ಯೋಗರಾಜ್ ಭಟ್ ನಿರ್ದೇಶನದ, ಗಣೇಶ್ ಹಾಗೂ ಪೂಜಾ ಗಾಂಧಿ ಅಭಿನಯದ ‘ಮುಂಗಾರು ಮಳೆ' ಸಿನೆಮಾ ಬಿಡುಗಡೆಯಾಗಿ, ಸೂಪರ್ ಹಿಟ್ ಆದದ್ದು ಈಗ ಇತಿಹಾಸ. ಆ ಸಮಯದಲ್ಲಿ ಮಳೆಯಲ್ಲಿ ನೆನೆಯುತ್ತಾ, ಸುಂದರ ಪರಿಸರದಲ್ಲಿ ವಿಹರಿಸುತ್ತಾ, ಕರ್ಣ ಮನೋಹರವಾದ ಹಾಡುಗಳನ್ನು ಕೇಳುತ್ತಾ ಆನಂದಿಸಿದ್ದು ಈಗ ನೆನಪಾಗುತ್ತದೆ. ‘ಪ್ರೀತಿ ಮಧುರ ತ್ಯಾಗ ಅಮರ' ಎಂದು ಹೇಳುವ ಕೊನೇ ದೃಶ್ಯ ಬಹುತೇಕರ ಕಣ್ಣಂಚನ್ನು ಒದ್ದೆ ಮಾಡಿದ್ದು ಸುಳ್ಳಲ್ಲ. ಮುಂಗಾರು ಮಳೆ ಸಿನೆಮಾದ ಹಿಂದಿನ ಕಥೆಯನ್ನು ನಿರ್ದೇಶಕ ಯೋಗರಾಜ್ ಭಟ್ ಅವರು ಬರವಣಿಕೆಯ ರೂಪದಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಕನ್ನಡ ಸಾಹಿತ್ಯ ಲೋಕದಲ್ಲಿ ಇದೊಂದು ರೀತಿಯ ಹೊಸತನ.
ಸಿನೆಮಾ ತಯಾರಿಕೆಯ ಹಿಂದಿನ ನೋವು-ನಲಿವುಗಳು ಯಾರಿಗೂ…