ಸನ್. ೨೦೧೨ ರ ದೀಪಾವಳಿಯ ಹಾರ್ದಿಕ ಶುಭಾಶಯಗಳು !

ಸನ್. ೨೦೧೨ ರ ದೀಪಾವಳಿಯ ಹಾರ್ದಿಕ ಶುಭಾಶಯಗಳು !

ಚಿತ್ರ

'ಶ್ರೀ ನಂದನನಾಮ ಸಂವತ್ಸ'ರದ ಆಶ್ವಯುಜಮಾಸ ಶರದೃತುವಿನ ಕೃಷ್ಣಪಕ್ಷದ ದಕ್ಷಿಣಾಯಣಪುಣ್ಯಕಾಲದ, 'ದೀಪಾವಳಿಯ ಹಬ್ಬದ ಹಾರ್ದಿಕ ಶುಭಾಶಯಗಳು'. ನಮ್ಮ ಎಲ್ಲಾ ಸಂಪದದ ಗೆಳೆಯ/ಗೆಳತಿಯರಿಗೂ ಹಾಗೂ ಭಾರತೀಯರಿಗೆಲ್ಲಾ ಆ ಪರಮಾತ್ಮನು ಆಯುರಾರೋಗ್ಯ ಐಶ್ವರ್ಯಗಳನ್ನು ದಯಪಾಲಿಸಲಿ. ರಾಜಕಾರಣಿಗಳು ಜವಾಬ್ದಾರಿಯಿಂದ ವರ್ತಿಸಿ ಕರ್ನಾಟಕದ ಜನತೆಗೆ ನೆರವಾಗಲಿ. ಏನಾದರೂ ರಾಜ್ಯದ ಅಭಿವೃದ್ಧಿಯೋಜನೆಗಳು ಕಾರ್ಯಗತವಾಗಲಿ. ಪ್ರಜೆಗಳಿಗೆ ನೆಮ್ಮದಿ ಸಿಗಲಿ. ಇನ್ನಾದರೂ ಕಚ್ಚಾಟ, ಬುದ್ಧಿಗೇಡಿತನಗಳು ನಮ್ಮ ರಾಜಕೀಯ ಮುಂದಾಳುಗಳಲ್ಲಿ ನಿರ್ಣಾಮವಾಗಲಿ. ತೆರೆದ ಕಣ್ಣುಗಳಿಂದ ವಿಶ್ವದ ಆಗುಹೋಗುಗಳನ್ನು ವೀಕ್ಷಿಸಿ ಏನಾದರೂ ಒಳ್ಳೆಯ ಬುದ್ಧಿ ಕಲಿಯಲಿಯಲೆಂದು ಆಶಿಸೋಣ ! ಇದುವರೆಗಿನ ಅಯೋಗ್ಯ ಸರಕಾರ ಹೋಗಿ ಉತ್ತಮಮಟ್ಟದ ವಿಚಾರವಂತ ನಾಯಕರು ನಮ್ಮ ರಾಜ್ಯದ ಕಡಿವಾಣವನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳಲಿ !

 

 
-ಹೊರಂಲವೆಂ
-ಘಾಟ್ಕೋಪರ್,
-ಮುಂಬೈ
Rating
No votes yet