ಕವಿ, ಸಾಹಿತಿ, ಅಧ್ಯಾಪಕರಾದ ಶ್ರೀ ಹಾ.ಮ.ಸತೀಶ (ಹಾಲುಮಜಲು ಸತೀಶ) ಇವರ ಪುಸ್ತಕ *ಪರಸ್ಪರ* ವೈಚಾರಿಕ ಲೇಖನಗಳನ್ನೊಳಗೊಂಡ ಹೊತ್ತಗೆ. ಒಟ್ಟು *೨೭* ಲೇಖನಗಳು ಶ್ರೀಯುತರ ಕೈಯಿಂದ ಬರೆಯಲ್ಪಟ್ಟಿದೆ. *ಮಾನವ* -ಮೊದಲು ಮಾನವನಾಗು, ಮನಸ್ಸನ್ನು ನಿರ್ಮಲವಾಗಿಟ್ಟುಕೊ, ಮೂರು ದಿನದ ಬಾಳ್ವೆಯಲಿ ಹಗರಣವೇತಕೆ? ರಗಳೆ ಬಾರದಿರಲಿ. ಮನುಜಾ ವಿಶ್ವ ಮಾನವನಾಗು, ಜಗದಗಲ ಪಸರಿಸು ಎಂಬ ಸಂದೇಶ ಮನಸೆಳೆಯಿತು, ಎಲ್ಲರಿಗೂ ಮಾದರಿ.
ಮಾ ಎಂದರೆ ತಾಯಿ, ನವ ಎಂದರೆ ಹೊಸ. ತಾಯ ಗರ್ಭದಿಂದ ನವ ಮೂಡಿ, ಬುವಿಗೆ ಬಿದ್ದು, ಅಲ್ಲಿಯೂ ನವ, ಹೊಸ ಬೆಳಕನ್ನು ನೋಡಿ, ಪ್ರಕೃತಿಯ ತಾಯ ಎರಡೂ ಮಡಿಲಲ್ಲಿ ಆಡಿ, ಕೂಡಿ ಬೆಳೆದು ಮಾನವತ್ವವ ಪ್ರತಿಪಾದಿಸಿ ಬದುಕು ಮಾನವ ಎಂಬ ಸಂದೇಶ.
…