ಪುಸ್ತಕ ಪರಿಚಯ

ಲೇಖಕರು: Ashwin Rao K P
May 05, 2022
ಹಾಸ್ಯ ಬರಹಗಳು ಹಾಗೂ ನಗೆಹನಿಗಳ ರಚನೆಗೆ ಖ್ಯಾತಿ ಪಡೆದ ತೈರೊಳ್ಳಿ ಮಂಜುನಾಥ ಉಡುಪ ಇವರು ಅಗಲಿದ ತಮ್ಮ ಗೆಳತಿ ‘ಶೀಲಾ’ಳ ನೆನಪಿಗೆ ‘ಶೀಲಾಳ ಬೊಂಬಾಟ್ ಜೋಕ್ಸ್'ಗಳು ಪುಸ್ತಕವನ್ನು ಹೊರತಂದಿದ್ದಾರೆ. ಮಂಜುನಾಥ ಉಡುಪರು ತಮ್ಮ ‘ಮೊದಲ ಮಾತು' ಎಂಬ ಮುನ್ನುಡಿಯಲ್ಲಿ ಬರೆಯುವುದು ಹೀಗೆ “ನಮ್ಮ ಪ್ರಕಾಶನದ ಎಂಟನೆಯ ಕೃತಿ ತೀರಾ ಲೇಟಾಗಿ ಹೊರಬರುತ್ತಿದೆ. ಇತೀಚೆಗೆ ಈ ನನ್ನ ಸಾಹಿತ್ಯಮಿತ್ರರ ವಲಯದಲ್ಲಿ ಸ್ವಾರ್ಥಿಗಳೇ ಹೆಚ್ಚಾಗಿ ಕಾಣಸಿಗುತ್ತಿದ್ದಾರೆ. ಈ ಕೃತಿಯಲ್ಲಿ ತೀರಾ ಇತ್ತೀಚೆಗೆ ಪ್ರಕಟವಾದ ನನ್ನ ೫೨…
ಲೇಖಕರು: Ashwin Rao K P
May 03, 2022
‘ವಿಶ್ವವಾಣಿ' ಪತ್ರಿಕೆಯ ಪ್ರಾರಂಭದ ದಿನಗಳಿಂದ ‘ತಿಳಿರು ತೋರಣ' ಎಂಬ ವಿಶಿಷ್ಟ ಹೆಸರಿನ ಅಂಕಣ ಬರೆಯುತ್ತಿರುವವರು ಅಮೇರಿಕಾದಲ್ಲಿರುವ ಶ್ರೀವತ್ಸ ಜೋಶಿ. ಜೋಶಿಯವರು ಈ ಹಿಂದೆಯೇ ಒನ್ ಇಂಡಿಯಾ ಕನ್ನಡ ಡಾಟ್ ಕಾಮ್, ವಿಜಯ ಕರ್ನಾಟಕ ಪತ್ರಿಕೆಗಳಿಗೆಲ್ಲಾ ಅಂಕಣ ಬರೆದಿದ್ದಾರೆ. ಪ್ರತಿಯೊಂದು ಅಂಕಣದಲ್ಲೂ ಹೊಸ ವಿಚಾರಗಳನ್ನು ಅಥವಾ ಹಳೆಯ ವಿಚಾರಗಳನ್ನೇ ಹೊಸತನದಲ್ಲಿ ಮೂಡಿಸಿ ಜನವರಿ ೨೦೧೬ರಿಂದ ನಿರಂತರವಾಗಿ ವಿಶ್ವವಾಣಿಗೆ ಬರೆಯುತ್ತಿದ್ದಾರೆ. ಅವರ ಬರಹಗಳಿನ್ನೂ ತಾಜಾ ಆಗಿವೆ ಮತ್ತು ಬೋರ್ ಹೊಡೆಸಿಲ್ಲ…
ಲೇಖಕರು: Ashwin Rao K P
April 30, 2022
ಹತ್ತಾರು ಕಿರು ನಾಟಕಗಳನ್ನು ಬರೆದು ಖ್ಯಾತಿ ಪಡೆದ ಪ್ರೊ. ಆರ್. ಎನ್ ಕುಲಕರ್ಣಿ (ಆರ್ ಎನ್ ಕೆ) ಇವರ ಮತ್ತೊಂದು ನಾಟಕದ ಪುಸ್ತಕ ‘ಬೀಗರ ಬಡಾಯಿ'. ಇದೊಂದು ಹಾಸ್ಯಭರಿತ, ವರದಕ್ಷಿಣೆ ಸಮಸ್ಯೆಯ ಮೇಲೆ ಬೆಳಕು ಚೆಲ್ಲುವ ಸಮಸ್ಯಾ ಪ್ರಧಾನ ನಾಟಕ. ರಂಗಸ್ಥಳದಲ್ಲಿ ಸುಮಾರು ೨೦ ರಿಂದ ೩೦ ನಿಮಿಷಗಳಲ್ಲಿ ಮುಗಿದು ಹೋಗುವ ಈ ನಾಟಕವು ಸಮಾಜಕ್ಕೆ ಬಹಳ ಪ್ರಭಾವಶಾಲಿ ಸಂದೇಶವನ್ನು ಕೊಡುತ್ತದೆ.  ೭ ಮಂದಿ ಪಾತ್ರಧಾರಿಗಳಿರುವ ಈ ನಾಟಕದಲ್ಲಿ ಮದುಮಗ, ಮದುಮಗಳು, ವರನ ತಂದೆ-ತಾಯಿ, ವರ ಇಬ್ಬರು ಗೆಳೆಯರು ಮತ್ತು…
ಲೇಖಕರು: addoor
April 27, 2022
ಬೆಂಗಳೂರಿನಲ್ಲಿ ಆರ್ಕಿಟೆಕ್ಟ್ ಆಗಿರುವ ನಾಗರಾಜ ವಸ್ತಾರೆ ಅವರದು ಕಳೆದೆರಡು ದಶಕಗಳಲ್ಲಿ ಹೊಸಗನ್ನಡದ ಕತೆಗಾರರಲ್ಲಿ ಗಮನಾರ್ಹ ಹೆಸರು. ಕತೆ, ಕವನ ಮತ್ತು ಅಂಕಣ ಬರಹ ಅವರ ಆಸಕ್ತಿ. “ಹಳೆಮನೆ ಕತೆ", “ಬಯಲು ಆಲಯ” ಮತ್ತು “ಪಟ್ಟಣ ಪುರಾಣ” ಅವರ ಅಂಕಣ ಬರಹಗಳು. ನಗರ ಬದುಕಿನ ಒಳತೋಟಿಗಳು, ಸಂಕೀರ್ಣ ಸಂಬಂಧಗಳು ಹಾಗೂ ಮೇಲ್ನೋಟಕ್ಕೆ ಕಾಣಿಸದ ಸೂಕ್ಷ್ಮ ಸಂಗತಿಗಳನ್ನು ಕತೆಗಳನ್ನಾಗಿ ಹೆಣೆಯುವುದರಲ್ಲಿ ಅವರು ಸಿದ್ಧಹಸ್ತರು.   ಇಲ್ಲಿನ 18 ಕತೆಗಳ ಬಗ್ಗೆ ಮುನ್ನುಡಿಯಲ್ಲಿ ಕತೆಗಾರ ನಾಗರಾಜ ವಸ್ತಾರೆ…
ಲೇಖಕರು: Ashwin Rao K P
April 26, 2022
ಪೆನ್ ಗ್ವಿನ್ ಬುಕ್ಸ್ ಪ್ರಕಾಶನ ಸಂಸ್ಥೆಯವರು ಆಂಗ್ಲ ಭಾಷೆಯಲ್ಲಿ ಪ್ರಕಟಿಸಿದ ‘ಬ್ಲ್ಯಾಕ್ ಫ್ರೈಡೇ’ ಎಂಬ ನೈಜ ಘಟನಾಧಾರಿತ ಕಾದಂಬರಿಯನ್ನು ಕನ್ನಡಕ್ಕೆ ತಂದವರು ಖ್ಯಾತ ಪತ್ರಕರ್ತರಾದ ರವಿ ಬೆಳಗೆರೆ ಇವರು. ಈ ಪುಸ್ತಕದ ಮೂಲ ವಸ್ತು ಮುಂಬಯಿನಲ್ಲಿ ನಡೆದ ಸರಣಿ ಬಾಂಬ್ ಸ್ಪೋಟ ಮತ್ತು ಆ ನಂತರ ನಡೆದ ಘಟನಾವಳಿಗಳ ವಿವರಗಳು ಪತ್ತೇದಾರಿ ಕಾದಂಬರಿಯಂತೆ ಓದಿಸಿಕೊಂಡು ಹೋಗುತ್ತದೆ.  ಈ ಬಗ್ಗೆ ರವಿ ಬೆಳಗೆರೆಯವರು ತಮ್ಮ ಮಾತಿನಲ್ಲಿ ಹೇಳುವುದು ಹೀಗೆ “ಭಾರತವೆಂಬ ಮಹಾದೈತ್ಯ. ಸಾತ್ವಿಕ ಶಕ್ತಿಯ ಕರಡಿಗೆ…
ಲೇಖಕರು: Ashwin Rao K P
April 23, 2022
ಜ್ಞಾನಪೀಠ ಪ್ರಶಸ್ತಿ ಪಡೆದ ಐವರು (೧೯೯೧ರ ವರೆಗೆ) ಕನ್ನಡ ಸಾಹಿತಿಗಳ ಸಮಗ್ರ ಮಾಹಿತಿಯನ್ನು ನೀಡುವ ಪುಸ್ತಕವೇ ಎಸ್. ಮಹಾಬಲೇಶ್ವರ ಇವರು ಬರೆದ ‘ಕನ್ನಡದ ಭಾಗ್ಯಶಿಲ್ಪಿಗಳು'. ಜ್ಞಾನಪೀಠ ಪ್ರಶಸ್ತಿಯನ್ನು ಪಡೆದು ಕನ್ನಡದ ಹಿರಿಮೆಯನ್ನು ಹೆಚ್ಚಿಸಿದ ಕುವೆಂಪು, ದ ರಾ ಬೇಂದ್ರೆ, ಶಿವರಾಮ ಕಾರಂತ, ವಿನಾಯಕ ಕೃಷ್ಣ ಗೋಕಾಕ್, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಬದುಕು ಹಾಗೂ ಬರಹವನ್ನು ಜನಸಾಮಾನ್ಯರಿಗೂ ಅರ್ಥವಾಗುವಂತಹ ತಿಳಿಯಾದ ಕನ್ನಡದಲ್ಲಿ ಪರಿಚಯಿಸುವ ಪ್ರಾಮಾಣಿಕ ಪ್ರಯತ್ನ ಇಲ್ಲಿದೆ. ಈ ಐವರು…