ಪುಸ್ತಕ ಸಂಪದ

  • ಸ್ನೇಹಿತನಿಂದ "ಮಂತ್ರಶಕ್ತಿ" ಎಂಬ ಕಾದಂಬರಿಯೊಂದನ್ನು ತಂದು ಸ್ವಲ್ಪ ಓದಿದೆ ಆದರೆ ಅದನ್ನು ಪುರ್ಣಗೊಳಿಸಲು ಸಮಯವೇ ಸಿಗುತ್ತಿರಲಿಲ್ಲ.ಒಂದು ದಿನ ವಾರಂತ್ಯದಲ್ಲಿ ಒಬ್ಬನೇ ರೂಂ ನಲ್ಲಿ ಇದ್ದೆ ತುಂಬಾ ಬೇಸರವಾಗಲಾರಂಬಿಸಿತು ಆಗ ಏನನ್ನಾದರೂ ಓದೋಣವೆಂದು ಅಪೂರ್ಣಗೊಳಿಸಿದ್ದ ಈ ಕಾದಂಬರಿ ತೆರೆದೆ ಓದುತ್ತಾ ಎಷ್ಟು ಕುತೂಹಲವಾಯಿತೆಂದರೆ ೨೫೦ ಪುಟಗಳ ಪುಸ್ತಕ ಮುಗಿದಿದ್ದೆ ತಿಳಿಯಲಿಲ್ಲ.
    "ಶವವಾಗಿದ್ದ ಯುವತಿ ಜೀವಂತ ಎದ್ದು ನಿಂತಳು......"
    "ಸದಾ ಮರವೇರಿ ಕುಳಿತರುತ್ತಿದ್ದ ಹುಡುಗ ಕೆಳಗಿಳಿದು ಬಂದು ಬಾಳುವೆ ಮಾಡತೊಡಗಿದ......"
    "ಕಣ್ಣಿನ ದೃಷ್ಟಿಯಿಂದಲೇ ಮೋಹಿತಳಾದ ಹೆಂಗಸೋಬ್ಬಳು ಕಂಡುಕೇಳರಿಯದವನೋಬ್ಬನ ದುರಾಸೆಗೆ ಬಲಿಯಾದಳು..... "
    ಇವು ಈ ಗ್ರಂಥದಲ್ಲಿ ನಡೆಯುವ ಅಸಂಖ್ಯಾತ ಘಟನೆಗಳಲ್ಲಿ ಒಂದೆರಡಷ್ಟೆ.ನಮ್ಮ…

  • ಬದುಕಿನಲ್ಲಿ ಇಂತಹ ಕ್ಷಣಗಳಿರುತ್ತವೆ, ಆಗಬಾರದ್ದು ಆಗಿಹೋಗಿರುತ್ತದೆ. ಶಾಶ್ವತ ಊನಕ್ಕೆ ಕಾರಣವಾಗಿರುತ್ತದೆ.
    ವ್ಯವಸ್ಥೆಯಿಂದಲೋ, ಇನ್ನೊಬ್ಬರಿಂದಲೋ ಹತ್ತಿರದವರಿಂದಲೋ ದೂರದವರಿಂದಲೋ ನೋವುಂಡ ಕಾರಣಕ್ಕೆ ಜೀವನದ ಬಗ್ಗೆ ನಿರಾಶರಾಗಿ,  ಬದುಕಿಗೆ ವಿದಾಯ ಹೇಳುವವರು ಉಂಟು. ಅಯ್ಯೋ ಹೀಗಾಯಿತೆ, ಇದೆಂತಹ ನನ್ನ ಹಣೆಯ ಬರಹ ಎಂದು ಹಲುಬುತ್ತ, ಅವರಿವರ ಅನುಕಂಪವನ್ನು ಹಾಸಿ ಹೊದ್ದು ಮಲಗುವವರೂ ಉಂಟು.
    ಆದರೆ ಬದುಕಿನ ನೋವುನಲಿವುಗಳ ಏರಿಳಿತದಲ್ಲಿ ಈಜಾಡಿಯೂ ಬದುಕನ್ನು ಪ್ರೀತಿಸಿದವರು ಅಪರೂಪ.

    ಇಂತಹವರು ಭೊರ್ಗರೆಯುವ ನದಿಯ ಮಧ್ಯದ ಬಂಡೆಯಂತೆ ಗಟ್ಟಿಯಾಗಿ ನಿಂತಿರುತ್ತಾರೆ. ಕೆಲವೊಮ್ಮೆ ಬದುಕೇ ಇವರ ಸಾಹಸ ಮತ್ತು ಇಚ್ಛಾಶಕ್ತಿಗೆ  ಮಣಿದು ಹಾದಿ ತೆರೆಯುತ್ತದೆ. ಇಂತಹ ಅಪರೂಪದ ಕೆಚ್ಚೆದೆಯ ಸಾಧಕಿ ಅರುಣಿಮಾ ಸಿನ್ಹಾ.

  • ಮುನಿ ಷ್ರೀ ರೂಪ್ ಚ0ದ್ರ‌ ಅವರು ಶ್ವೇತ0ಬರ‌ ಜೈನ‌ ತೇರಾಪ0ಥದ‌ ಸಮಕಾಲಿನ‌ ಪ್ರಬಾವೀ ಗುರುಗಳು. ಪ್ರಗತಿಶೀಲ‌ ಮನೋಬಾವದ‌ ಅವರು ಪ್ರತಿಬಾವ0ತ‌ ಕವಿಯು ಹೌದು.ಧಾರ್ಮಿಕ‌ ಪ0ಥಗಳಲ್ಲಿನ‌ ಒಣಪ0ಪ್ರದಯಗಳನ್ನು ಧಿಕ್ಕರಿಸಿ ಹಲವು ರೀತಿಯ‌ ಮನಸಿಕ‌ ಕಿರುಕುಳಕ್ಕೆ ಒಳಗಾದವರು. ಅವರ‌ 'ಅ0ಧಾ ಚಾ0ದ್' ', 'ಭೂಮಾ' ಮೊದಲದ‌ ಕವನ‌ ಸ0ಗ್ರಹಗಳು ಹಾಗೂ ಹಲವಾರು ಪ್ರಬ0ಧ‌ ಸ0ಕಲನಗಳು ಹಿ0ದೀ ಸಾಹಿತ್ಯಾಸಕ್ತರ‌ ನಡುವೆ ವಿಸ್ತಾರವಾಗಿ ಚರ್ಚಿತವಾಗಿವೆ. ಇವರ‌ ಜೀವನ‌ ಚರಿತ್ರೆಯನ್ನು ಬಹು ಕಷ್ಟಪಟ್ಟು ದೆಹಲಿಯಲ್ಲಿನ‌ ಡಾ.ವಿನೀತಾ ಗುಪ್ತ‌ ಒ0ದು ಕಾದ0ಬರಿಯ‌ ರೂಪದಲ್ಲಿ ಬರೆದಿದ್ದಾರೆ.ಇದನ್ನು ಮುನಿ ರೂಪ್ ಚ0ದ್ರರ‌ ಬಹುಕಾಲದ‌ ಮಿತ್ರರೂ, ಕನ್ನಡದ‌ ಪ್ರಸಿದ್ಧ‌ ಲೇಖ‌ಕರೂ ಆದ‌ ಡಾ. ಪ0ಚಾಕ್ಷ‌ರಿ ಹಿರೇಮಠ‌ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.

         ಈ…

  • ಇದು ಶ್ರೀಮತಿ ಲತಾಗುತ್ತಿಯವರ‌ ಇತ್ತೀಚಿನ‌ ಕಾದ0ಬರಿ. ಈ ಹಿ0ದೆ ಅವರು ತಮ್ಮ‌ 'ನಾ ಕ0ಡ0ತೆ ಅರೇಬಿಯಾ'  ಹಾಗೂ 'ಯೂರೋ ನಾಡಿನಲ್ಲಿ' ಪ್ರವಾಸ‌ ಕಥನಗಳಿ0ದಲೂ, 'ಸೂಜಿಗಲ್ಲು' ಮೊದಲಾದ‌ ಕವನಸ0ಗ್ರಹಗಳಿ0ದ‌ ಹಾಗೂ ಹೆಜ್ಜೆ ಎ0ಬ‌ ಕಾದ0ಬರಿಯಿ0ದ‌ ಕನ್ನಡ‌ ಸಾಹಿತ್ಯದ‌ ಗ0ಭೀರ‌ ಓದುಗರಿಗೆ ಪರಿಚಿತರಾದವರು. 'ಪ್ರವಾಸ‌ ಸಾಹಿತ್ಯ: ವಿಶ್ಹ‌ ಸ0ಸ್ಕ್ಱುತಿ' ಎ0ಬುದು ಅವರ‌ ಮಹಾಪ್ರಬ0ಧ‌.

           ಇದೀಗ‌ ಅವರು ಹೊಸರೀತಿಯ‌ ಪ್ರಯತ್ನವೊ0ದಕ್ಕೆ ಕೈಹಾಕಿ ಗೆದ್ದಿದ್ದಾರೆ. ಬೆಳಗಾವಿ ಜಿಲ್ಲೆಯ‌  ಮಹದೇವಪುರ‌ ಎ0ಬ‌ ಹಳ್ಳಿಯನ್ನು ಪ್ರಧಾನ‌ ಕೇ0ದ್ರವಾಗಿಟ್ಟುಕೊ0ಡು, ಸ್ವಾತ0ತ್ರ್ಯ‌ ಚಳುವಳಿ ಆ ಭಾಗದಲ್ಲಿ ಹುಟ್ಟಿ ಹರಡಿದ‌ ಬಗೆಯನ್ನು, ಐದು ತಲೆಮರುಗಳ‌ ದೀರ್ಘ‌ ಕಾಲಾವಧಿಯಲ್ಲಿ ನಡೆದ‌ ಆಗುಹೋಗುಗಳನ್ನು ಈ 420 ಪುಟಗಳ‌ ಕಾದ0ಬರಿಯಲ್ಲಿ ಸೊಗಸಾಗಿ…

  • ಕರ್ನಾಟಕ‌ ಜಾನಪದ‌ ಮತ್ತು ಯಕ್ಷಗಾನ‌ ಸಾಹಿತ್ಯವನ್ನು ಹಲವು ಸ0ಪುಟಗಳಲ್ಲಿ ಪ್ರಕಟಿಸುವ‌ ಯೋಜನೆಯೊದನ್ನು ಡಾ. ಹಿ.ಶಿ. ರಾಮಚ0ದ್ರೇಗೌಡರು ಅಧ್ಯಕ್ಷರಾಗಿದ್ದಾಗ‌ ರೂಪಿಸಲಾಗಿತ್ತು. ಪುಣ್ಯಕ್ಕೆ ಅದು ಇನ್ನೂ ಚಾಲ್ತಿಯಲ್ಲಿದ್ದು ಈ ವರೆಗೆ 56 ಸ0ಪುಟಗಳು ಹೊರಬ0ದಿವೆ. ಇದಕ್ಕೆ ಕರ್ನಾಟಕದ ಸರ್ಕಾರಗಳೂ ಕಾಲಕಾಲಕ್ಕೆ ನೆರವು ನೀಡಿವೆ ಎ0ಬುದು ಮೆಚ್ಚ‌ಬೇಕಾದ ಅ0ಶ‌.

       ಈ ಮಾಲಿಕೆಗೆ ಜೈನ‌ ಜನಪದ‌ ಗೀತೆಗಳ ಸ0ಪುಟವೊ0ದನ್ನು ಸ0ಪಾದಿಸಿ ಕೊಡುವ0ತೆ ನನ್ನನ್ನು ಕೋರಿಕೊ0ಡದ್ದ್ದರ‌ ಫಲವಾಗಿ ನಾನು ಇದನ್ನು ಸ0ಪಾದಿಸಿಕೊಟ್ಟು ಐದು ವರ್ಷಗಳೇ ಕಳೆದಿದ್ದವು. ಇದೀಗ ಸಿದ್ಧಗೊಡಿದೆ. 300 ಪುಟಗಳ‌ ಈ ಪುಸ್ತಕದಲ್ಲಿ ಈ ವರೆಗೆ ಸ0ಗ್ರಹಗೊ0ಡಿರುವ‌ ಬಹುತೇಕ‌ ಎಲ್ಲ ಜೈನ‌ ಜನಪದಗೀತೆಗಳು, ಐತಿಹ್ಯಗಳು, ಗಾದೆಗಳು, ಹಾಗೂ ಒಡಪುಗಳಿವೆ.ಕೆಲವು ಸ್ಥಳನಾಮಗಳ‌ ಮೇಲೆ…

  • 2010 ರಲ್ಲಿ ಮೊದಲಬಾರಿಗೆ ಪ್ರಕಟವಾದ‌ ಕು0.ವೀ. ಅವರ‌ ಈ ಅತ್ಮಕಥೆ ಮೂರೇ ವರ್ಷಗಳಲ್ಲಿ ಐದುಬಾರಿ ಪುನರ್ಮುದ್ರಣಗಳನ್ನು ಕ0ಡಿತೆನ್ನುವುದು ಇದರ‌ ಆಕರ್ಷಣೆ ಎ0ಥಾದು ಎನ್ನುವುದನ್ನು ಸೂಚಿಸುತ್ತದೆ.390 ಪುಟಗಳ‌ ಈ ಪುಸ್ತಕ‌ ಕನ್ನಡದ‌ ಒ0ದು ವಿಶಿಷ್ಟ‌ ಆತ್ಮಕಥೆಯಾಗಿದೆ.ಇಲ್ಲಿನ‌ ಕಾದ0ಬರಿಯ0ಥ‌ ಷೈಲಿಯೊ0ದೇ ಇದರ‌ ಆಕರ್ಷಣೆಯಲ್ಲ‌.ಇದು ಕಟ್ಟಿಕೊಡುವ‌ ಬಳ್ಳಾರಿ ಸೀಮೆಯ‌ ದೇಸೀತನ‌, ಆ ಪದಗುಚ್ಛಗಳು, ಹಿ0ದಿನ‌ ತಲೆಮಾರಿನ‌ ಜನರ‌ ಒರಟುತನ‌ ಹಾಗೂ ಭೋಳೇತನಗಳು,ಇವೆಲ್ಲ‌ ಇಲ್ಲಿ ತು0ಬ‌ ಸಹಜರೀತಿಯಲ್ಲಿ ಅವತರಿತವಾಗಿವೆ.ಓದುವಾಗ‌ ಎಲ್ಲಿಯೂ ಬೇಸರವಾಗುವುದಿಲ್ಲ‌. ಅಷ್ಟೇ ಅಲ್ಲ‌, ಇದು ನಮಗೆ ಅಪರಿಚಿತವಾದ‌ ಸಮುದಾಯವೊ0ದರ‌ ನಡಾವಳಿಗಳನು ನಮಗೆ ಪರಿಚಯಿಸಿ ಅವರನ್ನು ನಮ್ಮ‌ ಹತ್ತಿರಕ್ಕೆ ತರುತ್ತದೆ.ಇದೊ0ದು ನಾವುಓದಲೇಬೇಕಾದ‌ ಆತ್ಮಕತೆ.

       …

  • ಯಶವಂತ ಚಿತ್ತಾಲರ “ಶಿಕಾರಿ” ಕಾದಂಬರಿಯನ್ನು ಓದಿ.  ಪ್ರಕಟವಾದ ವರ್ಷ ೧೯೭೯ (ಮನೋಹರ ಗ್ರಂಥಮಾಲಾ, ಧಾರವಾಡ).  ನಾನು ಓದಿದ್ದೂ ಅದೇ ಆವೃತ್ತಿಯನ್ನೇ.  ಹಳೇ ಪುಸ್ತಕ,  ಹೊಸ ಓದುಗ. ಯಶವಂತ ಚಿತ್ತಾಲರು ಲೇಖಕನ ಕೃತಜ್ಞತೆಗಳನ್ನು ಬರೆಯುವಲ್ಲಿ “ಈ ಕಾದಂಬರಿಯು ನನಗೆ ಅತ್ಯಂತ ಸುಖ ಸಮಾಧಾನ ತಂದ ಕೃತಿ” ಎಂದು ಹೇಳಿಕೊಂಡಿದ್ದಾರೆ.  ಓದಿದ ಮೇಲೆ ಅದು ಕನ್ನಡದ ಶ್ರೇಷ್ಠ ಕಾದಂಬರಿಗಳ ಸಾಲಿಗೆ ಸೇರುತ್ತದೆ ಎಂಬ ಭಾವನೆ ನಿಮಗೆ ಬರದಿದ್ದರೆ, ನಿಮಗೆ ಬಹುಶಃ  ಸತ್ಯದ ಅಜೀರ್ಣ ಎಂದೂ ಆಗಿಲ್ಲವೆಂದೇ ಹೇಳಬಹುದು.  ನಮ್ಮ ಮನಸ್ಸಿನ ಭಯಗಳನ್ನು, ದೌರ್ಬಲ್ಯಗಳನ್ನು ಹತೋಟಿಯಲ್ಲಿಟ್ಟುಕೊಳ್ಳಲು ಎಷ್ಟೆಲ್ಲಾ ರೀತಿಯಲ್ಲಿ ‘ಮರೆಮಾಚುವ’ ಕಲೆಯನ್ನು ನಾವು ಚಿಕ್ಕಂದಿನಿಂದಲೇ ರೂಢಿಸಿಕೊಳ್ಳುತ್ತಾ ಬರುತ್ತೇವಲ್ಲವೇ?  ಬೆಳೆಯುತ್ತಾ  ಹೋದಂತೆ ಸತ್ಯವನ್ನು ಔಷಧಿಯ ರೂಪದಲ್ಲಿ…

  • ಈ ಪುಸ್ತಕವನ್ನು ಕೈಗೆತ್ತಿಕೊಂಡಾಗ ನನ್ನ ಮನದ ಮೂಲೆಯಲ್ಲಿ ಇದ್ದ - ಇದು ಕೂಡಾ ಮಧ್ಯಪ್ರಾಚ್ಯದ ಮಹಿಳೆಯರ ಗೋಳಿನ ಕತೆ ಇರಬಹುದೇ? ಎಂಬ ಸಂಶಯ, ಪುಟಗಳು ಸರಿಯುತ್ತಿದ್ದಂತೆ ಮರೆಯಾಯಿತು. ಮಲಾಲಾ ಎಂಬ ಬಾಲಕಿಯ ಕಂಗಳಿಂದ ಕಂಡಂತೆ  ದೇಶದ ರಾಜಕೀಯ , ಸಾಮಾಜಿಕ ತಲ್ಲಣಗಳನ್ನು ಮನ ಮುಟ್ಟುವಂತೆ ಇಲ್ಲಿ  ನಿರೂಪಿಸಲಾಗಿದೆ. ತಾಲಿಬಾನ್ ಎಂಬುದು ಕೇವಲ ಧರ್ಮಾಂಧರ , ದುಷ್ಟರ ಗುಂಪು ಎನ್ನುವುದಕ್ಕಿಂತ ಅದೊಂದು ಸಾಮಾಜಿಕ ಪ್ರಜ್ಞೆ ಎಂಬ ದೃಷ್ಟಿಕೋನ ಎದ್ದು ಕಾಣುತ್ತದೆ. ಜೊತೆಗೆ ಪಾಕಿಸ್ತಾನದ ಚಾರಿತ್ರಿಕ, ಭೌಗೋಳಿಕ ವಿವರಗಳನ್ನೂ ಒಳಗೊಂಡು ಕತೆ ಮುಂದುವರಿಯುವುದು ಓದುಗನಿಗೆ ಮುದ ನೀಡುತ್ತದೆ. ಮಲಾಲಾಳ ಸಾಧನೆಯ ಹಿಂದೆ ಇರುವ ಅವಳ ತಂದೆಯ ವ್ಯಕ್ತಿತ್ವ ನಿಜಕ್ಕೂ ಮೆಚ್ಚುವಂತಹುದು.

    ಪುಸ್ತಕದ ಕನ್ನಡ ಅನುವಾದ ಅತ್ಯಂತ ಸೊಗಸಾಗಿ ಮೂಡಿ ಬಂದಿದೆ.…