ಜೆ. ಆರ್. ಲಕ್ಷ್ಮಣ ರಾವ್ ಬರೆದಿರುವ ಈ ಪುಸ್ತಕ ವಿಜ್ನಾನಿಗಳ ಬಗೆಗಿನ ನಮ್ಮ ಕಲ್ಪನೆಗಳನ್ನೇ ಬುಡಮೇಲು ಮಾಡುತ್ತದೆ. ವಿಜ್ನಾನಿಗಳು ಮಹಾಮೇಧಾವಿಗಳು ಎಂಬುದು ಖಂಡಿತ. ಜಗತ್ತಿನಲ್ಲಿ ಯಾರಿಗೂ ಹೊಳೆಯದ ಐಡಿಯಾಗಳು ಅವರಿಗೆ ಹೊಳೆಯುತ್ತವೆ. ಯಾರಿಗೂ ದಕ್ಕದ ಒಳನೋಟಗಳು ಅವರ ಮನದಲ್ಲಿ ಮಿಂಚುತ್ತವೆ.
ಆದರೆ, ಬೇರೆ ಹಲವಾರು ವಿಷಯಗಳಲ್ಲಿ, ನಡವಳಿಕೆಗಳಲ್ಲಿ ಅವರು ನಮ್ಮೆಲ್ಲರಂತೆಯೇ. ಅವರಿಗೂ ಮರೆವು ಸಹಜ. ಎಲ್ಲಿಯ ವರೆಗೆಂದರೆ, ಒಬ್ಬ ವಿಜ್ನಾನಿಗೆ ಅಂಚೆಕಚೇರಿಯಲ್ಲಿ ಒಂದು ಪತ್ರ ಬರೆಯುತ್ತಿರುವಾಗ ತನ್ನ ಹೆಸರೇ ನೆನಪಿಗೆ ಬಾರದೆ ಅವರು ಪರದಾಡಿ ಬಿಟ್ಟರು. ಅವರೇ ಜಗದ್ವಿಖ್ಯಾತ ಗಣಿತಜ್ನ, ಸೈಬರ್ನೆಟಿಕ್ಸ್ ಶಾಸ್ತ್ರದ ಆದ್ಯ ಪ್ರವರ್ತಕ ನಾರ್ಬರ್ಟ್ ವೀನರ್.
ಕೆಲವು ಪ್ರಸಂಗಗಳನ್ನು ಓದಿದಾಗಲಂತೂ “ಇಂತಹ ಪ್ರಚಂಡ ಬುದ್ಧಿಮತ್ತೆಯ…