ಹತ್ತು ಕಳೆದಿದೆ - ಹೊತ್ತು ಹರಿದಿದೆ!!!
ತನ್ನ ಸ್ವತಂತ್ರ ವಕೀಲಿ ವೃತ್ತಿಗೆ ಹತ್ತು ವರುಷ ತುಂಬಿದ ಸಂದರ್ಭದಲ್ಲಿ, (ಗಣೇಶ ಚತುರ್ಥಿಯಂದು), ನನ್ನ ಅನುಜ ಪೃಥ್ವಿರಾಜ್, ಬರೆದು, ನನಗೆ ರವಾನಿಸಿದ್ದ ಕವನ:
ಹತ್ತು ಕಳೆದಿದೆ
ಹೊತ್ತು ಹರಿದಿದೆ
ಕೈಬೀಸಿ ಕರೆದಿದೆ
ಕರ್ಮಭೂಮಿಯ
ಕಳ್ಳ ಮಂಚಕೆ
ಕಳ್ಳ ಮಂಚವೇ
ಸುದೃಢ ಮಂಚವು
ನಿತ್ಯ ನಿಶ್ಚಲ ಭದ್ರವು
ಮಧುರ ಗಾನವ
ಪಾಡಿ ಸೆಳೆಯುತ
ಮನಕೆ
ಮುದವನೇ ನೀಡಿದೆ
ಮುತ್ತನಿತ್ತಿದೆ
ಪ್ರೇಮ ಬೆಸೆದಿದೆ
ತಾಣ ಸುಂದರವೆಸೆದಿದೆ
ಅಧೈರ್ಯ ತೊಲಗಿದೆ
ವೇಗ ಹೆಚ್ಚಿದೆ
ಗುರಿಯೆಡೆಗೆ
ದೃಷ್ಟಿಯು ನೆಟ್ಟಿದೆ
ಎನಗೆ ನೀನು
ನಿನಗೆ ನಾನು
ಎಂಬ ಮೌನ ವಾಣಿಗೆ
ಕಿವಿ ನಿಮಿರ್ದುದು
ಕಣ್ ಕಾಣಲ್ದುದು
ಮನಕೆ ಸತ್ಯವು
ತಿಳಿವ ಕಾಲಕೆ
ಬೆರೆವ ಕೈ
ಜಡವಾದುದು!!!
Rating