ಪುಸ್ತಕ ಪರಿಚಯ

ಲೇಖಕರು: Ashwin Rao K P
May 08, 2021
ನಾಗರಾಜ ವಸ್ತಾರೆ ಇವರು ಬರೆದ ವಿಭಿನ್ನ ಶೈಲಿಯ ಸಣ್ಣ ಕಥೆಗಳ, ಕವನಗಳ ಸಂಗ್ರಹವೇ ‘ಹಕೂನ ಮಟಾಟ' ಬೆಂಗಳೂರಿನಲ್ಲಿ ಆರ್ಕಿಟೆಕ್ಟ್ ಆಗಿರುವ ಇವರನ್ನು ೨೦೦೨ರಲ್ಲಿ ದೇಶದ ಪ್ರತಿಭಾನ್ವಿತ ಹತ್ತು ಯುವ ವಿನ್ಯಾಸಕಾರರಲ್ಲಿ ಒಬ್ಬರು ಎಂದು ಗುರುತಿಸಿದ್ದರು. ಇವರು ಉತ್ತಮ ಕಥೆಗಾರರು. ಇವರ ಹಲವಾರು ಕಥೆ, ಕವನ ಹಾಗೂ ಬರಹಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಬೆಳಕು ಕಂಡಿದೆ.  ನಾಗರಾಜ ವಸ್ತಾರೆ ತಮ್ಮ ಮುನ್ನುಡಿಯಾದ ‘ನಮಸ್ಕಾರ' ಇಲ್ಲಿ ಬರೆದಂತೆ “ನಾನು ಬರಹದಲ್ಲಿ ತೊಡಗಿದ್ದು ಈ ಉದ್ಧಾಮ ಊರಿನಲ್ಲೊಂದು…
ಲೇಖಕರು: Ashwin Rao K P
May 06, 2021
ಮಲೆನಾಡಿನ ರೋಚಕ ಕತೆಗಳು ಸರಣಿಯ ೭ನೇ ಭಾಗವೇ ‘ಮುಂಗಾರಿನ ಕರೆ'. ಮಲೆನಾಡಿನ ಗುಡ್ಡ ಬೆಟ್ಟಗಳಲ್ಲೇ ತಮ್ಮ ಜೀವನವನ್ನು ಸಾಗಿಸುತ್ತಿರುವ ಗಿರಿಮನೆ ಶ್ಯಾಮರಾವ್ ಅವರು ಬರೆಯುವ ಪ್ರತೀ ಕಾದಂಬರಿಯನ್ನು ಅನುಭವಿಸಿಯೇ ಬರೆದಿದ್ದಾರೆ ಅನಿಸುತ್ತೆ. ಪುಸ್ತಕದ ಪ್ರತೀ ಪುಟದಲ್ಲಿ ಪರಿಸರವಿದೆ, ಕಾಡು ಇದೆ, ಗುಡ್ಡ ಬೆಟ್ಟಗಳಿವೆ, ಆನೆ, ಜಿಂಕೆ, ನರಿ, ಕಾಡು ಕೋಣ, ದನ ಮುಂತಾದ ಪ್ರಾಣಿಗಳಿವೆ. ಏಲಕ್ಕಿ, ಕಾಫಿಯ ಘಮವಿದೆ, ಹರಿಯುವ ತೊರೆ, ನದಿಗಳಿವೆ, ಪುರಾತನ ಬಂಗಲೆಯಿದೆ, ರಕ್ತ ಹೀರುವ ಜಿಗಣೆಗಳಿವೆ, ಕಾಡುವ…
ಲೇಖಕರು: Ashwin Rao K P
May 04, 2021
ಅಯೋಧ್ಯೆ -ವಿನಾಶಕಾರಿ ವೋಟ್ ಬ್ಯಾಂಕ್ ರಾಜಕೀಯ ಎಂಬ ಪುಸ್ತಕದ ಮೂಲ ಲೇಖಕರು ಮಧು ಲಿಮಯೆ. ಭಾರತದ ಹಿರಿಯ ಸಮಾಜವಾದಿ ಚಿಂತಕ ಮಧು ಲಿಮಯೆ ವಿದ್ಯಾರ್ಥಿ ದೆಸೆಯಲ್ಲೇ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದವರು. ತಮ್ಮ ೧೮ನೆಯ ಪ್ರಾಯದಲ್ಲಿ ಜೈಲಿನ ರುಚಿ ಕಂಡವರು. ಮುಂದೆ ಜೈಲಿಗೆ ಹೋಗುವುದು ಮಾಮೂಲಾಗಿ ಬಿಟ್ಟಿತು. ‘ಭಾರತದಿಂದ ತೊಲಗಿ' ಆಂದೋಲನದ ಕಾಲದಲ್ಲಿ ಭೂಗತರಾದರು. ತುರ್ತು ಪರಿಸ್ಥಿತಿಯ ಸಮಯದಲ್ಲಿ ೧೮ ತಿಂಗಳ ಕಾಲ ಜೈಲಿನಲ್ಲಿ ಬಂದಿಯಾಗಿದ್ದರು.  ಲೋಕಸಭೆಗೆ ನಾಲ್ಕು ಸಲ ಆಯ್ಕೆಯಾಗಿ ಅಪ್ರತಿಮ…
ಲೇಖಕರು: addoor
May 02, 2021
ಆಧುನಿಕ ಜೀವನ ಹಲವು ಸವಾಲುಗಳನ್ನೂ ಬಿಕ್ಕಟ್ಟುಗಳನ್ನೂ ನಮಗೆ ಎದುರಾಗಿಸುತ್ತದೆ. ಇಂತಹ ನಿರಂತರ ಬದಲಾವಣೆಯ ಪ್ರವಾಹದಲ್ಲಿ ಇವುಗಳ ಸೂಕ್ಷ್ಮತೆಗಳನ್ನು ತಮ್ಮ ಬದುಕಿನ ಅನುಭವಗಳ ಬಲದಿಂದ ನಮ್ಮೆದುರು ತೆರೆದಿಡುತ್ತ ನಮ್ಮ “ಅಂತರಂಗದ ಮೃದಂಗ”ವನ್ನು ಮೀಟಿ, ಚಿಂತನೆಗೆ ತೊಡಗಿಸುವುದರಲ್ಲಿ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ಹತ್ತು ಪ್ರಬಂಧಗಳು ಯಶಸ್ವಿಯಾಗುತ್ತವೆ. “ನರಹಳ್ಳಿಯವರ ಹರಟೆಗಳಲ್ಲಿ ಅವರ ಇಡೀ ಆಪ್ತ ವಲಯವೇ ಮೂಡಿ ಬಂದಿದೆ ಎಂದರೆ ಅದು ಅತಿಶಯೋಕ್ತಿಯಲ್ಲ. … ಅವರೆಲ್ಲರೂ ಈ ಬರಹಗಳಿಂದಾಗಿ ನಮ್ಮ…
ಲೇಖಕರು: Ashwin Rao K P
May 01, 2021
‘ರೇಷ್ಮೆ ರುಮಾಲು’ ಎಂಬ ಕಾದಂಬರಿಯನ್ನು ಒಮ್ಮೆ ನೀವು ಓದಲೆಂದು ಕೈಗೆತ್ತಿಕೊಂಡರೆ, ಮುಗಿಯುವ ತನಕ ಕೆಳಗಿಡಲಾರಿರಿ, ಅಂತಹ ಕಥಾ ವಸ್ತುವನ್ನು ಹೊಂದಿದ ರೋಚಕ ಕಾದಂಬರಿ ಇದು. “ಬ್ರಿಟೀಷ್ ಅಧಿಕಾರಿ ಫಿಲಿಪ್ ಮೆಡೋಸ್ ಟೇಲರ್ ಹೀಗೊಂದು ಪುಸ್ತಕ ಬರೆಯುವ ತನಕ ಭಾರತ ದೇಶದಲ್ಲಿ ಥಗ್ ಸಂಪ್ರದಾಯ ಅಂತ ಒಂದಿದೆ ಎಂಬುವುದು ಹೊರ ಜಗತ್ತಿಗೆ ಗೊತ್ತೇ ಇರಲಿಲ್ಲ. ಅತ್ಯಂತ ಸಂಭಾವಿತ ಜೀವನ ಸಾಗಿಸುತ್ತಲೇ ವರ್ಷಕ್ಕೊಂದು ಬಾರಿ ತಂಡ ಕಟ್ಟಿಕೊಂಡು ಯಾತ್ರೆ ಹೊರಡುತ್ತಿದ್ದ ಥಗ್ಗರು ದಾರಿಯುದ್ದಕ್ಕೂ ನೂರಾರು…
ಲೇಖಕರು: Ashwin Rao K P
April 29, 2021
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಗತ್ ಸಿಂಗ್ ಹೆಸರು ಸದಾಕಾಲ ಮುಂಚೂಣಿಯಲ್ಲಿ ಇದ್ದೇ ಇರುತ್ತದೆ. ೨೦೦೭ರಲ್ಲಿ ಭಗತ್ ಸಿಂಗ್ ಜನ್ಮಶತಮಾನೋತ್ಸವವನ್ನು ಆಚರಿಸಲಾಗಿತ್ತು. ಈ ಸಮಯದಲ್ಲಿ ಹೊರ ತಂದ ಪುಸ್ತಕವೇ ‘ಧೀರ ಹುತಾತ್ಮ ಭಗತ್ ಸಿಂಗ್'. ಭಗತ್ ಸಿಂಗ್ ಬಗ್ಗೆ ಅಧಿಕ ಮಾಹಿತಿ ಬೇಕಾದವರು ಈ ಪುಸ್ತಕವನ್ನು ಓದಬಹುದು. ಪುಸ್ತಕದ ಲೇಖಕರಾದ ಡಾ॥ ಬಿ. ಆರ್. ಮಂಜುನಾಥ್ ಅವರು ತಮ್ಮ ಮುನ್ನುಡಿ ‘ಅರಿಕೆ'ಯಲ್ಲಿ ಬರೆಯುತ್ತಾರೆ “ ಮಹಾನ್ ಹುತಾತ್ಮ ಭಗತ್ ಸಿಂಗ್ ಜನ್ಮ ತಳೆದು ೨೦೦೭ರ ಸೆಪ್ಟೆಂಬರ್ ೨೮ಕ್ಕೆ…