ಸಂವೇದನ ಅಕ್ಟೋಬರ್ ತಿಂಗಳ ಕಾರ್ಯಕ್ರಮ - " ಎಚ್ಚೆಸ್ವಿ ಅನಾತ್ಮ ಕಥನ" ಪುಸ್ತಕ ಬಿಡುಗಡೆ ಸಮಾರಂಭ
ಸ್ನೇಹಿತರೆ,
ಇದೇ ಭಾನುವಾರ, 24 ಅಕ್ಟೋಬರ್ ರಂದು ಬೆಳಗ್ಗೆ 10.30ಕ್ಕೆ "ಸಂವೇದನ" ಸಾಂಸ್ಕೃತಿಕ ವೇದಿಕೆ ಹಾಗು ಶ್ರೀ G N ಮೋಹನ್ ಅವರ "ಮೇ ಫ್ಲೋವೆರ್ ಮೀಡಿಯಾ" ವತಿಯಿಂದ ಡಾ. ಎಚ್ ಎಸ್ ವೆಂಕಟೇಶ ಮೂರ್ತಿ ಅವರ ಆತ್ಮ ಚರಿತ್ರೆಯನ್ನೊಳಗೊಂಡ " ಎಚ್ಚೆಸ್ವಿ ಅನಾತ್ಮ ಕಥನ" ಪುಸ್ತಕ ಬಿಡುಗಡೆ ಸಮಾರಂಭವನ್ನು ಇಟ್ಟು ಕೊಂಡಿದ್ದೇವೆ. ಈ ಸಮಾರಂಭದಲ್ಲಿ B R ಲಕ್ಶ್ಮಣ ರಾವ್, ರವಿ ಬೆಳಗೆರೆ, ವಸುಧೇಂದ್ರ, ಜೋಗಿ ಹಾಗು G N ಮೋಹನ್ ಇರುತ್ತಾರೆ.
ಕೊಂಚ ಬಿಡುವು ಮಾಡಿಕೊಂಡು ಬಸವನಗುಡಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಕಡೆ ಬನ್ನಿ.
ಅವಧಿ ಬ್ಲಾಗ್ ನಲ್ಲಿ ಈ ಪುಸ್ತಕದ ಬಗ್ಗೆ ಬಂದಂತಹ ಒನ್ದು ಒಳ್ಳೆಯ ಲೇಖನ ಇಲ್ಲಿದೆ.
ತಾವೂ ಬನ್ನಿ, ತಮ್ಮ ಸ್ನೇಹಿತರನ್ನೂ ಕರೆ ತನ್ನಿ.
ಧನ್ಯವಾದಗಳೊಂದಿಗೆ,
ಪೂರ್ಣಪ್ರಜ್ಞ
98450 44486
Rating
Comments
ಉ: ಸಂವೇದನ ಅಕ್ಟೋಬರ್ ತಿಂಗಳ ಕಾರ್ಯಕ್ರಮ - " ಎಚ್ಚೆಸ್ವಿ ಅನಾತ್ಮ ಕಥನ" ...