ಪುಸ್ತಕ ಸಂಪದ

  • ಕನ್ನಡದಲ್ಲಿ ಲೇಖಕ-ಪ್ರಕಾಶಕ-ಓದುಗರ ನಡುವೆ ಗಾಢ ಸಂಬಂಧವನ್ನು ಏರ್ಪಡಿಸುತ್ತಾ, ಶ್ರೀಸಾಮಾನ್ಯರಲ್ಲಿ ಉತ್ತಮ ವಾಚನಾಭಿರುಚಿಯನ್ನು ಹಾಗೂ ಪುಸ್ತಕ ಪ್ರೀತಿಯನ್ನು ಮೂಡಿಸುತ್ತಾ ರಾಜ್ಯಾದ್ಯಂತ ಓದುಗರಿಗೆ ಒಳ್ಳೆಯ ಪುಸ್ತಕಗಳು ಸುಲಭ ಬೆಲೆಯಲ್ಲಿ ದೊರೆಯುವಂಥ ಸ್ಥಾಯೀ ವ್ಯವಸ್ಥೆಯೊಂದನ್ನು ರೂಪಿಸಿ, ಕನ್ನಡ ಪುಸ್ತಕೋದ್ಯಮವನ್ನು ಜನಪರವಾಗಿ ಮತ್ತು ಧೃಢವಾಗಿ ಬೆಳೆಸುವ ಉದ್ದೇಶದಿಂದ ‘ಕನ್ನಡ ಪುಸ್ತಕ ಪ್ರಾಧಿಕಾರ' ಎಂಬ ದೀರ್ಘಕಾಲಿಕ ಯೋಜನೆಯೊಂದನ್ನು ಸರ್ಕಾರವು ರೂಪಿಸಲು ಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ೧೯೮೯-೯೦ರ ಸಾಲಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯವು ಕೈಗೊಂಡಿರುವ 'ಜನಪ್ರಿಯ ಪುಸ್ತಕ ಮಾಲೆ' ಒಂದು ಮೊದಲ ಹೆಜ್ಜೆ. ಇಂದಿನ ಈ ಪುಸ್ತಕ ಪ್ರಕಟಣೆ ಯೋಜನೆಯು ಮುಂದೆ ‘…

  • ಇತ್ತೀಚೆಗೆ ಮಹಾತ್ಮ ಗಾಂಧೀಜಿಯವರ ಬಗೆಗೆ ವಿಪುಲವಾದ ಸಾಹಿತ್ಯ ಪ್ರಕಟಗೊಳ್ಳುತ್ತಿರುವುದು ಸ್ವಾಗತಾರ್ಹ. ಸಾಮಾನ್ಯವಾಗಿ ಗಾಂಧಿಯ ಬಗೆಗೆ ಬರೆಯುವವರು ಎರಡು ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಒಂದು ಗಾಂಧಿ ಚರಿತ್ರೆಗೆ ಸಂಬಂಧಿಸಿದ್ದು, ಮತ್ತೊಂದು ಗಾಂಧಿವಾದಕ್ಕೆ ಸಂಬಂಧಿಸಿದ್ದು. ಆದರೆ ಉದಯ ಕುಮಾರ ಹಬ್ಬು ಅವರು ಇವೆರಡಕ್ಕಿಂತ ಭಿನ್ನವಾದ, ಇದುವರೆಗೆ ಯಾರೂ ಬರೆಯದ ಕಥನ ಮಾರ್ಗದ ಮೂಲಕ ಗಾಂಧಿಯ ಅಗೋಚರ, ಅಪರಿಚಿತ ಹಾಗೂ ಅಪರೂಪದ ಮಾರ್ಗ ಹಿಡಿದಿರುವುದು ವಿಶೇಷ. ಇಲ್ಲಿ ಮಹಾತ್ಮ ಗಾಂಧಿಯವರ ಜೀವನದಲ್ಲಿ ನಡೆದ ಹತ್ತು ಹಲವು ಪ್ರಸಂಗಗಳಿಗೆ ಕನ್ನಡಿ ಹಿಡಿದಿದ್ದಾರೆ. ಹಬ್ಬು ಅವರು ಗಾಂಧಿಯನ್ನು ನೋಡುವ, ರೂಪಿಸುವ ಮಾದರಿಯೇ ಭಿನ್ನ ಹಾಗೂ ಅನನ್ಯ. 

  • ಕನ್ನಡದಲ್ಲಿ ಲೇಖಕ-ಪ್ರಕಾಶಕ-ಓದುಗರ ನಡುವೆ ಗಾಢ ಸಂಬಂಧವನ್ನು ಏರ್ಪಡಿಸುತ್ತಾ, ಶ್ರೀಸಾಮಾನ್ಯರಲ್ಲಿ ಉತ್ತಮ ವಾಚನಾಭಿರುಚಿಯನ್ನು ಹಾಗೂ ಪುಸ್ತಕ ಪ್ರೀತಿಯನ್ನು ಮೂಡಿಸುತ್ತಾ ರಾಜ್ಯಾದ್ಯಂತ ಓದುಗರಿಗೆ ಒಳ್ಳೆಯ ಪುಸ್ತಕಗಳು ಸುಲಭ ಬೆಲೆಯಲ್ಲಿ ದೊರೆಯುವಂಥ ಸ್ಥಾಯೀ ವ್ಯವಸ್ಥೆಯೊಂದನ್ನು ರೂಪಿಸಿ, ಕನ್ನಡ ಪುಸ್ತಕೋದ್ಯಮವನ್ನು ಜನಪರವಾಗಿ ಮತ್ತು ಧೃಢವಾಗಿ ಬೆಳೆಸುವ ಉದ್ದೇಶದಿಂದ ‘ಕನ್ನಡ ಪುಸ್ತಕ ಪ್ರಾಧಿಕಾರ' ಎಂಬ ದೀರ್ಘಕಾಲಿಕ ಯೋಜನೆಯೊಂದನ್ನು ಸರ್ಕಾರವು ರೂಪಿಸಲು ಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ೧೯೮೯-೯೦ರ ಸಾಲಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯವು ಕೈಗೊಂಡಿರುವ 'ಜನಪ್ರಿಯ ಪುಸ್ತಕ ಮಾಲೆ' ಒಂದು ಮೊದಲ ಹೆಜ್ಜೆ. ಇಂದಿನ ಈ ಪುಸ್ತಕ ಪ್ರಕಟಣೆ ಯೋಜನೆಯು ಮುಂದೆ ‘…

  • ಜೆ. ಆರ್. ಲಕ್ಷ್ಮಣ ರಾವ್ ಬರೆದಿರುವ ಈ ಪುಸ್ತಕ ವಿಜ್ನಾನಿಗಳ ಬಗೆಗಿನ ನಮ್ಮ ಕಲ್ಪನೆಗಳನ್ನೇ ಬುಡಮೇಲು ಮಾಡುತ್ತದೆ. ವಿಜ್ನಾನಿಗಳು ಮಹಾಮೇಧಾವಿಗಳು ಎಂಬುದು ಖಂಡಿತ. ಜಗತ್ತಿನಲ್ಲಿ ಯಾರಿಗೂ ಹೊಳೆಯದ ಐಡಿಯಾಗಳು ಅವರಿಗೆ ಹೊಳೆಯುತ್ತವೆ. ಯಾರಿಗೂ ದಕ್ಕದ ಒಳನೋಟಗಳು ಅವರ ಮನದಲ್ಲಿ ಮಿಂಚುತ್ತವೆ.

    ಆದರೆ, ಬೇರೆ ಹಲವಾರು ವಿಷಯಗಳಲ್ಲಿ, ನಡವಳಿಕೆಗಳಲ್ಲಿ ಅವರು ನಮ್ಮೆಲ್ಲರಂತೆಯೇ. ಅವರಿಗೂ ಮರೆವು ಸಹಜ. ಎಲ್ಲಿಯ ವರೆಗೆಂದರೆ, ಒಬ್ಬ ವಿಜ್ನಾನಿಗೆ ಅಂಚೆಕಚೇರಿಯಲ್ಲಿ ಒಂದು ಪತ್ರ ಬರೆಯುತ್ತಿರುವಾಗ ತನ್ನ ಹೆಸರೇ ನೆನಪಿಗೆ ಬಾರದೆ ಅವರು ಪರದಾಡಿ ಬಿಟ್ಟರು. ಅವರೇ ಜಗದ್ವಿಖ್ಯಾತ ಗಣಿತಜ್ನ, ಸೈಬರ್ನೆಟಿಕ್ಸ್ ಶಾಸ್ತ್ರದ ಆದ್ಯ ಪ್ರವರ್ತಕ ನಾರ್ಬರ್ಟ್ ವೀನರ್.

    ಕೆಲವು ಪ್ರಸಂಗಗಳನ್ನು ಓದಿದಾಗಲಂತೂ “ಇಂತಹ ಪ್ರಚಂಡ ಬುದ್ಧಿಮತ್ತೆಯ…

  • ಬಂಗಾಲಿ ಭಾಷೆಯ ಕಥಾ ಸಾಮ್ರಾಟರಾದ ಶರಶ್ಚಂದ್ರ ಚಟ್ಟೋಪಾಧ್ಯಯ ಅವರ ಪುಟ್ಟ ಕಾದಂಬರಿಯೇ ‘ಅನುಪಮೆಯ ಪ್ರೇಮ'. ಇದು ಶರಶ್ಚಂದ್ರರ ಮೂರನೆಯ ಕಾದಂಬರಿ. ‘ಬಿರಾಜ್ ಬಹೂ’ (ಕುಲವಧು) ಎಂಬ ಹೆಸರಿನಲ್ಲಿ ಬರೆದ ಈ ಕಾದಂಬರಿಯು ಮೊದಲ ಬಾರಿಗೆ ೧೯೧೪ರಲ್ಲಿ ಪ್ರಕಟವಾಯಿತು. ನಂತರದ ದಿನಗಳಲ್ಲಿ ಹಲವಾರು ಭಾಷೆಗಳಲ್ಲಿ ಅನುವಾದವೂ ಆಗಿದೆ. ಶರಶ್ಚಂದ್ರರ ಕಾದಂಬರಿಗಳನ್ನು ಓದುತ್ತಿದ್ದಂತೆ ನೀವು ಶತಮಾನಗಳಷ್ಟು ಹಳೆಯದಾದ ಬಂಗಾಲಕ್ಕೆ ಹೋಗುತ್ತೀರಿ. ಆಗಿನ ರೀತಿ ರಿವಾಜುಗಳು, ವೈವಾಹಿಕ ಜೀವನದ ಕ್ರಮ, ವಿಧವೆಯರ ಜೀವನ ಶೈಲಿ, ಜನರ ಬದುಕಿನ ಕ್ರಮ ಹೀಗೆ ಹತ್ತು ಹಲವಾರು ವಿಷಯಗಳು ತಿಳಿದು ಬರುತ್ತದೆ. 

    ಅನುವಾದವೂ ಹಳೆಯ ಕಾಲದ ಕನ್ನಡ ಭಾಷಾ ಪ್ರಯೋಗವನ್ನು ಬಿಂಬಿಸುತ್ತದೆ. ಈ ಪುಸ್ತಕ ಓದುತ್ತಾ ಕಥೆ…

  • ‘ಆರೋಗ್ಯವೇ ಭಾಗ್ಯ' ಎನ್ನುವ ಈ ಕಾಲದಲ್ಲಿ ನಾವು ನಮ್ಮ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಸದಾ ಕಾರ್ಯನಿರತರಾಗಿರಬೇಕು. ಆರೋಗ್ಯದ ಬಗ್ಗೆ ತಿಳಿಸಲು ಹಲವಾರು ಪುಸ್ತಕಗಳು ಬಂದಿವೆ. ಮಂಗಳೂರಿನ ವೈದ್ಯ ದಂಪತಿಗಳಾದ ಶ್ರೀವತ್ಸ ಹಾಗೂ ಅನಸೂಯಾ ದೇವಿಯವರು ‘ಆರೋಗ್ಯಮಸ್ತು' ಎಂಬ ಸೊಗಸಾದ ಮಾಹಿತಿಪೂರ್ಣ ಪುಸ್ತಕವನ್ನು ರಚಿಸಿದ್ದಾರೆ. ಇದರಲ್ಲಿ ಆಯುರ್ವೇದ ಪದ್ಧತಿ, ಮದ್ದು ಹಾಗೂ ಅವುಗಳ ಬಳಕೆ ಕುರಿತಾಗಿ ಬಹಳ ಸೊಗಸಾದ ಮಾಹಿತಿಯನ್ನು ನೀಡಿದ್ದಾರೆ.

    “ವಿಶ್ವವಿಖ್ಯಾತ ಸಸ್ಯ ಔಷಧ ವಿಜ್ಞಾನಿ ದಿ.ಡಾ. ಪಳ್ಳತ್ತಡ್ಕ ಕೇಶವ ಭಟ್ಟರ ಕುಟುಂಬದ ಶಿಷ್ಯರಾದ ವೈದ್ಯ ಶ್ರೀವತ್ಸ ಭಾರಧ್ವಾಜ ಹಾಗೂ ಅನಸೂಯಾ ದೇವಿ ಆಯುರ್ವೇದ ದಂಪತಿಗಳು. ಇವರಿಂದ ನಾಡಿವಿಜ್ಞಾನ, ಮೂಲಿಕೆಗಳ ಪರಿಚಯ,…

  • ಭಾರತ ಸ್ವತಂತ್ರವಾದ ನಂತರ ಎರಡು ತಲೆಮಾರುಗಳ ಕರ್ನಾಟಕದ ಗ್ರಾಮೀಣ ಬದುಕನ್ನು ಆಪ್ತವಾಗಿ ಕಟ್ಟಿಕೊಡುವ ಪುಸ್ತಕ ಇದು. ಇದನ್ನು ಓದುತ್ತ ಹೋದಂತೆ, ಈಗಿನ ಹಳ್ಳಿಗಳು ಎಷ್ಟು ಬದಲಾಗಿವೆ ಎಂಬುದು ನಮ್ಮನ್ನು ಗಾಢವಾಗಿ ತಟ್ಟುತ್ತದೆ.

    ಪುಸ್ತಕದ ಮುನ್ನುಡಿ ಬರೆದವರು “ಮಂಕುತಿಮ್ಮನ ಕಗ್ಗ" ಖ್ಯಾತಿಯ ಮಾನ್ಯ ಡಿ. ವಿ. ಗುಂಡಪ್ಪನವರು. ಹಾಸ್ಯ ಪ್ರಜ್ನೆ ಮತ್ತು ಹಾಸ್ಯದ ಸ್ವರೂಪದ ಬಗ್ಗೆ ಮುನ್ನುಡಿಯಲ್ಲಿ ಬರೆಯುತ್ತಾ, ಪಾಶ್ಚಾತ್ಯ ಜನರ ಬದುಕಿನ ಹಾಸ್ಯಪ್ರಸಂಗಗಳು ವಾರ ವಾರವೂ ದಿನ ದಿನವೂ ಹೇಗೆ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿವೆ ಎಂಬುದನ್ನು ಪ್ರಸ್ತಾಪಿಸಿದ್ದಾರೆ. ಮುಂದುವರಿದು ಅವರು ಹೀಗೆ ಬರೆದಿದ್ದಾರೆ: “ಈ ಬಗೆಯ ಉಪಕಾರವು ನಮಗೆ ಶ್ರೀಮಾನ್ ರಾಮಸ್ವಾಮಯ್ಯಂಗಾರ್ಯರಂಥ ಲೇಖಕರಿಂದ ಆಗಬೇಕಾಗಿದೆ. ರಾಮಸ್ವಾಮ-ಯ್ಯಂಗಾರ್ಯರವರು ನಮ್ಮ ಸಮಾಜದ…

  • ಯಕ್ಷಗಾನದಲ್ಲಿ ಭಾಗವತಿಕೆ ಪುರುಷರಿಗೆ ಮಾತ್ರ ಸೈ ಅನ್ನುವ ಸಮಯದಲ್ಲಿ ಲೀಲಾವತಿ ಬೈಪಾಡಿತ್ತಾಯ ಅವರು ಭಾಗವತಿಕೆಯನ್ನು ಮಾಡಲು ಪ್ರಾರಂಭಿಸಿದರು. ಪ್ರಾರಂಭದ ವಿರೋಧದ ನಡುವೆಯೇ ಧೃತಿಗೆಡದೇ ತಮ್ಮ ಕಾಯಕವನ್ನು ಮುಂದುವರೆಸಿಕೊಂಡು ಬಂದರು. ಇವರು ಯಕ್ಷಗಾನ ರಂಗದ ಪ್ರಥಮ ಮಹಿಳಾ ಭಾಗವತರು ಎಂಬ ಖ್ಯಾತಿಯನ್ನು ಪಡೆದುಕೊಂಡಿದ್ದಾರೆ. ಇವರ ಆತ್ಮಕಥೆಯನ್ನು ಪತ್ರಕರ್ತೆ ವಿದ್ಯಾರಶ್ಮಿ ಪೆಲತಡ್ಕ ಅವರು ಸೊಗಸಾಗಿ ನಿರೂಪಿಸಿ ಅದನ್ನು ‘ಯಕ್ಷ ಗಾನ ಲೀಲಾವಳಿ' ಎಂಬ ಹೆಸರಿನಲ್ಲಿ ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ. 

    ಈ ಕೃತಿಗೆ ಮುನ್ನುಡಿ ಬರೆದ ಹಿರಿಯ ಲೇಖಕ ಲಕ್ಷ್ಮೀಶ ತೋಳ್ಪಾಡಿ ಇವರ ಪ್ರಕಾರ “ಯಕ್ಷಮೇಳದ ತಿರುಗಾಟದಲ್ಲಿ ಭಾಗವಹಿಸಿದ ಮೊದಲ ಮಹಿಳಾ ಭಾಗವತರೆಂಬ ಇತಿಹಾಸವನ್ನು ಲೀಲಮ್ಮ…

  • ‘ಕಾಡು ತಿಳಿಸಿದ ಸತ್ಯಗಳು' ಗಿರಿಮನೆ ಶ್ಯಾಮರಾವ್ ಅವರ ಮಲೆನಾಡಿನ ರೋಚಕ ಕಥೆಗಳು ಸರಣಿಯ ೧೨ನೇ ಭಾಗ. ಇದೊಂದು ವೈಚಾರಿಕ ಕಾದಂಬರಿ. ಮಲೆನಾಡಿನ ಸೊಗಸಾದ ಚಿತ್ರವನ್ನು ಹೊಂದಿರುವ ಮುಖಪುಟವನ್ನು ಹೊದ್ದಿಕೊಂಡಿರುವ ಈ ಪುಸ್ತಕ ಬಹಳ ರೋಚಕವಾಗಿದೆ. 

    ಗಿರಿಮನೆ ಶ್ಯಾಮರಾವ್ ಅವರೇ ತಮ್ಮ ಬೆನ್ನುಡಿಯಲ್ಲಿ ಕಾದಂಬರಿಯ ಕುರಿತು “ ಈ ಜಗತ್ತು ಅಧ್ಬುತ ! ವೈವಿಧ್ಯಮಯ ! ವಿಸ್ಮಯಗಳ ಆಗರ! ಜೊತೆಗೇ ನಿಗೂಢ! ದಿನನಿತ್ಯದ ಬದುಕಿಗಾಗಿ ಎಲ್ಲರೂ ಓಡಾಡುತ್ತಿರುತ್ತಾರೆ. ಕೆಲವೇ ಕೆಲವರು ಹಾಗೆ ಓಡುವವರನ್ನು ನೋಡುತ್ತಿರುತ್ತಾರೆ ! ಓಡುವಾಗ ಈ ಜಗತ್ತು ಮತ್ತು ಇಲ್ಲಿರುವ ಜೀವರಾಶಿಗಳ ಅದ್ಭುತ ವ್ಯವಹಾರಗಳ ಕಡೆ ಗಮನವೇ ಹರಿಯುವುದಿಲ್ಲ…

  • ಕನ್ನಡದಲ್ಲಿ ಲೇಖಕ-ಪ್ರಕಾಶಕ-ಓದುಗರ ನಡುವೆ ಗಾಢ ಸಂಬಂಧವನ್ನು ಏರ್ಪಡಿಸುತ್ತಾ, ಶ್ರೀಸಾಮಾನ್ಯರಲ್ಲಿ ಉತ್ತಮ ವಾಚನಾಭಿರುಚಿಯನ್ನು ಹಾಗೂ ಪುಸ್ತಕ ಪ್ರೀತಿಯನ್ನು ಮೂಡಿಸುತ್ತಾ ರಾಜ್ಯಾದ್ಯಂತ ಓದುಗರಿಗೆ ಒಳ್ಳೆಯ ಪುಸ್ತಕಗಳು ಸುಲಭ ಬೆಲೆಯಲ್ಲಿ ದೊರೆಯುವಂಥ ಸ್ಥಾಯೀ ವ್ಯವಸ್ಥೆಯೊಂದನ್ನು ರೂಪಿಸಿ, ಕನ್ನಡ ಪುಸ್ತಕೋದ್ಯಮವನ್ನು ಜನಪರವಾಗಿ ಮತ್ತು ಧೃಢವಾಗಿ ಬೆಳೆಸುವ ಉದ್ದೇಶದಿಂದ ‘ಕನ್ನಡ ಪುಸ್ತಕ ಪ್ರಾಧಿಕಾರ' ಎಂಬ ದೀರ್ಘಕಾಲಿಕ ಯೋಜನೆಯೊಂದನ್ನು ಸರ್ಕಾರವು ರೂಪಿಸಲು ಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ೧೯೮೯-೯೦ರ ಸಾಲಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯವು ಕೈಗೊಂಡಿರುವ 'ಜನಪ್ರಿಯ ಪುಸ್ತಕ ಮಾಲೆ' ಒಂದು ಮೊದಲ ಹೆಜ್ಜೆ. ಇಂದಿನ ಈ ಪುಸ್ತಕ ಪ್ರಕಟಣೆ ಯೋಜನೆಯು ಮುಂದೆ ‘…