ಪುಸ್ತಕ ಸಂಪದ

  • ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಗತ್ ಸಿಂಗ್ ಹೆಸರು ಸದಾಕಾಲ ಮುಂಚೂಣಿಯಲ್ಲಿ ಇದ್ದೇ ಇರುತ್ತದೆ. ೨೦೦೭ರಲ್ಲಿ ಭಗತ್ ಸಿಂಗ್ ಜನ್ಮಶತಮಾನೋತ್ಸವವನ್ನು ಆಚರಿಸಲಾಗಿತ್ತು. ಈ ಸಮಯದಲ್ಲಿ ಹೊರ ತಂದ ಪುಸ್ತಕವೇ ‘ಧೀರ ಹುತಾತ್ಮ ಭಗತ್ ಸಿಂಗ್'. ಭಗತ್ ಸಿಂಗ್ ಬಗ್ಗೆ ಅಧಿಕ ಮಾಹಿತಿ ಬೇಕಾದವರು ಈ ಪುಸ್ತಕವನ್ನು ಓದಬಹುದು.

    ಪುಸ್ತಕದ ಲೇಖಕರಾದ ಡಾ॥ ಬಿ. ಆರ್. ಮಂಜುನಾಥ್ ಅವರು ತಮ್ಮ ಮುನ್ನುಡಿ ‘ಅರಿಕೆ'ಯಲ್ಲಿ ಬರೆಯುತ್ತಾರೆ “ ಮಹಾನ್ ಹುತಾತ್ಮ ಭಗತ್ ಸಿಂಗ್ ಜನ್ಮ ತಳೆದು ೨೦೦೭ರ ಸೆಪ್ಟೆಂಬರ್ ೨೮ಕ್ಕೆ ನೂರು ವರ್ಷಗಳು. ಅಧಿಕೃತ ಮಾಧ್ಯಮಗಳು ಭಗತರ ನೆನಪನ್ನು ಜನರಿಗೆ ಕೊಂಡೊಯ್ಯುವಲ್ಲಿ ವಿಫಲವಾದರೂ ದಿನದಿಂದ ದಿನಕ್ಕೆ ಆತನ ಜನಪ್ರಿಯತೆ ಹೆಚ್ಚುತ್ತಿದೆ. ಅಸಂಖ್ಯಾತ ಎಳೆಯ…

  • ಕಾಸರಗೋಡು ಚಿನ್ನಾ ಎಂದೇ ಖ್ಯಾತಿ ಪಡೆದ ಸುಜೀರ್ ಶ್ರೀನಿವಾಸ್ ಅವರು ಖ್ಯಾತ ರಂಗ ಕರ್ಮಿ, ಚಿತ್ರ ನಟ ಹಾಗೂ ಬರಹಗಾರರು. ಬಂಗಾಳಿ ಸಾಹಿತಿ ಶಂಭುಮಿತ್ರ ಅಮಿತಮೈತ್ರ ಇವರು ಬರೆದ ‘ಕಾಂಚನಗಂಗಾ’ ಎಂಬ ನಾಟಕದ ಅನುವಾದವೇ ‘ಗಾಂಟಿ' (ಗಂಟು). ಪುಸ್ತಕ ಪುಟ್ಟದಾಗಿದ್ದು ಲೇಖಕರಾದ ಡಾ.ನಾ,.ದಾಮೋದರ ಶೆಟ್ಟಿ ಇವರು ಇವರು ಬೆನ್ನುಡಿ ಬರೆದಿದ್ದಾರೆ. ಅವರದ್ದೇ ಮಾತುಗಳಲ್ಲಿ ಹೇಳುವುದಾದರೆ “ಅರ್ಧ ಶತಮಾನದ ಹಿಂದೆ ಕಾಸರಗೋಡಿನ ಕನ್ನಡದ ನೆಲದಲ್ಲಿ ಹುಟ್ಟಿದ ಕೊಂಕಣಿಗ ಸುಜೀರ್ ಶ್ರೀನಿವಾಸ್ ರಾವ್, ಕಾಸರಗೋಡು ಚಿನ್ನಾ ಆಗಿ ಪಲ್ಲಟಗೊಳ್ಳದಿರುತ್ತಿದ್ದರೆ ಗಿರಿಧರ್ ಮೆಟಲ್ ಹೌಸ್ ನಲ್ಲಿ ತಂದೆಯವರು ತೊಡಗಿಟ್ಟ ಅಂಗಡಿಯಲ್ಲಿ ಸ್ಟೀಲ್ ವ್ಯಾಪಾರ ಮಾಡುತ್ತಲೇ ಇರುತ್ತಿದ್ದರು. ಇಂದಿಗೂ ಅದೇ ಅವರ ವೃತ್ತಿ. ಪ್ರವೃತ್ತಿಗಳು ಅನೇಕ.…

  • ಪತ್ರಕರ್ತ ಪ್ರತಾಪ್ ಸಿಂಹ ವಿಜಯ ಕರ್ನಾಟಕ ಹಾಗೂ ಕನ್ನಡ ಪ್ರಭ ಪತ್ರಿಕೆಗಳಲ್ಲಿ ಬರೆಯುತ್ತಿದ್ದ ಅಂಕಣ ಬರಹಗಳ ಸಂಗ್ರಹವೇ ಬೆತ್ತಲೆ ಜಗತ್ತು. ಈಗ ಇಲ್ಲಿರುವುದು ಅದರ ಎಂಟನೇ ಭಾಗ. ಪ್ರತಿ ಶನಿವಾರ ಪ್ರತಾಪ್ ಸಿಂಹ ಅವರ ಅಂಕಣವನ್ನು ಕಾಯುತ್ತಿದ್ದ ದೊಡ್ಡದಾದ ಓದುಗ ಸಮೂಹ ಇತ್ತೆಂದರೆ ಸುಳ್ಳಲ್ಲ. ತೀಕ್ಷ್ಣವಾಗಿ ಚಾಟಿ ಬೀಸುವಂತಹ ರಾಜಕೀಯ ಲೇಖನಗಳಿಂದ ಹಿಡಿದು. ಕ್ರೀಡೆ, ಸಾಹಿತ್ಯ, ಸಿನೆಮಾ ಮುಂತಾದ ಎಲ್ಲಾ ವಿಚಾರಗಳನ್ನು ಅಧ್ಯಯನ ಮಾಡಿ ಬರೆಯುತ್ತಿದ್ದರು. ಪ್ರತಿಯೊಂದು ಲೇಖನಗಳಿಗೆ ಸೂಕ್ತ ಆಧಾರ ಒದಗಿಸುತ್ತಿದ್ದುದು ಇವರ ಹೆಗ್ಗಳಿಕೆ. 

    ಬೆತ್ತಲೆ ಜಗತ್ತು ೮ನೇ ಭಾಗಕ್ಕೆ ಮುನ್ನುಡಿ ಬರೆದಿದ್ದಾರೆ ಇನ್ಫೋಸಿಸ್ ಫೌಂಡೇಶನ್ ಇದರ ಅಧ್ಯಕ್ಷೆಯಾಗಿರುವ ಸುಧಾ ಮೂರ್ತಿಯವರು. ಇವರು…

  • *ಮುದ್ದು ಮೂಡುಬೆಳ್ಳೆ ಹಾಗೂ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ಇವರ "ನಮ್ಮ ಬೆಳ್ಳೆ - ಕಟ್ಟಿಂಗೇರಿ: ಪರಂಪರೆ, ಇತಿಹಾಸ"*

    ಬೆಳ್ಳೆಯ ಸಾಹಿತ್ಯ ಸಂಸ್ಕೃತಿ ವೇದಿಕೆಯು (ಮಾತಾ ಕುಟೀರ, ಮೂಡುಬೆಳ್ಳೆ - 576120, ಕಾಪು ತಾಲೂಕು, ಉಡುಪಿ ಜಿಲ್ಲೆ) 2019 ರಲ್ಲಿ ಪ್ರಕಾಶಿಸಿದ ಕೃತಿ " ನಮ್ಮ ಬೆಳ್ಳೆ - ಕಟ್ಟಿಂಗೇರಿ: ಪರಂಪರೆ, ಇತಿಹಾಸ". 52 + 4 ಪುಟಗಳ, 70 ರೂಪಾಯಿ ಬೆಲೆಯ ಈ ಕೃತಿಯಲ್ಲಿ, ಲೇಖಕರ 'ಮೊದಲ ಮಾತು' ಮತ್ತು ಪರಿಚಯಗಳಿವೆ. ಲೇಖನಕ್ಕೆ ಸಂಬಂಧಿಸಿದಂತೆ ಕೆಲವು ಸ್ಥಳಗಳ ಮತ್ತು ವ್ಯಕ್ತಿಗಳ ಚಿತ್ರಗಳೂ ಇವೆ.

    "ನಮ್ಮ ಹಿರಿಯರ ಬಗ್ಗೆ ತಿಳಿದುಕೊಳ್ಳುವುದು ಹಾಗೂ ಒಂದು ಊರಿನ ಇತಿಹಾಸ, ಪರಂಪರೆ ಅರಿಯುವುದು - ನಮ್ಮ ಕರ್ತವ್ಯ ಮತ್ತು…

  • ಬಿಟ್ ಕಾಯಿನ್ ಕುರಿತ 'ನಿಗೂಢ ನಾಣ್ಯ' ಎಂಬ ರೋಚಕ ಕಾದಂಬರಿ ಬರೆದ ವಿಠಲ ಶೆಣೈ ಅವರ ಕೃತಿಯೇ ‘ತಾಳಿಕೋಟೆಯ ಕದನದಲ್ಲಿ’. ಈ ಕಾದಂಬರಿಯಲ್ಲಿ ಹಂಪಿಯ ದೇಗುಲಗಳೂ ಇವೆ, ಕೆಲವೊಂದು ಚಾರಿತ್ರಿಕ ಪಾತ್ರಗಳೂ ಜೀವಂತವಾಗಿವೆ. ವೈಕುಂಠರಾವ್ ಎಂಬ ವ್ಯಕ್ತಿ ತನ್ನ ಆತ್ಮೀಯ ಗೆಳೆಯ ವಿಶ್ವನಾಥನನ್ನು ಆಗುಂಬೆ ಘಾಟಿಯಲ್ಲಿ ಕಾರ್ ಅಪಘಾತವಾಗುವಂತೆ ಮಾಡಿ ಕೊಂದು ಬಿಡುವಲ್ಲಿಂದ ಪ್ರಾರಂಭವಾಗುವ ಪುಸ್ತಕವು ಒಂದು ರೀತಿಯಲ್ಲಿ ಪತ್ತೇದಾರಿ ಕಾದಂಬರಿಯಂತೆ ಓದಿಸಿಕೊಂಡು ಹೋಗುತ್ತದೆ. ಅನಿರೀಕ್ಷಿತ ತಿರುವುಗಳು ನಮ್ಮನ್ನು ಯಾವಾಗ ಪುಸ್ತಕದ ಕೊನೆಯ ಪುಟ ಬರುವುದೋ ಎಂಬ ಕಾತುರ ಮೂಡಿಸುತ್ತದೆ. 

    ಸಾಗರದಲ್ಲಿರುವ ವೈಕುಂಠ ರಾವ್ ಎಂಬ ಚರಿತ್ರೆ ಕಲಿಸುವ ಉಪನ್ಯಾಸಕ, ತನ್ನ ಪಾಠಗಳನ್ನು ವಿದ್ಯಾರ್ಥಿಗಳಿಗೆ…

  • ಅಂಗಡಿಯಲ್ಲಿ ಕನ್ನಡ ನುಡಿ ಎಂಬುವುದು ಒಂದು ಪುಟ್ಟ ಪುಸ್ತಕ. ಆದರೆ ಬಹಳ ಮಾಹಿತಿ ಪೂರ್ಣವಾಗಿದೆ. ಕನ್ನಡಾಭಿಮಾನವನ್ನು ಸ್ವಲ್ಪಮಟ್ಟಿಗೆ ಬಡಿದೆಬ್ಬಿಸ ಬಲ್ಲ ಪುಸ್ತಕ ಇದು. ನಿಮ್ಮ ಕನ್ನಡ ಜ್ಞಾನವನ್ನು ವ್ಯವಹಾರಿಕವಾಗಿ ಎಲ್ಲೆಲ್ಲಾ ಬಳಸಬಹುದು ಎಂಬುವುದಾಗಿ ಈ ಪುಸ್ತಕ ಹೇಳುತ್ತದೆ. ಪುಸ್ತಕದ ಬೆನ್ನುಡಿಯಲ್ಲಿ ಬರೆದಂತೆ “ಗ್ರಾಹಕ ಹಕ್ಕುಗಳ ಬಗ್ಗೆ ನಾನಾ ರೀತಿಯ ಜಾಗೃತಿ ಅಭಿಯಾನಗಳು ಎಲ್ಲೆಡೆ ನಡೆಯುತ್ತಾ ಇರುತ್ತವೆ. ತೂಕ, ಅಳತೆ, ಪ್ರಮಾಣ, ಬೆಲೆ, ಗುಣಮಟ್ಟ, ಸೇವೆ ಇವೆಲ್ಲವುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಈ ಗ್ರಾಹಕ ಹಕ್ಕುಗಳನ್ನು ಆಳವಾಗಿ ಪರಿಶೀಲಿಸಿದಾಗ ಇಲ್ಲಿ ಭಾಷೆಯ ಪಾತ್ರವನ್ನೇ ಮರೆತಿರುವುದು ಕಾಣುತ್ತದೆ. ಅಂತಹ ಭಾಷಾ-ಆಯಾಮ ಇಲ್ಲದ ಕಾರಣದಿಂದಲೇ ಗ್ರಾಹಕರಿಗೆ ನಾನಾ ರೀತಿಯಲ್ಲಿ…

  • ಬದರ್ ಎಂಬ ಪುಸ್ತಕದ ಮೂಲ ಲೇಖಕರು ಷೇಕ್ ಕರೀಮುಲ್ಲಾ. ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ವಿನುಕೊಂಡ ಪಟ್ಟಣದಲ್ಲಿ ಜೂನ್ 01, 1964ರಲ್ಲಿ ಜನಿಸಿದರು. ವೃತ್ತಿಯಿಂದ ಶಿಕ್ಷಕರಾಗಿದ್ದಾರೆ. ಕಾವ್ಯವೇ ಇವರ ಅಚ್ಚುಮೆಚ್ಚಿನ ಸಾಹಿತ್ಯ ಪ್ರಕಾರ. 2006ನೇ ಇಸವಿಯಲ್ಲಿ ಮುಸ್ಲಿಂ ಬರಹಗಾರರ ಸಂಘವನ್ನು ಸ್ಥಾಪಿಸಿ ವ್ಯವಸ್ಥಾಪಕರಾಗಿ ಮುಸ್ಲಿಂ ಸಾಹಿತಿಗಳನ್ನು ಒಂದೇ ವೇದಿಕೆಗೆ ಕರೆದುತರುವ ಮಹತ್ವವಾದ ಕಾರ್ಯಕ್ಕೆ ನಾಂದಿ ಹಾಡಿದರು. ಪ್ರಗತಿಪರ ಮುಸ್ಲಿಂ ಬರಹಗಾರರಾಗಿ ಇವರು ಜನಮಾನಸವನ್ನು ಸೂರೆಗೊಂಡಿದ್ದಾರೆ. ಕೆಳ ಮತ್ತು ಮಧ್ಯಮ ವರ್ಗದ ಮುಸಲ್ಮಾನರ ಬದುಕಿನ ಬವಣೆಗಳೇ ಇವರ ಬರಹಗಳಲ್ಲಿರುವ ಜೀವಸೆಲೆ.

    ಈ ಪುಸ್ತಕವನ್ನು ಕನ್ನಡಕ್ಕೆ ಅನುವಾದ ಮಾಡಿದವರು ಧನಪಾಲ ನಾಗರಾಜಪ್ಪ. ಜೂನ್ 20,…

  • ೮೦-೯೦ರ ದಶಕದಲ್ಲಿ ಬೆಂಗಳೂರನ್ನು ಆಳುತ್ತಿದ್ದ ಡಾನ್ ಗಳು ಮತ್ತು ರೌಡಿಗಳ ಬಗ್ಗೆ ತಮ್ಮದೇ ಆದ ಶೈಲಿಯಲ್ಲಿ ಬರೆದು ‘ಕರ್ಮವೀರ’ ಪತ್ರಿಕೆಯ ಪ್ರಸಾರವನ್ನು ಹೆಚ್ಚಿಸಿದ ಕೀರ್ತಿ(?!) ರವಿ ಬೆಳಗೆರೆಯವರಿಗೆ ಸಲ್ಲಬೇಕು. ರೌಡಿಗಳನ್ನು ವೈಭವೀಕರಿಸಿ ಬರೆಯುತ್ತಾರೆ ಎಂಬುದು ರವಿ ಬೆಳಗೆರೆಯ ಮೇಲಿದ್ದ ಆಪಾದನೆ. ಭೂಗತ ಲೋಕದ ಆಗುಹೋಗುಗಳನ್ನು ಬಹಳ ಹತ್ತಿರದಿಂದ ನೋಡಿದವರು ಇವರು. ಈ ಪುಸ್ತಕದಲ್ಲಿ ನೀಡಲಾದ ಎಲ್ಲಾ ವ್ಯಕ್ತಿಗಳನ್ನು ಮುಖಃತ ಕಂಡು ಸಂದರ್ಶನ ಮಾಡಿ ಲೇಖನ ಬರೆದಿದ್ದಾರೆ. ಆದುದರಿಂದ ಈ ಪುಸ್ತಕಕಕ್ಕೆ ಒಂದು ತೂಕ ಬಂದಿದೆ. ಒಬ್ಬ ಭೂಗತ ಲೋಕಕ್ಕೆ ಕಾಲಿಡುವಾಗ ಅವನ ಮನಸ್ಥಿತಿ ಏನು? ಕುಟುಂಬದ ಹಿನ್ನಲೆ ಏನು? ಎಂಬ ಬಗ್ಗೆ ಬರೆದಿದ್ದಾರೆ.

    ಅವರೇ ಹೇಳುವಂತೆ “ ಈ ಪುಸ್ತಕದ…

  • ವೈಚಾರಿಕ ಸಮರಕ್ಕೆ ‘ಓಪನ್ ಚಾಲೆಂಜ್' ಎಂಬ ಪುಸ್ತಕವನ್ನು ಬರೆದವರು ಪ್ರವೀಣ್ ಕುಮಾರ್ ಮಾವಿನಕಾಡು. ಇವರು ಹುಟ್ಟಿ ಬೆಳೆದದ್ದು ಮಲೆನಾಡಿನಲ್ಲಿ. ಚಿಕ್ಕಮಗಳೂರಿನಲ್ಲಿ ಎರಡು ವರ್ಷಗಳ ಕೈಗಾರಿಕಾ ತರಭೇತಿ ಮುಗಿಸಿ ನೇರವಾಗಿ ಸೇರಿದ್ದು ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದೊಳಗೆ. ಅಲ್ಲಿ ಕಮ್ಯೂನಿಸ್ಟ್ ಕಾರ್ಮಿಕ ಸಂಘಟನೆಗಳ ಕಾರ್ಯ ಚಟುವಟಿಕೆಗಳ ಹತ್ತಿರದ ಪರಿಚಯವಾಯಿತು. ಓದಿನ ಸಮಯದಲ್ಲಿ ತರಂಗ, ಮಂಗಳ ಮುಂತಾದ ವಾರಪತ್ರಿಕೆಗಳಲ್ಲಿ ಮತ್ತು ಸ್ಥಳೀಯ ದಿನಪತ್ರಿಕೆಗಳಲ್ಲಿ ಆಗಾಗ ಚುಟುಕು, ಹನಿಗವನ, ವಿಡಂಬನೆ, ವ್ಯಂಗ್ಯಚಿತ್ರಗಳು ಪ್ರಕಟವಾಗಿದ್ದು ಬಿಟ್ಟರೆ ನಂತರದಲ್ಲಿ ಹಲವಾರು ವರ್ಷಗಳವರೆಗೆ ಅನ್ನಿಸಿದ್ದನ್ನು ನೇರವಾಗಿ ಪತ್ರಿಕೆಗಳಲ್ಲಿ ಬರೆಯುವ ಅವಕಾಶ ಸಿಗಲೇ ಇಲ್ಲ ಎಂದೇ ಹೇಳಬಹುದು. 

  • *ಕಟೀಲು ಸಿತ್ಲ ರಂಗನಾಥ ರಾವ್ ಅವರು ಸಂದರ್ಶಿಸಿ ನಿರೂಪಿಸಿದ "ರಂಗವಿಚಿಕಿತ್ಸೆ" ಯಕ್ಷಗಾನ ರಂಗತಜ್ಞ ಡಾ. ಕೆ. ಎಂ. ರಾಘವ ನಂಬಿಯಾರ್ ಅವರ ರಂಗ ವಿಚಾರಗಳು*

    "ರಂಗವಿಚಿಕಿತ್ಸೆ" (ಯಕ್ಷಗಾನ ರಂಗತಜ್ಞ ಡಾ. ಕೆ. ಎಂ. ರಾಘವ ನಂಬಿಯಾರ್ ಅವರ ರಂಗ ವಿಚಾರಗಳು), ಕಟೀಲು ಸಿತ್ಲ ರಂಗನಾಥ ರಾವ್ ಅವರು ಸಂದರ್ಶಿಸಿ, ನಿರೂಪಿಸಿದ ಕೃತಿ. 90 ಪುಟಗಳ, 99 ರೂಪಾಯಿ ಬೆಲೆಯ, 2018ರಲ್ಲಿ ಪ್ರಕಟವಾದ ಕೃತಿಯನ್ನು ಯಕ್ಷರಂಗ ಕಟೀಲು ಸಿತ್ಲ ಫೌಂಡೇಶನ್ (ರಿ) ಉಡುಪಿ - ಬೆಂಗಳೂರು (ನಂ. 6 - 81 - ಸಿ 2, ಅಡ್ಕದಕಟ್ಟೆ ರಸ್ತೆ, ನಿಟ್ಟೂರು ಅಂಚೆ, ಪುತ್ತೂರು ಗ್ರಾಮ, ಉಡುಪಿ - 576103) ಪ್ರಕಾಶಿಸಿದೆ.

    ಡಾ. ಕೆ. ಎಂ. ರಾಘವ ನಂಬಿಯಾರ್ ಅವರ ಶುಭಾಕಾಂಕ್ಷೆ…