ಪುಸ್ತಕ ಪರಿಚಯ

ಲೇಖಕರು: Ashwin Rao K P
June 25, 2021
ಆಸ್ತ್ಮಾ ಅಥವಾ ಅಸ್ತಮಾ ಒಂದು ಭೀಕರ ತೊಂದರೆ. ಈ ಸಮಸ್ಯೆಯಿಂದ ನಮಗೆ ಸರಾಗವಾಗಿ ಉಸಿರಾಡಲು ಬಹಳ ಸಮಸ್ಯೆಯಾಗುತ್ತದೆ. ಆಸ್ತ್ಮಾ ನಿವಾರಣೆಗೆ ಸರಳ ಯೋಗ ಚಿಕಿತ್ಸಾ ಮಾರ್ಗದರ್ಶಿಯೇ-ಗುಡ್ ಬೈ ಆಸ್ತ್ಮಾ. “ ಸ್ವಚ್ಚಂದವಾಗಿ, ನಿರಾತಂಕವಾಗಿ ಉಸಿರಾಡುವುದೊಂದು ಆಹ್ಲಾದಕರ ಪ್ರಕ್ರಿಯೆ. ಆದರೆ ಸರ್ವರೂ ಸರ್ವಕಾಲದಲ್ಲೂ ಅದೃಷ್ಟವಂತರಾಗಿರದೇ, ಕೆಲವರು ಆಸ್ತ್ಮಾದಂತಹ ಉಸಿರುಗಟ್ಟಿಸುವ ಜಟಿಲವಾದ ಕಾಯಿಲೆಯಿಂದ ಬಳಲುತ್ತಾರೆ. ಈ ಕ್ಲಿಷ್ಟಕರವಾದ ಕಾಯಿಲೆ ಬಗ್ಗೆ ಕಾಕುಂಜೆ ಕೇಶವ ಭಟ್ಟರು ಈ ಹೊತ್ತಿಗೆಯಲ್ಲಿ…
ಲೇಖಕರು: Ashwin Rao K P
June 23, 2021
ಕೆ.ಕೆ.ಮಹಮ್ಮದ್ ಭಾರತದ ಒಬ್ಬ ಹೆಸರಾಂತ ಪ್ರಾಕ್ತನ ಶಾಸ್ತ್ರಜ್ಞ. ಇವರು ಮಲಯಾಳಂ ಭಾಷೆಯಲ್ಲಿ ಬರೆದ ಈ ಪುಸ್ತಕವನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಬಿ.ನರಸಿಂಗ ರಾವ್ ಇವರು. ಇದು ಕೆ.ಕೆ.ಮಹಮ್ಮದ್ ಅವರ ಆತ್ಮಕಥೆ. ಇವರು ತಮ್ಮ ಆರ್ಕಿಯಾಲಜಿ ಬಗೆಗಿನ ಕೆಲಸದ ಬಗ್ಗೆ ತುಂಬಾ ವಿಷಯಗಳನ್ನು ಬರೆದಿದ್ದಾರೆ. ಪುಸ್ತಕಕ್ಕೆ ಹೆಸರಾಂತ ಲೇಖಕ ರೋಹಿತ್ ಚಕ್ರತೀರ್ಥ ಇವರು ಬೆನ್ನುಡಿ ಬರೆದಿದ್ದಾರೆ. ಇವರು ಬರೆದಂತೆ “ಕೆ.ಕೆ.ಮಹಮ್ಮದ್ ಅವರ ಜೀವನ ಚರಿತ್ರೆಯನ್ನು ಓದುವಾಗ ರೋಮಾಂಚನವಾಗುವ ಜೊತೆ ಜೊತೆಗೇ…
ಲೇಖಕರು: Ashwin Rao K P
June 21, 2021
ನೋಬೆಲ್ ಪುರಸ್ಕಾರ ದೊರೆತ ಮೊದಲ ಭಾರತೀಯ ಎಂಬ ಖ್ಯಾತಿಗೆ ಪಾತ್ರರಾದವರು ಖ್ಯಾತ ಕವಿ ರವೀಂದ್ರನಾಥ ಠಾಕೂರ್ ಅಥವಾ ಠಾಗೋರ್ ಇವರು. ಇವರ ‘ಗೀತಾಂಜಲಿ' ಕವನ ಸಂಕಲನಕ್ಕೆ ಈ ಪುರಸ್ಕಾರ ದೊರೆಯಿತು ಎಂಬುವುದು ಎಲ್ಲರಿಗೂ ತಿಳಿದ ವಿಷಯ. ಠಾಗೋರರು ಸುಮಾರು ಮೂರು ಸಾವಿರ ಕವನಗಳನ್ನು ಬರೆದಿದ್ದಾರೆ. ಇದರ ಜೊತೆಗೆ ೯೪ ಕಥೆಗಳನ್ನೂ ಬರೆದಿದ್ದಾರೆ. ಠಾಗೋರರು ನಾಟಕಗಳನ್ನೂ, ಕಾದಂಬರಿಗಳನ್ನೂ, ಸಣ್ಣ ಕಥೆಗಳನ್ನೂ ಬರೆಯುತ್ತಿದ್ದುದು ಬಹುತೇಕರಿಗೆ ತಿಳಿದಿಲ್ಲ. ಅವರ ೧೨ ಕಥೆಗಳು ಕನ್ನಡಕ್ಕೆ ಅನುವಾದಗೊಂಡು ‘ಹಸಿದ…
ಲೇಖಕರು: Ashwin Rao K P
June 17, 2021
“ಅಚ್ಚ ಕನ್ನಡ ಪ್ರದೇಶವಾದ ಕಾಸರಗೋಡಿನ ಚಿನ್ನಾ... ಎಲ್ಲರಿಗೂ ಚಿನ್ನದ ಮನಸ್ಸಿನ ವ್ಯಕ್ತಿಯಾಗಿ ಬೆಳೆದವರು. ವೃತ್ತಿಯಲ್ಲಿ ವ್ಯಾಪಾರಿಯಾಗಿದ್ದರೂ, ಪ್ರವೃತ್ತಿಯಲ್ಲಿ ನಟನಾಗಿ, ನಿರ್ದೇಶಕನಾಗಿ, ಬೆಳಕು ವಿನ್ಯಾಸ, ರಂಗವಿನ್ಯಾಸ, ವಸ್ತ್ರ ವಿನ್ಯಾಸಗಳಲ್ಲಿ ಪಳಗಿದವರು. ಪ್ರಗತಿಶೀಲ ರಂಗಭೂಮಿಯ ಕೃಷಿಕನಾಗಿ, ಸಂಗೀತದ ಒಳಮಜಲುಗಳನ್ನು ಅರಿತವರಾಗಿ, ಒಳ್ಳೆಯ ಸಂಘಟಕರಾಗಿ ಸಾಧನೆಗೈದವರು. ಲಾರಿ ನಾಟಕ, ಸಂಗೀತ ರಥ, ಯಕ್ಷತೇರು... ಹೀಗೆ ಸಾಗುತ್ತದೆ ಆವರ ಅಭಿಯಾನಗಳ ಸರಮಾಲೆಗಳು. ಚಲನಚಿತ್ರ, ಧಾರವಾಹಿ,…
ಲೇಖಕರು: Ashwin Rao K P
June 15, 2021
ಈ ಹೊತ್ತಗೆಯು ಕೇರಳದ ಸುಪ್ರಸಿದ್ಧ ವಿಷವೈದ್ಯರಾದ ರಾಜಾ ಕೇರಳವರ್ಮರು ರಚಿಸಿರುವ ‘ವಿಷಚಿಕಿತ್ಸೆ' ಗ್ರಂಥದ ಕನ್ನಡದ ಭಾಷಾಂತರವಾಗಿದೆ. ಇದನ್ನು ಕನ್ನಡಕ್ಕೆ ಅನುವಾದಿಸಿರುವವರು ‘ಆಯುರ್ವೇದ ವಿಶಾರದ' ‘ಬಿಷಕ್' ಎಂದು ಬಿರುದಾಂಕಿತರಾದ ಡಾ॥ ವಿಶ್ವನಾಥರಾವ್ ಅವರು. ಈ ವಿಭಾಗದಲ್ಲಿ ಮಾನವನ ಆರೋಗ್ಯಕ್ಕೆ ಹಾಗೂ ಒಮ್ಮೊಮ್ಮೆ ಪ್ರಾಣಕ್ಕೂ ಅಪಾಯವನ್ನೊಡ್ಡುವ ಅನೇಕ ವಿಷವಿರುವ ಪ್ರಾಣಿಗಳು, ಸಸ್ಯಗಳು ಹಾಗೂ ಖನಿಜಗಳ ವಿಚಾರವಾಗಿ ಸವಿಸ್ತಾರವಾದ ವರ್ಣನೆ ಮಾತ್ರವಲ್ಲದೆ, ಆಯಾ ವಿಷಗಳು ಉತ್ಪತ್ತಿ ಮಾಡುವ…
June 14, 2021
ನಿನ್ನೆಯ ಬೆನ್ನಿಗೆ ಇಂದು ಬಂದು ಅದು ನಾಳೆಗಳಾದಾಗ ಅಲ್ಲಿ ಕೆಲವೊಂದು ಇತಿಹಾಸಗಳು ಸೃಷ್ಟಿಯಾಗುತ್ತವೆ. ಆ ಇತಿಹಾಸ ನಂಬಲಾರ್ಹ ಎನ್ನಬೇಕಾದರೆ ಅದಕ್ಕೆ ಬಲವಾದ ಸಾಕ್ಷಿಗಳು ಇರಬೇಕು. ಅದು ವ್ಯಕ್ತಿ, ವಸ್ತು ಇಲ್ಲ ಕಥನಗಳಾಗಿರಬಹುದು. ತುಳುನಾಡಿನಲ್ಲಿ ಶೋಷಿತರ, ಧಮನಿತರ ಧ್ವನಿಯಾಗಿ ಕಾಣುವಂತದ್ದು ಪಾಡ್ದನಗಳು. ಅವುಗಳಲ್ಲಿ ಉಲ್ಲೇಖ ಮಾಡಲ್ಪಟ್ಟ ಸ್ಥಳ ನಾಮ, ವ್ಯಕ್ತಿ,  ವಂಶ, ಸಾಮಾಜಿಕ ಕಟ್ಟುಪಾಡುಗಳು ಇತಿಹಾಸದ ಸತ್ಯಾಸತ್ಯತೆಯನ್ನು ಬಹಳವಾಗಿ  ಪುಷ್ಟೀಕರಿಸುತ್ತದೆ. ಈ ರೀತಿಯ ಎಲ್ಲಾ ಅರ್ಹತೆ…