ವಿಧ: ಬ್ಲಾಗ್ ಬರಹ
April 12, 2006
ತತ್ವಜ್ಞಾನಿಯೊಬ್ಬ ಬಡತನದಲ್ಲಿದ್ದ. ಒಂದು ದಿನ ಬರೀ ರೊಟ್ಟಿಯನ್ನು ತಿನ್ನುತ್ತಿರುವಾಗ ಅವನ ಗೆಳೆಯ ಅಲ್ಲಿಗೆ ಬಂದು ಅದನ್ನು ನೋಡಿ ' ನೀನು ರಾಜನನ್ನು ಸ್ವಲ್ಪ ಮೆಚ್ಚಿಸುವದನ್ನು ಕಲಿತಿದ್ದರೆ ಬರೀ ರೊಟ್ಟಿಯನ್ನು ತಿಂದು ಬದುಕುವ ಪರಿಸ್ಥಿತಿ ಬರುತ್ತಿದ್ದಿಲ್ಲ ' ಎಂದ .
ಅದಕ್ಕೆ ಪ್ರತಿಯಾಗಿ ತತ್ವಜ್ಞಾನಿ ಹೇಳಿದ - ' ನೀನು ಬರೀ ರೊಟ್ಟಿ ತಿಂದು ಬದುಕುವದನ್ನು ಕಲಿತಿದ್ದಿದ್ದರೆ ರಾಜನನ್ನು ಮೆಚ್ಚಿಸುವ ಪರಿಸ್ಥಿತಿ ಬರುತ್ತಿದ್ದಿಲ್ಲ '
ವಿಧ: Basic page
April 12, 2006
ಡಾ. ರಾಜಕುಮಾರ್. ಒಳ್ಳೆಯ ನಟ, ಹಾಗೂ ಗಾಯಕರೂ ಕೂಡ ! ಮುಂಬೈ,12, ಏಪ್ರಿಲ್, ೨೦೦೬
ಅವರ ಹಲವಾರು ಚಿತ್ರಗಳನ್ನು ನಾನು ನೊಡಿದ್ದೇನೆ. 'ಗಂಧದ ಗುಡಿ' ನನ್ನ ಪ್ರಿಯವಾದ ಚಿತ್ರಗಳಲ್ಲೊಂದು ! ಅವರು ಹೇಳಿದ 'ಯಾರೇ ಕೂಗಾಡಲೀ' ಹಾಡೂ, ಬಹಳ ಇಷ್ಟ. ಅವರ ಹಲವಾರು ಗೀತೆಗಳ 'ಕ್ಯಾಸೆಟ್ ಸುರಳಿಗಳು' ನನ್ನಬಳಿ ಇವೆ.
ಅವರು ಬಹಳ ಹಿಂದೆ, ಮುಂಬೈಗೆ ಬಂದಿದ್ದಾಗ, 'ಕರ್ನಾಟಕ ಸಂಘ,' ಮಾಹೀಮ್, ಅವರು 'ರಾಜ್,'ಅವರಿಗೆ ಅಭಿನಂದನೆ ಸಲ್ಲಿಸಲು ಆಯೋಜಿಸಿದ್ದ ಸಮಾರಂಭದಲ್ಲಿ ಸ್ಟೇಜಿನಮೇಲೆ ಭಾವ ಪರವಶರಾಗಿ…
ವಿಧ: ಚರ್ಚೆಯ ವಿಷಯ
April 12, 2006
ಇದೀಗ ಬಂದ ಸುದ್ದಿ.
ವರನಟ ಡಾ| ರಾಜಕುಮಾರ್ ಹೃದಯಾಘಾತದಿಂದ ಎಮ್.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ೨.೦೦ ಗಂ ನಿದನರಾಗಿದ್ದಾರೆ
ವಿಧ: ಚರ್ಚೆಯ ವಿಷಯ
April 12, 2006
ನಾನು ದೀಪಕ್ ಧನಂಜಯ .... ಸಹ-ಸದಸ್ಯರಲ್ಲಿ ನನ್ನದೊಂದು ಕೋರಿಕೆ... ಏನಂದರೆ... ನನ್ಗೆ ಕನ್ನಡದಲ್ಲಿ ಲೇಖನಗಳನ್ನು ಬರೆಯುವ ಆಸಕ್ತಿ ಇದೆ.. ಅದ್ರೆ.. ನಾನು ಕನ್ನಡದಲ್ಲಿ ಬರೆದು 6 ವರ್ಷಗಳಾಗಿವೆ.. ಕನ್ನಡ ಚೆನ್ನಾಗಿ ಓದುತ್ತೇನೆ.. ಹಾಗು ಬಹಳ ವಿಷಯಗಳ ಬಗ್ಗೆ ಲೇಖನ ಬರೆಯಬೆಕಂಬ ಅಸಕ್ತಿ.. ಆದ್ದರಿಂದ.. ನನ್ನ ಲೇಖನಗಳಲ್ಲಿ.. ಏನಾದರು ತಪ್ಪು ಇದ್ರೆ.. ನನ್ನನ್ನು ಟೀಕಿಸದೆ.. ಸರಿಪಡಿಸಿಕೊಳೋದಕ್ಕೆ ಸಹಾಯ ಮಾಡಿ ಎಂದು ವಿನಮ್ರತೆಯಿಂದ ವಿನಂತಿಸಿಕೋಳುತ್ತೇನೆ... ದೀಪಕ್
ವಿಧ: Basic page
April 12, 2006
ಒಬ್ಬರಿಗೊಬ್ಬರು ಚಾಚುವವರು ಹಸ್ತ ಸ್ನೇಹಕೆ
ಅನುಭವ ವೇದ್ಯವಿದು ಇ-ನೆಂಟಸ್ಥಿಕೆ
ಮೊದ ಮೊದಲು ದೊಡ್ಡಸ್ತಿಕೆಯ ತೋರಿಕೆ
ಹಿಂದೆಯೇ ಕರಗಿ ಹರಿಯುವುದು ಹೃದಯವಂತಿಕೆ
ಕೇಳಿ ತಿಳಿಯದ ನೋಡಿ ಅರಿಯದ
ಯಾರದೋ ವಿಷಯಕೆ ಮೂಗು ತೂರಿಸಿ
ಮನ ಮುದುಡಿ ಮೂಲೆ ಸೇರಿದವರೂ ಉಂಟು
ಜೀವನ ಅರಿವನು ತೋರಿಸುವವರೂ ಇಲ್ಲುಂಟು
ಸುಲಭದಿ ಖರ್ಚಿಲ್ಲದ ಲಿಂಗ ಬದಲಾವಣೆ
ಹೆಸರ ನೋಡಿ ಮನದಲಿ ಏನೇನೋ ಕಲ್ಪನೆ
ನೈಜವರಿಯಲು ಮನದಲಿ ಬೇಗೆ, ನಾಲಗೆಯಲಿ ಬೈಗುಳ
ಏನೂ ಮಾಡಲಾಗದಾಗ ಸುರಿವುದು ಕಣ್ಣಿನಲಿ ಬಳಬಳ
ಇಲ್ಲಿದೆ ಸಂಗಾತಿಗಳನು ಸೃಷ್ಟಿಸುವ…
ವಿಧ: Basic page
April 12, 2006
ಎನ್. ಮೂರ್ತಿರಾಯರು- ದೇವರ ಬಗ್ಗೆ: 103 ವರ್ಷಗಳ ಸಂಮ್ರುಧ್ಧ ಜೀವನದಲ್ಲಿ ಅವರ ನಿಲವುಗಳು ಅತಿ ಸ್ಪಸ್ಟವಾದವುಗಳು. ಅವರ ಸಮವಯಸ್ಕರಿಗೆ ಇವು ಪ್ರಶ್ನೆಗಳಲ್ಲದೆ ಮತ್ತೇನು ? ಮೂರ್ತಿರಾಯರು ನಂಬಿದ್ದು 'ಮಾನವೀಯತೆಯನ್ನು. ಅವರು ಕೊಟ್ಟ ಸಾಹಿತ್ಯ ಹಾಗೂ ಚಿಂತನೆಗಳು ಅನನ್ಯ ! 'ಶತಮಾನದ ಅಸಾಧಾರಣ ವ್ಯಕ್ತಿಗಳ' ಪಂಕ್ತಿಗೆ ಅವರು ಸೇರುತ್ತಾರೆ ! 'ದೇವರನ್ನು ನಂಬುವುದಿಲ್ಲ' ಎಂದು ನಾನೇನೂ ಪಣ ತೊಟ್ಟಿಲ್ಲ. ನನ್ನ ಅಪನಂಬಿಕೆ ಪ್ರಯತ್ನ ಪೂರ್ವಕವಾಗಿ ಬರಮಾಡಿಕೊಂಡದ್ದಲ್ಲ. ನಂಬಿಕೆ ಬರಲೊಲ್ಲದು -…
ವಿಧ: Basic page
April 12, 2006
ಎನ್. ಮೂರ್ತಿರಾಯರು- ದೇವರ ಬಗ್ಗೆ: 103 ವರ್ಷಗಳ ಸಂಮ್ರುಧ್ಧ ಜೀವನದಲ್ಲಿ ಅವರ ನಿಲವುಗಳು ಅತಿ ಸ್ಪಸ್ಟವಾದವುಗಳು. ಅವರ ಸಮವಯಸ್ಕರಿಗೆ ಇವು ಪ್ರಶ್ನೆಗಳಲ್ಲದೆ ಮತ್ತೇನು ? ಮೂರ್ತಿರಾಯರು ನಂಬಿದ್ದು 'ಮಾನವೀಯತೆಯನ್ನು. ಅವರು ಕೊಟ್ಟ ಸಾಹಿತ್ಯ ಹಾಗೂ ಚಿಂತನೆಗಳು ಅನನ್ಯ ! 'ಶತಮಾನದ ಅಸಾಧಾರಣ ವ್ಯಕ್ತಿಗಳ' ಪಂಕ್ತಿಗೆ ಅವರು ಸೇರುತ್ತಾರೆ ! 'ದೇವರನ್ನು ನಂಬುವುದಿಲ್ಲ' ಎಂದು ನಾನೇನೂ ಪಣ ತೊಟ್ಟಿಲ್ಲ. ನನ್ನ ಅಪನಂಬಿಕೆ ಪ್ರಯತ್ನ ಪೂರ್ವಕವಾಗಿ ಬರಮಾಡಿಕೊಂಡದ್ದಲ್ಲ. ನಂಬಿಕೆ ಬರಲೊಲ್ಲದು -…
ವಿಧ: ಬ್ಲಾಗ್ ಬರಹ
April 10, 2006
ಸಾಮಾನ್ಯವಾಗಿ ಹಾಸ್ಯ ವಿಶೇಷಾಂಕ ಎಂದರೆ ಪ್ರಯತ್ನಪೂರ್ವಕವಾಗಿ ಹೊಸೆದ ಹಾಸ್ಯದ ಲೇಖನಗಳು ಇಉತ್ತವೆ. ಆದರು ಒಮ್ಮೊಮ್ಮೆ ಅತಿ ಉತ್ತಮ ಲೇಖನಗಳೂ ಇರುತ್ತವೆ.
ಈ ಸಂಚಿಕೆಯಲ್ಲಿ ಹಾಸ್ಯಾಸ್ಪದವಾಗುತ್ತಿರುವ ಹಾಸ್ಯೋತ್ಸವ / ನಗೆಹಬ್ಬಗಳ ಬಗ್ಗೆ ಗಂಭೀರ ಲೇಖನಗಳಿವೆ. ಬೀchiಯವರ ಆತ್ಮಚರಿತ್ರೆ - ಭಯಾಗ್ರಫಿ ಬಗ್ಗೆ ಲೇಖನ , ಪೋಗೋ ಟೀವಿ ವಾಹಿನಿಯಲ್ಲಿ ನೀವು ನೋಡಿರಬಹುದಾದ ಮಿಸ್ಟರ್ ಬೀನ್ ಕುರಿತ ಲೇಖನ ಇವೆ. ಹಾಸ್ಯದ ಕ್ಯಾಪ್ ಧರಿಸಿ ದೇವೇಗೌಡ, ಜಯಲಲಿತ ಮುಂತಾದವರಾಗಿ ತಮ್ಮನ್ನು ಕಲ್ಪಿಸಿಕೊಂಡು…
ವಿಧ: Basic page
April 10, 2006
ನಿಮ್ಮ ಮೊಬೈಲ್ನಲ್ಲಿ ಅಥವಾ ಜೇಬಿನಲ್ಲಿ ಕರೆ ಮಾಡುವಷ್ಟು ದುಡ್ಡಿಲ್ಲದಿದ್ದರೆ `ಕಾಲ್ ಮಿ' ಎಂದು ಎಸ್ಎಂಎಸ್ ಮಾಡಿ ಅವರಿಂದ ಕರೆ ಬಂದಾಗ ಗಂಟೆಗಟ್ಟಲೆ ಮಾತಾಡಬಹುದು. ಕ್ಲಾಸಿನಲ್ಲಿ ಬೋರ್ ಹೊಡೆಸುವ ಲೆಕ್ಚರರ್ ಇನ್ನಷ್ಟು ಬೋರ್ ಹೊಡೆಸುವ ಲೆಕ್ಚರ್ ಕೊಡುತ್ತಿದ್ದರೆ `ಬೋರೇಗೌಡನ ಕ್ಲಾಸು ಬೋರೂ ಬೋರೂ' ಎಂದು ಯಾರಿಗಾದರೂ ಎಸ್ಎಂಎಸ್ ಮಾಡಿ ನಿದ್ದೆಯಿಂದ ತಪ್ಪಿಸಿಕೊಳ್ಳಬಹುದು. ರಾಜಕಾರಣಿಯೊಬ್ಬನ ನೀರಸ ಭಾಷಣ ಕೇಳಬೇಕಾದ ಪತ್ರಕರ್ತನೊಬ್ಬ ಎಸ್ಎಂಎಸ್ಗೆ ಮೊರೆಹೋಗಿ ಇರವು ಮರೆಯಬಹುದು.…
ವಿಧ: ಬ್ಲಾಗ್ ಬರಹ
April 09, 2006
ಮೊನ್ನೆ ಎಲ್ರೂ ರಸವತ್ತಾಗಿ, ಖುಷಿಯಾಗುವಂತೆ ಸ್ಮಿತಪೂರ್ವಭಾಷಿಯ ಗುಣಗಾನಗಳನ್ನು ಮಾಡುತ್ತಿರುವಾಗ, ಐತಾಳರು ಪೋಸ್ಟ್ ಮಾಡಿದ ಕಾಮೆಂಟಿನಲ್ಲಿ ಅವರಿಗೆ ಗೊತ್ತಿದೆಯೋ ಇಲ್ವೋ ಆದ್ರೆ ನನಗೆ ಅನೇಕ ಸ್ವಾರಸ್ಯಗಳು ಗೋಚರವಾದವು. ಅಲ್ಲಿಯೇ ಈ ರಿಪ್ಲೈ ಕೊಡಬಹುದಿತ್ತು ಆದರೆ ಎಲ್ಲರ ಕಣ್ಣಿಗೂ ಈ ಸ್ವಾರಸ್ಯಗಳು ಕಣ್ಣಿಗೆ ಬೀಳದೆ ಹೋಗಬಹುದು ಅನ್ನಿಸಿತು ಅದಕ್ಕೆ ಸೆಪರೇಟಾಗಿ ಬ್ಲಾಗ್ ಮಾಡಿದ್ದೀನಿ. ಸ್ವಲ್ಪ ದೀರ್ಘ ಅನ್ನಿಸಿದ್ರೂ ಪರವಾಗಿಲ್ಲ ಓದಿರಿ. ಇದನ್ನು ನಾನು ಐತಾಳರ ಮೇಲೆ ಆಗ್ರಹದಿಂದ ಬರೆಯುತ್ತಿದ್ದೇನೆ…