ಪುಸ್ತಕ ಸಂಪದ

  • *ಡಾ. ರಮಾನಂದ ಬನಾರಿಯವರ ಆತ್ಮ ವೃತ್ತಾಂತ "ಸವೆಯದ ದಾರಿ"*

     ಡಾ. ರಮಾನಂದ ಬನಾರಿಯವರ ಆತ್ಮ ವೃತ್ತಾಂತ " ಸವೆಯದ ದಾರಿ"ಯನ್ನು ಮೈಸೂರಿನ ತಾರಾ ಪ್ರಿಂಟ್ಸ್ 2017 ರಲ್ಲಿ ಪ್ರಕಾಶಿಸಿದೆ. 4 + 24 + 288 ಪುಟಗಳ, 250 ರೂಪಾಯಿ ಬೆಲೆಯ ಈ ಕೃತಿಗೆ ಎಡನೀರು ಮಠದ ಕೇಶವಾನಂದ ಭಾರತಿ ಸ್ವಾಮೀಜಿಯವರ ಶುಭನುಡಿ (ಮೌಲ್ಯದ ಹೃದಯವಂತಿಕೆಯ ಆತ್ಮ ವೃತ್ತಾಂತ), ಪ್ರೊ.ಹಂಪ ನಾಗರಾಜಯ್ಯರ ಮುನ್ನುಡಿ (ಸುಶೋಭಿತ ಆತ್ಮಕಥನ), ಕಾಲೇಜು ಉಪನ್ಯಾಸಕರಾದ ಟಿ. ಎ. ಎನ್. ಖಂಡುಗೆಯವರ ಒಳ ನುಡಿ ("ತಿಳಿ" ನೀರಿನಲ್ಲಿ ತೇಲಿ ಬಂದ ಬನಾರಿ "ನಾವೆ") ಮತ್ತು ಪ್ರೊ.ಡಾ. ಬಿ. ಎ. ವಿವೇಕ ರೈಗಳ ಬೆನ್ನುಡಿ ಇದೆ.

    ಆತ್ಮ ವೃತ್ತಾಂತ ಕೃತಿಯ ಬರಹಗಳನ್ನು ಡಾ. ಬನಾರಿಯವರು ಮೊದಲ ಪರ್ವ, ಉದ್ಯೋಗ ಪರ್ವ, ಕುಟುಂಬ ಪರ್ವ, ಸಾಹಿತ್ಯ ಪರ್ವ, ಕಲಾ ಪರ್ವ, ಸಂಕೀರ್ಣ ಪರ್ವ…

  • ಜೇನು ಕಲ್ಲಿನ ರಹಸ್ಯ ಕಣಿವೆ ಇದು ಮಲೆನಾಡಿನ ರೋಚಕ ಕತೆಗಳು ಸರಣಿಯ ನಾಲ್ಕನೇ ಭಾಗದ ಪುಸ್ತಕ. ಎಂದಿನಂತೆ ಲೇಖಕರಾದ ಗಿರಿಮನೆ ಶ್ಯಾಮರಾವ್ ಅವರು ತಾವು ಮಲೆನಾಡಿನ ಪರಿಸರದಲ್ಲಿ ಅನುಭವಿಸಿದ ರೋಚಕತೆಗಳನ್ನು ಕಾಲ್ಪನಿಕ ಕಥೆಯ ಮೂಲಕ ಅನಾವರಣ ಮಾಡುತ್ತಾ ಹೋಗುತ್ತಾರೆ. ಗಿರಿಮನೆ ಶ್ಯಾಮರಾವ್ ಅವರು ಈ ಪುಸ್ತಕದಲ್ಲಿ ಒಂದು ಕಾಲ್ಪನಿಕ ಕಥೆಯನ್ನು ತುಂಬಾ ಸೊಗಸಾಗಿ ಹೆಣೆದಿದ್ದಾರೆ. ಒಂದೆಡೆ ಜೇನು ಕಲ್ಲಿನ ಗುಡ್ಡದಲ್ಲಿ ಜೇನು ನೊಣಗಳ ಬಗ್ಗೆ ಸಂಶೋಧನೆ ಮಾಡಲು ಬರುವ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಹಾಗೂ ಅವರ ತಂಡ ಮತ್ತೆ ಈ ತಂಡಕ್ಕೆ ಸಹಕಾರ ನೀಡುವ ಅರಣ್ಯ ಇಲಾಖೆಯ ಪೇದೆಗಳು. ಮತ್ತೊಂದೆಡೆ ಅರಣ್ಯಾಧಿಕಾರಿಯಾದ ಚಂದ್ರಪಾಲ್ ಮತ್ತು ಗಾಂಜಾ ಬೆಳೆಯುವ ವ್ಯಕ್ತಿಗಳು. ಅರಣ್ಯ ಇಲಾಖೆಗೆ ಸೇರಿದ ದಟ್ಟ ಅರಣ್ಯದ ನಡುವೆ ಗಾಂಜಾ ಬೆಳೆಯಲು ಚಂದ್ರಪಾಲ್…

  • *ಸುಂದರ ಬಾರಡ್ಕರ "ಪೊಲದ್ಯೆ": ತುಳುವರ ಜನಪದೀಯ ಚಿಕಿತ್ಸಾ ಕ್ರಮಗಳ ಉನ್ನತ ಅಧ್ಯಯನಕ್ಕೆ ಅಡಿಗಲ್ಲು*

    "ಪೊಲದ್ಯೆ", ಸುಂದರ ಬಾರಡ್ಕ ಅವರ ಮೂರನೇ ಪ್ರಕಟಿತ ಸಂಕಲನ. ತುಳು ಜನಪದ ಚಿಕಿತ್ಸೆ, ಆಚರಣೆ ಮತ್ತು ನಂಬಿಕೆಗಳ ಕುರಿತಾದ ಈ ಕೃತಿಯನ್ನು 2016ರಲ್ಲಿ ಬದಿಯಡ್ಕದ ಅಂಬೇಡ್ಕರ್ ವಿಚಾರ ವೇದಿಕೆ (ರಿ) ಪ್ರಕಾಶಿಸಿದೆ. 51 + 9 ಪುಟಗಳ ಕೃತಿಯ ಬೆಲೆ 70.00 ರೂಪಾಯಿ. ನಯನರಾಜ್ ಎನ್. ಬಿ. ಇವರ ಕಲಾತ್ಮಕ ಮುಖಪುಟವಿರುವ ಸಂಕಲನಕ್ಕೆ ಸಾಹಿತಿ ಆತ್ರಾಡಿ ಅಮೃತಾ ಶೆಟ್ಟಿಯವರ ಮುನ್ನುಡಿ ಮತ್ತು ಉಪನ್ಯಾಸಕರೂ, ಸಾಹಿತಿಯೂ ಆಗಿರುವ ಬಾಲಕೃಷ್ಣ ಬೇರಿಕೆ ಇವರ ಬೆನ್ನುಡಿ ಇದೆ.

     "ಪೊಲದ್ಯೆ" ಎಂದರೆ ತುಳುನಾಡಿನಲ್ಲಿ ಬಾಣಂತಿಯರಿಗೆ ಮಾಡುವ ಜನಪದೀಯ ಔಷದೋಪಚಾರ. "ಒಂದು ಜೀವವನ್ನು ಹಡೆದು ಹುದುಗಿಕೊಂಡ ಚೈತನ್ಯವನ್ನು ಪುನರ್ಜೀವಿಸುವ ಮೂಲಕ…

  • ಅಯೋಧ್ಯಾ ಪ್ರಕಾಶನದವರು ತಮ್ಮ ೧೧ನೆಯ ಪುಸ್ತಕವಾಗಿ ರೋಹಿತ್ ಚಕ್ರತೀರ್ಥ ಇವರು ಪರದೇಶದಿಂದ ಹೆಕ್ಕಿ ಕನ್ನಡಕ್ಕೆ ತಂದ ಕಥಾ ಸಂಕಲನ ‘ಮನ ಮೆಚ್ಚಿದ ಹುಡುಗಿ’ ಹೊರ ತಂದಿದ್ದಾರೆ. ರೋಹಿತ್ ಚಕ್ರತೀರ್ಥ ಇವರ ಬಗ್ಗೆ ನಿಮಗೆ ಈಗಾಗಲೇ ತಿಳಿದಿದೆ. ಸುಮಾರು ೨೨ ಪುಸ್ತಕಗಳನ್ನು ಬರೆದು ಪ್ರಕಟಿಸಿರುವ ಇವರು ಗಣಿತ ಹಾಗೂ ವಿಜ್ಞಾನದ ಬಗ್ಗೆ ಸೊಗಸಾಗಿ, ಸರಳ ಪದಗಳಲ್ಲಿ ಬರೆಯುತ್ತಾರೆ. ಕನ್ನಡದ ಪ್ರಮುಖ ದಿನಪತ್ರಿಕೆಗಳಲ್ಲಿ ಇವರು ಅಂಕಣಗಳನ್ನು ಬರೆಯುತ್ತಾರೆ. ಪ್ರಸ್ತುತ ಟೆಸ್ಲಾ ಎಜುಕೇಷನ್ ಎಂಬ ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಶಿಕ್ಷಣದ ಕೆಲವು ಮಹತ್ತರವಾದ ಅಂಶಗಳನ್ನು ಸರಳವಾದ ವಿಡಿಯೋ ಮೂಲಕವೂ ಅವರು ತಿಳಿಸಿಕೊಡುತ್ತಾರೆ. 

    ಮನ ಮೆಚ್ಚಿದ ಹುಡುಗಿ ಈ ಪುಸ್ತಕ ಬಹಳ ಹಿಂದೆಯೇ ಪ್ರಕಟವಾಗಿದ್ದು, ಈಗ ಹೊರ ಬಂದಿರುವುದು ಅದರ ಪರಿಷ್ಕೃತ…

  • ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಇದು ಮಲೆನಾಡಿನ ರೋಚಕ ಕತೆಗಳು ಸರಣಿಯ ಮೂರನೇ ಭಾಗದ ಪುಸ್ತಕ. ಎಂದಿನಂತೆ ಲೇಖಕರಾದ ಗಿರಿಮನೆ ಶ್ಯಾಮರಾವ್ ಅವರು ತಾವು ಮಲೆನಾಡಿನ ಪರಿಸರದಲ್ಲಿ ಅನುಭವಿಸಿದ ರೋಚಕತೆಗಳನ್ನು ಬರಹದಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ‘ಪಶ್ಚಿಮ ಘಟ್ಟ ಅಪರೂಪದ ಪ್ರಕೃತಿ ಸಂಪತ್ತು. ವಿಸ್ಮಯದ ಗೂಡು. ಅದನ್ನಷ್ಟು ಕಳೆದುಕೊಂಡರೆ ನಮಗೆ ಮತ್ತೇನೂ ಇಲ್ಲ. ಇಂದಿನ ತೆವಲಿಗೆ ನಾವು ಅದರ ಬೆಲೆಯೇ ತಿಳಿಯದೆ ಸೂರೆ ಮಾಡುತ್ತಿದ್ದೇವೆ. ಇಂಚಿಂಚಾಗಿ ಅರಣ್ಯ ನಾಶವಾಗುತ್ತಿದೆ. ಅದನ್ನು ಉಳಿಸಿ ಅದರ ಲಾಭ ಪಡೆಯಲು ತಿಳಿಯದ ನಮಗೆ ಅದರ ನಾಶದ ಬಗೆ ಮಾತ್ರ ಚೆನ್ನಾಗಿ ತಿಳಿದಿದೆ. ಆನೆಗಳಂತಹ ಕಾಡುಪ್ರಾಣಿಗಳು ನೆಲೆ ಇಲ್ಲದೆ ಊರಿಗೆ ದಾಳಿ ಮಾಡುತ್ತವೆ’. ಎಂದು ಪುಸ್ತಕದ ಮುನ್ನುಡಿಯಲ್ಲಿ ಲೇಖಕರು ತಮ್ಮ ಮನದಾಳವನ್ನು ಬಿಚ್ಚಿಡುತ್ತಾರೆ.

  • ಮೇರಿ ಶೆಲ್ಲಿ ಹತ್ತೊಂಬತ್ತನೆಯ ಶತಮಾನದಲ್ಲಿ ಬಹುಮಟ್ಟಿಗೆ ಚಾಲ್ತಿಯಲ್ಲಿದ್ದ ಕಾದಂಬರಿಕಾರ್ತಿ. ಅವಳು ತನ್ನ ಹತ್ತೊಂಬತ್ತನೆಯ ವಯಸ್ಸಿನಲ್ಲೇ ಬರೆದ ‘ಫ್ರಾಂಕನ್ ಸ್ಟೈನ್’ ಎಂಬ ಕಾದಂಬರಿ ಅವಳನ್ನು ಜನಪ್ರಿಯತೆಯ ಉತ್ತುಂಗಕ್ಕೆ ಏರಿಸಿಬಿಟ್ಟಿತು. ಮೇರಿ ಶೆಲ್ಲಿ ೧೭೯೭ರ ಆಗಸ್ಟ್ ೩೦ರಂದು ಇಂಗ್ಲೆಂಡಿನಲ್ಲಿ ಹುಟ್ಟಿದಳು. ಉತ್ತಮ ಶಿಕ್ಷಣವನ್ನು ಪಡೆದ ಮೇರಿ, ತನ್ನ ಹದಿನೆಂಟನೇ ವಯಸ್ಸಿನಲ್ಲಿ ತನ್ನದೇ ತಂದೆಯ ಗೆಳೆಯನಾದ ಪರ್ಸಿ ಬಿ.ಶೆಲ್ಲಿ ಜೊತೆ ಪ್ರೇಮಾಂಕುರವಾಗಿ ಅವನ ಜೊತೆ ಪ್ಯಾರಿಸ್ಸಿಗೆ ಓಡಿ ಹೋದಳು. ನಂತರ ಹಲವಾರು ಸಂಕಷ್ಟಗಳನ್ನು ಎದುರಿಸಿ ೧೮೧೬ರಲ್ಲಿ ಮದುವೆಯಾದಳು. ಅವಳ ಪ್ರೇಮಿ ಪರ್ಸಿ ಶೆಲ್ಲಿ ಆ ಕಾಲದ ಪ್ರಮುಖ ಇಂಗ್ಲಿಷ್ ಕವಿಯೂ ಆಗಿದ್ದನು. 

    ೧೮೧೭ರಲ್ಲಿ ಪರ್ಸಿಯ ಗೆಳೆಯನಾದ ಲೇಖಕ ಲಾರ್ಡ್ ಬೈರಾನ್ ನ ಭೂತದ ಕತೆ ಬರೆಯುವ…

  • *ಹಾ. ಮ. ಸತೀಶರ "ಆಸರೆ" : ಪ್ರಕೃತಿಪ್ರೀತಿ, ಪ್ರೇಮದುಯ್ಯಾಲೆ, ಬದುಕಿನ ಕನ್ನಡಿ*

     "ಆಸರೆ", ಹಾ. ಮ. ಸತೀಶ ಅವರ ಮೊದಲ ಕವನ ಸಂಕಲನ. 1997ರಲ್ಲಿ ಮಂಗಳ ಕಲಾ ಸಾಹಿತ್ಯ ವೇದಿಕೆ ಗೂಡಿನಬಳಿ (ಬಂಟ್ವಾಳ ತಾಲೂಕು) ಪ್ರಕಟಿಸಿದ ಆಸರೆಗೆ ಪ್ರೊ. ಡಾ. ಅಮೃತ ಸೋಮೇಶ್ವರರ ಮುನ್ನುಡಿ ಮತ್ತು ಕವಿ, ಗಮಕಿ ಬೆಳ್ತಂಗಡಿಯ ಟಿ. ಸುಬ್ರಹ್ಮಣ್ಯ ಭಟ್ ಅವರ ಬೆನ್ನುಡಿ ಇದೆ.

    "ಆಸರೆ" ಯಲ್ಲಿರುವ ಕವನಗಳು, "ಛಂದೋಬದ್ಧವಾದ ಗೇಯ ರಚನೆಗಳು" ಎನ್ನುವುದನ್ನು ತಮ್ಮ ಮುನ್ನುಡಿಯಲ್ಲಿ ಉಲ್ಲೇಖಿಸಿರುವ ಅಮೃತ ಸೋಮೇಶ್ವರರು, "ತಾರುಣ್ಯ ಸಹಜವಾದ ಕನಸುಗಾರಿಕೆ, ಜೀವನೋತ್ಸಾಹ, ಕುತೂಹಲ, ಅಭೀಷ್ಟೆಗಳು ಸಾಕಷ್ಟು ಪ್ರಮಾಣದಲ್ಲಿ ಕಾಣಿಸಿಕೊಂಡರೂ, ಅತಿಯಾದ ಭಾವೋದ್ರೇಕ, ಆಕ್ರೋಶ, ಬಾಲಿಶ ಕಲ್ಪನಾ ವಿಲಾಸ, ವಿಕ್ಷಿಪ್ತತೆ ಇವುಗಳು ಮೊಗ ತೋರಿಸಿಲ್ಲ" ಎಂದು ಸಮಾಧಾನ…

  • ಗಿರಿಮನೆ ಶ್ಯಾಮರಾವ್ ಮಲೆನಾಡಿನಲ್ಲೇ ಹುಟ್ಟಿ ಬೆಳೆದವರು. ಅಲ್ಲಿಯ ರೋಚಕತೆಯನ್ನು ಇಂಚು ಇಂಚಾಗಿ ಅನುಭವಿಸಿದವರು. ಅವರ ಅನುಭವದ ರೋಚಕ ಘಟನೆಗಳಿಗೇ ಕೃತಿರೂಪಕೊಟ್ಟು ಪ್ರಕಟಿಸಿದ ‘ಮಲೆನಾಡಿನ ರೋಚಕ ಕಥೆಗಳು’ ಎಂಬ ಓದುಗರಿಗೆ ಮೆಚ್ಚುಗೆಯಾಯಿತು. ಅದರ ಫಲವೇ ಅರಮನೆ ಗುಡ್ಡದ ಕರಾಳ ರಾತ್ರಿಗಳು ಪುಸ್ತಕ. ಇದು ಮಲೆನಾಡಿನ ರೋಚಕ ಕಥೆಗಳು ಸರಣಿಯ ಎರಡನೇ ಪುಸ್ತಕ. ಇದು ಕರ್ಮವೀರ ವಾರಪತ್ರಿಕೆಯಲ್ಲಿ ಧಾರವಾಹಿ ರೂಪದಲ್ಲಿ ಈಗಾಗಲೇ ಪ್ರಕಟವಾಗಿದೆ. 

    ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ವಾಸಿಸುತ್ತಿರುವ ಗಿರಿಮನೆ ಶ್ಯಾಮರಾಯರು ಈ ಪುಸ್ತಕದಲ್ಲಿನ ಪರಿಸರವನ್ನು ಅನುಭವಿಸುತ್ತಾ ಬೆಳೆದವರು. ಇದರಲ್ಲಿನ ಕಥೆ ಕಲ್ಪನೆಯಿರಬಹುದು. ಆದರೆ ಪರಿಸರದ ಚಿತ್ರಣ ನೈಜವಾಗಿದೆ. ತಮ್ಮ ಬೆನ್ನುಡಿಯಲ್ಲಿ ಶ್ಯಾಮರಾಯರು ಬರೆಯುತ್ತಾರೆ ‘ ಪಶ್ಚಿಮ ಘಟ್ಟದಲ್ಲಿ ಚಾರಣ…

  • ಮಂಡೂಕ ಮಹಾರಾಜ ಎಂಬ ಹೆಸರಿನಲ್ಲಿ ನೆರೆಹೊರೆಯ ದೇಶಗಳ ಮಕ್ಕಳ ಕಥೆಗಳನ್ನು ಹುಡುಕಿ ತಂದು ರೋಹಿತ್ ಚಕ್ರತೀರ್ಥ ಪ್ರಕಟಿಸಿದ್ದಾರೆ. ಈಗಿನ ಮಕ್ಕಳು ಕಥೆ ಪುಸ್ತಕ ಓದುವುದೇ ಇಲ್ಲ ಎಂಬ ಅಪವಾದವಿದೆ. ಈಗಾಗಲೇ ನೀವು ಅಜ್ಜಿ ಹೇಳಿದ ಕಥೆಗಳು ಓದಿದ್ದರೆ, ಈ ಪುಸ್ತಕದ ಕಥೆಗಳೂ ಅವೇ ಸಾಲಿಗೆ ಸೇರುತ್ತವೆ. ಪುಟ್ಟ ಪುಟ್ಟ ಕಥೆಗಳು ಮಕ್ಕಳಿಗೆ ಓದಲೂ ಚೆನ್ನ, ಮಕ್ಕಳಿಗೆ ಕಥೆಯನ್ನು ಓದಿ ಹೇಳುವ ಹಿರಿಯರಿಗೂ ಅನುಕೂಲ.ರೋಹಿತ್ ಚಕ್ರತೀರ್ಥ ಗಣಿತ ಉಪನ್ಯಾಸಕರು. ಕನ್ನಡದಲ್ಲಿ ವಿಜ್ಞಾನ ಹಾಗೂ ಗಣಿತದ ವಿಷಯದಲ್ಲಿ ಸರಳವಾಗಿ ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಲೇಖನಗಳನ್ನು ಬರೆಯುತ್ತಾರೆ. ಪತ್ರಿಕೆಗಳಲ್ಲಿ ಅಂಕಣಗಳನ್ನೂ ಬರೆಯುತ್ತಾರೆ. 

    ರೋಹಿತ್ ನಿಮ್ಮೊಡನೆ ಒಂದಿಷ್ಟು.. ಎಂಬ ಮುನ್ನುಡಿಯಲ್ಲಿ ‘ಮಕ್ಕಳ ಕಥೆ ಬರೆಯುವುದು ನನಗೆ ಇಷ್ಟ. ಏಕೆಂದರೆ…

  • ಗಿರಿಮನೆ ಶ್ಯಾಮರಾವ್ ಮಲೆನಾಡಿನಲ್ಲೇ ಹುಟ್ಟಿ ಬೆಳೆದವರು. ಅಲ್ಲಿಯ ರೋಚಕತೆಯನ್ನು ಇಂಚು ಇಂಚಾಗಿ ಅನುಭವಿಸಿದವರು. ಅವರ ಅನುಭವದ ರೋಚಕ ಘಟನೆಗಳಿಗೇ ಕೃತಿರೂಪ ನೀಡಿ ‘ಕಾಫಿ ನಾಡಿನ ಕಿತ್ತಳೆ’ ಎಂಬ ಹೆಸರಿನಲ್ಲಿ ಸುಧಾ ವಾರಪತ್ರಿಕೆಯಲ್ಲಿ ಧಾರಾವಾಹಿ ರೂಪದಲ್ಲಿ ಪ್ರಕಟವಾಯಿತು. ಅದರಲ್ಲಿನ ಚಿಂಟಿಯ ಪಾತ್ರದ ಚಿತ್ರಣದ ಭಾಗ ಮಕ್ಕಳ ಸಾಹಿತ್ಯಕ್ಕೆ ಸ್ವೀಕೃತವಾಯಿತು. ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಮಲೆನಾಡಿಗೆ ಸಂಬಂಧಪಟ್ಟ ಬರಹಗಳ ಪ್ರಭಾವವೂ ಈ ಕೃತಿ ರಚನೆಗೆ ಪ್ರಮುಖ ಕಾರಣ ಎನ್ನುತ್ತಾರೆ ಲೇಖಕರು. ‘ಕಾಫಿ ನಾಡಿನ ಕಿತ್ತಳೆ' ಮುಂದೆ ಮುದ್ರಣವಾಗಿ, ನಂತರ ಪರಿಷ್ಕೃತ ಮುದ್ರಣವಾಗುವ ಸಮಯದಲ್ಲಿ ಮಲೆನಾಡಿನ ರೋಚಕ ಕತೆಗಳು ಎಂದಾಯಿತು. 

    ಬೆನ್ನುಡಿಯಲ್ಲಿ ಗಿರಿಮನೆ ಶ್ಯಾಮರಾಯರೇ ಬರೆದುಕೊಂಡಂತೆ ‘ ಬಟ್ಟ ಬಯಲಿನಂತಲ್ಲ ಮಲೆನಾಡು, ಇಲ್ಲಿನ…