ಸಂಭವಾಮಿ ಕಲಿಯುಗೇ...

ಸಂಭವಾಮಿ ಕಲಿಯುಗೇ...

ಸಂಭವಾಮಿ ಕಲಿಯುಗೇ...?

ಒಂದೇ ತಾಯ ಕುಡಿಗಳೆಲ್ಲ ಹಸಿದಹೆಬು್ಬಲಿಯಂತೆ

ನರಮೇಧಕಣಿಯಾಗಿ ನಿಂತಿರುವ ದೃಶ್ಯ !

ಭಾರತ,ಅಮೇರಿಕಾ,ಶೀಲಂಕಾವೆಂದೇನೂ ಇಲ್ಲ

ಕೊಚಿ್ಚ-ಕೊಲ್ಲುವುದೆಂದರೆ ಇವರಿಗದೆಷು್ಟ ಹರ್ಷ ?

ಕೋವಿ,ಬಂದೂಕದ ದಟ್ಟ ಹೊಗೆಯಿಂದ

ಕಪಿ್ಪಟು್ಟ ಗೋಳಿಡುತಿದೆ ನೀಲಾಕಾಶ..

ಯಾವ ಕ್ಷಣದಲೂ್ಲ ಧರೆಗಿಳಿಯಬಹುದು

ಗುಂಡು-ಸಿಡಿಗುಂಡುಗಳ ರುಧಿರ ವರ್ಷ ||

ರುಂಡ ಚೆಂಡಾಡುವ ಘೋರ ಮಾರಣಕೆ

ಮುಗ್ದರ,ಮಹಿಳೆಯರ ಬಲಿ ಕೊಟ್ಟವರು..

ಜಾತಿ,ಮತ,ಧಮ೯ದ ವಿಷವರ್ತುಲದೊಳಗೆ

ಮಾನವೀಯತೆಯ ಅಪಹರಿಸಿ ಬಂಧಿಸಿಟಿ್ಟಹರು.

ಏಸು,ಬುದ್ದರು ಜನ್ಮವೆತಿ್ತದ ಶಾಂತಿ ನೆಲದಲೆ್ಲ

  ನೆತ್ತರಲಿ್ಲ ಬರೆಯಲ್ಪಟಿ್ಟದೆ ನಮೆ್ಮಲ್ಲರ ಹೆಸರು..

ನರಮಾಂಸದ ರುಚಿಕಂಡ ನರರಾಕ್ಷಸರಿರುವಾಗ

ಜೀವಾಧಾರವಾದ ಭೂತಳದಿ ಯಾರು ಸುರಕ್ಷಿತರು ? ||

ಅರಿವಾಗದಾ್ಯಕಿವರಿಗೆ ಬಾ೦ಬು, ಗು೦ಡುಗಳಿ೦ದ

ಬದಲಿಸಲಾಗದು ಜಗದ ಹಣೆಯ ಬರಹ

ಪರಿಹಾರವೇ ಇಲ್ಲವೇ ನಮ್ಮ ಸಮಸೆ್ಯಗಳಿಗೆ

ಬೇರೆ ಮಾರ್ಗದಿ ರಕ್ತಕಾ್ರ೦ತಿಯ ವಿನಹ?

ಮುನಿಸಿಕೊ೦ಡವರ ಮನದೊಳಗೆ ಹೊಕ್ಕು

ಭೇದಿಸಬೇಕಿದೆ ಧರ್ಮಾ೦ಧಕಾರದ ಚಕ್ರವೂ್ಯಹ

ಶಾ೦ತಿ, ಸಹನೆ ತು೦ಬಿದ ಸಿಹಿ ಜಲದೊಸರ ಹ೦ಚಿ

ತಣಿಸಬೇಕಿದೆ ಬ೦ದೂಕ ಹಿಡಿದವರ ರಕ್ತ ದಾಹ.

ಭುವಿಗೆ ಬ೦ದಾಗ ಏನನೂ್ನ ಹೊತ್ತು ತ೦ದವರಿಲ್ಲ

ಮತಾ್ಯಕೆ ನಮ್ಮದೇ ನೆಲ-ಜಲವೆ೦ಬ ಹುಚ್ಚು ವ್ಯಾಮೋಹ

ಬ೦ದೂಕ ಬದಿಗಿರಿಸಿ ಬನ್ನಿ ಮಾನವತೆಯ ಸನಿಹ

ಬದಲಿಸಲಾಗದ್ದನೂ್ನ ಬದಲಿಸಬಲು್ಲದು ಪ್ರೀತಿ-ಸ್ನೇಹ ||

              ------ಸುಧಾಕರ್ ಬೆಳಿರಾಯ.

Rating
No votes yet