ಪುಸ್ತಕ ಪರಿಚಯ

ಲೇಖಕರು: addoor
May 26, 2022
ದೇಶದ ಆರ್ಥಿಕತೆ, ಬಡತನ - ಶ್ರೀಮಂತಿಕೆ, ಜನಸಾಮಾನ್ಯರ ಬದುಕಿನ ಮೇಲೆ ಸರಕಾರದ ನೀತಿಗಳ ಪರಿಣಾಮಗಳು - ಇಂತಹ ವಿಷಯಗಳ ಬಗ್ಗೆ ಕನ್ನಡದಲ್ಲಿ ಪುಸ್ತಕಗಳು ವಿರಳ. ಅದರಲ್ಲೂ ಇಂತಹ ವಿಷಯಗಳ ಬಗ್ಗೆ ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ, ಪಾರಿಭಾಷಿಕ ಪದಗಳ ಉಸಿರುಗಟ್ಟಿಸುವ ಗೊಂದಲವಿಲ್ಲದ ಪುಸ್ತಕಗಳು ವಿರಳಾತಿ ವಿರಳ. ಆದ್ದರಿಂದಲೇ ಎಂ. ಎಸ್. ಶ್ರೀರಾಮರ “ಶನಿವಾರ ಸಂತೆ" ಪುಸ್ತಕ ಮುಖ್ಯವಾಗುತ್ತದೆ. ಅಂದ ಹಾಗೆ ಇದು ಅವರು “ಉದಯವಾಣಿ"ಯಲ್ಲಿ ಬರೆಯುತ್ತಿದ್ದ ಅಂಕಣ ಬರಹಗಳ ಸಂಕಲನ. “ಒಳಿತು, ಲಾಭ,…
ಲೇಖಕರು: Ashwin Rao K P
May 24, 2022
ಖ್ಯಾತ ಪತ್ರಕರ್ತ ವೈಯೆನ್ಕೆ ಅವರ ‘ವಂಡರ್ ಕಣ್ಣು' ಬಹಳ ಜನಪ್ರಿಯ ಅಂಕಣವಾಗಿತ್ತು. ‘ಕೊನೆ ಸಿಡಿ' ಯೊಂದಿಗೆ ಅದು ಕೊನೆಗೊಳ್ಳುತ್ತಿತ್ತು. ಬಹುತೇಕ ಓದುಗರು ‘ಕೊನೆ ಸಿಡಿ' ಯಿಂದಲೇ ಆ ಅಂಕಣವನ್ನು ಆರಂಭ ಮಾಡುತ್ತಿದ್ದರು. ಅದು ‘ಕೊನೆ ಸಿಡಿ' ಯ ಆಕರ್ಷಣೆ. ಪನ್, ಸಿದ್ಧ ಚಾಟೂಕ್ತಿ ಹಾಗೂ ಥಟ್ ಉತ್ತರಕ್ಕೆ ಸಿದ್ಧಹಸ್ತರಾಗಿದ್ದ ವೈಯೆನ್ಕೆ ಜತೆಯಲ್ಲಿ ಮಾತಾಡುತ್ತಿದ್ದರೆ ‘ಕೊನೆ ಸಿಡಿ'ಗಳು ಒಂದೇ ಸಮನೆ ಸಿಡಿಯುತ್ತಿದ್ದವು. ಹತ್ತಾರು ವರ್ಷ ಅವರು ಬರೆದ ‘ಕೊನೆ ಸಿಡಿ' ಗಳನ್ನು ಸಂಗ್ರಹಿಸಿ, ಆ ಪೈಕಿ…
ಲೇಖಕರು: Ashwin Rao K P
May 21, 2022
ಪತ್ರಕರ್ತ ಪದ್ಮರಾಜ ದಂಡಾವತಿ ಅವರು ಹೊಸದಾಗಿ ಪತ್ರಿಕೋದ್ಯಮಕ್ಕೆ ಬರುವವರಿಗೆ ಸಹಾಯವಾಗಲೆಂದು ತಮ್ಮ ಅನುಭವದ ಸಾರವನ್ನು ಪುಸ್ತಕದ ರೂಪದಲ್ಲಿ ಹೊರತಂದಿದ್ದಾರೆ. ಲೇಖಕ ಜೆಸುನಾ ಅವರು ಈ ಪುಸ್ತಕದ ಬೆನ್ನುಡಿಯಲ್ಲಿ “ಒಂದು ಕಾಲವಿತ್ತು. ಪತ್ರಿಕಾ ಕ್ಷೇತ್ರಕ್ಕೆ ಪ್ರವೇಶಿಸಿದವರಿಗೆ ಪೂರ್ವ ಸಿದ್ಧತೆಯೇನೂ ಇರುತ್ತಿರಲಿಲ್ಲ. ಅವರಿಗೆ ಇರುತ್ತಿದ್ದುದು ವ್ಯಾಪಕ ಓದಿನ ಹಿನ್ನಲೆ. ಈಗ ಹಾಗಿಲ್ಲ. ಗಿಣಿ ಪಾಠದ ಒಂದು ಪದವಿ ಇರುತ್ತದೆ. ಇದರಲ್ಲಿ ಬಹುತೇಕ ಮಂದಿಗೆ ಓದಿನ ಹಿನ್ನಲೆಯೇ ಇರುವುದಿಲ್ಲ. ಇಂಥವರು…
ಲೇಖಕರು: Ashwin Rao K P
May 19, 2022
‘ಬಣ್ಣದ ಕಾಲು' ಖ್ಯಾತ ಕತೆಗಾರ ಜಯಂತ ಕಾಯ್ಕಿಣಿ ಇವರ ಕಥಾ ಸಂಕಲನ. ‘ಅಪಾರ' ಅವರ ಮುಖಪುಟ ವಿನ್ಯಾಸ ಹಾಗೂ ರಾವ್ ಬೈಲ್ ಅವರ ಒಳ ಪುಟಗಳ ರೇಖಾಚಿತ್ರಗಳು ಗಮನ ಸೆಳೆಯುತ್ತವೆ. ಜಯಂತ ಇವರು ತಮ್ಮ ಕಥೆಗಳನ್ನು ಎರಡು ಭಾಗಗಳಲ್ಲಿ ವಿಂಗಡಿಸಿದ್ದಾರೆ. ಒಟ್ಟು ೧೩ ಸಣ್ಣ ಕಥೆಗಳನ್ನು ಹೊಂದಿರುವ ಪುಸ್ತಕದ ಎಲ್ಲಾ ಕಥೆಗಳು ಒಮ್ಮೆ ಓದಿದ ಬಳಿಕ ಇನ್ನೊಮ್ಮೆ ಓದುವಷ್ಟು ಸೊಗಸಾಗಿವೆ.  ಪುಸ್ತಕದ ತಮ್ಮ ಮಾತಾದ 'ಅರಿಕೆ' ಯಲ್ಲಿ ಜಯಂತ ಕಾಯ್ಕಿಣಿ ಅವರು ಹೀಗೆ ಬರೆದಿದ್ದಾರೆ “ಪಂಚತಂತ್ರದಲ್ಲಿ ಬರುವ ಮಾಂತ್ರಿಕನೊಬ್ಬ…
ಲೇಖಕರು: addoor
May 19, 2022
ನಿವೃತ್ತಿಯ ಅಂಚಿನಲ್ಲಿರುವವರಿಗೊಂದು ಉತ್ತಮ ಕೈಪಿಡಿ ಇದು. 1995ರಿಂದೀಚೆಗೆ ಬೆಂಗಳೂರಿನ ಬಿಇಎಲ್ ಕಾರ್ಖಾನೆಯಿಂದ ನಿವೃತ್ತರಾಗಲಿರುವ ಉದ್ಯೋಗಿಗಳಿಗೆ ನಿವೃತ್ತ ಜೀವನಕ್ಕಾಗಿ ತಯಾರಾಗುವುದು ಹೇಗೆ? ಎಂಬ ಬಗ್ಗೆ ಕನ್ನಡದಲ್ಲಿ ಉಪನ್ಯಾಸ ನೀಡಿದ ಆನಂದ ರಾಮರಾಯರು ಇದರ ಲೇಖಕರು. ಅನಂತರ, ತನ್ನ ಉಪನ್ಯಾಸಗಳನ್ನೇ ಲೇಖನವಾಗಿಸಿ ಪತ್ರಿಕೆಗಳಲ್ಲಿ ಪ್ರಕಟಿಸಿದರು. “ಉದಯವಾಣಿ”ಯ ಹಿರಿಯರ ಪುಟದಲ್ಲಿ, ಇದೇ ಶೀರ್ಷಿಕೆಯಲ್ಲಿ 52 ಕಂತುಗಳ ಅಂಕಣವನ್ನೂ ಬರೆದರು. ತದನಂತರ, ಅವನ್ನೇ ಪುಸ್ತಕವಾಗಿಸಿ…
ಲೇಖಕರು: Ashwin Rao K P
May 18, 2022
ಪತ್ತೇದಾರಿ ಸಾಹಿತ್ಯದಲ್ಲಿ ಖ್ಯಾತ ಹೆಸರು ಸರ್ ಆರ್ಥರ್ ಕನಾನ್ ಡಾಯ್ಲ್. ಇವರು ಮೂಲತಃ ಓರ್ವ ವೈದ್ಯ, ಆಂಗ್ಲ ಭಾಷೆಯಲ್ಲಿ ಇವರು ರಚಿಸಿದ ಪತ್ತೇದಾರಿ ಕಾದಂಬರಿಗಳ ಕಥಾ ನಾಯಕ ಶೆರ್ಲಾಕ್ ಹೋಮ್ಸ್. ಈ ಪಾತ್ರವು ಎಷ್ಟು ಖ್ಯಾತಿ ಪಡೆಯಿತೆಂದರೆ ಆ ಕಾಲ್ಪನಿಕ ಪಾತ್ರವನ್ನು ಎಲ್ಲರೂ ನಿಜವಾದ ವ್ಯಕ್ತಿ ಎಂದೇ ನಂಬಿದ್ದರು. ಈ ಬಗ್ಗೆ ಈ ಪುಸ್ತಕದ ಬೆನ್ನುಡಿಯಲ್ಲಿ ಹೀಗೆ ಬರೆದಿದ್ದಾರೆ “ ಆರ್ಥರ್ ಕಾನನ್ ಡಾಯ್ಲ್ ಸೃಷ್ಟಿಸಿದ ಪಾತ್ರ ‘ಶೆರ್ಲಾಕ್ ಹೋಮ್ಸ್' ಒಬ್ಬ ನಿಜವಾದ ವ್ಯಕ್ತಿ ಎಂದೇ ನಂಬಿದ ಓದುಗರಿದ್ದರು…