ಪುಸ್ತಕ ಪರಿಚಯ

ಲೇಖಕರು: Ashwin Rao K P
April 19, 2022
‘ಕಡಲ ಸೃಷ್ಟಿ’ ಎಂಬ ಸದಭಿರುಚಿ ಮಾಸಿಕದ ಸಂಪಾದಕರಾದ ಬಿ.ಸಂಜೀವ ಇವರ ಜೀವನದ ಅನುಭವಗಳ ಸಾರವೇ ‘ಸಂಜೀವಿನಿ'. ಇವರು ಈ ಪುಸ್ತಕದಲ್ಲಿ ತಮ್ಮ ಜೀವನದಲ್ಲಿ ಅನುಭವಕ್ಕೆ ಬಂದ ಘಟನಾವಳಿಗಳು, ಸ್ವರಚಿತ ಕವನಗಳು ಎಲ್ಲವನ್ನೂ ಸೇರಿಸಿ ಒಂದು ಮಾಹಿತಿ ಪೂರ್ಣ ಪುಸ್ತಕವನ್ನಾಗಿಸಿದ್ದಾರೆ. ಧ್ಯಾನದ ಬಗ್ಗೆ ಅವರು ಮಾಡಿದ ಅಧ್ಯಯನಗಳ ಬಗ್ಗೆಯೂ ಸವಿವರವಾದ ಮಾಹಿತಿ ನೀಡಿದ್ದಾರೆ. ಸಂಜೀವ ಅವರು ತಮ್ಮ ‘ಮನದಾಳದ ಮಾತು’ ಎಂಬ ಮುನ್ನುಡಿಯಲ್ಲಿ ಹೀಗೆ ಬರೆಯುತ್ತಾರೆ “ಸಂಜೀವಿನಿ ಈ ಪುಸ್ತಕದಲ್ಲಿ ವಚನ-ಕವನ ರೂಪದಲ್ಲಿ…
ಲೇಖಕರು: addoor
April 15, 2022
ಬಿ. ಜಿ. ಎಲ್. ಸ್ವಾಮಿಯವರು ತಮ್ಮ "ಹಸುರು ಹೊನ್ನು” ಪುಸ್ತಕದಿಂದ ಪ್ರಖ್ಯಾತರು. ಸಸ್ಯಗಳ ಬಗ್ಗೆ ಅದೊಂದು ಅಪರೂಪದ ಪುಸ್ತಕ. ಕತೆ ಹೇಳಿದಂತೆ ಸಸ್ಯಗಳ ಪರಿಚಯವನ್ನು ಮಾಡಿಕೊಡುವ ಪುಸ್ತಕ ಅದು. ಶುಷ್ಕ ಎನಿಸಬಹುದಾದ ವಿಜ್ನಾನದ ವಿಷಯಗಳನ್ನು ಹಾಸ್ಯ ಲೇಪಿಸಿ, ಚೇತೋಹಾರಿಯಾಗಿ ಹೇಗೆ ಓದುಗರಿಗೆ ಉಣಬಡಿಸಬೇಕು ಎಂಬುದಕ್ಕೊಂದು ಮಾದರಿ ಅದು. “ಬೃಹದಾರಣ್ಯಕ" ಅವರು ಪ್ರಾಣಿಗಳು ಮತ್ತು ಕಾಡಿನ ವಿಸ್ಮಯಗಳ ಬಗ್ಗೆ ಬರೆದಿರುವ 11 ಅಧ್ಯಾಯಗಳ ಪುಸ್ತಕ. ಸಸ್ಯಗಳ ಬಗ್ಗೆ "ಹಸುರು ಹೊನ್ನು” ಬರೆದಂತೆ ಪ್ರಾಣಿಗಳ…
ಲೇಖಕರು: Ashwin Rao K P
April 14, 2022
ಇತಿಹಾಸ ಅರಿಯದವನು ಇತಿಹಾಸವನ್ನು ಸೃಷ್ಟಿಸಲೂ ಸಾಧ್ಯವಿಲ್ಲ. ಹೊಸ ಇತಿಹಾಸವನ್ನು ಪುನರ್ ರಚಿಸಲೂ ಸಾಧ್ಯವಿಲ್ಲ. ಜೊತೆಗೆ ಇತಿಹಾಸವನ್ನು ಪುನರ್ ರಚಿಸಲೂ ಸಾಧ್ಯವಿಲ್ಲ ಎನ್ನುವ ಮಾತಿದೆ. ಹೊಸ ಪೀಳಿಗೆಯ ಓದುಗರ ನೆಚ್ಚಿನ ಬರಹಗಾರ ಪ್ರೊ.ಕೆ.ಎನ್. ಗಣೇಶಯ್ಯ ಇತಿಹಾಸದ ಬೆನ್ನು ಹತ್ತಿ ಅದರ ವಿಶಿಷ್ಟ ಹಾಗೂ ವಿಸ್ಮಯಕಾರಿ ಆಯಾಮಗಳನ್ನು ಪುನರ್ ಸೃಷ್ಟಿಸಲು ತೊಡಗಿದ ಲೇಖಕ. ಮೂಲತಃ ಕೋಲಾರ ಜಿಲ್ಲೆಯ ಕೋಟಗಾನ ಗ್ರಾಮದವರಾದ ಪ್ರೊ. ಕೆ.ಎನ್. ಗಣೇಶಯ್ಯ ವೃತ್ತಿಯಲ್ಲಿ ಕೃಷಿ ವಿಜ್ಞಾನಿ. ಸಾಹಿತ್ಯದಲ್ಲಿ ಅಪಾರ…
ಲೇಖಕರು: Ashwin Rao K P
April 12, 2022
ಖ್ಯಾತ ಚಿತ್ರ ನಿರ್ದೇಶಕ, ಅಂಕಣಕಾರ, ಕಥೆಗಾರ ನಾಗತಿಹಳ್ಳಿ ಚಂದ್ರಶೇಖರ ಇವರ ಲೇಖನಿಯಿಂದ ಮೂಡಿಬಂದ ಅದ್ಬುತ ಕಾದಂಬರಿ ‘ಚುಕ್ಕಿ ಚಂದ್ರಮರ ನಾಡಿನಲ್ಲಿ'. ಈ ಕಾದಂಬರಿಯ ಬಗ್ಗೆ ತಮ್ಮ ಅನಿಸಿಕೆಗಳನ್ನು ಬೆನ್ನುಡಿಯಲ್ಲಿ ವ್ಯಕ್ತ ಪಡಿಸಿದ್ದಾರೆ ಮತ್ತೊರ್ವ ಅಪರೂಪದ ಕಥೆಗಾರ ಜಯಂತ್ ಕಾಯ್ಕಿಣಿಯವರು. ಅವರು ಹೇಳುವಂತೆ “ಭಾಗ್ಯ, ಭಾಗೂ ಅಥವಾ ಭಾಗ್ಯಲಕ್ಷ್ಮಿ ಥೇಟು ನಿಮ್ಮ ಪಕ್ಕದ ಮನೆಯ ಹುಡುಗಿ. ಮಮತೆಗಾಗಿ ಮುದ್ದಿಗಾಗಿ ಮಿಡಿಯುವ ಚಡಪಡಿಸುವ ಜೀವಸೆಲೆಯ ಕಾರಂಜಿ. ಎಂಥ ಕಾರಂಜಿ-ಪುಟಿವ ನೆಲದಲ್ಲಿ ಹಸಿರು…
ಲೇಖಕರು: Ashwin Rao K P
April 08, 2022
ಹಿರಿಯ ರಾಜಕಾರಣಿ, ಮಾಜಿ ಸಚಿವರಾದ ಎಚ್ ವಿಶ್ವನಾಥ್ ಅವರ ಆತ್ಮಕಥನವೇ ‘ಹಳ್ಳಿ ಹಕ್ಕಿಯ ಹಾಡು' ಎಂಬ ಕೃತಿ. ವಿಶ್ವನಾಥ್ ಇವರು ಈ ಕೃತಿಯಲ್ಲಿ ತಮ್ಮ ಬಾಲ್ಯದ ದಿನಗಳಿಂದ ಹಿಡಿದು, ಕಲಿತ ಶಾಲೆ, ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಬಗೆ, ಸಚಿವರಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದ ರೀತಿ ಇತ್ಯಾದಿಗಳನ್ನು ಬಹಳ ಸೊಗಸಾಗಿ ವಿವರಿಸಿದ್ದಾರೆ. ಎಚ್ ವಿಶ್ವನಾಥ್ ಅವರು ಉತ್ತಮ ಬರಹಗಾರರೂ ಹೌದು. ಪುಸ್ತಕದ ಬೆನ್ನುಡಿಯಲ್ಲಿ ಅವರೇ ಬರೆದುಕೊಂಡಂತೆ “ಯಾವುದೇ ವ್ಯಕ್ತಿ ಶಾಸಕನಾಗಿ ಮಂತ್ರಿಯಾಗಿರುವ ಅವಧಿ ಪ್ರಚಂಡ…
ಲೇಖಕರು: addoor
April 07, 2022
ಜೂಲ್ಸ್ ವರ್ನ್ (1828 - 1905)  ಆಧುನಿಕ ವೈಜ್ನಾನಿಕ ಕತೆಗಳ ಜನಕ ಎಂದೇ ಪ್ರಸಿದ್ಧರು. ವಿಜ್ನಾನದ ಆಧಾರವಿರುವ ಕಾಲ್ಪನಿಕ ಘಟನೆಗಳನ್ನು ಪೋಣಿಸಿ, ಅದ್ಭುತರಮ್ಯವಾದ ಕಾದಂಬರಿಗಳನ್ನು ಬರೆದು ಹೆಸರು ಗಳಿಸಿದವರು. ಹಲವಾರು ವೈಜ್ನಾನಿಕ ಅನ್ವೇಷಣೆಗಳು ಬೆಳಕಿಗೆ ಬಂದ 19ನೇ ಶತಮಾನದಲ್ಲಿ ಅಂತಹ ಕತೆಗಳೂ ಕಾದಂಬರಿಗಳೂ ಜನಪ್ರಿಯವಾದದ್ದು ಅಚ್ಚರಿಯ ಸಂಗತಿಯೇನಲ್ಲ. ಒಂದು ನೂರು ವರುಷಗಳ ಮುಂಚೆಯೇ ಜೂಲ್ಸ್ ವರ್ನ್ ಫ್ಯಾಕ್ಸ್ ಯಂತ್ರ, ಜಲಾಂತರ್ಗಾಮಿ ಇತ್ಯಾದಿಗಳ ಬಗ್ಗೆ ಕಲ್ಪಿಸಿ ಬರೆದಿದ್ದರು.  ಇದು…