1. ಚೆನ್ನ ಮಲ್ಲಿಕಾರ್ಜುನ ಮಡಿಲಿಗೆ ಒಂದಷ್ಟು ವಚನಗಳು.

1. ಚೆನ್ನ ಮಲ್ಲಿಕಾರ್ಜುನ ಮಡಿಲಿಗೆ ಒಂದಷ್ಟು ವಚನಗಳು.

1.

ಮನಸು ಮನಸುಗಳೊಳಗಿನ ಮಹದೇವ

ಮೊದಲ ಸಲ ನಿನ್ನಲ್ಲಿ ನನ್ನ ಜ್ಞಾನದ ಬೀಜವನು

ಬಿತ್ತಿರುವೆ. ನನ್ನಲಿರುವ ಅಜ್ಞಾನವನು ಹೊಡೆದೊಡಿಸಿ

ಸುಜ್ಞಾನವನು ಕೊಡು ತಂದೆ ಅಯ್ಯಾ ಚೆನ್ನ ಮಲ್ಲಿಕಾರ್ಜುನ.

 

 

2.

ವಿಧಿಯ ಬರಹದ ಬಗ್ಗೆ ಯೋಚಿಸುವ ಒಬ್ಬರನು ನಾಕಾಣೆ

ತಂತ್ರ ಕುತಂತ್ರಗಳ ಹೆಣೆಯುತ್ತಾ

ಜಾರಿ ಬೀಳುವ ಜನರಿಗಾಗಿ ಕಾದು ಕುಳಿತ

ಜೇಡರಗಳನ್ನು ಶಿಕ್ಷಿಸುವುದೆಂತು ಮಲ್ಲಿಕಾರ್ಜುನ.

 

3.

ನಿಜವಾದ ಮಾನವರೂಪಿ ದೇಹದಲಿ

ಕಾಮವನ್ನು ಕಾಮವೇ ತಿಂದು

ಕ್ರೋದವನ್ನು ಕ್ರೋದವೇ ತುಳಿದು

ಮಧವು ಮತಿಹೀನವಾಗಿ

ಮತ್ಸರವು ಮತ್ಸರವನ್ನೆ ಮರೆತು

ಲೋಭವನು ಲಾಭವನಾಗಿಸಿಕೊಂಡು

ಮೋಹದೊಂದಿಗೆ ಎಲ್ಲಾ ಮರ್ಮಗಳು!.

ಮಸಣವನು ಸೇದಂತೆ ಮಲ್ಲಿಕಾರ್ಜುನ.

 

4.

ತಾನೂ ನಿಜವಾದ ಜ್ಞಾನವಂತನೆಂದುಕೊಳ್ಳುವವನು

ತನ್ನೊಳಗಿನ ಅಜ್ಞಾನದ ಕಿಚ್ಚಿಗೆ ಬಲಿಯಾಗಿ

ದಾರಿ ನೆಟ್ಟಗಿದ್ದರು ಅವನ ಕಣ್ಣಿಗೆ ಅದು

ಸೊಟ್ಟಗೆ ಕಾಣುವುದಲ್ಲ ಮಲ್ಲಿಕಾರ್ಜುನ.

 

5.

ಮನುಕುಲದ ಕಲ್ಮಶವನ್ನು ತೊಳೆಯಲು

ವಿಧಿಯೇ ಮುಂದೆ ಬಾರದಿದ್ದಾಗ ಅವರವರ

ನಂಜು ಅವರವರನ್ನೆ ಸರ್ವನಾಷವಾಗಿಸುವ

ಕಾಲ ಬಹಳ ದೂರವಿಲ್ಲವಲ್ಲ ಮಲ್ಲಿಕಾರ್ಜುನ.

 

                                                                     ವಸಂತ್

 

 

Rating
No votes yet