ಡಾ.ಎಚ್.ಬಿ.ಚಂದ್ರಶೇಖರ್ ಬರೆದ ‘ಯಶೋ ತೋಷ' ಸಾಧಕರಿಗೊಂದು ಕೈಪಿಡಿ ಎಂಬ ಪುಸ್ತಕಕ್ಕೆ ಡಾ.ಚಂದ್ರಶೇಖರ್ ದಾಮ್ಲೆ ಇವರು ಮುನ್ನುಡಿಯನ್ನು ಬರೆದಿದ್ದಾರೆ. ಅವರು ತಮ್ಮ ಮುನ್ನುಡಿಯಲ್ಲಿ “ಮಾನವ ಜನ್ಮ ದೊಡ್ದದು ಎಂಬುವುದು ದಾಸವಾಣಿ. ಅಂದರೆ ಬದುಕನ್ನು ಅರ್ಥಪೂರ್ಣಗೊಳಿಸಲು ಮಾನವರಿಗೆ ದೊಡ್ದ ಅವಕಾಶಗಳಿವೆ. ಅವನ್ನು ನಾವೇ ಉಪಯೋಗಿಸಬೇಕು. ಹಾಗಾಗಿ ದಾಸರು ಹೇಳುತ್ತಾರೆ ‘ಜೀವನವನ್ನು ವ್ಯರ್ಥಮಾಡಿಕೊಳ್ಳಬೇಡಿರೋ ಹುಚ್ಚಪ್ಪಗಳಿರಾ’ ಎಂದು. ನಮ್ಮನ್ನು ಯಶಸ್ಸಿನ ದಾರಿಯಲ್ಲಿ ಸಾಗುವಂತೆ ಪ್ರೇರೇಪಿಸುವ ಸಂದೇಶ ಈ ದಾಸವಾಣಿಯಲ್ಲಿದೆ.
ಯಶಸ್ಸೆಂಬುದು ಬದುಕಿನ ಒಂದು ಹಂತದ ಸಾಧನೆಯಲ್ಲ. ಬದುಕಿನುದ್ದಕ್ಕೂ ಯಶಸ್ಸನ್ನು ಸಾಧಿಸುವ ಸವಾಲು ಇದ್ದೇ ಇದೆ. ಬಾಲ್ಯ ಕಾಲದಿಂದ ವೃದ್ಧಾಪ್ಯದವರೆಗೂ…