ಪುಸ್ತಕ ಸಂಪದ

  • ರೋಹಿತ್ ಚಕ್ರತೀರ್ಥ ಗಣಿತ ಉಪನ್ಯಾಸಕರು. ಕನ್ನಡದಲ್ಲಿ ವಿಜ್ಞಾನ ಹಾಗೂ ಗಣಿತದ ವಿಷಯದಲ್ಲಿ ಸರಳವಾಗಿ ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಲೇಖನಗಳನ್ನು ಬರೆಯುತ್ತಾರೆ. ಪತ್ರಿಕೆಗಳಲ್ಲಿ ಅಂಕಣಗಳನ್ನೂ ಬರೆಯುತ್ತಾರೆ. ಅಜ್ಜಿ ಹೇಳಿದ ಕಥೆಗಳು ಎಂಬ ಹೆಸರಿನಲ್ಲಿ ದೇಶ, ವಿದೇಶಗಳ ಮಕ್ಕಳ ಕಥೆಗಳನ್ನು ಹುಡುಕಿ ತಂದು ಪ್ರಕಟಿಸಿದ್ದಾರೆ. ಈಗಿನ ಮಕ್ಕಳು ಕಥೆ ಪುಸ್ತಕ ಓದುವುದೇ ಇಲ್ಲ ಎಂಬ ಅಪವಾದವಿದೆ. ಆದರೆ ರೋಹಿತ್ ಅವರ ಈ ಪುಸ್ತಕವನ್ನು ಮಕ್ಕಳು ಸರಾಗವಾಗಿ ಓದಿ ಮುಗಿಸಬಹುದು ಏಕೆಂದರೆ ಬಹುತೇಕ ಕಥೆಗಳು ಒಂದೆರಡು ಪುಟಗಳಲ್ಲೇ ಮುಗಿದು ಹೋಗುವಷ್ಟು ಚಿಕ್ಕದಾಗಿವೆ ಮತ್ತು ಚೊಕ್ಕದಾಗಿಯೂ ಇವೆ.

    ರೋಹಿತ್ ಅವರು ಮುನ್ನುಡಿಯಲ್ಲಿ ತನ್ನ ಅಜ್ಜಿಯಾದ ಪದ್ಮಾವತಿ ಅಮ್ಮನವರನ್ನು ನೆನಪಿಸಿಕೊಂಡಿದ್ದಾರೆ. ಅಜ್ಜಿಯು ಹೇಳಿದ ಕಥೆಗಳನ್ನು ಕೇಳಿ…

  • ಸಾವಿರದ ಶರಣವ್ವ ತಾಯೇ.....

    `ಕಣ್ಣಾ ಮುಚ್ಚೆ... ಕಾಡೇ ಗೂಡೇ...’ ಒಂದು ಯಶೋಗಾಥೆ. ಕಲಾವಿದೆಯೊಬ್ಬಳ ಯಶಸ್ಸಿನ ಹಿಂದಿನ ಅಗ್ನಿದಿವ್ಯಗಳ ಅನಾವರಣ. ಇಲ್ಲಿ ಬದುಕು ಒಂದು ಸಮುದ್ರದ ಘನತೆ ಪಡೆದುಕೊಂಡಿದೆ. ಅದನ್ನು ಮೊಗೆಯಲು ಬೊಗಸೆಯನ್ನು ನಂಬಿ ಹೊರಟ ಪ್ರೀತಿ ನಾಗರಾಜರು ತಮ್ಮ ಪುಟ್ಟ ಬೊಗಸೆಯಲ್ಲಿ ತುಂಬಿಕೊಳ್ಳಲು ಸಾಧ್ಯವಾದಷ್ಟನ್ನು ನಮಗೂ ಹಂಚಿದ್ದಾರೆ. ಪದ್ಮಶ್ರೀ ಡಾ. ಬಿ. ಜಯಶ್ರೀ ಈ ನಾಡು ಕಂಡ ಅಸಾಧಾರಣ ಕಲಾವಿದೆ.

    ಬಾಲ್ಯವೆಲ್ಲ ರಂಗದ ಮೇಲೆಯೇ ಕಳೆದ ಬಾಲೆ ಆ ದಿನಗಳನ್ನು ನೆನಪಿಸಿಕೊಳ್ಳುವ ಪರಿಯಲ್ಲೇ ನಾಡಿನ ಶ್ರೀಮಂತ ಕಲಾಪರಂಪರೆಯೊಂದು ತನ್ನೊಂದಿಗೇ ನೂರಾರು ಕುಟುಂಬಗಳನ್ನು ಬದುಕಿಸುತ್ತ ಜಾತಿ, ಮತ, ಭೇದವಿಲ್ಲದ ಸಮಸಮಾಜದ ಪರಿಕಲ್ಪನೆಗೆ ಮಾದರಿಯೋ ಎಂಬಂತೆ ಬೆಳೆದುಬಂದ ಬಗೆಯೊಂದು ತೆರೆದುಕೊಳ್ಳುತ್ತದೆ.

    ಕಲಾವಿದರ…

  • ಪತ್ರಕರ್ತ ರಮೇಶ್ ದೊಡ್ಡಪುರ ಇವರು ೨೦೧೯ರ ಲೋಕಸಭಾ ಚುನಾವಣೆಯನ್ನು ಹತ್ತಿರದಿಂದ ಕಂಡು ವರದಿ ಮಾಡಿದವರು. ಅವರು ಕಂಡ ಚುನಾವಣೆಯ ಸಾರ ಸಂಗ್ರಹವೇ ಬಿಜೆಪಿ ೨೫ + ೧ ಕರ್ನಾಟಕದಲ್ಲಿ ಕಮಲ ಅರಳಿದ ಕತೆ ಎಂಬ ಪುಸ್ತಕ. ಈ ಪುಸ್ತಕದ ಬೆನ್ನುಡಿಯಲ್ಲಿ ಬರೆದಂತೆ ‘೨೦೧೮ರ ವಿಧಾನ ಸಭೆ ಚುನಾವಣೆ ಹಾಗೂ ೨೦೧೯ ರ ಲೋಕಸಭಾ ಚುನಾವಣೆ ಅವಧಿಯೇ ದಾಖಲೆಗಳ ಕಾಲಮಾನ. ದೇಶದ ಇತಿಹಾಸದಲ್ಲೇ ಒಂದು ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರವನ್ನು ಪ್ರವಾಸ ಮಾಡಿದ ದಾಖಲೆ ನಿರ್ಮಾಣವಾದದ್ದು (ಬಿ.ಎಸ್. ಯಡಿಯೂರಪ್ಪ) ಇದೇ ಅವಧಿಯಲ್ಲಿ. ದೇಶದ ನ್ಯಾಯಾಂಗ ಇತಿಹಾಸದಲ್ಲಿ ರಾತ್ರಿಯಿಡೀ ವಿಚಾರಣೆ ನಡೆದ ಮೊದಲ ರಾಜಕೀಯ ಪ್ರಕರಣ, ಸುಮಲತಾ ಅಂಬರೀಷ್ ಜಯಿಸುವ ಮೂಲಕ ಪಕ್ಷೇತರ ಅಭ್ಯರ್ಥಿಯೊಬ್ಬರು ರಾಜ್ಯದಿಂದ ಲೋಕಸಭೆಗೆ ಆಯ್ಕೆಯಾದ ಅರ್ಧ ಶತಮಾನದ ದಾಖಲೆ, ರಾಜ್ಯದ ಲೋಕ ಇತಿಹಾಸದಲ್ಲಿ…

  •  “ಮೂಕ ಹಕ್ಕಿಯ ಹಾಡು” ಕೃತಿಯು ಮುಖ್ತಾರ್ ಮಾಯಿಯ ತೀರಾ ಭಿನ್ನವಾದ ದಾರುಣ ಬದುಕನ್ನು ನಮ್ಮ ಮುಂದೆ ತೆರೆದಿಡುವ ಕೃತಿಯಾಗಿದೆ. 

    ಪಾಕಿಸ್ತಾನದ ಕೆಳವರ್ಗದ ಕೃಷಿ ಕುಟುಂಬದಲ್ಲಿ ಬೆಳೆದ ಅನಕ್ಷರಸ್ಥ ಹೆಣ್ಣು ಮಗಳು ಮುಖ್ತಾರ್ ಮಾಯಿ ಸಾಮೂಹಿಕ ಅತ್ಯಾಚಾರದಂತಹ ಕ್ರೌರ್ಯಕ್ಕೆ ಬಲಿಯಾದ ನಂತರ ಅನುಭವಿಸುವ ತೊಳಲಾಟಗಳನ್ನೆಲ್ಲಾ ಮೀರಿಯೂ ಆಕೆ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರದ ಹಿಂದೆ ದೂರ ದೃಷ್ಟಿ ಮತ್ತು ಪ್ರಬುದ್ಧತೆ ಇದೆ.

    ತನ್ನ ಹಳ್ಳಿಯಲ್ಲಿ ಶಾಲೆ ಆರಂಭಿಸಿದ ಆಕೆ, ಶಾಲೆಗೆ ಸಿಕ್ಕಿದ ಪರಿಹಾರದ ಹಣವನ್ನು ಉಪಯೋಗಿಸುವ ರೀತಿಯಲ್ಲೇ ಅವಳ ದೂರದೃಷ್ಟಿ ಪರಿಚಯವಾಗುತ್ತದೆ. ಯಾವುದೇ ಪದ ವೈಭವಗಳಿಲ್ಲದೆ ತಾನು ಕೊನೆಯಲ್ಲಿ ಸಾಧಿಸಿದ ಎತ್ತರದ ಬಗ್ಗೆ ಅಹಂಕಾರವಿಲ್ಲದ ನಿವೇದನೆಯ ಧಾಟಿಯಲ್ಲಿ ಮುಖ್ತಾರ್ ಮಾಯಿ ಕೊನೆಯವರೆಗೂ ಹೇಳುತ್ತಾ…

  • ಮೂಡಬಿದರೆ ಸಮೀಪದ ಊರಿನಲ್ಲಿ ಹುಟ್ಟಿದ ಎಸ್.ಸುರೇಂದ್ರನಾಥ್ ಓದಿ ಬೆಳೆದದ್ದು ದಾವಣಗೆರೆಯಲ್ಲಿ. ನ್ಯಾಶನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ ತರಭೇತಿ. ಹುಲಗೂರ ಹುಲಿಯವ್ವ, ಸಂಕ್ರಮಣ, ಜನತೆಯ ಶತ್ರು, ಆತಂಕವಾದಿಯ ಆಕಸ್ಮಿಕ ಸಾವು ಮುಂತಾದ ಹಲವಾರು ನಾಟಕಗಳನ್ನು ಬರೆದು ನಿರ್ದೇಶಿಸಿದ್ದಾರೆ. ನಾಗಮಂಡಲ, ಕಾನೂರು ಹೆಗ್ಗಡತಿ, ಕೆಂಡಸಂಪಿಗೆ ಮೊದಲಾದ ಕೆಲವು ಚಲನ ಚಿತ್ರಗಳಿಗೆ ಕತೆ/ಚಿತ್ರಕತೆ/ಸಂಭಾಷಣೆ ಬರೆದಿದ್ದಾರೆ. ಹದಿಮೂರು ವರ್ಷಗಳ ಕಾಲ ಈಟಿವಿಯಲ್ಲಿ ಕಾರ್ಯಕ್ರಮಗಳ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಕಟ್ಟು ಕತೆಗಳು, ತಾಪತ್ರಯಗಳು ಇವರ ಕಥಾ ಸಂಕಲನಗಳು. ಕೆಲವು ಕಾದಂಬರಿಗಳನ್ನೂ ಬರೆದಿದ್ದಾರೆ. ರಂಗ ಶಂಕರದಲ್ಲಿ ಕಾರ್ಯಕ್ರಮದ ಉಸ್ತುವಾರಿ. ಪ್ರಸ್ತುತ ಸ್ವತಂತ್ರ ನಾಟಕಕಾರ ಮತ್ತು ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

  • ಸೋಮಾಲಿಯಾದ ಹೆಣ್ಣು ಮಗಳು ವಾರಿಸ್ ಡಿರಿಳ ಆತ್ಮಕಥೆ “ಮರುಭೂಮಿಯ ಹೂ”. ವಾರಿಸ್ ಡಿರಿ ಜಗತ್ತಿನ ಜಾಹಿರಾತು ಲೋಕದಲ್ಲಿ ಒಂದು ಅಚ್ಚಳಿಯದ ಹೆಸರು. ಆತ್ಮಕಥೆಯ ವಸ್ತು, ವಿವರ ಹಾಗೂ ಜಗತ್ ಪ್ರಸಿದ್ಧ ರೂಪದರ್ಶಿಯಾಗಿದ್ದುಕೊಂಡು ವಾರಿಸ್ ಡಿರಿ ತೆರೆದಿಟ್ಟ ತನ್ನ ಬದುಕಿನ ಬಡತನ, ಅಪಮಾನ, ಅತ್ಯಾಚಾರದಂತಹ ಸಂಗತಿಗಳು ಹಾಗೂ ಆಫ್ರಿಕಾದ ಬುಡಕಟ್ಟು ಜನಾಂಗಗಳಲ್ಲಿ ಆಚರಣೆಯಲ್ಲಿರುವ ಯೋನಿ ಛೇದನ ಎಂಬ ಕ್ರೂರ ಪದ್ಧತಿ ಇವೆಲ್ಲವುಗಳಿಂದಾಗಿ ಈ ಕೃತಿಯು ಓದುಗರನ್ನು ಕಾದಂಬರಿಯಂತೆ ಓದಿಸಿಕೊಂಡು ಹೋಗುವ ಗುಣವನ್ನು ಪಡೆದಿದೆ. ಆಕೆ ಅನುಭವಗಳನ್ನು ದಾಖಲಿಸುವ ರೀತಿ ಅನನ್ಯವಾದುದು. ಅನಕ್ಷರಸ್ಥಳಾದರೂ ಇಂಗ್ಲೀಷ್ ಕಲಿತು ಎಷ್ಟೋ ಜನರ ಮುಚ್ಚಿದ ಕಣ್ಣನ್ನು ತೆರೆಯುವಂತೆ ಮಾಡಬಹುದು ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ.

    ವಾರಿಸ್ ಡಿರಿಸಳ ಈ ಆತ್ಮಕಥೆ…

  • ಬೆಂಗಳೂರಿನ ಛಂದ ಪುಸ್ತಕದವರು ಪ್ರತೀ ವರ್ಷ ಉದಯೋನ್ಮುಖ ಬರಹಗಾರರ ಪುಸ್ತಕಗಳನ್ನು ಮುದ್ರಿಸುತ್ತಾರೆ. ೨೦೨೦ರ ಸಾಲಿನಲ್ಲಿ ಬಿಡುಗಡೆಯಾದ ೪ ಪುಸ್ತಕಗಳಲ್ಲಿ ಒಂದು ಪುಸ್ತಕವೇ ಹರೀಶ್ ಹಾಗಲವಾಡಿಯವರ ಕಾದಂಬರಿ ಋಷ್ಯಶೃಂಗ. ತುಮಕೂರಿನ ಬಳಿಯ ಹಾಗಲವಾಡಿಯವರಾದ ಹರೀಶ್ ಇವರಿಗೆ ವಿದ್ಯಾಭ್ಯಾಸದ ಕಾಲದಿಂದಲೂ ಸಂಸ್ಕೃತಿ, ಆಧ್ಯಾತ್ಮಗಳ ಸೆಳೆತ. ಈಗ ಪ್ರಸ್ತುತ ಸಂಸ್ಕೃತ ಅಧ್ಯಾಪಕರಾಗಿ, ಭಾರತೀಯ ಸಂಸ್ಕೃತಿಯ ಸಂಶೋಧಕ ವಿದ್ಯಾರ್ಥಿಯಾಗಿ ದುಡಿಯುತ್ತಾ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ‘ನ್ಯಾಸ' ಇವರ ಮೊದಲ ಕಾದಂಬರಿ.

    ಹರೀಶ್ ಅವರ ಈ ಕಾದಂಬರಿಯಲ್ಲಿ ೯ ಅಧ್ಯಾಯಗಳಿವೆ. ಹರೀಶ್ ಅವರದ್ದು ನೇರವಾಗಿ ಬರೆಯುವ ಸ್ವಭಾವವಲ್ಲ. ಕಾದಂಬರಿಯನ್ನು ಅನೇಕ ಕೋನಗಳಲ್ಲಿ ಬರೆದಿದ್ದಾರೆ. ಓದಲು ಸರಾಗವಾಗಿದ್ದರೂ ಕೆಲವೆಡೆ ಅವರೇ ಪುಸ್ತಕದಲ್ಲಿ ಬರೆದುಕೊಂಡಂತೆ ಈ…

  • ಪ್ರಾಮಾಣಿಕತೆ ಮತ್ತು ಸರಳತೆ ಎಂಬ ವಿಷಯ ಮನಸ್ಸಿಗೆ ಬಂದಾಗಲೆಲ್ಲಾ ನೆನಪಾಗುವುದು ನಮ್ಮ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿಯವರು. ತಮ್ಮ ಬದುಕಿನ ಉದ್ದಕ್ಕೂ ಅವರು ನಂಬಿದ ತತ್ವ ಸಿದ್ಧಾಂತದಂತೆಯೇ ಬಾಳಿ ಬದುಕಿದರು. ಆದರೆ ಅವರ ಸಾವು ಅವರ ಬದುಕಿನಷ್ಟು ಸರಳವಾಗಿರಲಿಲ್ಲ. ಭಾರತ-ಪಾಕಿಸ್ತಾನದ ನಡುವೆ ರಷ್ಯಾದ ತಾಷ್ಕೆಂಟ್ ಎಂಬಲ್ಲಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ರಾತ್ರಿಯೇ ಶಾಸ್ತ್ರೀಜಿಯವರ ಮರಣವಾಗುತ್ತದೆ. ಆದರೆ ಇದು ಸಹಜ ಮರಣ ಅಲ್ಲವೆಂದೇ ಬಹುತೇಕರ ಸಂಶಯ. ಈ ಎಲ್ಲಾ ಸಂಶಯಗಳನ್ನು ನಿವಾರಿಸಲು ಎಸ್.ಉಮೇಶ್ ಅವರು ‘ತಾಷ್ಕೆಂಟ್ ಡೈರಿ' ಎಂಬ ಪುಸ್ತಕವನ್ನು ಬರೆದು ಕನ್ನಡದ ಓದುಗರಿಗಾಗಿ ಹೊರತಂದಿದ್ದಾರೆ. 

    ಪುಸ್ತಕದ ಮುಖಪುಟದಲ್ಲೇ 'ದಿ ಟ್ರ್ಯಾಪ್- ಎಲ್ಲರೂ ಹೇಳುತ್ತಿರುವುದು ಅರ್ಧ ಸತ್ಯವೇ?’ ಎಂದು ಮುದ್ರಿಸಿದ್ದಾರೆ.…

  • ೨೦೦೧ರಲ್ಲಿ ಚೆನ್ನೈನ ಕೊಡೈಕೆನಾಲ್ ನಲ್ಲಿ ನಡೆದ ಒಂದು ಕೊಲೆಯ ಸುತ್ತ ಈ ಪುಸ್ತಕದ ಕಥೆ ಸುತ್ತುತ್ತದೆ. ಕೋಟ್ಯಾಧೀಶ್ವರ, ಖ್ಯಾತ ಶರವಣ ಭವನದ ಮಾಲಕ ಅಣ್ಣಾಚ್ಚಿ ಪಿ. ರಾಜಗೋಪಾಲ್ ಮಾಡಿಸಿದ ಹೇಯ ಕೊಲೆಯ ಬಗ್ಗೆ ಈ ಪುಸ್ತಕ ಬಹಳ ಮಾಹಿತಿ ನೀಡುತ್ತದೆ. ಜ್ಯೋತಿಷ್ಯದ ಮೇಲೆ ರಾಜಗೋಪಾಲ್ ಗೆ ಬಹಳಷ್ಟು ನಂಬಿಕೆ. ಕೃಪಾನಂದ ವಾರಿಯರ್ ಸ್ವಾಮಿಗಳ್ ಭಕ್ತರಾಗಿದ್ದ. ಆದರೆ ಕುಳಂತೈ ಪಂಡಿಚ್ಚಿ ಎಂಬ ಜ್ಯೋತಿಷಿಯ ಮಾತು ಕೇಳಿಯೇ ಈ ಕೊಲೆ ಮಾಡಿಸುವಂತಹ ದುಸ್ಸಾಹಸಕ್ಕೆ ಕೈ ಹಾಕಿದ. ಅತ್ಯಂತ ಕಡು ಬಡತನದ ಹಿನ್ನಲೆಯಿಂದ ಬಂದಿದ್ದ ರಾಜಗೋಪಾಲ್ ಸಣ್ಣವರಿದ್ದಾಗಲೇ ಹೋಟೇಲ್ ಒಂದರಲ್ಲಿ ಕ್ಲೀನರ್ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಇಪ್ಪತೈದು ರೂಪಾಯಿ ಸಂಬಳಕ್ಕೆ ದುಡಿಯುತ್ತಿದ್ದ ವ್ಯಕ್ತಿ ಕಾಲಕ್ರಮೇಣ ಕೋಟ್ಯಾಂತರ ಬೆಲೆ ಬಾಳುವ ಶರವಣ ಹೋಟೇಲ್ ಮಾಲಕನಾದದ್ದು ಕೆಲಸದ ಮೇಲಿನ…

  • ಚೈತ್ರಾ ಕುಂದಾಪುರ ಮೂಲತಃ ಕುಂದಾಪುರದವರಾಗಿದ್ದು ರಾಷ್ಟ್ರೀಯತೆ ಹಿಂದೂಪರ ಚಿಂತನೆಯಲ್ಲಿ ಮಂಚೂಣಿಯಲ್ಲಿರುವವರು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಮುಗಿಸಿರುವ ಇವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿ ಹಲವಾರು ಸಾಮಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡವರು. ಪತ್ರಿಕೆಯಲ್ಲಿ, ಸುದ್ದಿ ವಾಹಿನಿಗಳಲ್ಲಿ, ಕಾಲೇಜು ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸಿರುತ್ತಾರೆ. ಅತ್ಯಂತ ಚಿಕ್ಕ ಪ್ರಾಯದಲ್ಲಿ ಯುವ ಮಾಧ್ಯಮ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.

    ಚೈತ್ರಾ ಕುಂದಾಪುರ ಇವರು ಲವ್ ಜಿಹಾದ್ ಕುರಿತು ಬರೆದ ಪುಸ್ತಕವೇ ಪ್ರೇಮಪಾಶ. ಪ್ರೀತಿಯೆಂಬ ಜಿಹಾದಿನ ಪರದೆಯ ಮೂಲಕ ಹಿಂದೂ ಧರ್ಮದ ಹುಡುಗಿಯರನ್ನು ಅನ್ಯ ಧರ್ಮಕ್ಕೆ ಮತಾಂತರ ಮಾಡುವ ರೀತಿಯನ್ನು ಸವಿವರವಾಗಿ ಈ ಪುಸ್ತಕದಲ್ಲಿ…