ಪುಸ್ತಕ ಪರಿಚಯ

ಲೇಖಕರು: Ashwin Rao K P
March 07, 2023
‘ನಿಗೂಢ ನಾಣ್ಯ' ಕೃತಿಯ ಲೇಖಕರಾದ ವಿಠಲ್ ಶೆಣೈ ಇವರು ಮತ್ತೊಂದು ಕುತೂಹಲ ಭರಿತ ಕಾದಂಬರಿಯನ್ನು ಹೊರತಂದಿದ್ದಾರೆ. ಈ ಕಾದಂಬರಿಯ ಬಗ್ಗೆ ಲೇಖಕರಾದ ವಿಠಲ್ ಶೆಣೈ ಅವರು ತಮ್ಮ ಮಾತುಗಳಲ್ಲಿ ಹೇಳುವುದು ಹೀಗೆ… “ಇದು ಪ್ರಾಯಶಃ ಬಲು ಚಿಕ್ಕ ಮುನ್ನುಡಿ- ನನ್ನುಡಿ! ನನ್ನ ಮೂರನೇ ಕಾದಂಬರಿ ಬರೆಯಲು ಪ್ರೇರಣೆ ಯೂಟ್ಯೂಬ್ ನಲ್ಲಿ ನಾನು ನೋಡಿದ ಒಂದು ವಿಡಿಯೋದಲ್ಲಿ ಗಮನಿಸಿದ ಒಂದು ಕುತೂಹಲಕಾರಿ ಅಂಶ. ಅದರ ಬಗ್ಗೆ ಹೆಚ್ಚು ಹೇಳಲು ಹೋದರೆ ಈ ಕತೆಯ ಒಂದು ಮುಖ್ಯ ಸಾರವೇ ಹೊರಬೀಳಬಹುದು. ೨೦೨೦ರ ಕೊರೋನಾ ಲಾಕ್…
March 05, 2023
“ಕೋಡಗನ ಕೋಳಿ ನುಂಗಿ"ಯ ಲೇಖಕ ಮಹಾದೇವ ಬಸರಕೋಡ ಅವರ ಕೃತಿಯ ಲೇಖನಗಳಲ್ಲಿ ಒಂದು ಸ್ಪಷ್ಟ ಚಿಂತನೆಯಿದೆ. ಅವರ ಯೋಚನೆಗಳಲ್ಲಿ ದ್ವಂದ್ವ, ತರ್ಕ ಕಾಣುವುದಿಲ್ಲ. ಲೇಖಕರ ದೃಷ್ಟಿಕೋನವು ಜನರ ಬದುಕಿನ ಯೋಚನೆಗಳ ಕಡೆ ಗಮನ ಹರಿಸದೇ, ಅವರ ಅಂತರಂಗದ ಕಲ್ಮಷಗಳಿಗೆ ಕನ್ನಡಿ ಇಟ್ಟು ಅದರ ಪರಿಶುದ್ಧತೆಯ ಕಡೆಗೆ ಗಮನ ಹರಿಸಿದೆ. ನಮ್ಮಲ್ಲಿನ ಅಂಧತ್ವ, ಮೂಢನಂಬಿಕೆಗಳು, ಆಚರಣೆಗಳು ತೊಲಗಿ ಸಮಾಜಮುಖಿ ಜಾಗೃತಿಯ ಚಿಂತನೆಯಲ್ಲಿ ಮುಳುಗಬೇಕು ಎಂಬ ತಿಳಿಮಾತನ್ನು ಅವರು ಈ ಕೃತಿಯ ಮೂಲಕ ಮನವರಿಕೆ ಮಾಡಿ ಕೊಟ್ಟಿದ್ದಾರೆ"…
ಲೇಖಕರು: Ashwin Rao K P
March 04, 2023
ಸಾವಯವ ಕೃಷಿಕ, ಗ್ರಾಹಕ ಬಳಗ ಇವರು ಈಗಾಗಲೇ ಎರಡು ಪುಟ್ಟದಾದ ಮಾಹಿತಿ ಪೂರ್ಣ ಪುಸ್ತಕಗಳನ್ನು ಹೊರತಂದಿದ್ದಾರೆ. ಇದೇ ಮಾಲಿಕೆಯ ಮೂರನೆ ಪುಸ್ತಕ ಸವಿತಾ ಎಸ್ ಭಟ್ ಅಡ್ವಾಯಿ ಅವರ ‘ಮರೆತು ಹೋಗುತ್ತಿರುವ ಪೌಷ್ಟಿಕ ಅಡುಗೆಗಳು'. ರಾಜ್ಯದ ಬಹುತೇಕ ಪತ್ರಿಕೆಗಳಲ್ಲಿ ಸವಿತಾ ಎಸ್ ಭಟ್ ಅವರ ಅಡುಗೆಯ ಬಗ್ಗೆ ಬರೆದ ಬರಹಗಳು ಬೆಳಕು ಕಂಡಿವೆ. ಅಡುಗೆ ಪುಸ್ತಕಗಳು ಬಿಡುಗಡೆಯಾಗಿವೆ. ಆದರೆ ಇಲ್ಲಿರುವ ಪುಟ್ಟ ಪುಸ್ತಕದಲ್ಲಿ ಅವರು ಪೌಷ್ಟಿಕ ಆಹಾರದ ಅಗತ್ಯತೆಯನ್ನು ಪೂರೈಸುವ ಅಡುಗೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ…
ಲೇಖಕರು: addoor
March 02, 2023
ಭಾರತದ ಜನಪ್ರಿಯ ಮಕ್ಕಳ ಪುಸ್ತಕಗಳ ಲೇಖಕರಾದ ರಸ್ಕಿನ್ ಬಾಂಡ್ ಅವರ ಈ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿದವರು ಅಹಲ್ಯಾ ಚಿಂತಾಮಣಿ. ರಸ್ಕಿನರ  ಹಲವಾರು ಇಂಗ್ಲಿಷ್ ಪುಸ್ತಕಗಳು ಭಾರತದ ಅನೇಕ ಭಾಷೆಗಳಿಗೆ ಅನುವಾದವಾಗಿವೆ. ಚಿತ್ರಗಳಿರುವ ಈ ಪುಸ್ತಕದಲ್ಲಿವೆ ಎರಡು ಭಾಗಗಳು: ಅಂಕಲ್ ಕೆನ್ ಮತ್ತು ಪಲಾಯನದ ಸಾಹಸ ಯಾತ್ರೆ. ಮೊದಲ ಭಾಗದ ಆರು ಅಧ್ಯಾಯಗಳಲ್ಲಿ ಲೇಖಕರು ತನ್ನ ಮಾವ ಕೆನ್ ಅವರ ವಿಚಿತ್ರ ಸ್ವಭಾವಗಳನ್ನು ಪರಿಚಯಿಸುತ್ತಾರೆ. "ಸೋಮಾರಿ ಅಂಕಲ್ ಕೆನ್” ಅಧ್ಯಾಯದಲ್ಲಿ, ಆ ಆಸಾಮಿಯ ಬಗ್ಗೆ ಅವರು…
ಲೇಖಕರು: Ashwin Rao K P
March 02, 2023
ಇತ್ತೀಚೆಗೆ ಯೋಗ ಶಿಕ್ಷಣದ ಬಗ್ಗೆ ಜನರಲ್ಲಿ ಕುತೂಹಲ ಮತ್ತು ಆಸಕ್ತಿ ಹೆಚ್ಚಾಗುತ್ತಿದೆ. ಈ ವಿಷಯದಲ್ಲಿ ಈಗಾಗಲೇ ಹಲವಾರು ಮಹತ್ವಪೂರ್ಣ ಕೃತಿಗಳು ಹೊರಬಂದಿವೆ. ಅದೇ ಸಾಲಿಗೆ ಸೇರುವ ಮತ್ತೊಂದು ಮಹತ್ವದ ಕೃತಿ ‘ಯೋಗರತ್ನ'  ನಾಗರಾಜ ಇವರು “ಪ್ರಸನ್ನ ಕಾಯ, ಮನ, ಇಂದ್ರೀಯ ಮತ್ತು ಆತ್ಮವೇ ಆರೋಗ್ಯ ಎನ್ನುವ ಚರಕ ಮಹರ್ಷಿಯ ಮಾತುಗಳನ್ನು ಉಲ್ಲೇಖಿಸಿದ್ದಾರೆ. ತಮ್ಮ ಬರವಣಿಗೆಯಲ್ಲಿ ವಚನಕಾರರ ಅನೇಕ ವಚನಗಳನ್ನು, ಸರ್ವಜ್ಞ ಕವಿಯ ತ್ರಿಪದಿಗಳನ್ನು ಸಾಂದರ್ಭಿಕವಾಗಿ ಬಳಸಿದ್ದಾರೆ. ಯೋಗ-ವ್ಯಾಯಾಮಗಳ ನಡುವಿನ…
March 01, 2023
“ಪುಸ್ತಕದ ಉದ್ದಕ್ಕೂ ಸಾಕಷ್ಟು ಭೌಗೋಳಿಕ ವಿವರಗಳಿದ್ದು, ಬರೆಯುವ ಮುನ್ನ ಇವರು ಮಾಡಿರಬಹುದಾದ ತತ್ಸಂಬಂಧಿ ಅಧ್ಯಯನ ಸ್ಪಷ್ಟವಾಗಿ ಗೋಚರಿಸುತ್ತದೆ. ಓದುಗನಿಗೆಷ್ಟು ಗೊತ್ತಾದೀತು ಮಹಾ ಎಂಬ ಉದಾಸೀನ, ಉಡಾಫೆಯಿಂದ ಬರೆಯುವವರ ನಡುವೆ ಇವರು ಭಿನ್ನವಾಗಿ ನಿಲ್ಲುತ್ತಾರೆ. ಬಹಳ ಕಡಿಮೆ ಓದಿರುವ ನನ್ನ ಜ್ಞಾನದ ಪರಿಧಿಯನ್ನು ಈ ಪುಸ್ತಕ ವಿಸ್ತರಿಸಿದೆ” ಎನ್ನುವುದು ನನ್ನ ಅನಿಸಿಕೆ. ಲೇಖಕ ಮಂಜುನಾಥ್‌ ಕುಣಿಗಲ್‌ ಅವರ ಕುಣಿಗಲ್‌ ಟು ಕಂದಹಾರ್‌ ಕೃತಿಗೆ ಬರೆದಿರುವ ನಾನು ಬರೆದ ವಿಮರ್ಶೆ ನಿಮ್ಮ ಓದಿಗಾಗಿ…