ಸಾವು - ಮಾಸ್ತಿಯವರ ’ಪುರಂದರದಾಸ’ ಪುಸ್ತಕದಲ್ಲಿ
-ಬಂದಿರುವುದು ಹೋಗಲಿಕ್ಕೆ , ಹೋಗುವುದು ಬರಲಿಕ್ಕೆ
-ಭೂಲೋಕ ಕೈಸಾಲೆ , ವೈಕುಂಠ ಒಳಸಾಲೆ. ಇದು ಹೊರಸನ್ನಿಧಿ, ಅದು ಒಳಸನ್ನಿಧಿ. ಮೈ ಹೊರಗೆ ಬಿಡುವ ಮೆಟ್ಟು, ಉತ್ತರೀಯ. ಹೊಸಲೀಚೆ, ಹೊಸಲಾಚೆ. ಹೊಸಲು ಅನ್ನೋದು ಕಾಣದವರಿಗೆ ಸಾವು. ಹೊಸಲು ಅಂತ ಬಲ್ಲವರಿಗೆ ಹೆಜ್ಜೆ.
ಮಾಸ್ತಿ ವೆಂಕಟೇಶ ಅಯ್ಯಂಗಾರರು ಪುರಂದರದಾಸರ ಬಗೆಗೆ ನಾಲ್ಕು ಚಿಕ್ಕ ನಾಟಕಗಳನ್ನು ಬರೆದಿದ್ದಾರೆ. ಹರಿದಾಸದೀಕ್ಷೆ, ಹರಿದಾಸ್ಯ ಸಾಧನ, ಹರಿದಾಸ್ಯ ಸಿದ್ಧಿ , ಅಂತ್ಯ ಮಂಗಲ ಇವೇ ಆ ನಾಲ್ಕು ದೃಶ್ಯಗಳನ್ನು ಸೇರಿಸಿ ’ಪುರಂದರದಾಸ’ ಎಂಬ ಪುಸ್ತಕ ಇದೆ. ಅಲ್ಲಿ ಸಿಕ್ಕ ಸಾಲುಗಳಿವು.
Rating