ಎಲ್ಲ ಪುಟಗಳು

ಲೇಖಕರು: olnswamy
ವಿಧ: Basic page
August 09, 2006
ಸಂಪದದ ಗೆಳೆಯರೊಬ್ಬರು ಕನ್ನಡಂಗಳ್ ಅನ್ನುವ ಮಾತು ಕವಿರಾಜಮಾರ್ಗದಲ್ಲಿದೆಯೇ ಎಂದು ಸಂದೇಹ ವ್ಯಕ್ತಪಡಿಸಿದ್ದರು. ಆ ಮಾತು ಬರುವ ಜಾಗ ಆಶ್ವಾಸ ೧, ಪದ್ಯ ೪೬. "ದೋಸಂ ಇನಿತು ಎಂದು ಬಗೆದು ಉದ್ಭಾಸಿಸಿ ತರಿಸಂದು ಕನ್ನಡಂಗಳೊಳ್ ಎಂದುಂ ವಾಸುಗಿಯುಂ ಅರಿಯಲಾರದೆ ಬೇಸರಿಸುಗುಂ ದೇಸಿ ಬೇರೆಬೇರಪ್ಪುದರಿಂ" ಅರ್ಥ: "ದೇಸಿ ನುಡಿಗಳು ಬೇರೆ ಬೇರೆಯಾಗಿರುವುದರಿಂದ ಈ ಹಲವು ಕನ್ನಡಗಳಲ್ಲಿ ದೋಷಗಳು ಎಷ್ಟಿವೆ ಎನ್ನುವುದನ್ನು ನಿಶ್ಚಯಿಸಿ ಕಾಣಿಸಿ ಹೇಳಲು ಹಲವು ನಾಲಗೆಯುಳ್ಳ ವಾಸುಕಿಯೂ ಬೇಸರಿಸಿಯಾನು" ಇದು ಶ್ರೀ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
August 09, 2006
ಶುದ್ಧ ಕನ್ನಡ ವಿಭಾಗವಾದ ಧಾರವಾಡದಲ್ಲಿಯ ಕನ್ನಡ ಶಾಲಾ ನೇಮಕಗಳ ಪ್ರಕಟಣೆಗಳೂ ೧೮೬೬ರ ಸುಮಾರಿಗೆ ಮರಾಠಿಯಲ್ಲಿಯೇ ಹೊರಡುತ್ತಿದ್ದವು. ಉದಾಹರಣೆಗೆ : धारवाड जिल्ह्यातील सर्व स्कूल मास्तरांस दहाहून जासती मुलें दर एक वर्गात ...... ಅಷ್ಟೇ ಅಲ್ಲ ಬುಕ್ ಡಿಫೋಕ್ಕೆ ಬಂದ ಕನ್ನಡ ಪುಸ್ತಕಗಳ ಜಾಹೀರಾತೂ ಸಹ ಮರಾಠೀಯಲ್ಲಿಯೇ ಇರುತ್ತಿತ್ತು . ಖಾಲೀ ಲಿಹಿಲೇಲೀಂ ಕಾನಡೀ ಬುಕೇಂ ಬೆಳಗಾಂವ ಬ್ರ್ಯಾಂಚ ಬುಕ್ ಡಿಪೋಂತ ನವೀನ ಆಲೀ ಆಹೇತ ತೀ .. ಪುಸ್ತಕಾಂಚೆ ನಾವೇಂ ವೀರಭದ್ರಯ್ಯಾ ಪಂಡೀತ…
ಲೇಖಕರು: anilkumar
ವಿಧ: Basic page
August 08, 2006
ಜನ ಮಾತ್ರ ಒಬ್ಬರಿಗೊಬ್ಬರು ಬೆರೆಯುವ ಸ್ವಭಾವದವರಲ್ಲ. ಜಗಳವಾಡುತ್ತಾರೆಂದೇನಲ್ಲ. ಆದರೆ ಮದುವೆಯಾಗದವರು, ಒಬ್ಬರನ್ನೊಬ್ಬರು ತೊರೆದವರು ಎರಡೆರೆಡು ಮನೆಗಳನ್ನು ಹೊಂದಿರುತ್ತಾರಿಲ್ಲಿ. ವಿಚ್ಛೇದನ ಪಡೆದ ನಿರುದ್ಯೋಗಿಯೊಬ್ಬ ಒಂಟಿಯಾಗಿ ಬದುಕುತ್ತಿದ್ದ. ಆತನ ಮಾಜಿ ಹೆಂಡತಿ (ಪಾಟ್ನರ್!) ಅದೇ ನಗರದಲ್ಲಿ ಬದುಕಿದ್ದಳು. ವಯಸ್ಸಿಗೆ ಬಂದ ಇಬ್ಬರು ಮಕ್ಕಳೂ ಇದ್ದರು ಆತನಿಗೆ. ನೆರೆಹೊರೆಯವರಿದ್ದರು. ನಿರುದ್ಯೋಗಿಯಾದುದರಿಂದ, ಮತ್ತು ಫಿನ್ನಿಶ್ ಸಮಾಜ 'ವೆಲ್‌ಫೇರ್ ಸಮಾಜವಾದ್ದರಿಂದ' ಆತನಿಗೆ ತಿಂಗಳಿಗೆ…
ಲೇಖಕರು: ಭರದ್ವಾಜ
ವಿಧ: ಬ್ಲಾಗ್ ಬರಹ
August 08, 2006
ಸಾಯುವವರಲ್ಲ ನಾವು ಸಾಯಿಸುವವರು  ಜೀವನದಿ ಬೇಸತ್ತು ಕೊಲೆಗಡುಕರಾದವರು ಜನಗಣದಿ ನುಸುಳುತ್ತ ಮ೦ದಿಗಳ ಕೊ೦ದಿಹೆವು ಮರಣ ಶಾಸನವ ಬರೆದು 'ರಣ'ಭೂಮಿ ಮಾಡಿಹೆವು ಧಾರುಣಿಯ ದಾಹವನು ರಕ್ತದಲಿ ತಣಿಸಿಹೆವು ಸುಳಿಯಲಿಹ ಜನರತ್ತ ಸುಳಿಯದೇ ನಡೆಯುವೆವು ಬಾ೦ಬುಗಳನೆಸೆಯುತ್ತ ವೈಶಮ್ಯ ಬೆಸೆದಿಹೆವು ಶಾ೦ತ ಚಿ೦ತನೆಯಿ೦ದ ನಿಷ್ಕ್ರಾ೦ತರಾಗಿಹೆವು  ಸಾಯುವವರಲ್ಲ ನಾವು ಸಾಯಿಸುವವರು  ಪಾಪಗಳ ಮಾಡುತ್ತ ಚಿರಾಯುಗಳಾಗಿಹೆವು
ಲೇಖಕರು: olnswamy
ವಿಧ: Basic page
August 08, 2006
ಕೆಲವು ದಿನಗಳಿಂದ ಇಸ್ಮಾಯಿಲ್ ಅವರ ಬರಹಕ್ಕೆ ಪ್ರತಿಕ್ರಿಯೆಯಾಗಿ ಕುತೂಹಲಕರ ಚರ್ಚೆ ಬೆಳೆದಿರುವುದು ಗಮನಿಸಿದ್ದೇನೆ. ತುಳು ಮತ್ತು ಕನ್ನಡ ಸಂಬಂಧ ಕುರಿತು, ಲ ಳಗಳ ಬಳಕೆ ಕುರಿತು, ಅ ಹ ಗಳನ್ನು ಕುರಿತು, ಮತ್ತು ಕೆಲವು ರೂಪಗಳು ಬೇಡಾದ ಇತ್ಯಾದಿ ರೂಪುಗೊಂದಿರುವ ಕುರಿತು ಚರ್ಚೆ ನಡೆದಿದೆ. ನಾವೆಲ್ಲ ಗಮನಿಸಬೇಕಾದ ಕೆಲವು ಮೂಲ ಸಂಗತಿಗಳನ್ನು ಗಮನಿಸಬೇಕು ಅನ್ನಿಸಿದೆ. ೧. ಕನ್ನಡ ಒಂದೇ ಅಲ್ಲ ಅಸಂಖ್ಯಾತ ಕನ್ನಡಗಳಿವೆ: ಕನ್ನಡದ ಮೊದಲ ಕೃತಿ ಕವಿರಾಜ ಮಾರ್ಗದಲ್ಲಿ ಒಂದು ಮಾತಿದೆ. ಅಲ್ಲಿ ಕೃತಿಕಾರ "…
ಲೇಖಕರು: venkatesh
ವಿಧ: Basic page
August 07, 2006
ಅಗೋ 'ಕರೆಘಂಟೆ' ಹೊಡಿತಲ್ಲ. ರಾಮ್ ಜಿ, ಇರಬೇಕು. 'ಜೈರಾಮ್ ಜಿಕಿ', ಎಂದವನೆ ರಾಮ್ಜಿ, ಹಾಲಿನ ಪ್ಯಾಕೆಟ್ ಕೊಟ್ಟು ಹೋದ ! ಹೊರಗೆ ನೊಡಿದ್ರೆ ಮಳೆ, ಗಾಳಿ, ಎರಡ್ದಿನದಿಂದ ಒಂದೇಸಮನೆ ಮಳೆ ಸುರಿತಿದೆ.ಮುಂಬೈ ನ ಜೀವನ 'ಅಸ್ತ ವ್ಯಸ್ತ' ವಾಗಿದೆ. ಮಹಾರಾಷ್ಟ್ರದಲ್ಲಿ ಮಳೆಯಿಂದ ಸತ್ತವರು ಎಷ್ಟು ! ನೆರೆಯ ರಾಜ್ಯ, ಆಂಧ್ರದ ತೆಲಂಗಾಣ,ದಲ್ಲಿ ಮಳೆಯಿಂದ ಮರಣ ಹೊಂದಿದವರು, ನಮ್ಮ ಬೆಳಗಾಂ ಹತ್ತಿರ, ಒರಿಸ್ಸ, ದೆಹಲಿ, ರಾಜಸ್ಥಾನ, ಕಾಶ್ಮಿರದ ಮಂದಿ ಎಲ್ಲಾ ಮಳೆಯ ಪ್ರಕೊಪಕ್ಕೆ ಬಲಿಯಾದವರೆ ! ಆದರೆ ಇಲ್ಲಿ…
ಲೇಖಕರು: vijayaraghavan
ವಿಧ: Basic page
August 06, 2006
ಗೆಳೆಯ ಸತ್ಯನಾರಾಯಣರ ಹೊಸ ಕಾದಬರಿ ಕಾಲಜಿಂಕೆ ಪ್ರಕಟವಾಗಿದೆ. ಡಾ. ಯು. ಆರ್. ಅನಂತಮೂರ್ತಿ ಮುನ್ನುಡಿ ಬರೆದಿದ್ದಾರೆ. ಸತ್ಯನಾರಾಯಣ ತುಂಬ ಕಡಿಮೆ ಆದರೆ ತುಂಬಾ ಅಚ್ಚುಕಟ್ಟಾಗಿ ಬರೆಯುತ್ತಾರೆ. ಅವರ ಬರೆಹ ನಂಬುವುದು ಬರೆಹದಲ್ಲಿನ ಶಕ್ತಿಯನ್ನು ಮಾತ್ರ. ಅವರ ಪ್ರಬಂಧಗಳನ್ನ ಓದಿದ್ದರೆ, ಕಥೆಗಳನ್ನ ಓದಿದ್ದರೆ ನಿಮಗೆ ಇದು ಮನಸ್ಸಿಗೆ ಬರುತ್ತದೆ.ಆದ್ದರಿಂದಲೆ ಒಂದು ತರಹೆ ಅನ್‌ ಕಾಂಪ್ರಮೈಸಿಂಗ್ ಬರಹಗಾರ ಇವರು ಅಂತ ನನಗೆ ಅನ್ನಿಸಿದೆ. ಈ ಕಾದಂಬರಿಯಲ್ಲಿ ನಿಜ ಹೇಳಬೇಕೆಂದರೆ ಅನ್ನೋ ಒಂದು ಸಾಲುಒಂದು…
ಲೇಖಕರು: hpn
ವಿಧ: ಬ್ಲಾಗ್ ಬರಹ
August 06, 2006
ಹಿಂಬಾಗಿಲಲ್ಲಿ ದೊಡ್ಡದೊಂದು ಗುಂಪು ನೆರೆದಿತ್ತು. "ಅಂಕಲ್, ಗಣಪತಿ. ಆಂಟಿ, ಗಣಪತಿ" ಎನ್ನುತ್ತ ಕಾಣಿಕೆ ಡಬ್ಬವೊಂದನ್ನು ಹಿಡಿದು ಜೋರು ಗಲಾಟೆ ಮಾಡಿಕೊಂಡು ಓಡಾಡುತ್ತಿದ್ದ ಸಣ್ಣ ಹುಡುಗರ ಸೈನ್ಯವೊಂದು ಬಾಗಿಲನ್ನಡ್ಡಗಟ್ಟಿತ್ತು. ಅತ್ತಿಗೆ ಒಳ ಹೋಗಿ ಒಂದಷ್ಟು ಹಣ ತಂದು ಹುಡುಗರಲ್ಲಿ ಡಬ್ಬ ಹಿಡಿದಿದ್ದವನಿಗೆ ಕೊಟ್ಟರು. ಮುಂದಿದ್ದ ಸಣ್ಣ ಹುಡುಗನೊಬ್ಬ "ಆಂಟಿ, ಐವತ್ತು ಬೇಡ, ನೂರು ರೂಪಾಯಿ ಕೊಡಿ! ನಾವು ಇದೇ ರಸ್ತೇಲಿ ಇಡ್ತಿರೋದು... ಅಲ್ ನೋಡಿ - ಆ ಐರನ್ ಅಂಗಡಿ ಎದುರ್ಗೆ" ಎಂದು ಕೂಗಿದ. "…
ಲೇಖಕರು: muralihr
ವಿಧ: Basic page
August 06, 2006
ಯಲ್ಲಪ್ಪರೆಡ್ಡಿ --- ನಿಸರ್ಗ ಪ್ರೀತಿಯ ಪುತ್ಥಳಿ - ಪ್ರೊ !! ಸಾ.ಕೃ. ರಾಮಚ೦ದ್ರ ರಾವ್ (ನೆಲದ ಮಾತು -- ಯಲ್ಲಪ್ಪರೆಡ್ಡಿ ಅಭಿನ೦ದನ ಗ್ರ೦ಥದಿ೦ದ ಆಯ್ದ ಕೆಲವು ಮುತ್ತುಗಳು, ಸ೦ಪಾದಕರು ಶೂದ್ರ ಶ್ರೀನಿವಾಸ) ನಿಸರ್ಗ ಪ್ರೀತಿಯ ಪುತ್ಥಳಿ - ಪ್ರೊ !! ಸಾ.ಕೃ. ರಾಮಚ೦ದ್ರ ರಾವ್ ಭಾಗ ೧ ನನ್ನ ಮಾನ್ಯಮಿತ್ರರು , ಸಹೃದಯರೂ ಭಾವುಕರೂ ಪ್ರಾಮಾಣಿಕರೂ ಆದ ಯಲ್ಲಪ್ಪರೆಡ್ಡಿಯವರನ್ನುಕುರಿತು ಬರೆಯಲು ತೊಡಗಿದಾಗ, ಸವಿನೆನಪುಗಳ ಸರಮಾಲೆ ಹರವಾಗಿ ತೆರೆದು ಬಿಚ್ಚಿ ಮನಸ್ಸು ಅದನ್ನೇ ಮೆಲಕುಹಾಕುತ್ತ, ಸುಮ್ಮನೆ…
ಲೇಖಕರು: Kamalakar
ವಿಧ: ಬ್ಲಾಗ್ ಬರಹ
August 06, 2006
ಅಯೋಧ್ಯೆ ಎಂದರೆ ಈಗ ರಾಮ ನೆನಪಾಗುವುದು ದೂರವಾಗಿ, ಹಿಂದು-ಮುಸ್ಲಿಮ್ ಗಲಭೆಗಳಷ್ಟೇ ಮನಸ್ಸಿಗೆ ಬರುವ ದಿನಗಳಿವು. ಕೆಲವರ ಅಂಬೋಣವೆಂದರೆ ಅಯೋಧ್ಯೆ ಭಾರತದ ಅಸ್ಮಿತೆಗೆ ಕೇಂದ್ರ ಬಿಂದುವಾಗಿದೆ. ಇವೆಲ್ಲ ಎಷ್ಟು ವಿಪರೀತ ಎಂದು ನೋಡಿರಿ. ಹಾಗೊಮ್ಮೆ ಅಂದರೆ ಅದರರ್ಥ, ರಾಮಾಯಣ ಭಾರತದ ಕೇಂದ್ರ ಗ್ರಂಥ ಎಂದಂತೇ. ಇದನ್ನು ಭಾರತದ ಎಷ್ಟು ಜನ ಒಪ್ಪಿಕೊಂಡಾರು. ಹೀಗೆಲ್ಲ ಅಯೋಧ್ಯೆ ಬರೀ ಹಿಂದುಗಳದ್ದು, ಅಥವಾ ಬರೀ ಮುಸ್ಲಿಮರದ್ದು ಎಂದೆಲ್ಲ ವಾದಿಸುವುದು ಒಣರಗಳೆಯೇ ಸರಿ. ಅಯೋಧ್ಯೆ ಎಂಬ ಊರು ಕೆಲವು ಹಿಂದು…