ಪುಸ್ತಕ ಸಂಪದ

  • ಸುಮಾರು ಎರಡು ವಾರಗಳಿಂದ ಓದುತಿದ್ದ, ಕೇ ಎನ್ ಗಣೇಶಯ್ಯರವರ 'ಕರಿಸಿರಿಯಾನ' ಎನ್ನುವ ಪುಸ್ತಕವನ್ನು ಇಂದು ಓದಿ ಮುಗಿಸಿದೆ. ಇದೊಂದು ಐತಿಹಾಸಿಕ ಸುಂದರ ಕಾದಂಬರಿ.  ೧೫೬೫ರ ರಕ್ಕಸತಂಗಡಿ ಯುದ್ದದಲ್ಲಿ ವಿಜಯನಗರ ಸಾಮ್ರಾಜ್ಯದ ಅರಸರು ಸೋತ ನಂತರ, ಅಳಿಯ ರಾಮರಾಯನ ತಮ್ಮ ತಿರುಮಲನು ವಿಜಯನಗರ ಸಾಮ್ರಾಜ್ಯದ ಖಜಾನೆಯಲ್ಲಿದ್ದ ಸಂಪೂರ್ಣ ನಿಧಿಯನ್ನೆಲ್ಲ ಸುಮಾರು ೧೫೦೦ ಆನೆಗಳಲ್ಲಿ ಸಾಗಿಸುತ್ತಾನೆ. ಆ ನಿಧಿ ವಿಜಯನಗರವನ್ನು ಬಿಟ್ಟ ಮೇಲೆ ಎಲ್ಲಿ ಹೋಯಿತು? ತಿರುಪತಿ ಸೇರಿತೆ? ಅಥವಾ ವಿಜಯನಗರ ಸಾಮ್ರಾಜ್ಯದ ಎರಡನೆಯ ರಾಜಧನಿಯಾದ ಪೆನುಕೊಂಡವನ್ನು ಸೇರಿತೇ? ಅಥವಾ ಚಂದ್ರಗಿರಿಯನ್ನು ಸೇರಿತೇ? ಅಥವಾ ಯಾವುದೋ ಕಳ್ಳ ಕಾಕರರ ಪಾಲಾಯಿತೇ? ಅಥವಾ ವಿರೋಧಿಗಳ ಪಾಲಾಯಿತೇ? ತಿರುಪತಿ ಏಕೆ ಅಷ್ಟೊಂದು ಶ್ರೀಮಂತ ದೇವಸ್ಥಾನವಾಯಿತು? ವಿಜಯನಗರ ದೊರೆ ಕ್ರಷ್ಣದೇವರಾಯನ…

  • ಅವಳು ಎಲ್ಲ ಮಕ್ಕಳಂತೆ ಎಲ್ಲದರ ಬಗ್ಗೆ ಅಪಾರ ಕುತೂಹಲ ಮತ್ತು ಅಚ್ಚರಿ ತುಂಬಿಕೊಂಡ ಹುಡುಗಿ. ಅವಳು ಕುತೂಹಲ ತಡೆಯಲಾಗದೆ ಮಾಡುತ್ತಿದ್ದ ಕೆಲಸಗಳೇ ದೊಡ್ಡವರ ಲೋಕದಲ್ಲಿ ತುಂಟತನ ಎಂದು ಕರೆಸಿಕೊಳ್ಳುತ್ತಿದ್ದ ತರಲೆಗಳು. ಶಾಲೆಗೆ ಸೇರಿದ ಹೊಸದರಲ್ಲಿ ಆ ಶಾಲೆಯ ಡೆಸ್ಕ್‍ ಅವಳ ಇಂತಹ ಕುತೂಹಲ ಮತ್ತು ಮೆಚ್ಚುಗೆಗೆ ಕಾರಣವಾಯಿತು. ತೆಗೆದು ಮುಚ್ಚಬಹುದಾಗಿದ್ದ ಆ ಡೆಸ್ಕ್‍ ಅವಳ ಪ್ರೀತಿಯ ಆಟದ ವಸ್ತುವಾಯಿತು. ಅದೇ ಅವಳ ಟೀಚರ್‍ಗೆ ಕಿರಿಕಿರಿಯುಂಟುಮಾಡಿತು. ಇದು ಸಾಲದೆಂಬಂತೆ ಬೀದಿ ಹಾಡುಗಾರರ ಕಡೆಗಿನ ಇವಳ ಸೆಳೆತ ಕಿಟಕಿ ಬದಿಯಲ್ಲಿ ನಿಂತು ಅವರನ್ನು ನೋಡುವಂತೆ ಮಾಡುತ್ತಿತ್ತು, ತರಗತಿ ಸಾಕೆನಿಸಿದಾಗ ಕಿಟಕಿಯ ಹೊರಗೆ ನೋಡುತ್ತಾ ಮರದಲ್ಲಿ ಕೂತ ಗುಬ್ಬಚ್ಚಿಯೊಂದಿಗೆ ಮಾತಾಡುತ್ತಿದ್ದಳು. ಇಂತಹ ಅವಳ ವರ್ತನೆಗಳೇ ಕಾರಣವಾಗಿ ಶಾಲೆಯಿಂದ ಅವಳನ್ನು ಹೊರಗೆ…

  • ಸಿನೆಮಾ... ಸಿನೆಮಾ...ಸಿನೆಮಾ... ನಮ್ಮ ಬದುಕನ್ನು ವ್ಯಾಪಿಸಿರುವ ರೀತಿಯೇ ಅನನ್ಯ. ಸಿನೆಮಾ ಆಧುನಿಕ ಬದುಕಿನಲ್ಲಿ ಒಂದು ಧರ್ಮದ ಹಾಗೆ ಎನ್ನುವುದು ನಿಜವಲ್ಲವೆ. ಬದುಕಿನ ಹಲವು ರೀತಿ ರಿವಾಜುಗಳನ್ನು ಸಿನೆಮಾ ಪ್ರಭಾವಿಸುವ ರೀತಿ ಕುತೂಹಲಕಾರಿಯಾದದ್ದು. ಅದರಲ್ಲೂ ಸಣ್ಣ ವಯಸ್ಸಿನ ಬೆರಗು ಕಣ್ಣುಗಳ ಮೂಲಕ ನಮ್ಮೊಳಗೆ ಪ್ರವೇಶ ಪಡೆಯುವ ನಮ್ಮ ನೆಚ್ಚಿನ ತಾರೆಯರು ತಮ್ಮೆಲ್ಲ ಹಾವಭಾವ ನಡೆನುಡಿಗಳೊಂದಿಗೆ ನಮ್ಮ ಬದುಕಿನ ಹಲವು ವರ್ತನೆಗಳನ್ನು ಸೂಕ್ಷ್ಮವಾಗಿ ಪ್ರಭಾವಿಸುತ್ತಿರುತ್ತಾರೆ. ನಮ್ಮ ಹಾವಭಾವ, ಉಡುಪು, ಮಾತು, ವರ್ತನೆ ಇವುಗಳ ಮೇಲಿನ ಸಿನೆಮಾಗಳ ಪ್ರಭಾವ ಗುರುತಿಸುವಂತದ್ದು.

    ಜಯಂತ ಕಾಯ್ಕಿಣಿಯವರ ‘ಟೂರಿಂಗ್ ಟಾಕೀಸ್‍’ ಇಂತಹ ಸಿನೆಮಾದ ವಿವಿಧ ಆಯಾಮಗಳು ಹಾಗೂ ಅದರ ಪ್ರಭಾವಗಳನ್ನು ಗುರುತಿಸುವ ಲೇಖನಗಳ ಪುಸ್ತಕ. ಕಾಯ್ಕಿಣಿಯವರ…

  • ಬಹಳ ದಿನಗಳಿಂದ ಏನನ್ನು ಸರಿಯಾಗಿ ಓದಲಾಗುತ್ತಿರಲಿಲ್ಲಾ,ನಿನ್ನೆ ಹಟಕ್ಕೆ ಬಿದ್ದು ಎಸ್.ಎಲ್.ಭೈರಪ್ಪ ನವರ ಜಲಪಾತ ಕಾದಂಬರಿಯನ್ನು ಅರಗಿಸಿಕೊಂಡೆ.ಕಲೆಯ ಹುಟ್ಟು ಮತ್ತು ಉದ್ದೇಶ,ಲೈಂಗಿಕ ತೃಪ್ತಿ ಮತ್ತು ಜೀವನ ಸೃಷ್ಟಿಯ ಪೂರಕತೆ,ನಗರ ಮತ್ತು ಹಳ್ಳಿ ಜೀವನದ ತಾಕಲಾಟ ಜಲಪಾತದಲ್ಲಿ ಚರ್ಚಿತವಾದ ವಿಷಯಗಳು.ಚಿತ್ರಕಲೆ ಮತ್ತು ಶಾಸ್ತ್ರೀಯ ಸಂಗೀತದಿಂದ ಸಮಾನ ಅಂತರ ಕಾಯ್ದುಕೊಂಡಿರು ನನಗೆ ಕಾದಂಬರಿಯಲ್ಲಿನ ಕಲೆಯ ಒಳ-ಹೊರವು,ಕಲೆಯ ಉದ್ದೇಶ ಅಷ್ಟೋಂದು ರುಚಿಸುವುದಿಲ್ಲವಾದರು ಚಿತ್ರಕಲೆಯನ್ನು ನೋಡುವ ಬಗೆಯನ್ನು ,ಸಂಗೀತಾಭ್ಯಸದ ಕಷ್ಟವನ್ನರಿಯಲು ಜಲಪಾತ ಸಹಕಾರಿಯಾಗುತ್ತದೆ.

       ಕಾದಂಬರಿಯಲ್ಲಿ ಪ್ರಮುಖವಾಗಿ ಚರ್ಚಿತವಾದದ್ದು ಲೈಂಗಿಕ ತೃಪ್ತಿ ಮತ್ತು ಜೀವನ ಸೃಷ್ಟಿ ಒಂದಕ್ಕೊಂದು ಪೂರಕವೇ? ಅಥವಾ ಅವೆರಡನ್ನು ಬೇರೆ ಬೇರೇ ಪ್ರಕ್ರಿಯೆಗಳೆಂದು…

  •  

    “ಪ್ರತಿ ಮುಖದ ಹಿಂದೆ ಒಂದೊಂದು ಅಪ್ರತಿಮ ಲೋಕ,

    ಸ್ವಸಂಪೂರ್ಣ ಎಂದುಕೊಳ್ಳುತ್ತಲೇ ಒಂದನ್ನೊಂದು ಬಯಸಿ

    ಬೇಯುತ್ತಿರುವ ನಡುಗಡ್ಡೆಗಳೆ ಪ್ರತಿಯೊಂದು

    ಬದುಕಿಗೂ ಈ ಕರಿ ನೀರಲ್ಲಿ

    ಜನ್ಮಟಾಪು; ಜೈಲರನ ಮೇಲ್ವಿಚಾರಣೆಯಲ್ಲಿ ಆಗಾಗ

    ಅತ್ತಿತ್ತ ದೋಣಿ ಸಂಚಾರ, ಒಂದು ನಡುಗಡ್ಡೆಯಿಂದಿನ್ನೊಂದಕ್ಕೆ

    ಜಿಗಿದು ಹಾರಿ, ಈಜಾಡಿ ಪಾರಾಗಿ, ಬದುಕಿ ಉಳಿಯುವ ಬಂಟ

    ರಿದ್ದರೂ ಸಿಕ್ಕುವುದೆಲ್ಲ ಪರಕೀಯ. ಅಕಸ್ಮಾತ್ತಾಗಿ

    ತನ್ನ ಇನ್ನೊಂದರ್ಧ, ಎಲ್ಲಾದರೂ ಕ್ಷಣಾರ್ಧ

    ಸಿಕ್ಕಿದವನೆ ಕೃತಾರ್ಥ, ಭಾಗ್ಯವಂತ”.. (ಚಿಂತಾಮಣಿಯಲ್ಲಿ ಕಂಡ ಮುಖ- ಗೋಪಾಲಕೃಷ್ಣ ಅಡಿಗ)

    “ದ್ವೀಪವ ಬಯಸಿ...” ಎಂ.ಆರ್‍.ದತ್ತಾತ್ರಿಯವರ ಕಾದಂಬರಿಯನ್ನು ಓದುವಾಗ ಮತ್ತೆ ಮತ್ತೆ ಅಡಿಗರ ಈ ಸಾಲುಗಳು ನೆನಪಾದವು.…

  •  ಪುರಾಣಪುರುಷ ಶ್ರೀಕೃಷ್ಣನ ಕಥೆಯನ್ನು ತಮ್ಮ ಕಲ್ಪನೆಯಲ್ಲಿ ಮೂಡಿಸಿದ್ದಾರೆ ಶ್ರೀ ಮುನಿಷಿಯವರು ಇಂಗ್ಲೀಷ್ ಬಾಷೆಯಲ್ಲಿ ಅದನ್ನು ಕನ್ನಡಕ್ಕೆ ತಂದಿರುವರು ಸಿದ್ದವನಹಳ್ಳಿ ಕೃಷ್ಣ ಶರ್ಮರು. ಒಂಬತ್ತು ಪುಸ್ತಕಗಳ ಹತ್ತು ಬಾಗಗಳಲ್ಲಿ ಕತೆ ಸಾಗುತ್ತದೆ.  ಮೊದಲಿಗೆ ಕೃಷ್ಣ  ಹುಟ್ಟುವ ಮೊದಲಿನ ಸನ್ನಿವೇಶ ಆಗಿನ ರಾಜಕೀಯ ಸ್ಥಿತ್ಯಂತರ ಎಲ್ಲವನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸುತ್ತ ಸಾಗುತ್ತಾರೆ ಲೇಖಕರು. ಮೂಲಕತೆಯಲ್ಲಿನ ಹಲವು ಅನುಮಾನಗಳಿಗೆ ಇಲ್ಲಿ ಉತ್ತರ ಸಿಗುತ್ತದೆ. ಕೃಷ್ಣನು ಚಿಕ್ಕಮಗುವಾಗಿರುವಾಗ ಪದೆ ಪದೆ ಅವನ ಮೇಲೆ ಆಕ್ರಮಣ ನಡೆಸುವ ಕಂಸನ ಕಡೆಯವರು ಪೂತನಿಯ ಮರಣದ ನಂತರ , ಪುನಃ ಕೃಷ್ಣ ಮದುರೆಗೆ ಬರುವವರೆಗು ಅವನನ್ನು ಕೊಲ್ಲಲ್ಲು ಯಾವ ಪ್ರಯತ್ನ ಸಹ ಮಾಡುವದಿಲ್ಲ ಅನ್ನುವದು ನನಗೆ ಎಂದಿಗು ಆಶ್ಚರ್ಯವೆನಿಸಿತ್ತು, ಹಾಗೆ ಮದುರೆಗೆ ಬಂದು ಅವನ…
  • ‘ಭೂಮಿಗೆ ನಮ್ಮ ಅವಶ್ಯಕತೆಗಳನ್ನು ಪೂರೈಸುವ ಶಕ್ತಿಯಿದೆ ದುರಾಶೆಗಳನ್ನಲ್ಲ’ ಕೇಳಿ ಕೇಳಿ ಕ್ಲೀಷೆಯಾಗಿರುವ ಮಾತು. ‘ಪರಿಸರ ಉಳಿಸಿ ಮರ ಗಿಡ ಬೆಳಸಿ’, ‘ಕಾಡಿದ್ದರೆ ನಾಡು ನಾಡಿದ್ದರೆ ನಾವು’.. ಇಂತಹ ಹತ್ತು ಹಲವು ಮಾತುಗಳನ್ನು ‘ಪರಿಸರ ದಿನ’ದ ಭಾಷಣಗಳಲ್ಲಿ ಬರಹಗಳಲ್ಲಿ ನೋಡುತ್ತಲೋ ಓದುತ್ತಲೋ ಕೇಳುತ್ತಲೋ ಇರುತ್ತೇವೆ. ಆದರೆ ನಮ್ಮಲ್ಲಿ ಎಷ್ಟು ಮಂದಿಗೆ ‘ಹೌದು ಪರಿಸರವನ್ನು ಉಳಿಸಿಕೊಳ್ಳಲು ನಾನು ಕೂಡ ಪ್ರಯತ್ನಪಡಬೇಕು’ ಎಂದು ಮನಸ್ಸು ಎಚ್ಚರಗೊಳ್ಳುತ್ತದೆ? ನಮ್ಮಿಂದಾಗಬಹುದಾದ್ದನ್ನು ‘ಅಯ್ಯೋ ಬಿಡಿ ನಾವೊಬ್ಬರು ಮಾಡಿದ ಮಾತ್ರಕ್ಕೆ ಎಲ್ಲಾ ಸರಿಹೋಗುತ್ತಾ?’ ಎನ್ನುವ ಸಿನಿಕತನ ಬಿಟ್ಟು ಮಾಡಲು ಸಾಧ್ಯವಾಗುತ್ತದೆ? ಸುತ್ತಲ ಬದುಕನ್ನು ಹಸನುಗೊಳಿಸಿದರೆ ನಮ್ಮ ಬದುಕು ಹಸನಾಗುತ್ತದೆ ಎಂದು ಪ್ರಯತ್ನಿಸುತ್ತಿರುವವರಿಂದಲೇ ನಮ್ಮ ಬದುಕು ಇಂದಿಗೂ…

  •  ನಮ್ಮ ಭಾರತೀಯ  ಸಂಸ್ಕೃತಿ  ಹೆಣ್ಣನ್ನು  ಪತಿವ್ರತೆ, ಸಹನಾಮೂರ್ತಿ,  ಕರ್ತವ್ಯ ನಿಷ್ಠೆ, ತಗ್ಗಿ ಬಗ್ಗಿ  ನಡೆಯೋಳು, ಇಡೀ ಸಂಸಾರದ ನೂಗವನ್ನು  ಹೊರುವವಳು, ಮುಂದೆ  ನಡೆಸುವವಳು ಎಂಬ   ಅರ್ಥ ಬರುವ  ಹಾಗೆ ಚಿತ್ರಿಸಿಬಿಟ್ಟಿದೆ.   ಚಿತ್ರಿಸಿ, ಪತ್ರಿಕೆಗಳಲ್ಲಿ  ಸಿನಿಮಾಗಳಲ್ಲಿ  ತೋರಿಸಿದ್ದ  ಮಾತ್ರಕ್ಕೆ  ಹಾಗೆ  ಇರಬೇಕೆಂದಿಲ್ಲ ..   ಇತ್ತೀಚಿನ  ಮಹಿಳೆಯ  ನಿಲುವೇ  ಬೇರೆಯದೇ  ಆಗಿದೆ..   ಗಂಡಿನ  ಸಮ  ಸಮಕ್ಕೆ  ನಿಂತು   ಸಂಸಾರದ  ಆದಾಯಕ್ಕೂ  ಕಾರಣ ಲಾಗಿದ್ದಾಳೆ ..  ಸೈನ್ಯದಲ್ಲಿ , ವಿಮಾನ   ಹಾರಾಡಿಸುವ ಕೆಲಸದಲ್ಲೂ  ಸಫಲ !!!  ಪಶ್ಚಿಮ ದೇಶಗಳಲ್ಲಿ  ಈ  ಭೇಧ  ಭಾವ  ಎಂದೂ  ಕಂಡೂ ಬoದಿಲ್ಲ ..  ಮಹಿಳೆಗೆ  ಸಮಾನತೆಯ  ಹಕ್ಕು  ಎಲ್ಲ  ಕ್ಷೇತ್ರಗಳಲ್ಲೂ !! ಅವಳ   ಆತ್ಮ ವಿಶ್ವಾಸಕ್ಕೆ  ಕಾರಣ  ಕೂಡ !!! 

     

  • “ಚೇಳು” ಇತ್ತೀಚಿನ ಕತೆಗಾರರಲ್ಲಿ ಮುಖ್ಯರಾದ ವಸುಧೇಂದ್ರರ ಕಥಾಸಂಕಲನ. ಇದಕ್ಕೆ ಬೆಸಗರಹಳ್ಳಿ ರಾಮಣ್ಣ ಪ್ರಶಸ್ತಿ ಬಂದಿದೆ. ಇದರಲ್ಲಿ ಒಟ್ಟು ಏಳು ಕತೆಗಳಿವೆ. ವಸ್ತು ಹಾಗೂ ನಿರೂಪಣೆಯಲ್ಲಿ ಹೊಸತನವನ್ನು ತಮ್ಮ ಕತೆಗಳಲ್ಲಿ ತರುವ ವಸುಧೇಂದ್ರ ನಮ್ಮ ನಡುವಿನ ಮುಖ್ಯ ಕತೆಗಾರ. ಈ ಸಂಕಲನದ ಕತೆಗಳಲ್ಲಿ ಸಾಫ್ಟ್‍ವೇರ್‍ ಲೋಕದ ತಲ್ಲಣಗಳು, ಜಾಗತೀಕರಣದ ಪ್ರಭಾವಗಳು ಹೇಗೆ ಬದುಕನ್ನು ಆವರಿಸಿವೆ ಎಂಬುದನ್ನು ಕಟ್ಟಿಕೊಡುತ್ತಾರೆ.

    ಮೊದಲ ಕತೆ ‘ಚೇಳು’ ವೆಂಕಮ್ಮ ಎಂಬ ಹೆಣ್ಣೊಬ್ಬಳ ಬದುಕಿನ ಪಲ್ಲಟಗಳನ್ನು, ಪಾರಂಪರಿಕ ಜ್ಞಾನಗಳು ಜಾಗತೀಕರಣದ ಭರಾಟೆಯಲ್ಲಿ ಮೂಲೆಗುಂಪಾಗುವುದನ್ನು ಹೇಳುತ್ತವೆ. ಮದುವೆಯಾಗಿ ಕೆಲ ವರ್ಷಗಳಾದರೂ ಮಕ್ಕಳಾಗಲಿಲ್ಲವೆಂಬ ಕಾರಣಕ್ಕೆ ಅವಳ ಗಂಡ ಕೋಮಣ್ಣ ಹೇಳಿದ, ಮಾಡಿಸಿದ ವ್ರತ,ಪೂಜೆಗಳನ್ನೆಲ್ಲ ಮಾಡಿದರೂ…

  • ಕನ್ನಡ ಸಾಹಿತ್ಯದ ಮಟ್ಟಿಗೆ ಗಮನಾರ್ಹವಾದ ವಿಶೇಷ ಕೆಲಸವೊಂದನ್ನು ಈ ಪುಸ್ತಕದ ಮೂಲಕ ಸಾಧಿಸಿದ್ದಾರೆ ಶ್ರೀಮತಿ ಜಯಶ್ರೀ ಭಟ್ - ನಮಗೆ ಸಾಕಷ್ಟು ಅಪರಿಚಿತವಾದ, ಒಂದು ರೀತಿಯಲ್ಲಿ ಊಹಪೋಹದ ಮಟ್ಟದಲ್ಲಿ ಮಾತ್ರ ಅರಿವಿರುವ ಚೀಣಿ ಸಂಸ್ಖೃತಿಯ ಬೇರುಗಳನ್ನು ಅದರದೆ ಆದ ಸಸಿಗಳ ಬಾಯಿಂದ ಪರಿಚಯಿಸುವ ಮೂಲಕ. ಚೀಣಿ ಜೀವನದ ಕುರಿತು ನಮಗಿರುವ ಸೀಮಿತ ಅರಿವು, ಪರಿಜ್ಞಾನ, ಮತ್ತು ಗುರುತೆ ಸಿಗದಂತೆ ಬದಲಾಗಿ ಹೋದ ಈಗಿನ ಚೀನದ ಆರ್ಥಿಕ, ಸಾರ್ವಜನಿಕ, ಸಾಂಪ್ರದಾಯಿಕ ನೆಲೆಗಟ್ಟಿನಲ್ಲಿ ಕಣ್ಮರೆಯಾಗಿ, ಮುಚ್ಚಿದ ಬಾಗಿಲ ನೀತಿಯಿಂದ ಕಳೆದು / ಬದಲಾಗಿ ಹೋದ ಆಚಾರ, ವಿಚಾರ, ಸಂಪ್ರದಾಯಗಳ ತುಣುಕುಗಳು ಹೇರಳವಾಗಿ ಸಿಗುವ ಈ ಕಥಾನಕ ಆ ಮಟ್ಟಿಗೆ ಕನ್ನಡಕ್ಕೆ ವಿಶಿಷ್ಟ ಕೊಡುಗೆಯೆಂದೆ ಹೇಳಬೇಕು.
    ಇಡಿ ಕಥಾನಕದ ವೈಶಿಷ್ಟ್ಯವೆಂದರೆ ಆತ್ಮಕಥನದ ಹುರುಪಿನಲ್ಲಿ…