ಮನುಜನಿಲ್ಲ!!

ಮನುಜನಿಲ್ಲ!!

ಮನುಜನಿಲ್ಲ!!

ಕಳೆದು ಹೋಗಿದ್ದಾನೆ
ಮನುಜ ಜಗದಲಿಂದು!
ಸಿಗುವರು ಹಿಂದೂ,ಕ್ರೈಸ್ತ,
ಮುಸಲ್ಮಾನರಸ್ತೆ
ನಮ್ಮೊಳಗಿಂದು.

ಪ್ರೀತಿ,ಪ್ರೇಮ, ಸಹಕಾರದ
ಸಹಬಾಳ್ವೆ ಇಲ್ಲ!
ಇಹುದು ಕೇವಲ
ಗುಡಿ, ಚರ್ಚು,ಮಸಿದಿಗಳು
ನಮ್ಮೊಡನೆ ಇಂದು.

ಗಂಟೆ, ಗೋಪುರ, ಗುಂಬಜ,
ಶಿಲುಬೆಗಳ ನಾಡಿನಲಿ
ಉಸಿರುಗಟ್ಟಿ ಪರಿತಪಿಸಿ
ಸತ್ಹಿದೆ ಮಾನವತೆಯು!
ಗುಡಿ,ಚರ್ಚು, ಮಸಿದಿಗಳಲಿ
ಮನಃ ಶಾಂತಿಗೆ
ಪ್ರಾರ್ಥಿಸಿ ಫಲವೇನು
ಹತವಾಗಿದೆ
ಮಾನವೀಯ ಧರ್ಮವಿಂದು
ಓ ಧರ್ಮಾಂದರೆ!!
ಎಚ್.ಎನ್.ಈಶಕುಮಾರ್

Rating
No votes yet