*ಡಾ. ರಮಾನಂದ ಬನಾರಿಯವರ ಆತ್ಮ ವೃತ್ತಾಂತ "ಸವೆಯದ ದಾರಿ"*
ಡಾ. ರಮಾನಂದ ಬನಾರಿಯವರ ಆತ್ಮ ವೃತ್ತಾಂತ " ಸವೆಯದ ದಾರಿ"ಯನ್ನು ಮೈಸೂರಿನ ತಾರಾ ಪ್ರಿಂಟ್ಸ್ 2017 ರಲ್ಲಿ ಪ್ರಕಾಶಿಸಿದೆ. 4 + 24 + 288 ಪುಟಗಳ, 250 ರೂಪಾಯಿ ಬೆಲೆಯ ಈ ಕೃತಿಗೆ ಎಡನೀರು ಮಠದ ಕೇಶವಾನಂದ ಭಾರತಿ ಸ್ವಾಮೀಜಿಯವರ ಶುಭನುಡಿ (ಮೌಲ್ಯದ ಹೃದಯವಂತಿಕೆಯ ಆತ್ಮ ವೃತ್ತಾಂತ), ಪ್ರೊ.ಹಂಪ ನಾಗರಾಜಯ್ಯರ ಮುನ್ನುಡಿ (ಸುಶೋಭಿತ ಆತ್ಮಕಥನ), ಕಾಲೇಜು ಉಪನ್ಯಾಸಕರಾದ ಟಿ. ಎ. ಎನ್. ಖಂಡುಗೆಯವರ ಒಳ ನುಡಿ ("ತಿಳಿ" ನೀರಿನಲ್ಲಿ ತೇಲಿ ಬಂದ ಬನಾರಿ "ನಾವೆ") ಮತ್ತು ಪ್ರೊ.ಡಾ. ಬಿ. ಎ. ವಿವೇಕ ರೈಗಳ ಬೆನ್ನುಡಿ ಇದೆ.
ಆತ್ಮ ವೃತ್ತಾಂತ ಕೃತಿಯ ಬರಹಗಳನ್ನು ಡಾ. ಬನಾರಿಯವರು ಮೊದಲ ಪರ್ವ, ಉದ್ಯೋಗ ಪರ್ವ, ಕುಟುಂಬ ಪರ್ವ, ಸಾಹಿತ್ಯ ಪರ್ವ, ಕಲಾ ಪರ್ವ, ಸಂಕೀರ್ಣ ಪರ್ವ…