ಪುಸ್ತಕ ಪರಿಚಯ

ಲೇಖಕರು: addoor
March 10, 2022
ಇದು ಮೂಲಿಕಾ ಸಂರಕ್ಷಣೆ ಮತ್ತು ಪ್ರಾಥಮಿಕ ಆರೋಗ್ಯ ರಕ್ಷಣೆಯ ಕೈಪಿಡಿ. ೬೯ ಪಾರಂಪರಿಕ ವೈದ್ಯರು ಮತ್ತು ೩೭ ಆಯುರ್ವೇದ ತಜ್ನರ ಅನುಭವಗಳನ್ನು ಆಧರಿಸಿದ ಕೈಪಿಡಿ ಎಂಬುದೇ ಇದರ ವಿಶೇಷತೆ.. ಇದನ್ನು ರಚಿಸಿದ ಸಂಪಾದಕೀಯ ಮಂಡಳಿಯಲ್ಲಿ ಗಾ.ನಂ. ಶ್ರೀಕಂಠಯ್ಯ, ಐ.ಎ.ಎಸ್. ಮತ್ತು ೧೯ ಸದಸ್ಯರಿದ್ದರು. ಭಾರತೀಯ ಪರಂಪರೆಯಲ್ಲಿ ಆರೋಗ್ಯಪೂರ್ಣ ಜೀವನ ನಡೆಸಲು ಬೇಕಾದ ಪಾರಂಪರಿಕ ಆರೋಗ್ಯ ಪದ್ಧತಿಯೊಂದು ಜನರ ನಡುವೆ ಜೀವಂತವಾಗಿತ್ತು. ಸ್ಥಳೀಯವಾಗಿಯೇ ಬೆಳೆಯುತ್ತಿದ್ದ ಮರ, ಗಿಡ, ಬಳ್ಳಿ, ನಾರು, ಬೇರುಗಳನ್ನು…
March 09, 2022
ಮೊದಲೇ ಹೇಳಿಬಿಡುತ್ತೇನೆ. ನಾನು ಆಸ್ತಿಕ. ನಾನು ಬರೆಯ ಹೊರಟಿರುವುದು ಆಸ್ತಿಕರೊಬ್ಬರು ಬರೆದ ಕಾದಂಬರಿ ರೂಪದ ಜಿಜ್ಞಾಸೆಯ ಬಗ್ಗೆ. ಹಾಗಾಗಿ ಇದೆಲ್ಲ ಕಸ ಅನ್ನುವವರು ಮುಂದೆ ಓದುವುದು ಬೇಡ.   ತುಳುನಾಡಿನ ದೈವಾರಾಧನೆ ನಮಗೆ ನಂಬಿಕೆಯ ಪ್ರಶ್ನೆ. ಹೊರಗಿನವರಿಗೆ ಕೌತುಕ, ತಮಾಷೆಯ ವಸ್ತು. ಈ ಪುಸ್ತಕದ ಕತೆ ಸರಳ. ಕಂಪೆನಿಯೊಂದು ಸ್ವಾಧೀನಪಡಿಸಿಕೊಂಡ ಜಾಗದ ವಿರುದ್ಧ ಅವರಿಗೆ ಪರಿಹಾರ ಕೊಡಿಸಲು ಹೋರಾಟ ಮಾಡುವ ಹೋರಾಟಗಾರನೊಬ್ಬ ಅಪಘಾತಕ್ಕೀಡಾಗಿ ಸಾವಿಗೀಡಾಗುತ್ತಾನೆ. ಸಾವಿನ ರಾತ್ರಿಯವರೆಗೆ ಅವನ ಜೊತೆ…
ಲೇಖಕರು: Ashwin Rao K P
March 08, 2022
ಅಲ್ಲಮಪ್ರಭು ಪೀಠ, ಕಾಂತಾವರ ಇವರು ಪ್ರಕಾಶಿಸಿರುವ ಕರಣ ಕಾರಣ ಸರಣಿಯ ೯ನೇ ಪುಸ್ತಕ ಇದು. ಅನುಭವದ ನಡೆ- ಅನುಭಾವದ ನುಡಿ ಸರಣಿಯ ೨೦೨೦ರ ಉಪನ್ಯಾಸಗಳು. ಈ ಪುಸ್ತಕವನ್ನು ಉಪನ್ಯಾಸಕರಾದ ಡಾ. ರಾಜಶೇಖರ ಜಮದಂಡಿಯವರು ಸಂಪಾದಿಸಿದ್ದಾರೆ. ಮೌಲ್ಯಯುತವಾದ ೧೩ ಲೇಖನಗಳು ಈ ಪುಸ್ತಕದಲ್ಲಿವೆ. ಅವರ ಪ್ರಕಾರ ‘ಅಲ್ಲಮ ಪ್ರಭು ವಿಶ್ವದ ಶ್ರೇಷ್ಟ ದಾರ್ಶನಿಕ ಮಹಾಜ್ಞಾನಿ. ಮಾನವನಾದಿಯಾಗಿ ಸಕಲ ಜೀವಿಗಳ ಕುಲೋದ್ಧಾರದ ಮಹಾಚಿಂತಕ. ಭಾವುಕವಲ್ಲದ ವೈಚಾರಿಕ ದೃಷ್ಟಿಯಲ್ಲಿ ಆಧ್ಯಾತ್ಮಿಕ ಸಾಧನೆಯಿಂದ ಲೋಕವನ್ನೇ…
ಲೇಖಕರು: Ashwin Rao K P
March 05, 2022
‘ಕರಮಜೋವ್ ಸಹೋದರರು' ಎಂಬ ಪುಸ್ತಕ ರಚಿಸಿದ ಕೆ.ಶ್ರೀನಾಥ್ ಮತ್ತೆ ‘ಸತ್ಯಕ್ಕೊಂದು ಸಂತಾಪ' ಎಂಬ ಪುಸ್ತಕದೊಂದಿಗೆ ಮರಳಿ ಬಂದಿದ್ದಾರೆ. ಪುಸ್ತಕಕ್ಕೆ ಬೆನ್ನುಡಿ ಬರೆದಿದ್ದಾರೆ ಖ್ಯಾತ ಸಾಹಿತಿ ಜಯಂತ್ ಕಾಯ್ಕಿಣಿ. ಅವರು ತಮ್ಮ ನುಡಿಯಲ್ಲಿ “ ಹರಿವ ಹೊಳೆ, ಅಯಾಚಿತ ಹುಟ್ಟು, ಅಕಲ್ಪಿತ ಸಾವಿನ ನಡುವಿನ ನೋವು ನಲಿವು, ವಿಕಲ್ಪ, ದೈನ್ಯ, ಸ್ವಪ್ನ, ವಿಭಾವ ಅಭಾವಗಳ ವಿಲಕ್ಷಣ ಜೀವನ ಪ್ರವಾಹದ ಅಲೆಗಳ ಸಂಗ್ರಹದಂತಿರುವ ಈ ವಿಶಿಷ್ಟ ಕಾದಂಬರಿ ಕೇವಲ ೧೭೨ ಪುಟಗಳಲ್ಲಿ ನಾಲ್ಕು ತಲೆಮಾರಿನ ಕಥನವನ್ನು…
ಲೇಖಕರು: Ashwin Rao K P
March 04, 2022
‘ಶನಿ ಮಹಾತ್ಮೆ ಮತ್ತು ಬಜ್ಪೆ ಶನೈಶ್ಚರ ದೇವಸ್ಥಾನ' ಪುಸ್ತಕದ ಲೇಖಕರು ಡಿ.ಎಸ್.ಬೋಳೂರು ಇವರು. ತಮ್ಮ ಮಾತಿನಲ್ಲಿ ಇವರು ಹೀಗೆ ಬರೆಯುತ್ತಾರೆ “ಈ ಕೃತಿಯಲ್ಲಿ ಎರಡು ವಿಭಾಗಗಳಿವೆ. ಒಂದನೇ ಭಾಗದಲ್ಲಿ ಮೂರು ಅಧ್ಯಾಯಗಳನ್ನು ರಚಿಸಿದ್ದೇನೆ. ಒಂದನೇ ಅಧ್ಯಾಯವು ಜ್ಯೋತಿಷ್ಯದ ಸಂಕ್ಷಿಪ್ತ ವಿವರಣೆಗಳೊಂದಿಗೆ ನವಗ್ರಹಗಳ ಪರಿಚಯ, ಏಳುವರೆ ಶನಿ, ಅಷ್ಟಮ ಶನಿ, ಶನಿದೆಸೆ ಮತ್ತು ಇತರ ದೆಶೆಗಳು ಹಾಗೂ ಆ ದೆಶೆಗಳಲ್ಲಿ ಅಂತರ್ಗತವಾಗಿರುವ ಭುಕ್ತಿಗಳ ಕುರಿತಾಗಿ ಸಂಕ್ಷಿಪ್ತವಾಗಿ ನಿರೂಪಿಸಿರುತ್ತೇನೆ.  ಎರಡನೇ…
ಲೇಖಕರು: addoor
March 03, 2022
ಇದು 256 ಔಷಧೀಯ ಗಿಡಮೂಲಿಕೆಗಳ ಪರಿಚಯ ಹಾಗೂ ಉಪಯೋಗ ತಿಳಿಸುವ ಉಪಯುಕ್ತ ಪುಸ್ತಕ. ಪ್ರತಿಯೊಂದು ಔಷಧೀಯ ಸಸ್ಯದ ಸಸ್ಯಶಾಸ್ತ್ರೀಯ ಹೆಸರು ಹಾಗೂ ವರ್ಣ ಮತ್ತು ಕಪ್ಪುಬಿಳುಪು ಚಿತ್ರಗಳನ್ನು ಕೊಟ್ಟಿರುವುದರಿಂದ ಅವನ್ನು ಗುರುತಿಸಲು ಸಹಾಯ. ಜೊತೆಗೆ, ಸಸ್ಯದ ಕನ್ನಡ, ತೆಲುಗು, ತಮಿಳು, ಮಳೆಯಾಳ ಮತ್ತು ಸಂಸ್ಕೃತ ಹೆಸರುಗಳನ್ನೂ ಪ್ರಕಟಿಸಲಾಗಿದೆ. ಬಹುಪಾಲು ಸಸ್ಯಗಳ ಹಿಂದಿ ಹೆಸರುಗಳೂ ಇವೆ. ಅಕಾರಾದಿಯಾಗಿ ಔಷಧೀಯ ಸಸ್ಯಗಳ ಬಗ್ಗೆ ತಲಾ ಒಂದೊಂದು ಪುಟ ಮಾಹಿತಿ ನೀಡಲಾಗಿದೆ. ಆರಂಭದಲ್ಲಿ ಹೆಸರುಗಳ ಪಟ್ಟಿ,…