ಪುಸ್ತಕ ಸಂಪದ

  • ಧರ್ಮ, ತತ್ತ್ವ ದರ್ಶನ ಹಾಗೂ ಪುರಾಣ ಈ ವಿಚಾರಗಳನ್ನು ಒಳಗೊಂಡ ಮಾಹಿತಿಯನ್ನು ಪುಸ್ತಕದ ಮೂಲಕ ಹಂಚಿಕೊಂಡಿದ್ದಾರೆ ಈ ಕೃತಿಯ ಲೇಖಕರಾದ ಡಾ. ಎಂ.ಪ್ರಭಾಕರ ಜೋಶಿಯವರು. ಇವರು ನಿವೃತ್ತ ಪ್ರಾಂಶುಪಾಲರು, ಹಿರಿಯ ಸಂಸ್ಕೃತಿ ತಜ್ಞ, ಅಗ್ರಪಂಕ್ತಿಯ ಅರ್ಥದಾರಿ, ಕಲಾವಿಮರ್ಶಕ, ಸಂಶೋಧಕ, ಕವಿ, ಅಂಕಣಕಾರ, ಕಲಾ ಕಾರ್ಯಕರ್ತ ಹಾಗೂ ನಾಡಿನ ಬಹುಶ್ರುತ ವಿಧ್ವಾಂಸರಲ್ಲೊಬ್ಬರು. ಇವರು ಈ ಪುಸ್ತಕದಲ್ಲಿ ಭಾರತೀಯ ದರ್ಶನ ಶಾಸ್ತ್ರ, ಚಿಂತನ ವಿಧಾನ, ಪುರಾಣ ವಿಚಾರಗಳನ್ನು ಪಂಥೀಯ ಅತಿವಾದಗಳಿಲ್ಲದ, ಒಂದು ಉದಾರ ಗ್ರಹಿಕೆಯಿಂದ ನೋಡುವ, ಅರ್ಥೈಸುವಿಕೆಗೆ ಪ್ರಚೋದಿಸುವ, ಚರ್ಚೆಗಳನ್ನು ಪ್ರೇರಿಸುವ ಬರಹಗಳಿವೆ.

    ಇವರು ತಮ್ಮ ಮುನ್ನುಡಿ ‘ಅರಿಕೆ'ಯಲ್ಲಿ ಬರೆಯುತ್ತಾರೆ “ಧರ್ಮ, ತತ್ತ್ವಶಾಸ್ತ್ರ…

  • ರವಿ ಬೆಳಗೆರೆಯವರ ನಿಧನದ ಬಳಿಕ ಹೊರ ಬಂದ ಪುಸ್ತಕಗಳಲ್ಲಿ ಇದು ಒಂದು. ಬಹಳ ಹಿಂದೆ ‘ಒಟ್ಟಾರೆ ಕಥೆಗಳು' ಹೆಸರಿನಲ್ಲಿ ಹಲವಾರು ಕಥೆಗಳು ಪ್ರಕಟವಾದುದ್ದಿದೆ. ಆ ಪುಸ್ತಕದ ಪ್ರತಿಗಳು ಮುಗಿದಿದ್ದವು. ಅವೇ ಕಥೆಗಳಿಗೆ ಇನ್ನಷ್ಟು ಕಥೆಗಳನ್ನು ಸೇರಿಸಿ ರವಿ ಬೆಳಗೆರೆಯವರ ಸಮಗ್ರ ಕಥೆಗಳನ್ನು ಪುಸ್ತಕ ರೂಪದಲ್ಲಿ ಹೊರತರಲಾಗಿದೆ. ಒಂದು ರೀತಿಯಲ್ಲಿ ಈ ಪುಸ್ತಕವನ್ನು ಓದಿದರೆ ರವಿ ಬೆಳಗೆರೆಯವರ ಎಲ್ಲಾ ಕಥೆಗಳನ್ನು ಒಂದೇ ಗುಕ್ಕಿನಲ್ಲಿ ಓದಿದಂತೆ ಆಗುತ್ತದೆ. ಬೆಳಗೆರೆಯವರ ಕಥೆಗೆಗಳಿಗೆ ತಮ್ಮದೇ ಆದ ಶೈಲಿ ಇದೆ. ಪತ್ರಿಕೋದ್ಯಮದ ಗಿರಣಿಗೆ ಬಿದ್ದ ಇವರು ನಂತರ ಕಥೆ ಬರೆದದ್ದು ಕಮ್ಮಿಯೇ. ಆದುದರಿಂದ ಈ ಪುಸ್ತಕದಲ್ಲಿರುವ ೨೩ ಕಥೆಗಳು ಮಹತ್ವಪೂರ್ಣವಾಗಿವೆ.  

    ತಮ್ಮ ಬೆನ್ನುಡಿಯಲ್ಲಿ ರವಿ…

  • ಸಪ್ನ ಬುಕ್ ಹೌಸ್ ಅವರು ಪ್ರಕಾಶಿಸಿದ ಜಗತ್ತಿನ ಪ್ರಸಿದ್ಧ ವ್ಯಕ್ತಿಗಳು ಪುಸ್ತಕವು ವಾಲ್ಮೀಕಿಯಿಂದ ರಾಜೀವ್ ಗಾಂಧಿವರೆಗಿನ ೩೦೪ ಸ್ತ್ರೀ-ಪುರುಷರ ಜೀವನ - ಸಾಧನೆಗಳ ಮೂಲಕ ಪ್ರಪಂಚದ ಇತಿಹಾಸದ ಒಂದು ಇಣುಕುನೋಟವನ್ನು ತೋರಿಸಲು ಲೇಖಕರು ಹೊರಟಿದ್ದಾರೆ. ತಾಯಿನಾಡಿಗಾಗಿ ದುಡಿದವರ ಬಗ್ಗೆ ಯುವಜನರಿಗೆ ಪರಿಚಯ ಮಾಡಿಕೊಟ್ಟು, ಅವರು ಸಮಾಜದ ಹಿರಿಯರ ಸದ್ಗುಣಗಳಿಂದ ಸ್ಪೂರ್ತಿ ಪಡೆದು, ತ್ಯಾಗ ಮಾಡಬಲ್ಲವರಾಗಿ, ಸಿದ್ಧಿ ಪಡೆಯುವಂತೆ ಮಾಡಬೇಕು. ವಿವಿಧ ಯುಗದ, ವಿವಿಧ ಕ್ಷೇತ್ರಗಳ, ಅನೇಕ ಹಿರಿಯ ಚೇತನಗಳ ಹಾಗೂ ಬದುಕಿಗೆ ಹೆಚ್ಚಿನ ಸಂಸ್ಕಾರವನ್ನು ಒದಗಿಸಬಲ್ಲ ಮಹಾನ್ ವ್ಯಕ್ತಿಗಳ ಪರಿಚಯ ಯುವಜನರಿಗೆ ಆಗಬೇಕು ಎನ್ನುವುದು ಈ ಪುಸ್ತಕದ ಉದ್ದೇಶ.

    ಹಲವಾರು ಜನರ ವಿವರಗಳು ಇವೆಯಾದರೂ ಬಹಳ…

  • ರಘು ಇಡ್ಕಿದು ಇವರು ವೃತ್ತಿಯಲ್ಲಿ ಉಪನ್ಯಾಸಕರು. ಇವರು ಉತ್ತಮ ಕವಿ ಹಾಗೂ ಬರಹಗಾರರು. ಇವರ ಹಲವಾರು ಪುಸ್ತಕಗಳು ಈಗಾಗಲೇ ಪ್ರಕಟವಾಗಿವೆ. ಕೊರಗ ತನಿಯ ಎಂಬುವುದು ಇವರು ಬರೆದಿರುವ ಕನ್ನಡ ನಾಟಕ. ಡಾ.ಬಿ.ಎ.ವಿವೇಕ್ ರೈ ಅವರು ತಮ್ಮ ಮುನ್ನುಡಿಯಲ್ಲಿ ಬರೆಯುತ್ತಾರೆ “ತುಳು ಮತ್ತು ಕನ್ನಡದಲ್ಲಿ ನಿರಂತರ ಸಾಹಿತ್ಯ ಕೃಷಿ ಮಾಡುತ್ತಾ ಬರುತ್ತಿರುವ ರಘು ಇಡ್ಕಿದು ತಮ್ಮ ಸಜ್ಜನಿಕೆ, ಭಾಷಾ ಪ್ರೀತಿ, ಸಾಹಿತ್ಯ ಸೃಷ್ಟಿ ಮತ್ತು ಸಮತೋಲನದ ಜೀವನದೃಷ್ಟಿಗಳ ಕಾರಣವಾಗಿ ಕರಾವಳಿಯ ಹೊಸ ಪೀಳಿಗೆಯ ಲೇಖಕರಲ್ಲಿ ಅನನ್ಯರಾಗಿದ್ದಾರೆ.

    ರಘು ಅವರು ತುಳು ಪಾಡ್ದನದ ಕಥಾಶರೀರವನ್ನು ಇಟ್ಟುಕೊಂಡೇ ಅದರ ಸಾಮಾಜಿಕ ಧ್ವನಿಗಳನ್ನು ಇಂದಿನ ಕಾಲಕ್ಕೂ ಅನ್ವಯಿಸುವಂತೆ ‘ಕೊರಗ ತನಿಯ' ನಾಟಕದಲ್ಲಿ…

  • *ಉಪ್ಪುಂದ ಚಂದ್ರಶೇಖರ ಹೊಳ್ಳರ ಅಭಿನಂದನ ಗ್ರಂಥ "ಉಪ್ಪುಂದದ ಹೊಳಪು"*

    " ಉಪ್ಪುಂದದ ಹೊಳಪು" , ಉಪ್ಪುಂದ ಚಂದ್ರಶೇಖರ ಹೊಳ್ಳರ ಅಭಿನಂದನ ಗ್ರಂಥ. ಡಾ. ಕನರಾಡಿ ವಾದಿರಾಜ ಭಟ್ಟರು ಪ್ರಧಾನ ಸಂಪಾದಕರು. ನೀಲಾವರ ಸುರೇಂದ್ರ ಅಡಿಗ, ಯು. ಗಣೇಶ ಪ್ರಸನ್ನ ಮಯ್ಯ, ಎಂ. ಪ್ರಕಾಶ ಪಡಿಯಾರ್, ಸಂತೋಷ ಕೋಣಿ ಹಾಗೂ ಪ್ರಕಾಶ್ಚಂದ್ರ ಶೆಟ್ಟಿ ಹಲ್ನಾಡು ಇವರು ಸಂಪಾದಕೀಯ ಮಂಡಳಿ ಸದಸ್ಯರು.. 16 + 314 + 16 ಪುಟಗಳ, 400 ರೂಪಾಯಿ ಬೆಲೆಯ ಗ್ರಂಥವನ್ನು 2016ರಲ್ಲಿ "ಕುಂದ ಅಧ್ಯಯನ ಕೇಂದ್ರ" (ಶಂಕರ ಕಲಾ ಮಂದಿರ, ಉಪ್ಪುಂದ- 576232, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ) ಪ್ರಕಟಿಸಿದೆ.

    ಖ್ಯಾತ ಚಿತ್ರ ಕಲಾವಿದ ಪಿ. ಎನ್. ಆಚಾರ್ ಅವರು ರಚಿಸಿದ…

  • ನಮ್ಮ ನಡುವೆ ಬಾಳಿ ಬದುಕಿದ ಮತ್ತು ಇತಿಹಾಸದ ಪುಟಗಳಲ್ಲಿ ಹಾದು ಹೋದ ಹಲವಾರು ಸಾಧಕರು ಅಲ್ಪಾಯುಷಿಗಳಾಗಿದ್ದರು. ಅವರು ಬಾಳಿ ಬದುಕಿದ ಸ್ವಲ್ಪವೇ ಸಮಯದಲ್ಲಿ ಅಪಾರ ಸಾಧನೆ ಮಾಡಿ ಅಜರಾಮರವಾದವರು. ಅವರ ಈ ಬದುಕಿನ ಪುಟಗಳನ್ನು ಅನಾವರಣ ಮಾಡಿದ್ದಾರೆ ಪ್ರೊ.ಗೀತಾ ಶ್ರೀನಿವಾಸ್ ಅವರು. ಇವರು ಆಂಗ್ಲ ಭಾಷಾ ಪ್ರಾಧ್ಯಾಪಕಿ ಹಾಗೂ ಅನುವಾದಕಿ. ಇವರು ಅನೇಕ ರಾಷ್ಟ್ರೀಯ ವಿಚಾರ ಸಂಕಿರಣ ಮತ್ತು ಕಮ್ಮಟಗಳಲ್ಲಿ ಭಾಗವಹಿಸಿದ್ದಾರೆ. ಆಕಾಶವಾಣಿ ಹಾಗೂ ದೂರದರ್ಶನದಲ್ಲಿ ಉಪನ್ಯಾಸಗಳನ್ನು ನೀಡಿದ್ದಾರೆ. ‘ಅಲ್ಪಾಯುಷಿ ಮಹಾನ್ ಸಾಧಕರು” ಇವರ ಮೊದಲ ಕನ್ನಡ ಕೃತಿ.

    ಈ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ ಜ್ಞಾನವಾಣಿ ಬಾನುಲಿ ಕೇಂದ್ರ, ಬೆಂಗಳೂರು ಇದರ ನಿಲಯ ವ್ಯವಸ್ಥಾಪಕರಾದ ಡಾ.ಎಸ್.ಎಸ್.…

  • ‘ಆಗಾಗ ಬಿದ್ದ ಮಳೆ’ ವಿಜಯ ಕರ್ನಾಟಕದಲ್ಲಿ ವಿಶ್ವೇಶ್ವರ ಭಟ್ ಅವರು ಬರೆದ ಬಿಡಿ ಬರಹಗಳ ಸಂಗ್ರಹ. ತಮ್ಮ ಅಂಕಣಗಳ ಮೂಲಕ ಖ್ಯಾತರಾಗಿರುವ ವಿಶ್ವೇಶ್ವರ ಭಟ್ ಅವರ ಲೇಖನಗಳು ಮಾಹಿತಿಪೂರ್ಣ ಹಾಗೂ ಅರ್ಥ ಗರ್ಭಿತವಾಗಿರುತ್ತವೆ.  ಲೇಖಕರು ತಮ್ಮ ಮುನ್ನುಡಿಯಾದ ‘ಮಳೆ ಹನಿಗಳ ಟಪ್ ಟಪ್' ಇದರಲ್ಲಿ ಬರೆಯುತ್ತಾರೆ ‘“ಪತ್ರಿಕೆಗಳ ಬರೆದ ಲೇಖನಗಳನ್ನೆಲ್ಲ ಸಂಗ್ರಹಿಸುವುದೆಂದರೆ ಪಾತರಗಿತ್ತಿ ಹಿಡಿದಂತೆ. ಕಣ್ಣಿಗೆ ಕಾಣುತ್ತದೆ. ಕೈಗೆ ಸಿಗುವುದಿಲ್ಲ. ಎಷ್ಟೋ ಸಲ ಕಾಣೆಯಾಗುತ್ತದೆ. ಕೆಲ ದಿನಗಳ ಅನಂತರ ಅವುಗಳನ್ನು ಹುಡುಕುವ, ಪುಸ್ತಕ ರೂಪದಲ್ಲಿ ಪ್ರಕಟಿಸುವ ಉಮ್ಮೇದಿ ಸಹ ಉಳಿದಿರುವುದಿಲ್ಲ. 

    ಹೀಗೆ ಅಂದುಕೊಳ್ಳುತ್ತಿರುವಾಗಲೇ ‘ವಿಜಯ ಕರ್ನಾಟಕದ'ದಲ್ಲಿ ಪ್ರಕಟವಾದ ಲೇಖನಗಳನ್ನೆಲ್ಲ ನನ್ನ…

  • *ಗುರುರಾಜ ಸನಿಲ್ ಅವರ "ಕಮರಿದ ಸತ್ಯಗಳು, ಚಿಗುರಿದ ಸುದ್ದಿಗಳು"*

    ಖ್ಯಾತ ಉರಗ ವಿಜ್ಞಾನಿ, ಪರಿಸರ ಅಧ್ಯಯನಕಾರ, ಕಥೆಗಾರ, ಲೇಖಕ ಗುರುರಾಜ ಸನಿಲ್ ಅವರ ಆರನೇ ಕೃತಿ "ಕಮರಿದ ಸತ್ಯಗಳು, ಚಿಗುರಿದ ಸುದ್ದಿಗಳು" ಎಂಬ ಲೇಖನಗಳ ಸಂಕಲನ. 2018ರಲ್ಲಿ ಪ್ರಕಟವಾದ, 12 + 106 ಪುಟಗಳ ಕೃತಿಯ ಬೆಲೆ 120 ರೂಪಾಯಿ. ಲೇಖಕರೇ (ಗುರುರಾಜ ಸನಿಲ್, ಕೊಳಂಬೆ - ಪುತ್ತೂರು, ಉಡುಪಿ - 576105, ಮೊಬೈಲ್: 9845083869) ಕೃತಿಯ ಪ್ರಕಾಶಕರು.

    ಮಂಗಳೂರಿನ ಪ್ರಸಿದ್ಧ ಮುದ್ರಕ, ಲೇಖಕ ಕಲ್ಲೂರು ನಾಗೇಶ್ ಅವರ ಮುನ್ನುಡಿ ಮತ್ತು ಖ್ಯಾತ ಛಾಯಾಗ್ರಾಹಕ ಸತೀಶ್ ಇರಾ ಅವರ ಬೆನ್ನುಡಿ ಕೃತಿಗಿದೆ. ಲೇಖಕರೇ ಸೆರೆಹಿಡಿದ ಮತ್ತು ಕಾರ್ಯಾಚರಣೆ ಸಮಯದಲ್ಲಿ ತೆಗೆಸಿಕೊಂಡ…

  • ಪ್ರಚಂಡ ಪತ್ತೇದಾರ ಪುಸ್ತಕದ ಲೇಖಕರಾದ ಬಿ.ಎಲ್.ಕೃಷ್ಣಮೂರ್ತಿಯವರು ಬೆಂಗಳೂರಿನ ಸಹಾಯಕ ಪೋಲೀಸ್ ಕಮೀಷನರ್ ಆಗಿ ನಿವೃತ್ತ ಹೊಂದಿದವರು. ಸ್ವಾತಂತ್ರ್ಯ ಪೂರ್ವ ದಿನಗಳಲ್ಲಿ ಆಂಗ್ಲರ ಆಡಳಿತದಲ್ಲಿದ್ದ ಬೆಂಗಳೂರು ದಂಡು ಪ್ರದೇಶದ ಬೆಂಗಳೂರು ಪೋಲೀಸ್ ಫೋರ್ಸ್ (BPF) ನಲ್ಲಿ ೧೯೪೨ರಲ್ಲಿ ಕಾನ್ ಸ್ಟೇಬಲ್ ದರ್ಜೆಯಲ್ಲಿ ನೌಕರಿಗೆ ಸೇರಿದ ಇವರು, ತರಭೇತಿ ಸಮಯದಲ್ಲಿ ತೋರಿದ ತಮ್ಮ ಅಸಾಧಾರಣ ಪ್ರತಿಭೆಯ ಕಾರಣದಿಂದ ಕೇವಲ ೧೬ ತಿಂಗಳಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ಭಡ್ತಿ ಪಡೆದರು. ಭಾರತದಲ್ಲಿ ಇದೊಂದು ಅಪರೂಪದ ಪ್ರಕರಣ. ೧೯೫೭ರಲ್ಲಿ ಇನ್ಸ್ ಪೆಕ್ಟರ್ ಆಗಿ ಭಡ್ತಿ ಪಡೆದ ಇವರು ೧೯೬೯ರಲ್ಲಿ ಸಹಾಯಕ ಕಮೀಷನರ್ ಹುದ್ದೆಗೆ ಭಡ್ತಿ ಪಡೆದರು. ಪೋಲೀಸ್ ಇಲಾಖೆಯ ಎಲ್ಲಾ ಕ್ಷೇತ್ರಗಳಲ್ಲೂ ಪರಿಣತಿಯನ್ನು ಪಡೆದ ಇವರಿಗೆ ಇಲಾಲ್ಹೆಯಿಂದ…

  • ಹುಚ್ಚಾಟದ ಹುಲಿ ಪುಸ್ತಕವನ್ನು ಬರೆದವರು ಪತ್ತೇದಾರಿ ಕಾದಂಬರಿಯ ಪಿತಾಮಹರಾದ ಎನ್. ನರಸಿಂಹಯ್ಯನವರು. ಕಡಿಮೆ ಓದಿದ್ದರೂ ನೂರಾರು ಪತ್ತೇದಾರಿ ಕಾದಂಬರಿಗಳನ್ನು ಬರೆದಿರುವ, ಹಲವು ದಶಕಗಳ ಹಿಂದೆ ಸಾಮಾನ್ಯರಿಗೆ ಓದುವ ಗೀಳನ್ನಂಟಿಸಿದ ಮತ್ತು ಅವರಲ್ಲಿ ಅನೇಕರನ್ನು ಬರಹಗಾರರನ್ನಾಗಿ ರೂಪಿಸಿದ ಖ್ಯಾತಿ ಇವರದ್ದು. ಅಕ್ಷರ ಸೌಲಭ್ಯವಂಚಿತ ಕುಟುಂಬದಿಂದ ಬಂದ ಇವರ ಬರಹಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಟಿತ ಗೌರವ ಪ್ರಶಸ್ತಿ ದೊರೆತಿದೆ. ಇಷ್ಟೊಂದು ಪುಸ್ತಕಗಳನ್ನು ಬರೆದರೂ ಬಡತನದಿಂದಲೇ ಬದುಕಿ ಬಾಳಿದವರು. 

    ೬೦-೭೦ರ ದಶಕದಲ್ಲಿ ತಿಂಗಳಿಗೊಂದರಂತೆ ಕಾದಂಬರಿಯನ್ನು ಅದೂ ಪತ್ತೇದಾರಿ ಸಾಹಿತ್ಯವನ್ನು ಬರೆದು ಜನರಿಗೆ ಓದುವುದರ ಚಟವನ್ನು ಹಿಡಿಸಿದವರು ನರಸಿಂಹಯ್ಯನವರು.…