ಪುಸ್ತಕ ಪರಿಚಯ
ಲೇಖಕರು: Ashwin Rao K P
April 01, 2023

ಸು. ರುದ್ರಮೂರ್ತಿ ಶಾಸ್ತ್ರಿಯವರು ಬರೆದ ‘ಮಹೇಶ್ವರಿ’ ಎಂಬ ಕಾದಂಬರಿಗೆ ಆಧಾರವಾದ ಶೂದ್ರಕನ ಸಂಸ್ಕೃತ ನಾಟಕ 'ಮೃಚ್ಛಕಟಿಕ' ಬಹಳ ಪ್ರಸಿದ್ಧವಾದ ಕೃತಿ. ಅದರಲ್ಲಿ ವಸಂತಸೇನೆ ಮತ್ತು ಚಾರುದತ್ತರ ಪ್ರೇಮ ಕಥೆಯೇ ಪ್ರಧಾನವಾದರೂ, ಪರೋಕ್ಷವಾಗಿ ರಾಜಕೀಯ ದುರಾಡಳಿತದ ಒಂದು ಎಳೆ ಗುಪ್ತಗಾಮಿನಿಯಾಗಿದೆ. ಆ ಅಂಶಕ್ಕೆ ಈ ಕಾದಂಬರಿಯಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ ಎನ್ನುತ್ತಾರೆ ಲೇಖಕರು. ರುದ್ರಮೂರ್ತಿ ಶಾಸ್ತ್ರಿಯವರು ತಮ್ಮ ಮುನ್ನುಡಿಯಲ್ಲಿ ಬರೆದ ಕೆಲವು ಸಾಲುಗಳು ನಿಮ್ಮ ಓದಿಗಾಗಿ ಇಲ್ಲಿ ನೀಡಲಾಗಿವೆ.…
ಲೇಖಕರು: ಬರಹಗಾರರ ಬಳಗ
March 31, 2023

ಇದ್ದವರಿಗಿಂತ ಇಲ್ಲದವರೇ ತಮಗೆ ಮಾಡಿದ ಸಹಾಯವನ್ನ ನೆನಪಿಡುತ್ತಾರೆ ಹಾಗೆಯೇ ಯಾವುದಾದರೊಂದು ರೀತಿಯಲ್ಲಿ ತೀರಿಸುತ್ತಾರೆ. ಇದು ಲೋಕದ ನಿಯಮ ಶಾಂತವ್ವ ಈ ನಿಯಮಕ್ಕೆ ಹೊರತಾಗಿರಲಿಲ್ಲ. ಇಂತಹ ಅನೇಕ ಆದರ್ಶ ನುಡಿಗಳನ್ನು ಕಾದಂಬರಿಯ ಉದ್ದಕ್ಕೂ ನೋಡಬಹುದು. "ಮಕ್ಕಳು ಓದಿದ ಟೀಚರ್ ಡೈರಿ" ಒಮ್ಮೇಲೆ ಓದಿಸಿಕೊಂಡು ಹೋಗುವ ಕಾದಂಬರಿ. ವೈ ಜಿ ಭಗವತಿಯವರು ನವರಸಗಳನ್ನು ಬೆರೆಸಿ ಹೆಣೆದ ಮಕ್ಕಳ ಕಾದಂಬರಿ ಇದಾಗಿದೆ. ಈ ಕಾದಂಬರಿಯೂ ಸಮನ್ವಯ ಶಿಕ್ಷಣಕ್ಕೆ ಒತ್ತು ನೀಡುತ್ತದೆ. ಇದರಲ್ಲಿ ಬರುವ ಪ್ರತಿಯೊಂದು…
ಲೇಖಕರು: Ashwin Rao K P
March 31, 2023

ಉದಯೋನ್ಮುಖ ಲೇಖಕಿ ಅಕ್ಷತಾರಾಜ್ ಪೆರ್ಲ ಅವರ ಬರಹಗಳ ಸಂಗ್ರಹವು ‘ಅವಲಕ್ಕಿ ಪವಲಕ್ಕಿ' ಎಂಬ ವಿನೂತನ ಹೆಸರಿನಲ್ಲಿ ಬಿಡುಗಡೆಯಾಗಿದೆ. ಸುಮಾರು ೧೩೦ ಪುಟಗಳ ಈ ಪುಟ್ಟ ಕೃತಿಗೆ ಬೆಂಬಲ ನೀಡುತ್ತಾ ಮುನ್ನುಡಿಯನ್ನು ಬರೆದು ಬೆಂಬಲ ನೀಡಿದ್ದಾರೆ ಹಿರಿಯ ಸಾಹಿತಿ ಬಿ ಎಂ ರೋಹಿಣಿ ಇವರು. ಇವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವನೆಗಳ ಕಿರುನೋಟ ಇಲ್ಲಿದೆ.
“ಕರಾವಳಿ ಲೇಖಕಿಯರ-ವಾಚಕಿಯರ ಸಂಘವು ನೀಡುವ ದತ್ತಿ ಬಹುಮಾನವನ್ನು ಪಡೆದ ಲೇಖನ ಸಂಕಲನವಿದು. ಈ ದತ್ತಿ ಬಹುಮಾನವು ಹಿರಿಯ ಲೇಖಕಿ…
ಲೇಖಕರು: addoor
March 30, 2023

ಪ್ರತಿಯೊಬ್ಬರ ಮನೆಯಲ್ಲಿ ಇರಲೇ ಬೇಕಾದ ಪುಸ್ತಕವಿದು. ಯಾಕೆಂದರೆ ಭಾರತದ ಪಾರಂಪರಿಕ ಮಹಾಕಾವ್ಯ ರಾಮಾಯಣದ ಪರಿಚಯವನ್ನು ಸರಳವಾಗಿ ಮಕ್ಕಳಿಗೆ ಮಾಡಿಕೊಡಬಲ್ಲ ಪುಸ್ತಕವಿದು.
ಈ ಪುಸ್ತಕದ ಎಡಭಾಗದ ಪುಟಗಳಲ್ಲಿ ರಾಮಾಯಣದ 60 ಘಟನೆಗಳ ವರ್ಣಚಿತ್ರಗಳಿವೆ; ಪ್ರತಿಯೊಂದು ಚಿತ್ರದ ಘಟನೆಯ ವಿವರಣೆ ಬಲಭಾಗದ 60 ಪುಟಗಳಲ್ಲಿವೆ. ಈ ಚಂದದ ಚಿತ್ರಗಳನ್ನು ಒಂದು ಶತಮಾನದ (1916) ಮುಂಚೆ ರಚಿಸಿದವರು ಭವಾನರಾವ್ ಶ್ರೀನಿವಾಸರಾವ್ ಊರ್ಫ ಬಾಳಸಾಹೇಬ ಪಂಡಿತ ಪಂತ ಪ್ರತಿನಿಧಿ, ಬಿ.ಎ., ಸಂಸ್ಥಾನ ಔಂಧ.
ಇದರ…
ಲೇಖಕರು: Ashwin Rao K P
March 28, 2023

ಶ್ರೀಧರ ಬನವಾಸಿ ಇವರು ಸುದ್ದಿ ಹಾಗೂ ಮನರಂಜನಾ ಮಾಧ್ಯಮವಾಗಿ ಬೆಳೆದಿದ್ದ ಟೀವಿ ಉದ್ಯಮದ ಕುರಿತಾದ ಲೇಖನಗಳನ್ನು ಬೇರೆ ಬೇರೆ ಪತ್ರಿಕೆಗಳಿಗೆ ಬರೆದಿದ್ದಾರೆ. ಒಟ್ಟಾರೆಯಾಗಿ 2007ರಿಂದ 2013ರವರೆಗೆ ಮಾಧ್ಯಮ ಕ್ಷೇತ್ರದಲ್ಲಿ ನೇರ ಹಾಗೂ ಪರೋಕ್ಷವಾಗಿ ದುಡಿಯುತ್ತಿದ್ದ ಸಮಯದಲ್ಲಿ ಬರೆದ ಅಂಕಣಗಳು, ಲೇಖನಗಳಲ್ಲಿ ಇಂದಿನ ಪ್ರಸ್ತುತ ಜಾಯಮಾನದ ಓದುಗರಿಗೆ, ಈ ಕ್ಷೇತ್ರದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ಬರಹಗಳನ್ನು ಆಯ್ದು “ಲಾಜಿಕ್ ಬಾಕ್ಸ್” ಎಂಬ ಕೃತಿಯ ರೂಪದಲ್ಲಿ ಹೊರತಂದಿದ್ದಾರೆ. ಈ ಕೃತಿಯಲ್ಲಿ…
ಲೇಖಕರು: Ashwin Rao K P
March 25, 2023

“ಬೆತ್ತಲೆ ವೃಕ್ಷ ಎಂಬ ಕೃತಿಯನ್ನು ರಚಿಸಿದ್ದಾರೆ ಸಿ.ಜಿ.ಲಕ್ಷ್ಮೀಪತಿ ಅವರು. ಇವರ ಈ ಪ್ರಬುದ್ಧ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕಿಯಾದ ಎಂ ಎಸ್ ಆಶಾದೇವಿ ಇವರು. ಅವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವಗಳು ಇಲ್ಲಿವೆ...
“ಎರಡು ದಶಕಗಳ ಹಿಂದೆ ಬೆತ್ತಲೆ ವೃಕ್ಷ ಕೃತಿಯನ್ನು ಓದಿದಾಗ ವಾಸ್ತವದ ಕಟುತ್ವವನ್ನು ನೋಡಿ, ಕೋಪ, ವಿಷಾದ, ವ್ಯಗ್ರತೆಗಳು ಹುಟ್ಟಿದಂತೆಯೇ ಸ್ತ್ರೀ ವಾದವು ಹೇಳುತ್ತಿರುವ ಅಂಶಗಳನ್ನು ಈ ಕೃತಿ ಇನ್ನೊಂದು ದಿಕ್ಕಿನಿಂದ ಸಮರ್ಥಿಸುತ್ತಿದೆಯಲ್ಲವೆ ಎನ್ನುವ…