ಪುಸ್ತಕ ಸಂಪದ

  • ಮಹಾಭಾರತದ ಒಂದು ಪ್ರಮುಖ ಪಾತ್ರವಾದ ಕರ್ಣನಿಗೆ ರಾಧೇಯ ಎಂಬ ಹೆಸರೂ ಇದೆ. ಈ ಹೆಸರಿನಲ್ಲೇ ಡಾ. ವೆಂಕೋಬರಾವ್ ಎಂ. ಹೊಸಕೋಟೆ ಇವರು ಒಂದು ಕೃತಿಯನ್ನು ಹೊರ ತಂದಿದ್ದಾರೆ. ಇದು ಕರ್ಣನ ಆರಂಭ, ಅಂತ್ಯ ಹಾಗೂ ಅನಂತ ಎಂದು ಬರೆದುಕೊಂಡಿದ್ದಾರೆ. ಪುಸ್ತಕದ ಬೆನ್ನುಡಿಯಲ್ಲಿ ವೆಂಕೋಬರಾವ್ ಅವರು ಹೀಗೆ ಬರೆಯುತ್ತಾರೆ. 

    “ಭೀಷ್ಮ, ದ್ರೋಣ, ಅಶ್ವತ್ಥಾಮ ಮತ್ತು ಶಲ್ಯ ಮೊದಲಾದವರು ಕರ್ಣನು ಕುಲಹೀನನೆಂದು ತಿರಸ್ಕರಿಸುತ್ತಾರೆ. ಕರ್ಣನಿಗೆ ಇವರೆಲ್ಲರ ಸೊಕ್ಕನ್ನು ಕಂಡು ರೋಷ; ದುರ್ಯೋಧನನ ಅನ್ನವನ್ನುಂಡು ಅವನಿಗೆ ಇದುರು ಬೀಳುವ ಇವರ ಸ್ವಭಾವ ಕಂಡು ಕರ್ಣನಿಗೆ ಅಪನಂಬಿಕೆ. ಭೀಷ್ಮನಿಗೆ ಪಟ್ಟ ಕಟ್ಟಿದಾಗ, ಈ ಮುಪ್ಪಿನ ಮುದುಕನು ಶತ್ರುಗಳನ್ನು ಹೇಗೆ ಎದುರಿಸಿ ನಿಲ್ಲಬಹುದು ! ತಾನೇ ಸಾಕಿದ…

  • ಖ್ಯಾತ ಪತ್ರಕರ್ತ ದಿ.ರವಿ ಬೆಳಗೆರೆ ಅವರ ಹಿಂದಿನ ಕಾದಂಬರಿಗಳಾದ ‘ಮಾಟಗಾತಿ' ಮತ್ತು ‘ಸರ್ಪ ಸಂಬಂಧ' ಇದರ ಮುಂದುವರಿದ ಭಾಗವೇ ‘ಪ್ರದೋಷ'. ಆದರೆ ದುರದೃಷ್ಟವಷಾತ್ ರವಿ ಬೆಳಗೆರೆ ಅವರ ಅಕಾಲ ನಿಧನದಿಂದಾಗಿ ಈ ಕಾದಂಬರಿಯು ಪೂರ್ಣಗೊಂಡಿಲ್ಲ. ಅಪೂರ್ಣವಾಗಿರುವ ಕಾದಂಬರಿಯನ್ನೇ ಪುಸ್ತಕ ರೂಪದಲ್ಲಿ ನೀಡಿದ್ದಾರೆ. 

    ರವಿ ಬೆಳಗೆರೆ ಅವರು ತಮ್ಮ ಬೆನ್ನುಡಿಯಲ್ಲಿ “ಅದು ಪ್ರದೋಷ ಕಾಲ! ಭಗವಂತ ಇದ್ದಾನಾ? ಗೊತ್ತಿಲ್ಲ. ಪ್ರೇತಾತ್ಮವಿದೆಯಾ? ತಿಳಿದಿಲ್ಲ. ಹೇಗೆ ಭಗವಂತನ ಸುತ್ತ ಗುಡಿ, ಗೋಪುರ, ಕಳಶ, ಮಂತ್ರ, ಆಚರಣೆಗಳು ಬೆಳೆದುಕೊಂಡಿವೆಯೋ ಹಾಗೆಯೇ ಇನ್ನೊಂದೆಡೆ ವಾಮವಿದ್ಯೆಯೂ ಬೆಳೆದಿದೆ. ಮಾಟ, ಕೈ ಮುಸುಗು, ಮದ್ದು, ವಶೀಕರಣ, ಶವ ಸಾಧನೆ, ಶವ ಭೋಜನ, ಶವ ಮೈಥುನ, ಕಪಾಲ ಭೋಜನ, ಸ್ಮಶಾನ…

  • ಯಕ್ಷಗಾನದ ಪ್ರಸಿದ್ಧ ಅರ್ಥಧಾರಿಗಳಾದ ಪೊಳಲಿ ನಿತ್ಯಾನಂದ ಕಾರಂತರು ಸುಮಾರು ೨೦ ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದಾರೆ ಎಂಬ ಸಂಗತಿ ಹಲವರಿಗೆ ತಿಳಿದಿಲ್ಲ. ಅದಕ್ಕೆ ಒಂದು ಕಾರಣ ಅವು ಪುಸ್ತಕ ರೂಪದಲ್ಲಿ ಪ್ರಕಟವಾಗಿರಲಿಲ್ಲ. ಇದೀಗ “ಯಕ್ಷಗಾನ ಪ್ರಸಂಗ ಸಂಪುಟ”ದಲ್ಲಿ ಅವರು ರಚಿಸಿದ ಆರು ಯಕ್ಷಗಾನ ಪ್ರಸಂಗಗಳು ಪ್ರಕಟವಾಗಿರುವ ಕಾರಣ ಮುಂದಿನ ತಲೆಮಾರುಗಳಿಗೆ ಅವು ಲಭ್ಯವಾಗಿವೆ.

    ಈ ಸಂಪುಟದಲ್ಲಿರುವ ಆರು ಯಕ್ಷಗಾನ ಪ್ರಸಂಗಗಳು: ಸತ್ಯದಪ್ಪೆ ಚೆನ್ನಮ್ಮ, ನಾಡ ಕೇದಗೆ, ಕಾಂತು ಕಬೇದಿ, ಸಾಮ್ರಾಟ್ ಸಂಕಣ್ಣ, ಧರ್ಮಧಾರೆ ಮತ್ತು ರಾಮರಕ್ಷಾ ಹೋಮ ವಿಶ್ವರೂಪ ದರ್ಶನ. ಯಕ್ಷಗಾನದ ದೊಡ್ಡ ಅಭಿಮಾನಿ ಹಾಗೂ ಇದರ ಪ್ರಕಾಶಕರಾದ ತಮ್ಮ ಅಳಿಯ ಪುರುಷೋತ್ತಮ ಮರಕಡ, ಇನ್ನೊಬ್ಬ ಅಳಿಯ ಸಿದ್ಧಾರ್ಥ ರಾವ್ ಮತ್ತು ಮಗಳಂದಿರಾದ ಭವಾನಿ ಮತ್ತು ಭಾರ್ಗವಿ ಇವರ…

  • ಟೈಟಾನಿಕ್ ಎಂಬ ಐಷಾರಾಮಿ ಹಡಗಿನ ಬಗ್ಗೆ ಎಷ್ಟೊಂದು ಪುಸ್ತಕಗಳು, ಚಲನಚಿತ್ರಗಳು ಬಂದಿದ್ದರೂ, ಆ ಹಡಗಿನ ಬಗ್ಗೆ, ಅದು ಮುಳುಗಡೆಯಾದ ಬಗ್ಗೆ, ಅದರಲ್ಲಿ ಬದುಕುಳಿದ ಪ್ರಯಾಣಿಕರ ಬಗ್ಗೆ ಕುತೂಹಲಕಾರಿ ಸಂಗತಿಗಳು ಹೊರ ಬರುತ್ತಲೇ ಇವೆ. ಇದೇ ವಿಷಯದ ಬಗ್ಗೆ ಹೊರಬಂದಿರುವ ಹೊಸ ಪುಸ್ತಕ ‘ಮುಳುಗಿದ ಸ್ವರ್ಗ ಟೈಟಾನಿಕ್'. ಲೇಖಕರಾದ ಕೆ ನಟರಾಜ್ ಅವರು ಸಾಗರ ಸುಂದರಿ ಟೈಟಾನಿಕ್ ಮುಳುಗಿದ ಕಥೆ-ವ್ಯಥೆಯನ್ನು ಹೇಳಲು ಹೊರಟಿದ್ದಾರೆ. 

    ಕೆ.ನಟರಾಜ್ ಅವರು ವಿಜ್ಞಾನ ಮತ್ತು ಇತಿಹಾಸದ ಲೇಖಕರು. ಉತ್ತಮ ಕವಿಯೂ ಹೌದು. ಶಿವಮೊಗ್ಗ ಇವರ ಮೂಲಸ್ಥಾನ. ಇತಿಹಾಸದ ಅನ್ವೇಷಕರು. ಮಾನವ ಇಟ್ಟ ಇತಿಹಾಸದ ಹೆಜ್ಜೆಗಳನ್ನು ಅವಲೋಕಿಸುವುದು ಇವರ ಹವ್ಯಾಸ.

    ‘ಟೈಟಾನಿಕ್…

  • ಬಹಳಷ್ಟು ಬರಹಗಾರರಿಗೆ ಪತ್ರಿಕೆಗಳಿಗೆ ಯಾವ ರೀತಿಯ ಬರಹಗಳನ್ನು ಬರೆದು ಕಳಿಸಬೇಕು ಎನ್ನುವ ಗೊಂದಲ ಇರುತ್ತದೆ. ಹಲವಾರು ಲೇಖಕರು ಸೊಗಸಾಗಿ ಬರೆಯುತ್ತಾರೆ, ಆದರೆ ಅವರ ಲೇಖನಗಳು ಯಾವುದೇ ಪತ್ರಿಕೆಯ ಪುಟಗಳಿಗೆ ಸರಿಹೊಂದುವುದಿಲ್ಲ. ಯಾವ ರೀತಿಯ ಬರಹ, ಯಾವ ಪತ್ರಿಕೆಯ ಯಾವ ಪುರವಣಿಗೆ ಸೂಕ್ತ ಎನ್ನುವ ಸಾಮಾನ್ಯ ಜ್ಞಾನವನ್ನು ಪ್ರತಿಯೊಬ್ಬ ಲೇಖಕರು ಹೊಂದಿರುವುದು ಅಗತ್ಯ. ಇದರ ಜೊತೆಗೆ ಲೇಖನಗಳಲ್ಲಿನ ಪದಗಳ ಮಿತಿಯನ್ನು ಗಮನಿಸುವುದು ಅತ್ಯಂತ ಅಗತ್ಯ. ಬಹಳಷ್ಟು ಬರಹಗಾರರು ಹೊಂದಿರುವ ಹಲವಾರು ಸಂಶಯಗಳನ್ನು ದೂರ ಮಾಡಲು ಖುದ್ದು ಪತ್ರಕರ್ತರಾಗಿರುವ ವಿನಾಯಕ ಕೋಡ್ಸರ ಇವರು ಸೊಗಸಾದ ಒಂದು ಪುಸ್ತಕವನ್ನು ಹಲವು ಲೇಖಕರ ಬರಹಗಳೊಂದಿಗೆ ಸಂಪಾದಿಸಿ ಹೊರತಂದಿದ್ದಾರೆ.

    ಪತ್ರಕರ್ತರಾದ ರವಿ…

  • ದೇಶದ ಆರ್ಥಿಕತೆ, ಬಡತನ - ಶ್ರೀಮಂತಿಕೆ, ಜನಸಾಮಾನ್ಯರ ಬದುಕಿನ ಮೇಲೆ ಸರಕಾರದ ನೀತಿಗಳ ಪರಿಣಾಮಗಳು - ಇಂತಹ ವಿಷಯಗಳ ಬಗ್ಗೆ ಕನ್ನಡದಲ್ಲಿ ಪುಸ್ತಕಗಳು ವಿರಳ. ಅದರಲ್ಲೂ ಇಂತಹ ವಿಷಯಗಳ ಬಗ್ಗೆ ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ, ಪಾರಿಭಾಷಿಕ ಪದಗಳ ಉಸಿರುಗಟ್ಟಿಸುವ ಗೊಂದಲವಿಲ್ಲದ ಪುಸ್ತಕಗಳು ವಿರಳಾತಿ ವಿರಳ. ಆದ್ದರಿಂದಲೇ ಎಂ. ಎಸ್. ಶ್ರೀರಾಮರ “ಶನಿವಾರ ಸಂತೆ" ಪುಸ್ತಕ ಮುಖ್ಯವಾಗುತ್ತದೆ. ಅಂದ ಹಾಗೆ ಇದು ಅವರು “ಉದಯವಾಣಿ"ಯಲ್ಲಿ ಬರೆಯುತ್ತಿದ್ದ ಅಂಕಣ ಬರಹಗಳ ಸಂಕಲನ.

    “ಒಳಿತು, ಲಾಭ, ವ್ಯಾಪಾರ” ಎಂಬ ಮೊದಲ ಭಾಗದಲ್ಲಿವೆ ಆರು ಲೇಖನಗಳು. “ಆತ್ಮಹತ್ಯೆಗಳು: ರೈತರೇ ಏಕೆ?” ಎಂಬ ಪ್ರಬಂಧ ಈ ಜ್ವಲಂತ ಸಮಸ್ಯೆಯ ಬಗ್ಗೆ ಹಲವು ಒಳನೋಟಗಳನ್ನು ನೀಡುತ್ತದೆ. ವ್ಯಾಪಾರವನ್ನೂ ಕೃಷಿಯನ್ನೂ ಹೋಲಿಸುತ್ತಾ ಪ್ರಬಂಧವನ್ನು ಶುರು ಮಾಡುತ್ತಾರೆ…

  • ಖ್ಯಾತ ಪತ್ರಕರ್ತ ವೈಯೆನ್ಕೆ ಅವರ ‘ವಂಡರ್ ಕಣ್ಣು' ಬಹಳ ಜನಪ್ರಿಯ ಅಂಕಣವಾಗಿತ್ತು. ‘ಕೊನೆ ಸಿಡಿ' ಯೊಂದಿಗೆ ಅದು ಕೊನೆಗೊಳ್ಳುತ್ತಿತ್ತು. ಬಹುತೇಕ ಓದುಗರು ‘ಕೊನೆ ಸಿಡಿ' ಯಿಂದಲೇ ಆ ಅಂಕಣವನ್ನು ಆರಂಭ ಮಾಡುತ್ತಿದ್ದರು. ಅದು ‘ಕೊನೆ ಸಿಡಿ' ಯ ಆಕರ್ಷಣೆ. ಪನ್, ಸಿದ್ಧ ಚಾಟೂಕ್ತಿ ಹಾಗೂ ಥಟ್ ಉತ್ತರಕ್ಕೆ ಸಿದ್ಧಹಸ್ತರಾಗಿದ್ದ ವೈಯೆನ್ಕೆ ಜತೆಯಲ್ಲಿ ಮಾತಾಡುತ್ತಿದ್ದರೆ ‘ಕೊನೆ ಸಿಡಿ'ಗಳು ಒಂದೇ ಸಮನೆ ಸಿಡಿಯುತ್ತಿದ್ದವು. ಹತ್ತಾರು ವರ್ಷ ಅವರು ಬರೆದ ‘ಕೊನೆ ಸಿಡಿ' ಗಳನ್ನು ಸಂಗ್ರಹಿಸಿ, ಆ ಪೈಕಿ ಕೆಲವನ್ನು ಮಾತ್ರ ಆಯ್ದು ಒಟ್ಟಿಗೆ ಓದುವಂತಾದರೆ ಹೇಗಿದ್ದೀತು?

    ಆ ಸಿಡಿತಕ್ಕೆ ನೀವು ಒಳಗಾದರೆ ನಾನು ಜವಾಬ್ದಾರನಲ್ಲ ಎನ್ನುತ್ತಾರೆ ಸಂಪಾದಕರಾದ ವಿಶ್ವೇಶ್ವರ ಭಟ್. ಅವರು ಈ…

  • ಪತ್ರಕರ್ತ ಪದ್ಮರಾಜ ದಂಡಾವತಿ ಅವರು ಹೊಸದಾಗಿ ಪತ್ರಿಕೋದ್ಯಮಕ್ಕೆ ಬರುವವರಿಗೆ ಸಹಾಯವಾಗಲೆಂದು ತಮ್ಮ ಅನುಭವದ ಸಾರವನ್ನು ಪುಸ್ತಕದ ರೂಪದಲ್ಲಿ ಹೊರತಂದಿದ್ದಾರೆ. ಲೇಖಕ ಜೆಸುನಾ ಅವರು ಈ ಪುಸ್ತಕದ ಬೆನ್ನುಡಿಯಲ್ಲಿ “ಒಂದು ಕಾಲವಿತ್ತು. ಪತ್ರಿಕಾ ಕ್ಷೇತ್ರಕ್ಕೆ ಪ್ರವೇಶಿಸಿದವರಿಗೆ ಪೂರ್ವ ಸಿದ್ಧತೆಯೇನೂ ಇರುತ್ತಿರಲಿಲ್ಲ. ಅವರಿಗೆ ಇರುತ್ತಿದ್ದುದು ವ್ಯಾಪಕ ಓದಿನ ಹಿನ್ನಲೆ. ಈಗ ಹಾಗಿಲ್ಲ. ಗಿಣಿ ಪಾಠದ ಒಂದು ಪದವಿ ಇರುತ್ತದೆ. ಇದರಲ್ಲಿ ಬಹುತೇಕ ಮಂದಿಗೆ ಓದಿನ ಹಿನ್ನಲೆಯೇ ಇರುವುದಿಲ್ಲ. ಇಂಥವರು ಪತ್ರಿಕೋದ್ಯಮದಲ್ಲಿ ಏನನ್ನು ಸಾಧಿಸಲು ಸಾಧ್ಯ ?

    ಇಂಥವರಿಗೆಂದೇ ಗೆಳೆಯ ಪದ್ಮರಾಜ ದಂಡಾವತಿಯವರ ರಿಪೋರ್ಟಿಂಗ್ ಹಾಗೂ ‘ಪತ್ರಿಕಾ ಭಾಷೆ' ಪುಸ್ತಕಗಳಿವೆ. ಈ ಎರಡೂ ಪುಸ್ತಕಗಳು…

  • ‘ಬಣ್ಣದ ಕಾಲು' ಖ್ಯಾತ ಕತೆಗಾರ ಜಯಂತ ಕಾಯ್ಕಿಣಿ ಇವರ ಕಥಾ ಸಂಕಲನ. ‘ಅಪಾರ' ಅವರ ಮುಖಪುಟ ವಿನ್ಯಾಸ ಹಾಗೂ ರಾವ್ ಬೈಲ್ ಅವರ ಒಳ ಪುಟಗಳ ರೇಖಾಚಿತ್ರಗಳು ಗಮನ ಸೆಳೆಯುತ್ತವೆ. ಜಯಂತ ಇವರು ತಮ್ಮ ಕಥೆಗಳನ್ನು ಎರಡು ಭಾಗಗಳಲ್ಲಿ ವಿಂಗಡಿಸಿದ್ದಾರೆ. ಒಟ್ಟು ೧೩ ಸಣ್ಣ ಕಥೆಗಳನ್ನು ಹೊಂದಿರುವ ಪುಸ್ತಕದ ಎಲ್ಲಾ ಕಥೆಗಳು ಒಮ್ಮೆ ಓದಿದ ಬಳಿಕ ಇನ್ನೊಮ್ಮೆ ಓದುವಷ್ಟು ಸೊಗಸಾಗಿವೆ. 

    ಪುಸ್ತಕದ ತಮ್ಮ ಮಾತಾದ 'ಅರಿಕೆ' ಯಲ್ಲಿ ಜಯಂತ ಕಾಯ್ಕಿಣಿ ಅವರು ಹೀಗೆ ಬರೆದಿದ್ದಾರೆ “ಪಂಚತಂತ್ರದಲ್ಲಿ ಬರುವ ಮಾಂತ್ರಿಕನೊಬ್ಬ ಹುಲಿಯ ದೇಹದ ಅವಶೇಷಗಳ ಎದುರು ಕೂತು ಅದಕ್ಕೆ ಜೀವ ಬರಿಸುವ ಸಂಜೀವಿನಿ ವಿದ್ಯೆ ನಡೆಸುತ್ತಾನೆ. ಜೀವ ತಳೆದದ್ದೇ ತಡ ಆ ಹುಲಿ ಮೊದಲು ಆತನನ್ನೇ ನುಂಗಿ ಬಿಡುತ್ತದೆ. ಕತೆಗಾರನದೂ…

  • ನಿವೃತ್ತಿಯ ಅಂಚಿನಲ್ಲಿರುವವರಿಗೊಂದು ಉತ್ತಮ ಕೈಪಿಡಿ ಇದು. 1995ರಿಂದೀಚೆಗೆ ಬೆಂಗಳೂರಿನ ಬಿಇಎಲ್ ಕಾರ್ಖಾನೆಯಿಂದ ನಿವೃತ್ತರಾಗಲಿರುವ ಉದ್ಯೋಗಿಗಳಿಗೆ ನಿವೃತ್ತ ಜೀವನಕ್ಕಾಗಿ ತಯಾರಾಗುವುದು ಹೇಗೆ? ಎಂಬ ಬಗ್ಗೆ ಕನ್ನಡದಲ್ಲಿ ಉಪನ್ಯಾಸ ನೀಡಿದ ಆನಂದ ರಾಮರಾಯರು ಇದರ ಲೇಖಕರು. ಅನಂತರ, ತನ್ನ ಉಪನ್ಯಾಸಗಳನ್ನೇ ಲೇಖನವಾಗಿಸಿ ಪತ್ರಿಕೆಗಳಲ್ಲಿ ಪ್ರಕಟಿಸಿದರು. “ಉದಯವಾಣಿ”ಯ ಹಿರಿಯರ ಪುಟದಲ್ಲಿ, ಇದೇ ಶೀರ್ಷಿಕೆಯಲ್ಲಿ 52 ಕಂತುಗಳ ಅಂಕಣವನ್ನೂ ಬರೆದರು. ತದನಂತರ, ಅವನ್ನೇ ಪುಸ್ತಕವಾಗಿಸಿ ಪ್ರಕಟಿಸಿದ್ದಾರೆ.

    ನಿವೃತ್ತಿಯ ನಂತರದ ಸಮಸ್ಯೆಗಳನ್ನು ಈ ಮೂರು ಭಾಗಗಳಾಗಿ ವಿಂಗಡಿಸುತ್ತಾರೆ ಲೇಖಕರು: (ಅ) ಮಾನಸಿಕ (ಆ) ದೈಹಿಕ (ಇ) ಆರ್ಥಿಕ. ಪ್ರತಿಯೊಂದು ವಿಭಾಗದ ಸಮಸ್ಯೆಗಳನ್ನು ಚುಟುಕಾಗಿ ವಿವರಿಸಿ, ಅವನ್ನು ಎದುರಿಸುವುದು ಹೇಗೆಂದು…