಡನೆ  ದೇವಸ್ಥಾನಗಳಿಗೆ ಹಾಜರಿಹಾಕಲು ಹೊರಟೆ.
ಅನತಿ ದೂರವಿರುವಾಗಲೇ ಗುಡಿಯ ಘಂಟಾ ನಿನಾದ ಕೇಳತೊಡಗಿತು. ಗುಡಿಯ ನೋಡಿರಣ್ಣ ಎನ್ನುತ್ತಲೇ ಬಳಿಸಾಗಿದರೆ, ಮೇಲಿನ ಗರ್ಭ ಗುಡಿಯ ದ್ವಾರವಂತೂ ಮುಚ್ಚಿಯೇ ಇದೆ ಕೆಳಗಡೆಯ ಗೇಟನ್ನೂ ಮುಚ್ಚಿ ಕಾಯುತ್ತಿದ್ದಾರೆ ಗುಡಿಯ ಸಮವಸ್ತ್ರದ ಸೇವಕರು .ಕೇಳಿದರೆ ಪುಣ್ಯಕ್ಕೆ ಕನ್ನಡದಲ್ಲೇ ಈಗ ದೇವರಿಗೆ ನೈವೇಧ್ಯ ನಡೆಯುತ್ತಿದೆ, ಇನ್ನೂ ಸಮಯವಿದೆ, ಎಂಟಕ್ಕೆ ತೆರೆಯುತ್ತಾರೆ ಎಂದ, ಸ್ವಲ್ಪ ಸಮಯಕ್ಕೇ ಅದೇಕೋ ನಮ್ಮ ಮೇಲೆ ಕರುಣೆ ಹುಟ್ಟಿ ಹೊರ ದ್ವಾರದ ಬಾಗಿಲು ತೆರೆದು ಒಳ ಹೋಗಲು ಅನುಮತಿ ನೀಡಿದ.ನಾನು ಅಲ್ಲಿಂದ ಸಪತ್ನೀಕನಾಗಿ ಮೇಲೆ ( ಮೆಟ್ಟಿಲು)  ಹತ್ತಲು ಅನುವಾಗುವುದರೊಳಗಾಗಿ ದೇವನ ಉಗ್ರ ಭಕ್ತಾದಿಗಳಲ್ಲನೇಕರು ನನಗಿಂತ ಮುಂದೆ ನನ್ನ ದಾಟಿ ಹೊರಟರು. ಸುಮ್ಮನಿದ್ದೆ ನನ್ನ ದರ್ಶನದ ಸಮಯವನ್ನಂತೂ ಅವರು ಕಸಿಯುವದಿಲ್ಲವಲ್ಲ .ಮುಚ್ಚಿದ ಬಾಗಿಲ ಹೊರಗೆ ನಾವೆಲ್ಲ ನಿಂತು "ಬಾಗಿಲನು ತೆರೆದು... " ಅಂತ ಗುಣುಗುಣಿಸುತ್ತಿರಬೇಕಾದರೆ ದೇವಾಲಯದ ನೈವೇಧ್ಯಾಅರತಿಯ ಪಕ್ಕವಾಧ್ಯಗಳು ಮೊಳಗುತಿರಲು ತಂತಾನೇ ನನ್ನ ಕಣ್ಮುಚ್ಚಿತು, ಗಣೇಶರ ಬರಹದಲ್ಲಿನ ಹಾಗೆ ದೇವರೇ ಬಂದರು.
ಕೇಳ್ವೆ: ದೇವಾಧಿದೇವಾ ನಿನ್ನ ಈ ಭಕ್ತರಲ್ಲಿಯೇ ತಾರತಮ್ಯವೇಕೆ ? ಇಲ್ಲಿಂದ ನಿನ್ನ ಆಸ್ಥಾನಕ್ಕೆ ಹೋಗಲು ಸಾಧ್ಯವಾಗದವರು ಇಲ್ಲಿಯೇ ಕನ್ನಡದಲ್ಲಿ ನಿನ್ನ ದರ್ಶನ ಪಡೆಯಬಹುದೆಂದು ಕೊಂಡರೆ... ಹೀಗೇಕೆ..?
ಉತ್ತರ: ಹಾಗಲ್ಲ ಭಕ್ತಾ! ನೀನು ಸುರೇಶ ಹೆಗ್ಡೆಯವರ ಲೇಖನ (http://sampada.net/blog/asuhegde/18/03/2011/30927) ಎರಡೆರಡು ಬಾರಿ ಓದಿದ್ದೀಯಲ್ಲ, ಅವರವರ ಭಾವಕ್ಕೆ ಅವರವನ್ನು ಬಿಡು.
ಕೇಳ್ವೆ: ಅದು ಸರಿ, ಅದು ಸರಿ, ಹಾಗಿದ್ದಲ್ಲಿ ನಿನಗೆ ಇಷ್ಟೆಲ್ಲಾ ಆಢಂಬರದ ದುಂದು ವೆಚ್ಚದ ಮಹಲೇಕೆ?
ಉತ್ತರ: ಅದೆಲ್ಲಾ ಭಕ್ತರ ಕಾಣಿಕೆಯಲ್ಲವೇ,  ಇದು ವ್ಯಾವಹಾರಿಕ ಜಾಹೀರಾತಿನ ಯುಗ. ವಿಶ್ವದಲ್ಲೇ ವಿಖ್ಯಾತನಾದ ನನಗೆ ಇಷ್ಟಾದರೂ ಮಾಡದಿದ್ದರೆ ಹೇಗೆ? ಎಲ್ಲರೂ ನಿನ್ನ ಹಾಗೆ ಜಿಪುಣರಲ್ಲವಲ್ಲ ?.
ಕೇಳ್ವೆ: ಹಾಗೆಲ್ಲಾ ವಯ್ಯಕ್ತಿಕವಾಗಿ ಮಾತನಾಡಬಾರದು ದೇವಾ, ಭಕ್ತಿ ಭಾವ ಮನಸ್ಸಿಗೇ ತಾನೇ ? ನಮ್ಮೆಲ್ಲರ ಮನಸ್ಸೂ ನಿನ್ನದೇ ಅಲ್ಲವೇ ?
ಉತ್ತರ : ಹಾಗೆಲ್ಲಾ ಹೇಳಿ ನನ್ನನ್ನು ಇಮೋಶನಲ್ ಬ್ಲಾಕ್ ಮೇಲ್ ಮಾಡಬೇಡ.
ಕೇಳ್ವೆ: ಅದಿರಲಿ ದೇವಾ, ಗರ್ಭಗುಡಿಯ ಇದಿರಿನ ಬಲಿ ಕಂಬದ ಬುಡ ಚಿನ್ನದಿಂದ ತಗಡಿನಿಂದ ಆವ್ರತ ವಾಗಿದೆ, ಆದರೆ ನಿನ್ನ ಮೇಲೂ ಅಷ್ಟು ಚಿನ್ನವಿಟ್ಟಿಲ್ಲ ವಲ್ಲ ಏಕೆ?
ಉತ್ತರ: ತೀರಾ ವಯ್ಯಕ್ತಿಕ ವಿಷಯದ ಕೇಳ್ವೆಗೆ ಆಸ್ಪದವಿಲ್ಲ. ಬೇರೆಯೇನಾದರೂ ಕೇಳು,
ಕೇಳ್ವೆ: ನೀನ್ಯಾಕೆ ಸಪತ್ನೀಕನಾಗಿಲ್ಲ, ನಾನು ನೋಡು ಎಲ್ಲಿಗೇ ಹೋದರೂ ಸಪತ್ನೀಕನಾಗಿಯೇ ಹೋಗುತ್ತೇನೆ.
ಉತ್ತರ: ನೆನಪಿನಲ್ಲೀಡು ,ನೀನು ಈಗ ಸೈನ್ಯದಲ್ಲಿ ಇಲ್ಲ, ಎಲ್ಲಾ ಕಡೆಗೂ ನಿನ್ನ ಹಾಗೇ ಹೋಗಬೇಕೆಂದೇನೂ ಇಲ್ಲ, ಹಾಗೂ ಕಾಲ ತುಂಬಾನೇ ಮುಂದುವರಿದಿದೆ, ಮುಂದಿನ ಕಾಲದ ಗೃಹಸ್ಥರಿಗೆ ಮುಜುಗರವಾಗಬಾರದೆಂದು ನಾನು ಹೀಗೆ ಇದ್ದೇನೆ.
ಕೇಳ್ವೆ: ಸರಿ ಕಳ್ಳರು ಕಾಕರು , ಮೋಸ ಮಾಡುವವರು ಅವರೆಲ್ಲರಿಗೂ ನೀನೆಂದರೆ ತುಂಬಾ ಅಭಿಮಾನವೇಕೆ?, ಆ ಹಣ ತೆಗೆದುಕೊಳ್ಳುವುದು ತಪ್ಪಲ್ಲವಾ? ಅದು ಕಪ್ಪು ಹಣ.
ಉತ್ತರ: ನನ್ನ ಭಕ್ತರೆಲ್ಲರೂ ನನ್ನ ಭಕ್ತರೇ, ಅವರು ಏನು ಮಾಡುತ್ತಾರೆ ನನಗೆ ಅದರ ಅವಶ್ಯಕಥೆಯಿಲ್ಲ,
ಕೇಳ್ವೆ: ಅರ್ಥ ಆಗಲಿಲ್ಲ.
ಉತ್ತರ: ಈಗ ನೀನು ಎರಡೆರಡು ಕಡೆ....... ತೀರಾ ವಯ್ಯಕ್ತಿಕ ಮಾತಾಗುತ್ತೆ ಬೇಡ ಬಿಡು. ಈಗ ನಿನ್ನ ಸಂಪದದ ಹರಿಪ್ರಸಾದ ನಾಡಿಗರನ್ನೇ ತೆಗೆದುಕೋ ಅವರಿಗೆ ಈ ಸಂಪದದಲ್ಲಿ ಯಾರ್ಯಾರು ಫೇಕ್ ಗುರುತು ಇಟ್ಟುಕೊಂದು ಯಾರ್ಯಾರ ಕಾಲ್ ಎಳೀತಾರೆ ಅಂತ ಗೊತ್ತು, ಆದರೂ ಅವರು ಯಾರಿಗಾದರೂ ಹೇಳ್ತಾರಾ ನೋಡು ಇಲ್ಲ ಅಲ್ಲವಾ? ಹಾಗೆ ,ಮಾಡಿದ್ದುಣ್ಣೋ ಮಹಾರಾಯ ಎಂಬಂತೆ ಅವರು ಮಾಡಿದ್ದಕ್ಕೆ ಅವರೇ ಹೊಣೆ, ನಾನು ಯಾರಿಗೂ ಇದು ಹಾಕಿ ಅದು ಹಾಕಿ ಅದು ಮಾಡಿ ಎನ್ನುತ್ತೇನೆಯೋ.. ಇಲ್ಲವಲ್ಲ ಅವರವರ ಭಾವ. ನಾನಂತೂ ಯಾವಾಗ ಅಲ್ಲಿಗೆ ಹೋದೇನು ಅಂತ ಕಾಯುತ್ತಿರುತ್ತೇನೆ, ರಾತ್ರೆಯಂತೂ ಜಬ್ಬರ್ದಸ್ತ್ ಬೀಗ ಹಾಕಿ ಇಟ್ಟಿರುತ್ತಾರೆ, ಹಗಲಿಗೆ ಪೂಜಾರಿಗಳು ಬಿಡುವುದಿಲ್ಲ, ನನ್ನ ಮಂಡೆ ಬಿಸಿ ನನಗೆ. ಈಗ ನೀನೇ ನೋಡು ನನ್ನ ಬಳಿ ಬಂದೆಯಲ್ಲ..?
ಕೇಳ್ವೆ: ನಾನು ನನಗಾಗಿ ಬರಲಿಲ್ಲ, ನಾನೇನಾದರೂ ಕೇಳಿದ್ದೇನಾ ನಿನ್ನ ಹತ್ತಿರ..? ಇವತ್ತು ನನ್ನ ತಮ್ಮನ ಹುಟ್ಟುಹಬ್ಬ, ಅವನ ಹೆಸರಿನಲ್ಲಿ ಅರ್ಚನೆ ಮಾಡಿಸಲು ಬಂದಿದ್ದೆ.
ಉತ್ತರ: ಸರಿ , ನನ್ನ ಪ್ರಸಾದವಾದ ಈ ಲಡ್ಡುವಿನ ಆಸೆಯಿಂದಲಾದರೂ ಬಂದೆಯಲ್ಲ, ಆಸೆ ಆಸೆಯೇ, ಸಣ್ಣದಿರಲಿ ದೊಡ್ಡದಿರಲಿ.

( ಮುಂದುವರಿಯುವುದು)

Rating
No votes yet

Comments