ಪುಸ್ತಕ ಪರಿಚಯ
ಲೇಖಕರು: Ashwin Rao K P
May 20, 2021

ಪತ್ರಕರ್ತ, ಬರಹಗಾರ, ಕವಿ, ವಿಮರ್ಶಕ ಎಂ.ನಾ.ಚಂಬಲ್ತಿಮಾರ್ ಇವರದ್ದು ಬಹುಮುಖ ಪ್ರತಿಭೆ. ಪ್ರಸ್ತುತ ‘ಕಣಿಪುರ' ಎಂಬ ಯಕ್ಷಗಾನ ಕಲೆಗೆ ಸಂಬಂಧಿಸಿದ ಪತ್ರಿಕೆಯ ಸಂಪಾದಕರಾಗಿರುವ ಇವರು ಈ ಹಿಂದೆ ಕನ್ನಡದ ವಿವಿಧ ಪತ್ರಿಕೆಗಳಲ್ಲಿ ಬರೆದ ಲೇಖನ ಹಾಗೂ ಅಂಕಣ ಬರಹಗಳ ಸಂಗ್ರಹವೇ ‘ಗಡಿನಾಡ ದಡದಿಂದ...' ಎಂಬ ಪುಸ್ತಕ.
‘ಕನ್ನಡ ಕೈರಳಿ’ ಎಂಬ ಪತ್ರಿಕೆಯ ಪ್ರಕಾಶಕರೂ ಹಾಗೂ ಸಂಪಾದಕರೂ ಆಗಿರುವ ಅಬ್ದುಲ್ ರಹಿಮಾನ್ ಸುಬ್ಬಯ್ಯಕಟ್ಟೆ ಇವರು ತಮ್ಮ ಕೈರಳಿ ಪ್ರಕಾಶನದ ಮೂಲಕ ಈ ಪುಸ್ತಕವನ್ನು ಹೊರತಂದಿದ್ದಾರೆ. ಅವರು…
ಲೇಖಕರು: ಬರಹಗಾರರ ಬಳಗ
May 19, 2021

ಯಕ್ಷಗಾನದ ಆವರಣದಲ್ಲಿ ಸಿದ್ದಗೊಂಡ ಬೆರಳೆಣಿಕೆಯ ಕಾದಂಬರಿಗಳಲ್ಲಿ ಸಾಗರದ ಜಿ.ಎಸ್ ಭಟ್ಟರು ರಚಿಸಿರುವ ಮಂಜೀ ಮಹದೇವನ ಗಂಜೀ ಪುರಾಣ ಕಾದಂಬರಿಯೂ ಒಂದು. ಈ ಕಾದಂಬರಿಯ ಹೆಸರನ್ನು ಕೇಳುವಾಗಲೇ, ನಮಗೆ ಯಾವುದೋ ಒಂದು ಅವ್ಯಕ್ತ ಭಾವ ಒಡಮೂಡಿ, ಕುತೂಹಲವನ್ನು ಹೆಚ್ಚಿಸುತ್ತದೆ. ಇಲ್ಲಿ ಗಂಜೀ ಎನ್ನುವಾಗ ಮಹದೇವ ಎಂಬ ಯಕ್ಷಗಾನ ರಂಗಕರ್ಮಿಯ ಬದುಕಿಗಾಗಿ ನಡೆಸುವ ಹೋರಾಟವನ್ನು ತೆರೆದಿಟ್ಟು, ಅವನ ಜೀವನದ ಅನಿವಾರ್ಯತೆ ಮತ್ತು ತೀರ್ವತೆಯನ್ನು ಸಾದರಪಡಿಸುತ್ತದೆ. ತನ್ನ ಜನ್ಮಕ್ಕೆ ಕಾರಣನಾದ ಜಮೀನುದ್ದಾರ ಹಾಗೂ…
ಲೇಖಕರು: Ashwin Rao K P
May 18, 2021

ಬದುಕಿದ್ದ ಸಮಯದಲ್ಲೇ ದಂತಕತೆಯಾಗಿದ್ದ ಸರ್ ಎಂ.ವಿಶ್ವೇಶ್ವರಯ್ಯನವರ ಆತ್ಮಕಥೆ ‘Memoirs of my working life’ ಅನ್ನು ಡಾ. ಗಜಾನನ ಶರ್ಮ ಅವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಸರ್ ಎಂವಿ ಅವರ ದೂರದೃಷ್ಟಿತ್ವದ ವ್ಯಕ್ತಿತ್ವ ಮತ್ತು ಸೃಜನಶೀಲತೆಯ ಪರಿಚಯ ಎಲ್ಲರಿಗೂ ಇದೆ. ಅವರ ಜೀವನದ ಬಗ್ಗೆ ಅವರದ್ದೇ ಮಾತುಗಳಲ್ಲಿ ಓದುವ ಬಯಕೆ ಇದ್ದರೆ ಈ ಪುಸ್ತಕವನ್ನು ಓದಬಹುದಾಗಿದೆ.
ಸರ್ ಎಂವಿ ಅವರು ಈ ಪುಸ್ತಕವನ್ನು ಬರೆದದ್ದು ೧೯೫೧ರಲ್ಲಿ. ಅವರು ಆ ಸಮಯದಲ್ಲಿ ಪುಸ್ತಕ ಪ್ರಕಟಣೆಯ ಮೊದಲ ಮುದ್ರಣದ…
ಲೇಖಕರು: Ashwin Rao K P
May 15, 2021

ಪುರಾತನ ಕಾಲದಿಂದ ಚಾಲ್ತಿಯಲ್ಲಿರುವ ವೈದ್ಯಕೀಯ ಪದ್ಧತಿಯೆಂದರೆ ಆಯುರ್ವೇದ ವೈದ್ಯ ಪದ್ಧತಿ. ಋಷಿ ಮುನಿಗಳ ಕಾಲದಿಂದಲೂ ಆಯುರ್ವೇದ ನಮ್ಮ ಪರಂಪರೆಯ ಅಂಗವಾಗಿದೆ. ಡಾ. ರಾಜೀವ್ ಶರ್ಮ ಇವರು ಬರೆದ ಆಂಗ್ಲ ಭಾಷೆಯ ಪುಸ್ತಕವನ್ನು ಬಿ.ಕೆ.ಎಸ್. ಮೂರ್ತಿಯವರು ಕನ್ನಡಕ್ಕೆ ತಂದಿದ್ದಾರೆ. ಈ ಪುಸ್ತಕದ ಬೆನ್ನುಡಿಯಲ್ಲಿ ಬರೆದಂತೆ “ಪ್ರಕೃತಿ ತತ್ವದಲ್ಲಿನ ಪಂಚಭೂತಗಳ ಪ್ರಕ್ರಿಯೆಯಿಂದ ತ್ರಿದೋಷಗಳು ಉಂಟಾಗುತ್ತವೆ. ತ್ರಿದೋಷಗಳೆಂದರೆ ವಾತ, ಪಿತ್ತ, ಶ್ಲೇಷ ದೋಷವೆಂದರೆ ಇವುಗಳಲ್ಲಾಗುವ ಬದಲಾವಣೆ. ಈ ಮೂರು ದೋಷಗಳ…
ಲೇಖಕರು: Ashwin Rao K P
May 13, 2021

‘ಆಜಾದಿ' ಸ್ವದೇಶ ಚಳುವಳಿಯ ವಿಚಾರ ಧಾರೆ ಎಂಬ ಪುಸ್ತಕವು 'ಆಜಾದಿ ಬಚಾವೋ’ ಆಂದೋಲನದ ನೇತಾರ ರಾಜೀವ್ ದೀಕ್ಷಿತ್ ಅವರ ಬರಹಗಳ ಸಂಗ್ರಹ. ಇವರ ವಿಚಾರಧಾರೆಯನ್ನು ರಾಘವೇಂದ್ರ ಜೋಷಿಯವರು ಕನ್ನಡಕ್ಕೆ ಅನುವಾದ ಮಾಡಿ ‘ಹಾಯ್ ಬೆಂಗಳೂರು' ವಾರ ಪತ್ರಿಕೆಯಲ್ಲಿ ಪ್ರತೀ ವಾರ ಪ್ರಕಟ ಮಾಡುತ್ತಿದ್ದರು. ಹಾಯ್ ಬೆಂಗಳೂರು ಸಂಪಾದಕರಾದ ರವಿ ಬೆಳಗೆರೆಯವರು ತಮ್ಮ ಬೆನ್ನುಡಿಯಲ್ಲಿ ಪುಸ್ತಕದ ಬಗ್ಗೆ ಬರೆದದ್ದು ಹೀಗೆ..."ಈ ದೇಶದ ರೈತ ಬೆಳೆದ ಎಳನೀರು- ಅವನ ಶೃದ್ಧೆ, ಶ್ರಮ, ಬೆವರು, ರಕ್ತ, ಕನಸು, ಆಸೆಗಳ…
ಲೇಖಕರು: Ashwin Rao K P
May 11, 2021

ಪತ್ರಕರ್ತರಾದ ವಿಶ್ವೇಶ್ವರ ಭಟ್ ಇವರು ಬರೆದ ಬಿಡಿ ಬರಹಗಳ ಸಂಗ್ರಹವೇ ‘ಅಕ್ಷರಗಳೊಂದಿಗೆ ಅಕ್ಕರೆಯ ಯಾನ'. ಈ ಪುಸ್ತಕದಲ್ಲಿ ವಿಶ್ವೇಶ್ವರ ಭಟ್ ಅವರ ವಿವಿಧ ಪತ್ರಿಕೆಯಲ್ಲಿ ಪ್ರಕಟವಾದ ಲೇಖನಗಳು ಇವೆ. ಕೆಲವೊಂದು ಲೇಖನಗಳು ಈಗಲೂ ಪ್ರಸ್ತುತವೆನಿಸುತ್ತವೆ. ಸಾಹಿತಿ ಮನು ಬಳಿಗಾರ್ ಅವರು ತಮ್ಮ ಮುನ್ನುಡಿಯಾದ ‘ಎದೆಯಾಳದ ಎರಡು ಮಾತು' ಇದರಲ್ಲಿ ವಿಶ್ವೇಶ್ವರ ಭಟ್ ಹಾಗೂ ಅವರ ಬರಹಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದ್ದಾರೆ.
ಅವರು ಒಂದೆಡೆ ಬರೆಯುತ್ತಾರೆ “ಹಲವಾರು ರಾಷ್ಟ್ರಗಳನ್ನು ಸುತ್ತಾಡಿ…