ಎಲ್ಲ ಪುಟಗಳು

ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
May 06, 2006
ಮೇ ೨೦೦೬ ತುಷಾರ ಹಾಸ್ಯ ವಿಶೇಷಾ?ಕವಾಗಿ ಬಂದಿದೆ. ಅದರೆ ಅದರಲ್ಲಿ ಹಾಸ್ಯವನ್ನು ಹುಡುಕಬೇಕು! ನನಗೆ ಎರಡೇ ಎರಡು ಪುಟ್ಟ ನಗೆಹನಿಗಳು ಸಿಕ್ಕವು!! ಅದರಲ್ಲಿ ತಮಿಳು ಸಾಹಿತಿ ಅಖಿಲನ್ ಅವರ ಒಂದು ಕಥೆ ಬಂದಿದೆ. ಜತೆಗಿರುವ ತಮಿಳು ಸಾಹಿತ್ಯದ ಕುರಿತಾದ ಚಿಕ್ಕ ಪರಿಚಯಾತ್ಮಕ ಲೇಖನದಲ್ಲಿ ಹೀಗಿದೆ- ' ತಮಿಳು ಸಾಹಿತ್ಯದಿಂದ ಪ್ರಭಾವಿತರಾದ ಬಿ. ಎಂ. ಶ್ರೀ. ಅವರು ತಮ್ಮ ವಿದ್ಯಾರ್ಥಿಗಳಿಗೆ ಪ್ರಾಚೀನ ತಮಿಳು ಕಾವ್ಯಗಳನ್ನು ಓದಿ ವಿವರಿಸುತ್ತಿದ್ದರಂತೆ. ಅವರ 'ಸಿರಿಗನ್ನಡಂ ಬಾಳ್ಗೆ, ಗೆಲ್ಗೆ' ಎಂಬ…
ಲೇಖಕರು: chandrakanthkg
ವಿಧ: ಚರ್ಚೆಯ ವಿಷಯ
May 05, 2006
ಸಂಪದ ನಿರ್ವಾಹಣ ಸಮೂಹಕ್ಕೆ ವಂದನೆಗಳು. ಸಂಪದದ ಹೊಸ ವಿನ್ಯಾಸ ಚೆನ್ನಾಗಿದೆ, ಶುಭಾಷಯಗಳು!!. ಆದರೆ ಈ ವಿನ್ಯಾಸ ಸಧ್ಯಕ್ಕೆ ಅತ್ಯಂತ ಜನಪ್ರಿಯ ಜಾಲದರ್ಶಕವೆಂದೆನಿಸಿಕೊಂಡಿರುವ ಮೈಕ್ರೋಸಾಫ್ಟ್ ಇಂಟರ್‌ನೆಟ್ ಎಕ್ಸ್‌ಪ್ಲೋರರ್‌ನಲ್ಲಿ ಸರಿಯಾಗಿ ಮೂಡಿ ಬರುತ್ತಿಲ್ಲ. ಸಂಪದದ ಹೊಸ ಆವೃತ್ತಿ ಇನ್ನೂ ನಿರ್ಮಾಣ ಹಂತದಲ್ಲಿರುವುದು ನನಗೆ ತಿಳಿದಿದೆ ಆದರೂ ಈ ವಿಷಯ ನಿಮ್ಮ ಗಮನಕ್ಕೆ ತರುವುದು ಸೂಕ್ತವೆಂದೆನಿಸಿತು. ಸಧ್ಯದಲ್ಲಿಯೆ ಈ ಬಗ್ಗೆ ಕ್ರಮ ಕೈಗೊಳ್ಳುವಿರೆಂದು ಆಶಿಸುತ್ತೇನೆ. ಧನ್ಯವಾದಗಳು ಚಂದ್ರಕಾಂತ್
ಲೇಖಕರು: hpn
ವಿಧ: ಬ್ಲಾಗ್ ಬರಹ
May 05, 2006
ಈಗ ಬೆಂಗಳೂರು ಬೇಸಿಗೆ = ಶಿವಮೊಗ್ಗ, ಮೈಸೂರು ಬೇಸಿಗೆ! ಬೆಂಗಳೂರಿನಲ್ಲಿ ಬೇಸಿಗೆಯೇ ಇರುತ್ತಿರಲಿಲ್ಲವಂತೆ! ಶಿವಮೊಗ್ಗಕ್ಕೆ ಬರುತ್ತಿದ್ದ ನಮ್ಮ cousinಉ ಯಾವಾಗಲೂ ಬೆಂಗಳೂರಿನ ಗುಣಗಾನ ಮಾಡುತ್ತಿದ್ದ. ಆದರೆ ನಾವುಗಳು ಬೆಂಗಳೂರು ಸೇರುವಷ್ಟರಲ್ಲಿ ಬೇಸಿಗೆಯಲ್ಲಿ ಬೆಂದು ಹೋಗುವಷ್ಟು ಬಿಸಿಲು ಬೆಂಗಳೂರಿನಲ್ಲಿಯೂ ಇತ್ತು. ಪಕ್ಕದ ಆಂಧ್ರದ ಕಡೆಗೆ ಇರುವ ಕೆಲವು ಬಡಾವಣೆಗಳು, ಏರ್ಪೋರ್ಟ್ ರೋಡು ಕಡೆ ಈಗಲೂ ಬಿಸಿಲು ಜೋರಾದರೆ ಕಾಲಿಡಲೂ ಕಷ್ಟವಾಗುವ ಹಾಗಿವೆ. ಜಯನಗರ, ಜೆ ಪಿ ನಗರ ಕೊನೆಗೆ ಮಲ್ಲೇಶ್ವರದ…
ಲೇಖಕರು: tvsrinivas41
ವಿಧ: ಬ್ಲಾಗ್ ಬರಹ
May 04, 2006
ಕೆಲಸ ಮಾಡದೇ ದುಡಿಮೆ ಇಲ್ಲ. ದುಡಿಮೆ ಇಲ್ಲದೇ ಬಾಳಿಲ್ಲ. ದೈಹಿಕವಾಗಿ ಕೆಲಸ ಮಾಡಿ ದುಡಿಯುವವರೂ ಇದ್ದಾರೆ ಮತ್ತು ಮಾನಸಿಕವಾಗಿ ಕೆಲಸ ಮಾಡಿ ದುಡಿಯುವವರು ಇದ್ದಾರೆ. ದೈಹಿಕವಾಗಿ ಕೆಲಸ ಮಾಡುವವರನ್ನು ಸಾಮಾನ್ಯ ಭಾಷೆಯಲ್ಲಿ ಕೂಲಿಗಳೆಂದು ಕರೆಯುವುದು ವಾಡಿಕೆ. ಅವರ ಕೆಲಸ ನಿರ್ವಹಣೆಯಲ್ಲಿ ಬುದ್ಧಿಯ ಉಪಯುಕ್ತತೆ ಅಷ್ಟಾಗಿ ಬೇಕಿಲ್ಲ. ಆದರೆ ಮಾನಸಿಕವಾಗಿ ದುಡಿಯುವವರಿಗೆ ಬುದ್ಧಿಯ ಉಪಯೋಗವೇ ಪ್ರಧಾನವಾದದ್ದು. ತಂತ್ರಾಂಶ ಅಭಿಯಂತರ ಕೆಲಸವು ಪೂರ್ತಿಯಾಗಿ ಬುದ್ಧಿ ಶಕ್ತಿ ಉಪಯೋಗದಿಂದಲೇ ಆಗುವುದು…
ಲೇಖಕರು: ismail
ವಿಧ: Basic page
May 03, 2006
ಡಾ.ಯು.ಆರ್. ಅನಂತಮೂರ್ತಿಯವರ ಇತ್ತೀಚಿನ ಬರೆಹಗಳಿರುವ ಬ್ಲಾಗ್ ಋಜುವಾತು ಈಗ ಅಂತರಜಾಲದಲ್ಲಿ ಲಭ್ಯವಿವೆ. ಇಲ್ಲಿರುವ ಲೇಖನಗಳು ಅವರು ಪ್ರತೀ ವಾರ ಉದಯವಾಣಿ ಪತ್ರಿಕೆಯಲ್ಲಿ ಬರೆಯುತ್ತಿರುವ ಅಂಕಣ ಬರೆಹಗಳು. ಈ ಬರೆಹಗಳಿಗೆ ಸಂಪದ ಸದಸ್ಯರು ಸಂಪದದಲ್ಲಿ ಬಳಸುವ ಯೂಸರ್ ಐಡಿ ಮತ್ತು ಪಾಸ್ ವರ್ಡ್ ಗಳನ್ನೇ ಬಳಸಿ ಪ್ರತಿಕ್ರಿಯಿಸಬಹುದು. ಇದಕ್ಕಾಗಿ ಮತ್ತೊಮ್ಮೆ ನೋಂದಾಯಿಸಿಕೊಳ್ಳುವ ಅಗತ್ಯವಿಲ್ಲ. ರಾಜಕಾರಣದಿಂದ ಆರಂಭಿಸಿ ಸಾಹಿತ್ಯದವರೆಗೆ ವಿವಿಧ ವಿಷಯಗಳಿಗೆ ಕನ್ನಡದ ಪ್ರಮುಖ ಲೇಖಕರೊಬ್ಬರ ಸ್ಪಂದನೆ ಈ…
ಲೇಖಕರು: ರಘುನಂದನ
ವಿಧ: ಬ್ಲಾಗ್ ಬರಹ
May 03, 2006
ಹೊಸ ಮುಗುಳ್ನಗೆಯೊಂದಿಗೆ ಬಂದಿರುವ ಸಂಪದ ಚೆನ್ನಾಗಿದೆ. ಸಂಪದದ ಮೊದಲ ಆವೃತ್ತಿಗೆ ನನ್ನ ಮನಸ್ಸು ಹೊಂದಿಕೊಂಡುಬಿಟ್ಟಿದೆಯಾದ್ದರಿಂದ ಸ್ವಲ್ಪ ಕಷ್ಟವೆನ್ನಿಸಿತು. ಆದರೂ ಪರ್ವಾಗಿಲ್ಲ. ಹೊಸ ಆವೃತ್ತಿ ಆಕರ್ಷಕವಾಗಿ ಕಣ್ಣಿಗೆ ತಂಪಾಗಿ ಕಾಣುತ್ತಿದೆ. ಕನ್ನಡದ ಕೈಂಕರ್ಯ ಇನ್ನೂ ಹೆಚ್ಚು ಬಲಯುತವಾಗಿ ಮುಂದುವರೆಯಲಿ. ನಾನು ಒಬ್ಬ ವೃತ್ತಿಪರ ಚಿತ್ರವಿನ್ಯಾಸಕಾರ. ನೀವು ಮಾಡುತ್ತಿರುವ ಭುವನೇಶ್ವರಿಯ ಸೇವೆಯಲ್ಲಿ ಪಾಲ್ಗೊಳ್ಳಲು ನನಗೇದರೂ ಅವಕಾಶವಿದೆಯೇ? ಎನಗಿಂತ ಕಿರಿಯರಿಲ್ಲ ರಘುನಂದನ
ಲೇಖಕರು: ನಿರ್ವಹಣೆ
ವಿಧ: Basic page
April 26, 2006
ಈ ಪುಟವನ್ನು ೩, ಮೇ, ೨೦೧೭ ರಂತೆ ಆರ್ಕೈವ್ ಮಾಡಲಾಗಿದೆ. ಈ ಪುಟದ ಹೊಸ ಆವೃತ್ತಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.    ಗೆಳೆಯರೆ, ಸಂಪದದಲ್ಲಿ ಬರೆಯುವಾಗ ಕೆಳಗಿನ ಕೆಲವು ಸೂಚನೆಗಳನ್ನು ಅವಶ್ಯವಾಗಿ ಗಮನದಲ್ಲಿಡಿ. ಕನ್ನಡದಲ್ಲಿ ಬರೆಯಿರಿ - (ಯೂನಿಕೋಡ್ ಬಳಸಿ ಕನ್ನಡ ಲಿಪಿಯಲ್ಲಿ ಬರೆಯಿರಿ). ಲೇಖನಗಳಲ್ಲಿ ಸಂವಹನ ಮತ್ತು ವ್ಯಾಕರಣಗಳೆರಡನ್ನೂ ಸಾಧ್ಯವಾದಷ್ಟು ಗಂಭೀರವಾಗಿ ಪರಿಗಣಿಸಿ ಬರೆಯಿರಿ. ನಿಮ್ಮ ಬರಹ ಅಥವಾ ಪ್ರತಿಕ್ರಿಯೆಗಳು ಹೊಸ ಸಂವಾದವನ್ನು ತೆರೆಯುವಂತಿರುವುದು ಉತ್ತಮ. ಹಾಗೆಂದು…
ಲೇಖಕರು: shreekant.mishrikoti
ವಿಧ: ಚರ್ಚೆಯ ವಿಷಯ
April 26, 2006
ಬೆಳ್ದಿಂಗಳು ಮತ್ತು ಕರ್ದಿಂಗಳು ನನಗೆ ಗೊತ್ತಿರ್ಲಿಲ್ಲ ; ನಿಮಗೆ ? ಬೆಳದಿಂಗಳು ಶುಕ್ಲಪಕ್ಷಕ್ಕೆ ಕನ್ನಡ ಪದ ; ಕರ್ದಿಂಗಳು ಕೃಷ್ಣಪಕ್ಷಕ್ಕೆ ! ಗ್ರಾಮೀಣ ಪ್ರದೇಶಗಳಲ್ಲಿ ಅಲ್ಲಲ್ಲಿ ಕರ್ದಿಂಗಳು ಪ್ರಯೋಗ ಇದೆಯಂತೆ! ಬೆಳದಿಂಗಳು ಚಂದ್ರನ ಬೆಳಕಾಗಿ ಅರ್ಥಾಂತರ ಹೊಂದಿ ಕರ್ದಿಂಗಳು ಮಾಯವಾಗಿದೆಯಂತೆ!
ಲೇಖಕರು: shreekant.mishrikoti
ವಿಧ: Basic page
April 25, 2006
ಅಮೇರಿಕದ ಅಧ್ಯಕ್ಷ ಅಬ್ರಹಾಮ್ ಲಿಂಕನ್ನನು ತನ್ನ ಮಗನ ಅಧ್ಯಾಪಕರಿಗೆ ಬರೆದ ಪತ್ರದ ಕೆಲವು ಭಾಗ. ಎಲ್ಲ ಮನುಷ್ಯರೂ ನೀತಿವಂತರಲ್ಲ ಮತ್ತು ಸತ್ಯಾಚರಣೆ ಉಳ್ಳವರಲ್ಲ ಎಂದು ಅವನು ಕಲಿಯಬೇಕು . ಆದರೆ ಪ್ರತಿಯೊಬ್ಬ ದುಷ್ಟನಿಗೂ ಪ್ರತಿಯಾಗಿ ಗುಣಶಾಲಿ ನಾಯಕನಿರುತ್ತಾನೆ , ಪ್ರತಿಯೊಬ್ಬ ಸ್ವಾರ್ಥಿ ರಾಜಕಾರಣಿಗೂ ಪ್ರತಿಯಾಗಿ ಆದರ್ಶಗಳಿಗೆ ತನ್ನನ್ನು ಸಮರ್ಪಿಸಿಕೊಂಡ ಜನನಾಯಕನೊಬ್ಬನಿರುತ್ತಾನೆ ಎಂಬುದನ್ನು ಅವನಿಗೆ ಕಲಿಸಿ. ಶತ್ರುಗಳಿರುವಂತೆಯೇ ಮಿತ್ರರೂ ಇರುತ್ತಾರೆ ಎಂಬುದನ್ನು ಅವನಿಗೆ ಕಲಿಸಿ .…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
April 25, 2006
ಈ ಸಲದ ತರಂಗ ಯುಗಾದಿ (೨೦೦೬) ವಿಶೇಷಾಂಕದಲ್ಲಿ 'ಆರ್ಯ'ರವರು ಬರೆದ 'ಭಾಷೆ, ಧರ್ಮ, ದೇಶ ಮುಂತಾದ ಗಡಿಗಳನ್ನು ನಯಗೊಳಿಸಿದ' ಒಂದು ಕಥೆ ಇದೆ. ಚೆನ್ನಾಗಿ ಓದಿಸಿಕೊಂಡೂ ಹೋಗುತ್ತದೆ. ಕ್ರಿಸ್ಟಲ್ ರೀಡಿಂಗ್ , ಟಾರಟ್ ಕಾರ್ಡ್ , ಕಾಲಗಣನೆ ಕುರಿತ ಲೇಖನಗಳು ಇಲ್ಲಿವೆ. ಮುಖ್ಯವಾಗಿ ಕರಾವಳಿ ಕರ್ನಾಟಕದ ಜಿಲ್ಲೆಗಳಲ್ಲಿನ ಶಿಕ್ಷಣ , ವೈದ್ಯಕೀಯ , ಕೈಗಾರಿಕೋದ್ಯಮ , ಪ್ರವಾಸೋದ್ಯಮ, ಬ್ಯಾಂಕಿಂಗ್ ರಂಗಗಳಲ್ಲಿನ ಅದ್ಭುತ ಸಾಧನೆಗಳ ಬಗ್ಗೆ ಸ್ವಲ್ಪ ಹೆಚ್ಚೇ ಅನಿಸುವಷ್ಟು ( ೧೦೦ ಪುಟ !!) ಇದೆ. ಸೆಲ್…