ವಿಶ್ವವಿಖ್ಯಾತ ಸಸ್ಯತಜ್ನರಾದ ದಿವಂಗತ ಡಾ. ಬಿ.ಜಿ.ಎಲ್. ಸ್ವಾಮಿಯವರು ಸಸ್ಯಗಳ ಬಗ್ಗೆ ಬರೆದಿರುವ ಪುಸ್ತಕಗಳನ್ನು ಓದುವುದೇ ಒಂದು ಖುಷಿ. ಯಾಕೆಂದರೆ, ಆ ಬರಹಗಳು ಸಸ್ಯಗಳ ಬಗ್ಗೆ ಮಾಹಿತಿ ಒದಗಿಸುವುದರ ಜೊತೆಗೆ ಕತೆಗಳನ್ನು ಓದುವಾಗಿನ ಆನಂದವನ್ನು ನೀಡುತ್ತವೆ.
ಹಲವು ಮುದ್ರಣಗಳನ್ನು ಕಂಡಿರುವ ಅವರ ಸುಪ್ರಸಿದ್ಧ ಪುಸ್ತಕ "ಹಸುರು ಹೊನ್ನು”. ಅದರಂತೆಯೇ ಸರಾಗವಾಗಿ ಓದಿಸಿಕೊಂಡು ಹೋಗುವ ಸಸ್ಯಗಳ ಕುರಿತಾದ ಇನ್ನೊಂದು ಪುಸ್ತಕ ಇದು. “ಅನ್ಯದೇಶಗಳಿಂದ ಬಂದು ನಮ್ಮಲ್ಲಿ ನೆಲೆಸಿ, ನಮ್ಮ ದಿನ ಜೀವನದಲ್ಲಿ ಬೆರೆತಿರುವ ಗಿಡಮರಗಳು ಇನ್ನೂ ಅನೇಕ ಇವೆ. ಅವುಗಳನ್ನು ಕುರಿತ ಶಾಸ್ತ್ರ ಚರಿತವನ್ನೂ ಸಾಂಸ್ಕೃತಿಕ ಅಧ್ಯಯನವನ್ನೂ ಈಗಾಗಲೇ ಪ್ರಕಟವಾಗಿರುವ ಈ ಎರಡು ಪುಸ್ತಕಗಳಲ್ಲಿ ವಿವರವಾಗಿ ಕೊಟ್ಟಿದ್ದೇನೆ:
(೧) ನಮ್ಮ ಹೊಟ್ಟೆಯಲ್ಲಿ ದಕ್ಷಿಣ…