ಪುಸ್ತಕ ಸಂಪದ

  • ಜಯಂತ್ ಕಾಯ್ಕಿಣಿ ಕತೆಗಳೆಂದರೆ ಒಂಥರಾ ಮುದ್ದು ಮುದ್ದಾಗಿರುತ್ತದೆ. ಕತೆಗಳನ್ನು ಓದುತ್ತಾ ಓದುತ್ತಾ ಆ ಊರು, ಜನರು, ಸನ್ನಿವೇಶಗಳಲ್ಲಿ ನಾವು ಕಳೆದೇ ಹೋಗುತ್ತೇವೆ ಎಂದೇನೋ ಅನಿಸಿಬಿಡುತ್ತದೆ. ಅದೇ ರೀತಿಯ ೯ ಕತೆಗಳನ್ನು ಜಯಂತ್ ಕಾಯ್ಕಿಣಿಯವರು ‘ಅನಾರ್ಕಲಿಯ ಸೇಫ್ಟಿಪಿನ್' ಕಥಾಸಂಕಲನದಲ್ಲಿ ನೀಡಿದ್ದಾರೆ.

    ತಮ್ಮ ಮುನ್ನುಡಿಯಾದ ‘ಅರಿಕೆ’ಯಲ್ಲಿ ಅವರು ಬರೆದದ್ದು ಹೀಗೆ “ಸುಗ್ಗಿ ಹಬ್ಬದ ‘ಹಗರಣ'ದ ಹುಣ್ಣಿಮೆಯ ದಿನ. ರಥಬೀದಿಯಲ್ಲಿ ಮರಕಾಲು ಕಟ್ಟಿಕೊಂಡ ವೇಷಗಳು ಮೆರವಣಿಗೆಯಲ್ಲಿ ಬರುತ್ತಿದ್ದವು. ವಾಲದಂತೆ ಬೀಳದಂತೆ ಸಮತೋಲ ಕಾಯ್ದುಕೊಳ್ಳಲೆಂದೇ ಅವು ಮರದ ಮೊಂಡು ಹೆಜ್ಜೆಗಳನ್ನು ಅತ್ತ ಇತ್ತ ಹಿಂದೆ ಮುಂದೆ ಲಯಬದ್ಧವಾಗಿಯೇ ಊರುತ್ತ ಕೈಗಳನ್ನೂ ಆಡಿಸುತ್ತ ಕುಣಿಯುತ್ತ…

  • ಲೇಖಕ ಹಾಗೂ ಚಿಂತಕ ಅವಿ ಯೋರಿಶ್ ಅವರು ಇಸ್ರೇಲ್ ದೇಶದ ಬಗ್ಗೆ ಬರೆದ ಪುಸ್ತಕವೇ ‘ಆವಿಷ್ಕಾರದ ಹರಿಕಾರ'. ಮುಖಪುಟದಲ್ಲೇ ಬುದ್ದಿಶಾಲಿ ಇಸ್ರೇಲಿಗಳು ವಿಶ್ವವನ್ನು ಬದಲಿಸಿದ ಪರಿ ಎಂದು ಬರೆವ ಮೂಲಕ ಪುಸ್ತಕದ ಕಥಾ ವಸ್ತುವಿನ ಬಗ್ಗೆ ಕುತೂಹಲ ಮೂಡಿಸಿದ್ದಾರೆ ಈ ಪುಸ್ತಕದ ಅನುವಾದ ಮಾಡಿದ ವಿಶ್ವೇಶ್ವರ ಭಟ್ ಇವರು. ಮೂಲತಃ ಉದ್ಯಮಿಯಾದ ಅವಿ ಯೋರಿಶ್ ಅವರ ಈ ಕೃತಿ ವಿಶ್ವದ ನಲ್ವತ್ತಕ್ಕೂ ಅಧಿಕ ಭಾಷೆಗೆ ಅನುವಾದವಾಗಿರುವುದು ಈ ಪುಸ್ತಕದ ಹೆಗ್ಗಳಿಕೆ. 

    ಈ ಪುಸ್ತಕವು ಇಸ್ರೇಲ್ ಎಂಬ ಪುಟ್ಟ ದೇಶದ ಬಗ್ಗೆ ಹಾಗೂ ಅಲ್ಲಾಗುವ ಆವಿಷ್ಕಾರಗಳ ಕುರಿತ ಸಮಗ್ರ ಮಾಹಿತಿ ನೀಡುತ್ತದೆ. ಅನುವಾದಕರಾದ ವಿಶ್ವೇಶ್ವರ ಭಟ್ ಇವರು ಹಲವಾರು ಸಲ ಇಸ್ರೇಲ್ ದೇಶಕ್ಕೆ ಭೇಟಿ ನೀಡಿರುವುದರಿಂದ ಈ ಪುಸ್ತಕದ…

  • ರವಿ ಬೆಳಗೆರೆಯವರು ಬರೆದ ನಿಜ ಜೀವನದ ಮರ್ಡರ್ ಮಿಸ್ಟರಿ ಕಾದಂಬರಿಯೇ ‘ಅಮ್ಮಾ ನನ್ನನ್ನು ಯಾಕೇ ಕೊಂದೆ?’ ಒಂದು ಸಮಯದಲ್ಲಿ ಎಲ್ಲರಿಗೂ ತಲೆನೋವಾಗಿದ್ದ ಶೀನಾ ಬೋರಾ ಎಂಬ ಯುವತಿಯ ಕೊಲೆ ರಹಸ್ಯ ಬಯಲಾದದ್ದು ಹೇಗೆ? ಎನ್ನುವುದೇ ಈ ಪುಸ್ತಕದ ತಿರುಳು. 

    ರವಿ ಬೆಳಗೆರೆಯವರು ತಮ್ಮ ಬೆನ್ನುಡಿಯಲ್ಲಿ ಈ ಪುಸ್ತಕದ ಬಗ್ಗೆ ಹೀಗೆ ಬರೆದಿದ್ದಾರೆ ‘ಆಸ್ತಿಗಾಗಿ ಕೊಲೆಗಳಾಗುವುದು ಹೊಸದೇನಲ್ಲ. ಆದರೆ ಇಂದ್ರಾಣಿ ಎಂಬ ಮೂರು ಗಂಡಂದಿರ ಹೆಂಗಸು ಮಾಡಿದ ಕೊಲೆ ಇದೆಯಲ್ಲಾ? ಅದು ನಿಜಕ್ಕೂ ಘೋರ. ಆಕೆಯಲ್ಲಿ ಮನುಷ್ಯತ್ವದ ಲವಲೇಶವೂ ನಿಮಗೆ ಕಾಣಸಿಗುವುದಿಲ್ಲ. ಹೆತ್ತ ಮಗಳು ಆಸ್ತಿ ವಿಚಾರದಲ್ಲಿ ತಿರುಗಿ ಬಿದ್ದಾಳು ಎಂಬ ಒಂದೇ ಒಂದು ಕಾರಣಕ್ಕೆ ಆಕೆಯನ್ನು ಅತ್ಯಂತ ನಿರ್ದಯವಾಗಿ ಕೊಂದು ಸುಟ್ಟು…

  • ‘ಮಿಥುನ’ ಕೃತಿಯ ಮೂಲ ಲೇಖಕರಾದ ಶ್ರೀರಮಣ ಅವರು ಬರೆದ ನೀಳ್ಗತೆಯೇ ನಾಲ್ಕನೇ ಎಕರೆ. ಲೇಖಕರು ತಮ್ಮ ಬೆನ್ನುಡಿಯಲ್ಲಿ ‘ಹೆಪ್ಪಿನ ಹನಿಯೂ, ನಿಂಬೆಯ ರಸವೂ…’ ಎಂದು ಬರೆಯುತ್ತಾ “ಇದು ಗ್ರಾಮೀಣ ಪ್ರದೇಶದಲ್ಲಿ ಸಾಗುವ ಕಥೆಯಾದ್ದರಿಂದ ರೈತಾಪಿ ಜನರ ಬೆವರುಪ್ಪಿನ ಆಡುಮಾತನ್ನೇ ಇಲ್ಲಿ ಬಳಸಿದ್ದೇನೆ. ಇದು ಮೂರು ಪದರುಗಳಾಗಿ ಬಿಚ್ಚಿಕೊಳ್ಳುವ ಕಥೆ. ಗ್ರಾಮ್ಯ ಜೀವನ, ನಗರೀಕರಣ. ಈ ಎರಡರ ನಡುವೆ ಸಿಲುಕಿ ನಲುಗುತ್ತಿರುವ ಹಳೆ ಮತ್ತು ಹೊಸ ತಲೆಮಾರುಗಳು ಈ ಕಥೆಯಲ್ಲಿ ಕಾಣಸಿಗುತ್ತವೆ. ಹಾಲೆಂಬ ಪದಾರ್ಥವು ಹೆಪ್ಪಿನ ಹನಿಯಿಂದ ಮೊಸರಾಗುವುದಕ್ಕೂ, ನಿಂಬೆಯ ರಸದಿಂದ ಒಡೆದುಹೋಗುವುದಕ್ಕೂ ಇರುವ ವ್ಯತ್ಯಾಸವೇ ಈಗಿನ ಹುಡುಗರಿಗೆ ಗೊತ್ತಿಲ್ಲ. ಹಾಗೆಂದೇ ಈ ಕಥೆ ಬರೆದಿದ್ದೇನೆ. ನಮ್ಮ ಹಳ್ಳಿ ಬಿಟ್ಟು ಐವತ್ತು ವರ್ಷ ದಾಟಿದರೂ,…

  • ‘ಮಲೆನಾಡಿನ ರೋಚಕ ಕಥೆಗಳು’ ಇದರ ೧೦ ನೆಯ ಭಾಗವೇ 'ಗಿರಿಕಂದರ ಎಸ್ಟೇಟ್'. ಎಂದಿನಂತೆ ಲೇಖಕರಾದ ಗಿರಿಮನೆ ಶ್ಯಾಮರಾವ್ ಅವರು ಪರಿಸರವನ್ನು ತಮ್ಮ ಬರಹದಲ್ಲಿ ಹೊದ್ದುಕೊಂಡು ರೋಚಕ ಕಥನ ಮಾಲೆಯನ್ನು ಪೋಣಿಸಿದ್ದಾರೆ. ಅವರೇ ತಮ್ಮ ಕೃತಿಯ ಬಗ್ಗೆ ಬೆನ್ನುಡಿಯಲ್ಲಿ ಹೀಗೆ ಬರೆದುಕೊಂಡಿದ್ದಾರೆ. “ಇದು ಮಲೆನಾಡಿನ ರೋಚಕ ಕಥೆಗಳ ಸರಣಿಯ ಹತ್ತನೆಯ ಭಾಗ. ‘ಶೋಧ' ಎಂಬ ಹೆಸರಿನಲ್ಲಿ ‘ಮಂಗಳ' ವಾರಪತ್ರಿಕೆಯಲ್ಲಿ ಮೂಡಿಬಂದ ಜನಪ್ರಿಯ ಧಾರಾವಾಹಿ. ವೈವಿಧ್ಯಮಯವಾದ ಮಲೆನಾಡಿನ ರೋಚಕತೆಗಳ ಚಿತ್ರಣ ಇದರಲ್ಲೂ ಇದೆ. ಮಲೆನಾಡಿನ ಭಾಗವಾಗಿ ತೆಗೆದುಕೊಳ್ಳುವ ಇದರ ಮತ್ತೊಂದು ಮಗ್ಗುಲೇ ಅರೆಮಲೆನಾಡು. ಅದರ ನಂತರವೇ ಬಯಲು ಪ್ರದೇಶ ಸಿಗುವುದು. ಕಥೆಯ ಮೂಲಕ ಅಂತಹಾ ಅರೆಮಲೆನಾಡಿಗೆ ನಿಮ್ಮನ್ನು ಕರೆದೊಯ್ಯುವ ಪ್ರಯತ್ನ ಇದರಲ್ಲಿದೆ. ಪಶ್ಚಿಮಘಟ್ಟ…

  • ಅಯೋಧ್ಯಾ ಪ್ರಕಾಶನ ಇವರ ೧೬ನೆಯ ಕೃತಿಯೇ ರೋಹಿತ್ ಚಕ್ರತೀರ್ಥ ಇವರು ಬರೆದ ‘ಎಂದೆಂದೂ ಬಾಡದ ಮಲ್ಲಿಗೆ. ಈ ಪುಸ್ತಕದಲ್ಲಿ ಸಾಹಿತ್ಯ ಜಗತ್ತಿನ ಸ್ವಾರಸ್ಯಗಳನ್ನು ಸೊಗಸಾಗಿ ವರ್ಣನೆ ಮಾಡಲಾಗಿದೆ. ಹಿರಿಯ ವಿಮರ್ಶಕರಾದ ಮುರಳೀಧರ ಉಪಾಧ್ಯ ಹಿರಿಯಡಕ ಇವರು ತಮ್ಮ ಬೆನ್ನುಡಿಯಲ್ಲಿ “ರೋಹಿತ್ ಚಕ್ರತೀರ್ಥ ವೈವಿಧ್ಯಪೂರ್ಣ ಆಸಕ್ತಿಗಳಿರುವ ಹೊಸ ತಲೆಮಾರಿನ ಕನ್ನಡ ಲೇಖಕ. ಎಂದೆಂದೂ ಬಾಡದ ಮಲ್ಲಿಗೆಯಲ್ಲಿ ಇವರು ಜಿ.ಟಿ.ನಾ, ಕೆ.ಎಸ್.ನ, ತ.ಸು.ಶಾ, ಜಿ.ವೆಂಕಟಸುಬ್ಬಯ್ಯ ಇಂಥ ಲೇಖಕರನ್ನು, ಪಾ.ವೆಂ., ಗುಲ್ವಾಡಿಯವರಂಥ ಪತ್ರಕರ್ತರನ್ನು, ಚಂದಮಾಮ, ಸಂದೇಶಗಳಂಥ ಪತ್ರಿಕೆಗಳನ್ನು ಪರಿಚಯಿಸಿದ್ದಾರೆ. ವಿಮರ್ಶಾತ್ಮಕ ಒಳನೋಟಗಳೂ ಈ ಲೇಖನಗಳಲ್ಲಿವೆ. ತಲಸ್ಪರ್ಶಿ ಅಧ್ಯಯನ, ನಿಖರ ಮಾಹಿತಿಗಳು, ಲಕ್ಷಿಸುವ ಅತಿ ಸಣ್ಣ ವಿವರಗಳು, ಸರಳ ಶೈಲಿ…

  • ‘ತಮಿಳುನಾಡಿನ ಅತಿ ಮುಖ್ಯವಾದ ಸಾಹಸ ಕ್ರೀಡೆ -ಜಲ್ಲಿ ಕಟ್ಟು. ಈ ಕ್ರೀಡೆಯ ಇತಿಹಾಸವನ್ನು ಕೆದಕುತ್ತಾ ಹೋದರೆ ಸುಮಾರು ವರ್ಷಗಳ ಹಿಂದಕ್ಕೆ ಹೋಗಬೇಕಾಗುತ್ತದೆ. ಆ ಕಾಲದಿಂದ ಈಗಿನವರೆಗೂ ಮುಂದುವರೆದಿರುವ ಈ ಕ್ರೀಡೆ, ಕೇವಲ ಆಟವಲ್ಲ. ಇದೊಂದು ಜೀವನಶೈಲಿ. ಪ್ರಾಚೀನ ತಮಿಳು ಸಾಹಿತ್ಯವಾದ ‘ಕಲಿತ್ತೊಗೈ’ ನಲ್ಲಿ ಆಯರ್ ಗಳು ಬಾಳುವ ಮುಲ್ಲೈ ನೆಲದಲ್ಲಿ ನಡೆಯುವ ಜಲ್ಲಿಕಟ್ಟಿನ ಕುರಿತು ಸಾಕಷ್ಟು ವರ್ಣಿಸಲಾಗಿದೆ. ಆ ದಿನಗಳಲ್ಲಿ ಈ ಕ್ರೀಡೆಯ ಹೆಸರು ‘ಏರು ತಳುವುದರ್'. ಏರು ಎಂಬ ಶಬ್ದಕ್ಕೆ ಎತ್ತು ಅಥವಾ ಗೂಳಿ ಎಂಬ ಅರ್ಥವಿದೆ. ಗೂಳಿಯನ್ನು ಅಡಗಿಸಿ ಕನ್ಯೆಯ ಕೈ ಹಿಡಿಯುವ ವ್ಯಕ್ತಿಗಳ ಬಗ್ಗೆ ಚಿತ್ರಣಗಳಿವೆ.

    ಚಿ.ಸು.ಚೆಲ್ಲಪ್ಪ ‘ವಾಡಿವಾಸಲ್' ಅನ್ನು ವಿವರಿಸುವ ವಿಧಾನ, ಪಾತ್ರಗಳನ್ನು…

  • ಅಯೋಧ್ಯಾ ಪ್ರಕಾಶನದವರ ೧೭ನೆಯ ಕೃತಿಯಾದ ‘ಮಾನಸೋಲ್ಲಾಸ' ಬರೆದವರು ರೋಹಿತ್ ಚಕ್ರತೀರ್ಥ. ಈಗಾಗಲೇ ರೋಹಿತ್ ಅವರ ಹಲವಾರು ಪುಸ್ತಕಗಳು ಬೆಳಕು ಕಂಡಿವೆ. ‘ಮಾನಸೋಲ್ಲಾಸ' ಎನ್ನುವುದು ಕವಿ-ಕಲಾವಿದರ ಕುರಿತ ಬರಹಗಳು. ಲೇಖಕರು ತಮ್ಮ ‘ಸವಿ ಸವಿ ನೆನಪೆ, ಸಾವಿರ ನೆನಪೆ !’ ಎಂಬ ಮುನ್ನುಡಿಯಲ್ಲಿ “‘ಮಾನಸೋಲ್ಲಾಸ' ಎಂಬುವುದು ಒಂದು ಸಂಸ್ಕೃತ ಕೃತಿಯ ಹೆಸರು. ಬರೆದದ್ದು ೧೨ನೆಯ ಶತಮಾನದಲ್ಲಿ. ಬರೆದವನು ಕನ್ನಡಿಗ. ಚಾಲುಕ್ಯ ದೊರೆ ಮೂರನೇ ಸೋಮೇಶ್ವರ. ಅದು ಆ ಕಾಲದ ವಿಶ್ವಕೋಶ. ಆದರೆ ನನಗೆ ಅಂಥ ದೊಡ್ದ ಮಹತ್ವಾಕಾಂಕ್ಷೆಯೇನೂ ಇಲ್ಲ. ಈ ಕೃತಿ ಗಾತ್ರದಲ್ಲೂ, ಗುಣದಲ್ಲೂ ಅದಕ್ಕಿಂತ ಬಹುತೇಕ ಸಣ್ಣದು. ನೆನಪೇ ಇಲ್ಲಿನ ಎಲ್ಲ ಬರಹಗಳ ಸ್ಥಾಯಿಭಾವ. ಸಾವಿರ ನೆನಪುಗಳನ್ನು ಹಿಡಿದಿಡುವ ದೊಡ್ಡ ಕೆಲಸಕ್ಕೇನೂ ನಾನಿಲ್ಲಿ ಕೈ ಹಾಕಿಲ್ಲ.…

  • ರವಿ ಬೆಳಗೆರೆಯವರ ನಿಧನದ ಬಳಿಕ ಹೊರಬಂದ ಕೆಲವು ಪುಸ್ತಕಗಳಲ್ಲಿ ‘ರೇಖಾ’ ಪುಸ್ತಕವೂ ಒಂದು. ಬಹಳ ಸಮಯದಿಂದ ಹೊರಬರಲು ಕಾಯುತ್ತಿದ್ದ ಪುಸ್ತಕವು ಅವರ ನಿಧನದ ನಂತರ ಬೆಳಕು ಕಾಣುತ್ತಿರುವುದು ವಿಪರ್ಯಾಸವೇ ಸರಿ. ಆದರೂ ರವಿ ಬೆಳಗೆರೆಯವರು ರೇಖಾಳ ಜೀವನದ ಬಗ್ಗೆ ಬರೆಯಲು ಮಾಡಿದ ಸಿದ್ಧತೆಗಳನ್ನು ಮೆಚ್ಚಲೇ ಬೇಕು. ಸಾಮಾನ್ಯ ಜನರಿಗೆ ತಿಳಿಯದೇ ಇರುವ ಹಲವಾರು ಸಂಗತಿಗಳು ಹಾಗೂ ಭಾವಚಿತ್ರಗಳು ಈ ಪುಸ್ತಕದಲ್ಲಿವೆ.

    ರೇಖಾ ೧೯೫೪ರಲ್ಲಿ ತಮಿಳು ಚಿತ್ರ ರಂಗದ ಆರಾಧ್ಯ ದೈವವಾಗಿದ್ದ ಜೆಮಿನಿ ಗಣೇಶನ್ ಮತ್ತು ತಮಿಳು ನಟಿ ಪುಷ್ಪವಲ್ಲಿಯ ಕೂಸಾಗಿ ಹುಟ್ಟಿದವಳು ರೇಖಾ. ಪುಷ್ಪವಲ್ಲಿಯನ್ನು ಜೆಮಿನಿ ಗಣೇಶನ್ ಅಧಿಕೃತವಾಗಿಯೇನೂ ಮದುವೆಯಾಗಿರಲಿಲ್ಲ. ಅವನಿಗೆ ಆಗಲೇ ಮದುವೆಯಾಗಿ ಮಕ್ಕಳಿದ್ದವು.…

  • “೧೯೮೦. ಇದು ನವಕರ್ನಾಟಕ ಪ್ರಕಾಶನ ಸಂಸ್ಥೆಯ ೨೦ನೇ ಹುಟ್ಟು ಹಬ್ಬದ ವರ್ಷ. ಈ ಸಂದರ್ಭದ ನೆನಪಿಗಾಗಿ ಕೆಲವು ಉತ್ಕೃಷ್ಟ ಸಾಹಿತ್ಯ ಕೃತಿಗಳನ್ನು ಪ್ರಕಟಿಸಬೇಕೆಂಬ ಹಂಬಲ ನಮ್ಮನ್ನು ಕಾಡಿತು. ಅದರ ಪರಿಣಾಮವಾಗಿ ವಿಶ್ವಕಥಾಕೋಶ ಯೋಜನೆ ರೂಪುಗೊಂಡಿತು.

    ಜಗತ್ತಿನ ಸಾರಸ್ವತ ಭಂಡಾರದ ಒಂದು ಭಾಗವನ್ನು ಕನ್ನಡ ಓದುಗರ ಮುಂದೆ ವಿಶ್ವಕಥಾಕೋಶ ತಂದಿಡುತ್ತದೆ. ನಾನಾ ದೇಶಗಳಿಂದ, ಭಾಷೆಗಳಿಂದ ಆಯ್ದ ಸುಮಾರು ೪೦೦ ಸಣ್ಣ ಕಥೆಗಳ ರಸದೌತಣ ಓದುಗರಿಗಾಗಿ ಇದರಲ್ಲಿ ಕಾದಿದೆ. ಭಾರತೀಯ ಭಾಷೆಗಳಲ್ಲಿ ಇಂತಹ ಒಂದು ಪ್ರಕಟಣೆ ಇದೇ ಮೊತ್ತಮೊದಲನೆಯದು.

    ಇದೊಂದು ಬೃಹತ್ ಯೋಜನೆ. ಒಟ್ಟು ೨೫ ಸಂಪುಟಗಳಲ್ಲಿ ಇದರ ಪ್ರಕಟಣೆ. ಜಗತ್ತಿನ ಅತ್ಯುತ್ತಮ ಸಣ್ಣ ಕಥೆಗಳ ಈ ಮಹಾ…