ಎಲ್ಲ ಪುಟಗಳು

ಲೇಖಕರು: aithalsandy
ವಿಧ: Basic page
April 22, 2006
ಶಂಕರ್ ನಾಗ್ ,ಮಂಜು & ಆಗುಂಬೆ ಇಲ್ದಿದ್ರೆ ನಮಗೆ,ಮಾಲ್ಗುಡಿ ಮನಸ್ಸಿಗೆ ನಾಟ್ತಾ ಇರ್ಲಿಲ್ವೇನೋ... ಮಲ್ಲೇಶ್ವರಂ + ಬಸವನಗುಡಿ = ಮಾಲ್ಗುಡಿ ಮೈಲಾಪುರ + ಲಾಲ್ಗುಡಿ = ಮಾಲ್ಗುಡಿ ಮಾಲ್ಗುಡಿ ಹೆಸರಿನ ಸ್ಪೂರ್ತಿ ಬೇರೆ ಯಾವ್ದಾದ್ರು ಇದ್ರೆ ತಿಳಿಸಿ... Netಲ್ಲಿ ಸಿಕ್ಕಿದ್ದು, ಮಾಲ್ಗುಡಿ ಮಾಂತ್ರಿಕನಿಗೆ ವಿಶ್ವದ ಅತ್ಯುತ್ತಮ ಪತ್ರಿಕೆಗಳಲ್ಲಿ ಒಂದಾದ ನ್ಯೂಯಾರ್ಕ್ ಟೈಮ್ಸ್ ನ ನಮನಗಳು http://www.nytimes.com/2001/05/14/obituaries/14NARA.html?ei=5070&en=ebc04998d356a939…
ಲೇಖಕರು: shreekant.mishrikoti
ವಿಧ: Basic page
April 22, 2006
ಎತ್ತು ಚಲೋದಾದರೆ ಇದ್ದ ಊರಲ್ಲೇ ಗಿರಾಕಿ. ಕಟ್ಟಲಿಲ್ಲ ಬಿಚ್ಚಲಿಲ್ಲ ಹಿ೦ಡಿಕೊಳ್ಳೋಕೆ ಹೊತ್ತಾಯ್ತು ಅ೦ದಳು. ಕತ್ತೆ ತಪ್ಪಿಸಿಕೊ೦ಡರೆ ಹುಡುಕುತಾರ್‍ಯೇ? ಆಕಳಿದ್ದವನಿಗೆ ವ್ಯಾಕುಲವಿಲ್ಲ. ಅಕ್ಕಿ ತಿ೦ದವರಿಗೆ ಅನ್ನಿಲ್ಲ, ಮೊಟ್ಟೆ ತಿ೦ದವರಿಗೆ ಮರಿ ಇಲ್ಲ. ಆಕಳ ಹೊಟ್ಟೆಯಲ್ಲಿ ಅಚ್ಚೇರು ಬ೦ಗಾರ. ಉಳೋ ಎತ್ತಾದರೆ ಇರೋ ಊರಿನಲ್ಲಿ ಬೆಲೆಯಾಗದೇ. ಗುಡ್ಡದ ಮೇಲೆ ಕಪಿ ಸತ್ತರೆ ಊರಿಗೆಲ್ಲಾ ಸೂತಕ. ಯಾರ ಹೆ೦ಡ್ತಿ ಎಲ್ಲಿಯಾದರೂ ಹೋಗಲಿ ನಮ್ಮ ಹೆ೦ಡ್ತಿ ನಮ್ಮನೇಲಿರಲಿ ಯಾವ ದೇವರು ವರ ಕೊಟ್ಟರೂ ಗ೦ಡನಿಲ್ಲದೆ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
April 22, 2006
ನೀವು ಪುರಂದರದಾಸರ 'ಹರಿದಾಸರ ಸಂಗ ದೊರಕಿತು ಎನಗೆ , ಇನ್ನೇನಿನ್ನೇನು ? ' ಹಾಡನ್ನು ಕೇಳಿದ್ದೀರಾ? . ನಾನು ಬಾಲಮುರಳಿಕೃಷ್ಣ ಅವರ ಧ್ವನಿಯಲ್ಲಿ ಕೇಳಿದ್ದೇನೆ. ಇತ್ತೀಚೆಗೆ ನಾನು ನಮ್ಮ ಸಂಸ್ಥೆಯಲ್ಲಿ ಇಪ್ಪತ್ತು ವರ್ಷಗಳ ಸೇವೆಯನ್ನು ಪೂರ್‍ಐಸಿದೆ . ಆ ಕಾರಣದಿಂದ ನಿವೃತ್ತಿವೇತನ ( ಅದು ಎಷ್ಟೇ ಇರಲಿ , ಆ ಮಾತು ಬೇರೆ) ಸೌಲಭ್ಯಕ್ಕೆ ಹಕ್ಕುದಾರನಾದೆ . ಇದು ಒಂದು ಪ್ರಮುಖ ಮೈಲಿಗಲ್ಲೇ ಸರಿ . ಆ ಸಂತೋಷದಲ್ಲಿ ನಾನು ಹೀಗೆ ಹಾಡಿಕೊಂಡೆ. ಇಪ್ಪತ್ತು ವರುಷ ಆಯಿತು ಸರ್ವೀಸು,…
ಲೇಖಕರು: shreekant.mishrikoti
ವಿಧ: Basic page
April 22, 2006
ಕಾಸಿಗೆ ತಕ್ಕ ಕಜ್ಜಾಯ ಹೆತ್ತೋರ್ಗೆ ಹೆಗ್ಗಣ ಮುದ್ದು, ಕಟ್ಗೊಂಡೋರ್ಗೆ ಕೋಡಂಗಿ ಮುದ್ದು ಅಡುಗೆ ಮಾಡಿದವಳಿಗಿಂತ ಬಡಿಸಿದವಳೆ ಮೇಲು ಕೋಣೆಯ ಕೂಸು ಕೊಳೆಯಿತು; ಓಣಿಯ ಕೂಸು ಬೆಳೆಯಿತು ಕೂರೆಗೆ ಹೆದರಿ ಸಂತೆಯಲ್ಲಿ ಸೀರೆ ಬಿಚ್ಚಿದರಂತೆ ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ ಕೋಪದಲ್ಲಿ ಕೊಯ್ದ ಮೂಗು ಶಾಂತವಾದ ಮೇಲೆ ಬರುತ್ತದೆಯೆ ? ಕದ ತಿನ್ನೋವನಿಗೆ ಹಪ್ಪಳ ಈಡಲ್ಲ ಕಣ್ಣರಿಯದಿದ್ದರೂ ಕರುಳರಿಯುತ್ತದೆ ಹಳೇ ಚಪ್ಪಲಿ, ಹೊಸಾ ಹೆಂಡತಿ ಕಚ್ಚುಲ್ಲ ನಮಸ್ಕಾರ ಮಾಡಲು ಹೋಗಿ ದೇವಸ್ಥಾನದ ಗೋಪುರ ತಲೇ ಮೇಲೆ…
ಲೇಖಕರು: shreenidhi
ವಿಧ: ಚರ್ಚೆಯ ವಿಷಯ
April 22, 2006
ಎಲ್ಲರಿಗೂ ನಮಸ್ತೆ.... ನಾನು ಸಂಪದ ದ ಸದಸ್ಯನಾಗಿ ಒಂದು ತಿಂಗಳಾಯ್ತು.... ಇನ್ನೂ ಪರಿಚಯಿಸಿಕೊಂಡಿರಲಿಲ್ಲ.. ಕಾರಣ, ಸೋಮಾರಿತನ ! ನಾನು ಸಾಹಿತ್ಯಾಸಕ್ತ,ಬರಹಗಾರ. ಕತೆ , ಕವನಗಳು, ನನಗೆ ಖುಷಿ ಕೊಡುವ ಪ್ರಕಾರಗಳು.ಈವರೆಗೆ ಅಲ್ಪ-ಸ್ವಲ್ಪ ಬರೆದು, ಹಾಗೇ ಇಟ್ಟಿದ್ದೇನೆ. ಇನ್ನಾದರೂ ಹಂಚಿಕೊಳ್ಳುವ ಪ್ರಯತ್ನ ಮಾಡುತ್ತೇನೆ.ಸಂಪದ ದ ಗೊಂಚಲಿನ ಹೀಚುಕಾಯಿ ನಾನು,ನೀವು ಬೆಳೆಯಲು ಪ್ರೋತ್ಸಾಹಿಸುತ್ತೀರಿ ಎಂಬ ವಿಶ್ವಾಸದೊಂದಿಗೆ, ಶ್ರೀನಿಧಿ.ಡಿ.ಎಸ್.
ಲೇಖಕರು: tvsrinivas41
ವಿಧ: Basic page
April 22, 2006
ಈ ಬದುಕೊಂದು ತನಗೆ ತಾನೇ ಬ್ಯಾಲೆನ್ಸಾಗುವ ಶೀಟು ಒಂದೆಡೆ ಏರಿಸಿದರೆ ಹ್ಯಾಟು ಇನ್ನೊಂದೆಡೆ ಸೇರುವುದು ಬೂಟು ಅಪ್ಪ ಅಮ್ಮ ನೀಡಿದುದೇ ಅಸಲು ಬಂಡವಾಳ ಕರ್ಮಗಳಿಗನುಸಾರವಾಗುಳಿಯುವುದು ನಿವ್ವಳ ಪಾಲಕರು ನೀಡುವುದೇ ಪ್ರಿಫರೆನ್ಸ್ ಶೇರ್‍ಸು ಋಣ ತೀರಿಸಲು ಮೊದಲು ಅವರನು ಪಾಲಿಸು ಮುಂದೆ ಹಾದಿ ತೋರುವವರೇ ಡಿಬೆಂಚರ್‍ಸು ಕೈ ಹಿಡಿದು ನಡೆಸಿದವರ ನೀನೆಂದೂ ನೆನೆಸು ಕೈ ನಡೆಸುವ ಹೆಂಡತಿ ಮಕ್ಕಳೇ ಕ್ಯಾಷ್ ಬ್ಯಾಲೆನ್ಸು ಮುಂದಿನ ಬಾಳಿಗೆ ಹಾದಿ ತೋರುವವರೇ ಬ್ಯಾಂಕ್ ಬ್ಯಾಲೆನ್ಸು ಕೆಲಸಕ್ಕೆ ಫಲ ನೀಡಿದವರೇ ಎನ್.…
ಲೇಖಕರು: honnung
ವಿಧ: ಚರ್ಚೆಯ ವಿಷಯ
April 21, 2006
ಇದನ್ನು ನೋಡಿ. ಇದು ಭಾರತ ಸರಕಾರ ಹಾಗೂ ಪ್ರೈವೇಟ್ ಕಂಪನಿಗಳು ಕೂಡಿ ತಯಾರಿಸಿದ ಅಂತರ್ಜಾಲ ತಾಣ. ಇದರಲ್ಲಿ ಇತ್ತೀಚಿನ ವಾತಾಮಾನ ವರದಿ ಪಡೆಯಬಹುದು. [http://www.indiaweatherwatch.org/|ಹವಾಮಾನ ವರದಿ] ಉಳಿದ ಸರಕಾರಿ ತಾಣಗಳಿಗೆ ಹೋಲಿಸಿದರೆ ಉತ್ತಮವೇ ಅನ್ನಬಹುದು. ಇಲ್ಲಿ ಅನೇಕ ನಗರಗಳ, ಪ್ರಾಂತ್ಯಗಳ ಉಷ್ಣತೆ, ಮಳೆ ಪ್ರಮಾಣ ಲಭ್ಯವಿದೆ. ವೈಪರಿತ್ಯಗಳ ಬಗ್ಗೆ ಎಚ್ಚರಿಕೆ ಸಹ ಲಭ್ಯವಿದೆ. ಇನ್ನೂ ಅನೇಕ ಪ್ರಾಂತ್ಯಗಳು, ನಗರಗಳು ಇದರಲ್ಲಿ ಸೇರಿಸಿ ವಿಸ್ತರಿಸಬಹುದು. ಉದಾಹರಣೆಗೆ ನಮ್ಮ…
ಲೇಖಕರು: Rohit
ವಿಧ: ಚರ್ಚೆಯ ವಿಷಯ
April 20, 2006
 ಗೆಳೆಯರೆ,  Personal Computing  ಗೆ ಅಗತ್ಯ ತಂತ್ರಾಂಶಗಳನ್ನು ಪೂರೈಸುವ ಅಗ್ರಗಣ್ಯ ಸಂಸ್ಥೆ, ಮೈಕ್ರೋಸಾಫ್ಟಿನ ಜನಪ್ರಿಯ ಆಪರೇಟಿಂಗ್ ಸಿಸ್ಟಂ ವಿಂಡೋಸ್ XP. ಇದರಲ್ಲಿ ಇತ್ತೀಚೆಗೆ ಕನ್ನಡವೂ ಸೇರಿದಂತೆ ಇತರ ಭಾರತೀಯ ಭಾಷೆಗಳನ್ನು ಸೇರಿಸುವ ಪ್ರಯತ್ನಗಳು ನಡೆಯುತ್ತಿವೆ. ಈಗಾಗಲೇ ಕನ್ನಡದ ಒಂದು ಆವೃತ್ತಿ ಬಿಡುಗಡೆಯಾಗಿದೆ. ಹಿಂದೆ ಕನ್ನಡವನ್ನು ಬಳಸಲು ಪರಿಮಿತ ಸೌಲಭ್ಯವಿತ್ತು. ಆದರೆ ಈಗಿನ ಆವೃತ್ತಿಯಲ್ಲಿ ಹೆಚ್ಚಿನ ಸೌಲಭ್ಯಗಳು ಇವೆ ಎಂದು ಬೀಗುತ್ತ, 'ತುಂಗಾ' ಫಾಂಟಿನಲ್ಲಿಯ ದೋಷಗಳನ್ನು ಅವರು…
ಲೇಖಕರು: shreekant.mishrikoti
ವಿಧ: Basic page
April 19, 2006
ಆರಿದ್ರ ವೇಳೆಗೆ ಆದೋನೇ ಗ೦ಡ! (ಚಿಟಿ ಚಿಟಿ ಮಳೆ ಬಿಡದೇ ಸುರಿಯುತ್ತಿದಾಗ, ಮನೆ ಬಿಟ್ಟು ಎಲ್ಲೂ ಹೊರಗೆ ಹೋಗದೇ ಇರುವಾಗ, ನಡೆದಿರಬಹುದಾದ ಚಟುವಟಿಕೆಯ ಕಥೆ ಹೇಳುತ್ತಾ ಇದು?, ಎ೦ದು ರಸಿಕರ ಪ್ರಶ್ನೆ!) ಅದೇ ಉ೦ಡೇನು ಕದ ತೆಗೀರಿ ಅತ್ತೆಮ್ಮನವರೇ. ಆಚಾರ್ಯರ ಮಗನಾಗಿ, ಪುರಾಣಿಕರ ಅಳಿಯನಾಗಿ ಘೃತ ಎ೦ದರೇನು? ಅಂದನಂತೆ ಅಪಾರ ಪತಿವ್ರತೆ ಅಪ್ಪನ್ನ ಗ೦ಡ ಅ೦ತ ತಬ್ಬಿಕೊ೦ಡಳ೦ತೆ. ಇಣುಕಿ ಇಣುಕಿ ನೋಡಿದ ಒಣಕಲು ವನಜನ್ನ. ಊರೆಲ್ಲಾ ಉಗಿದರೂ ನನ್ನ ಮೂರೇ ಜನ ಉಗಿದರು ಅ೦ದ೦ತೆ. ಉ೦ಡೆ ಕದ್ದವನು ಒಡವೆಗೆ ಕೈ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
April 19, 2006
ಪ್ರಜಾವಾಣಿ (೧೮ ಎಪ್ರಿಲ್ ೨೦೦೬) ರಲ್ಲಿ ನಾನು ಗಮನಿಸಿದ ವಾರ್ತೆಗಳು. ೧. ಕನ್ನಡದ ಆದಿಕವಿ ಪಂಪ ಅಲ್ಲ ಎಂದು ಚರ್ಚೆ ನಡೆದಿದೆ ; ದೇವರ ದಾಸಿಮಯ್ಯ , ಜೇಡರ ದಾಸಿಮಯ್ಯ ಇಬ್ಬರೂ ಒಬ್ಬನೇ ವ್ಯಕ್ತಿ ಎಂಬ ವಾದವೂ ಇದ್ದು ಈ ಪಟ್ಟ ಅವರಿಗೆ ಸಲ್ಲಬೇಕು ಎಂದು ವಾಚಕರವಾಣಿಯಲ್ಲಿ ಪತ್ರ ಬರೆದಿದ್ದಾರೆ . ೨. ಇಂದು ಬೆಂಗಳೂರಿನಲ್ಲಿ ಚಿತ್ರರಂಗದಿಂದ ಡಾ. ರಾಜ್‍ಗೆ ಶೃದ್ಧಾಂಜಲಿ ಕಾರ್ಯಕ್ರಮ ನಡೆಯಲಿದೆ ೩. ಪ್ರತಿದಿನ ಐವತ್ತು ಸಾವಿರ ಜನ ಡಾ. ರಾಜ್ ಸಮಾಧಿಯನ್ನು ಸಂದರ್ಶಿಸುತ್ತಿದ್ದಾರೆ. ೪. ರಾಜ್ ಸ್ಮಾರಕ…