ಪುಸ್ತಕ ಸಂಪದ

  • ಗುರುಪ್ರಸಾದ ಕಾಗಿನೆಲೆ ಇವರು ಬರೆದ ‘ಕಾಯಾ’ ಕಾದಂಬರಿ ಇತ್ತೀಚೆಗೆ ಅಂಕಿತ ಪುಸ್ತಕದಿಂದ ಪ್ರಕಾಶಿತವಾಗಿದೆ. ಈ ಪುಸ್ತಕದ ಬೆನ್ನುಡಿಯಲ್ಲಿ ಇಬ್ಬರು ಸಾಹಿತಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ. ಕಾವ್ಯಾ ಕಡಮೆ ಇವರ ಪ್ರಕಾರ “ ಕಾಯಾ ಕಾದಂಬರಿ ಬಗೆದು ತೋರಲು ಹೊರಟಿರುವುದು ಮನುಷ್ಯ ಬಾಳ್ವೆಯಲ್ಲೇ ಬೆರೆತು ಹೋಗಿರುವ ಹಪಾಪಿತನವನ್ನು. ಇಲ್ಲಿನ ಮಲೀಕ್, ಕಸ್ತೂರಿ, ಪರಿ, ಸಮಂತಾ, ಹನಿ ಕನ್ನಡ ಭೂಮಿಕೆಗೆ ಹೊಸತಾಗಿ ನಡೆದು ಬಂದವರಾದರೂ ತಮಗೇ ಗೊತ್ತಿಲ್ಲದೇ ಕನ್ನಡತನದಲ್ಲಿ ಆಳವಾಗಿ ಬೇರೂರಿದವರು. 

    ತಿರುವು ಮುರುವಾಗಿ ತೊಟ್ಟ ಬಟ್ಟೆಯ ಗುಂಟ ಹೊಲಿಗೆಯ ಪುಗ್ಗೆ ಕಾಣುವ ಹಾಗೆ ಇಲ್ಲಿನ ಪಾತ್ರಗಳ ದೇಹದ ಮೇಲೂ, ಮನೋವಲಯದ ಒಳಗೂ ಉಬ್ಬುತಗ್ಗುಗಳು ಮೂಡಿವೆ. ಮರೆಯಾಗಿವೆ. ಆ…

  • ಸಾಹಿತ್ಯಲೋಕ ಪಬ್ಲಿಕೇಷನ್ಸ್ ಪ್ರಕಟಿಸುತ್ತಿರುವ  ಆಶಾರಘು  ಅವರ ಹೊಸ ಕಾದಂಬರಿ  "ಮಾಯೆ ". ಪುಸ್ತಕಕ್ಕೆ ಖ್ಯಾತ ಕಾದಂಬರಿಕಾರರಾದ ಡಾ. ಕೆ.ಎನ್ ಗಣೇಶಯ್ಯ ಅವರು ಬೆನ್ನುಡಿ ಬರೆದಿದ್ದಾರೆ.

    “ಸುಖ ಪಡೆಯಲೆಂದು ಹೆಣ್ಣು, ಹೊನ್ನು ಮತ್ತು ಮಣ್ಣುಗಳ ಹಿಂದೆ ಬಿದ್ದ ಜೀವಕ್ಕೆ ಆ ಸುಖವು ಎಂದೂ ಮರೀಚಿಕೆಯಾಗಿಯೇ ಉಳಿಯುತ್ತದೆ ಎನ್ನುವುದು ಚಿರಪರಿಚಿತ ಬೋಧನೆಯಷ್ಟೇ ಅಲ್ಲದೆ ಮಾನವನ ಚರಿತ್ರೆಯುದ್ದಕ್ಕೂ ಪುನರಾವರ್ತಿತವಾಗಿ ಗೋಚರಿಸುವ ಸತ್ಯ ಕೂಡ, ಇದರ  ಇನ್ನೊಂದು ಮಗ್ಗುಲಾಗಿ ನೆಲೆಯಾಗಿರುವ ಮತ್ತೊಂದು ಸತ್ಯವೆಂದರೆ ಆ ಮೂರೂ ಆಸೆಗಳನ್ನು ತೊರೆದ ಜೀವಕ್ಕೆ ಆಹ್ಲಾದಕರ ಆನಂದದ ಜೊತೆಗೆ ಪಾರಮಾರ್ಥಿಕ ಸುಖವೂ ದೊರೆಯುತ್ತದೆ…

  • ವಸುಮತಿ ಉಡುಪ ಇವರು ಬರೆದ ಕಥೆಗಳ ಸಂಕಲನವೇ ‘ಬೊಗಸೆ ತುಂಬಾ ನಕ್ಷತ್ರಗಳು. ಕಳೆದ ಮೂರು ದಶಕಗಳಲ್ಲಿ ಸಾಪ್ತಾಹಿಕ, ವಾರ ಪತ್ರಿಕೆ, ಮಾಸಿಕ ವಿಶೇಷಾಂಕಗಳಲ್ಲಿ ಪದೇ ಪದೇ ಕಾಣಿಸುವ ಹೆಸರು ವಸುಮತಿ ಉಡುಪ ಅವರದು. ಯಾವುದೇ ಕ್ಲಿಷ್ಟತೆಯಿಲ್ಲದ ಸರಳ ಭಾಷೆ, ನಿರೂಪಣೆ, ನೇರ ಕತೆಗಾರಿಕೆಗಳಿಂದ ಒಮ್ಮೆಲೆ ಓದುಗನ ಮನದಾಳಕ್ಕಿಳಿದು ಬಿಡುತ್ತಾರೆ. ಮಹಿಳಾ ಓದುಗರಿಗಂತೂ ವಸುಮತಿಯವರ ಕತೆಗಳೆಂದರೆ ಪಂಚಪ್ರಾಣ.

    ಮಲೆನಾಡಿನ ಪರಿಸರ, ಭಾಷೆ, ಜೀವನ ಶೈಲಿ ಇವರ ಬಹುತೇಕ ಕತೆಗಳ ವಸ್ತು. ‘ಬಂದನಾ ಹುಲಿರಾಯ', ‘ಅಗ್ನಿ ದಿವ್ಯ’, ‘ಮೃಗತೃಷ್ಣಾ’, ‘ಪಾತಾಳ ಗರಡಿ', ‘ನಮ್ಮ ನಡುವಿನ ಕಾಂತಾಮಣಿಯರು', ‘ಸಂಕ್ರಮಣ', ‘ಮಾಯೆಯ ಮಾಟ', ‘ಅಂತರಂಗದ ಪಿಸುನುಡಿ', ‘ತಲ್ಲಣಕೆ ಬಾಯಿಲ್ಲವಯ್ಯ' ಇವರ ಪ್ರಮುಖ ಕಥಾ…

  • ‘ಮಿಹಿರಕುಲಿ' ಎನ್ನುವ ವಿಶಿಷ್ಟ ಹೆಸರನ್ನು ಹೊಂದಿರುವ ಈ ಪುಸ್ತಕವನ್ನು ಬರೆದವರು ಸದ್ಯೋಜಾತ ಭಟ್ಟ ಇವರು. ಇವರ ಹಾಗೂ ಈ ಪುಸ್ತಕದ ಬಗ್ಗೆ ಎಸ್.ಎನ್.ಸೇತುರಾಮ್ ಇವರು ತಮ್ಮ ಬೆನ್ನುಡಿಯಲ್ಲಿ ಹೀಗೆ ಬರೆದಿದ್ದಾರೆ “ಸದ್ಯೋಜಾತ ಭಟ್ಟರ ಹೊಸ ಪುಸ್ತಕ ‘ಮಿಹಿರಕುಲಿ', ಮೊದಲ ಮೂರು ಪುಸ್ತಕಗಳಾದ ‘ಶಿಲೆಯಲ್ಲಡಗಿದ ಸತ್ಯ', ‘ನಾಸತ್ಯ' ಮತ್ತು ‘ಕಾಲಯಾನ' ಕೆದಕಿ ಬಿಟ್ಟಂತಹ ಭಾವಗಳಿಗೆ, ಈ ಪುಸ್ತಕ ಮೂರ್ತರೂಪ ಕೊಟ್ಟಿದೆ. ಓದಿ ಮುಗಿಸಿದಾಗ ಮೊದಲು ಕಾಡುವ ಭಾವ ವಿಷಾದ.

    ಭಾರತದ ಪ್ರಜೆಯಾದ ನನಗೆ, ದೇಶ ನನ್ನ ತಾಯಿ, ಬಂದವರೆಲ್ಲಾ ಬಗೆದಿದ್ದಾರೆ, ಬರಡಾಗಿಸುವ ಪ್ರಯತ್ನ ಮಾಡಿದ್ದಾರೆ. ಅವರವರ ಮಾಪನಗಳಲ್ಲಿ ಅಳೆದಿದ್ದಾರೆ. ಸೆರೆಗೆಳೆದವರೆಷ್ಟೋ, ಬಳಸಿಕೊಂಡವರೆಷ್ಟೋ, ಆಳ್ವಿಕೆಯ, ಆಡಳಿತದ…

  • ಜಯಂತ್ ಕಾಯ್ಕಿಣಿ ಕತೆಗಳೆಂದರೆ ಒಂಥರಾ ಮುದ್ದು ಮುದ್ದಾಗಿರುತ್ತದೆ. ಕತೆಗಳನ್ನು ಓದುತ್ತಾ ಓದುತ್ತಾ ಆ ಊರು, ಜನರು, ಸನ್ನಿವೇಶಗಳಲ್ಲಿ ನಾವು ಕಳೆದೇ ಹೋಗುತ್ತೇವೆ ಎಂದೇನೋ ಅನಿಸಿಬಿಡುತ್ತದೆ. ಅದೇ ರೀತಿಯ ೯ ಕತೆಗಳನ್ನು ಜಯಂತ್ ಕಾಯ್ಕಿಣಿಯವರು ‘ಅನಾರ್ಕಲಿಯ ಸೇಫ್ಟಿಪಿನ್' ಕಥಾಸಂಕಲನದಲ್ಲಿ ನೀಡಿದ್ದಾರೆ.

    ತಮ್ಮ ಮುನ್ನುಡಿಯಾದ ‘ಅರಿಕೆ’ಯಲ್ಲಿ ಅವರು ಬರೆದದ್ದು ಹೀಗೆ “ಸುಗ್ಗಿ ಹಬ್ಬದ ‘ಹಗರಣ'ದ ಹುಣ್ಣಿಮೆಯ ದಿನ. ರಥಬೀದಿಯಲ್ಲಿ ಮರಕಾಲು ಕಟ್ಟಿಕೊಂಡ ವೇಷಗಳು ಮೆರವಣಿಗೆಯಲ್ಲಿ ಬರುತ್ತಿದ್ದವು. ವಾಲದಂತೆ ಬೀಳದಂತೆ ಸಮತೋಲ ಕಾಯ್ದುಕೊಳ್ಳಲೆಂದೇ ಅವು ಮರದ ಮೊಂಡು ಹೆಜ್ಜೆಗಳನ್ನು ಅತ್ತ ಇತ್ತ ಹಿಂದೆ ಮುಂದೆ ಲಯಬದ್ಧವಾಗಿಯೇ ಊರುತ್ತ ಕೈಗಳನ್ನೂ ಆಡಿಸುತ್ತ ಕುಣಿಯುತ್ತ…

  • ಲೇಖಕ ಹಾಗೂ ಚಿಂತಕ ಅವಿ ಯೋರಿಶ್ ಅವರು ಇಸ್ರೇಲ್ ದೇಶದ ಬಗ್ಗೆ ಬರೆದ ಪುಸ್ತಕವೇ ‘ಆವಿಷ್ಕಾರದ ಹರಿಕಾರ'. ಮುಖಪುಟದಲ್ಲೇ ಬುದ್ದಿಶಾಲಿ ಇಸ್ರೇಲಿಗಳು ವಿಶ್ವವನ್ನು ಬದಲಿಸಿದ ಪರಿ ಎಂದು ಬರೆವ ಮೂಲಕ ಪುಸ್ತಕದ ಕಥಾ ವಸ್ತುವಿನ ಬಗ್ಗೆ ಕುತೂಹಲ ಮೂಡಿಸಿದ್ದಾರೆ ಈ ಪುಸ್ತಕದ ಅನುವಾದ ಮಾಡಿದ ವಿಶ್ವೇಶ್ವರ ಭಟ್ ಇವರು. ಮೂಲತಃ ಉದ್ಯಮಿಯಾದ ಅವಿ ಯೋರಿಶ್ ಅವರ ಈ ಕೃತಿ ವಿಶ್ವದ ನಲ್ವತ್ತಕ್ಕೂ ಅಧಿಕ ಭಾಷೆಗೆ ಅನುವಾದವಾಗಿರುವುದು ಈ ಪುಸ್ತಕದ ಹೆಗ್ಗಳಿಕೆ. 

    ಈ ಪುಸ್ತಕವು ಇಸ್ರೇಲ್ ಎಂಬ ಪುಟ್ಟ ದೇಶದ ಬಗ್ಗೆ ಹಾಗೂ ಅಲ್ಲಾಗುವ ಆವಿಷ್ಕಾರಗಳ ಕುರಿತ ಸಮಗ್ರ ಮಾಹಿತಿ ನೀಡುತ್ತದೆ. ಅನುವಾದಕರಾದ ವಿಶ್ವೇಶ್ವರ ಭಟ್ ಇವರು ಹಲವಾರು ಸಲ ಇಸ್ರೇಲ್ ದೇಶಕ್ಕೆ ಭೇಟಿ ನೀಡಿರುವುದರಿಂದ ಈ ಪುಸ್ತಕದ…

  • ರವಿ ಬೆಳಗೆರೆಯವರು ಬರೆದ ನಿಜ ಜೀವನದ ಮರ್ಡರ್ ಮಿಸ್ಟರಿ ಕಾದಂಬರಿಯೇ ‘ಅಮ್ಮಾ ನನ್ನನ್ನು ಯಾಕೇ ಕೊಂದೆ?’ ಒಂದು ಸಮಯದಲ್ಲಿ ಎಲ್ಲರಿಗೂ ತಲೆನೋವಾಗಿದ್ದ ಶೀನಾ ಬೋರಾ ಎಂಬ ಯುವತಿಯ ಕೊಲೆ ರಹಸ್ಯ ಬಯಲಾದದ್ದು ಹೇಗೆ? ಎನ್ನುವುದೇ ಈ ಪುಸ್ತಕದ ತಿರುಳು. 

    ರವಿ ಬೆಳಗೆರೆಯವರು ತಮ್ಮ ಬೆನ್ನುಡಿಯಲ್ಲಿ ಈ ಪುಸ್ತಕದ ಬಗ್ಗೆ ಹೀಗೆ ಬರೆದಿದ್ದಾರೆ ‘ಆಸ್ತಿಗಾಗಿ ಕೊಲೆಗಳಾಗುವುದು ಹೊಸದೇನಲ್ಲ. ಆದರೆ ಇಂದ್ರಾಣಿ ಎಂಬ ಮೂರು ಗಂಡಂದಿರ ಹೆಂಗಸು ಮಾಡಿದ ಕೊಲೆ ಇದೆಯಲ್ಲಾ? ಅದು ನಿಜಕ್ಕೂ ಘೋರ. ಆಕೆಯಲ್ಲಿ ಮನುಷ್ಯತ್ವದ ಲವಲೇಶವೂ ನಿಮಗೆ ಕಾಣಸಿಗುವುದಿಲ್ಲ. ಹೆತ್ತ ಮಗಳು ಆಸ್ತಿ ವಿಚಾರದಲ್ಲಿ ತಿರುಗಿ ಬಿದ್ದಾಳು ಎಂಬ ಒಂದೇ ಒಂದು ಕಾರಣಕ್ಕೆ ಆಕೆಯನ್ನು ಅತ್ಯಂತ ನಿರ್ದಯವಾಗಿ ಕೊಂದು ಸುಟ್ಟು…

  • ‘ಮಿಥುನ’ ಕೃತಿಯ ಮೂಲ ಲೇಖಕರಾದ ಶ್ರೀರಮಣ ಅವರು ಬರೆದ ನೀಳ್ಗತೆಯೇ ನಾಲ್ಕನೇ ಎಕರೆ. ಲೇಖಕರು ತಮ್ಮ ಬೆನ್ನುಡಿಯಲ್ಲಿ ‘ಹೆಪ್ಪಿನ ಹನಿಯೂ, ನಿಂಬೆಯ ರಸವೂ…’ ಎಂದು ಬರೆಯುತ್ತಾ “ಇದು ಗ್ರಾಮೀಣ ಪ್ರದೇಶದಲ್ಲಿ ಸಾಗುವ ಕಥೆಯಾದ್ದರಿಂದ ರೈತಾಪಿ ಜನರ ಬೆವರುಪ್ಪಿನ ಆಡುಮಾತನ್ನೇ ಇಲ್ಲಿ ಬಳಸಿದ್ದೇನೆ. ಇದು ಮೂರು ಪದರುಗಳಾಗಿ ಬಿಚ್ಚಿಕೊಳ್ಳುವ ಕಥೆ. ಗ್ರಾಮ್ಯ ಜೀವನ, ನಗರೀಕರಣ. ಈ ಎರಡರ ನಡುವೆ ಸಿಲುಕಿ ನಲುಗುತ್ತಿರುವ ಹಳೆ ಮತ್ತು ಹೊಸ ತಲೆಮಾರುಗಳು ಈ ಕಥೆಯಲ್ಲಿ ಕಾಣಸಿಗುತ್ತವೆ. ಹಾಲೆಂಬ ಪದಾರ್ಥವು ಹೆಪ್ಪಿನ ಹನಿಯಿಂದ ಮೊಸರಾಗುವುದಕ್ಕೂ, ನಿಂಬೆಯ ರಸದಿಂದ ಒಡೆದುಹೋಗುವುದಕ್ಕೂ ಇರುವ ವ್ಯತ್ಯಾಸವೇ ಈಗಿನ ಹುಡುಗರಿಗೆ ಗೊತ್ತಿಲ್ಲ. ಹಾಗೆಂದೇ ಈ ಕಥೆ ಬರೆದಿದ್ದೇನೆ. ನಮ್ಮ ಹಳ್ಳಿ ಬಿಟ್ಟು ಐವತ್ತು ವರ್ಷ ದಾಟಿದರೂ,…

  • ‘ಮಲೆನಾಡಿನ ರೋಚಕ ಕಥೆಗಳು’ ಇದರ ೧೦ ನೆಯ ಭಾಗವೇ 'ಗಿರಿಕಂದರ ಎಸ್ಟೇಟ್'. ಎಂದಿನಂತೆ ಲೇಖಕರಾದ ಗಿರಿಮನೆ ಶ್ಯಾಮರಾವ್ ಅವರು ಪರಿಸರವನ್ನು ತಮ್ಮ ಬರಹದಲ್ಲಿ ಹೊದ್ದುಕೊಂಡು ರೋಚಕ ಕಥನ ಮಾಲೆಯನ್ನು ಪೋಣಿಸಿದ್ದಾರೆ. ಅವರೇ ತಮ್ಮ ಕೃತಿಯ ಬಗ್ಗೆ ಬೆನ್ನುಡಿಯಲ್ಲಿ ಹೀಗೆ ಬರೆದುಕೊಂಡಿದ್ದಾರೆ. “ಇದು ಮಲೆನಾಡಿನ ರೋಚಕ ಕಥೆಗಳ ಸರಣಿಯ ಹತ್ತನೆಯ ಭಾಗ. ‘ಶೋಧ' ಎಂಬ ಹೆಸರಿನಲ್ಲಿ ‘ಮಂಗಳ' ವಾರಪತ್ರಿಕೆಯಲ್ಲಿ ಮೂಡಿಬಂದ ಜನಪ್ರಿಯ ಧಾರಾವಾಹಿ. ವೈವಿಧ್ಯಮಯವಾದ ಮಲೆನಾಡಿನ ರೋಚಕತೆಗಳ ಚಿತ್ರಣ ಇದರಲ್ಲೂ ಇದೆ. ಮಲೆನಾಡಿನ ಭಾಗವಾಗಿ ತೆಗೆದುಕೊಳ್ಳುವ ಇದರ ಮತ್ತೊಂದು ಮಗ್ಗುಲೇ ಅರೆಮಲೆನಾಡು. ಅದರ ನಂತರವೇ ಬಯಲು ಪ್ರದೇಶ ಸಿಗುವುದು. ಕಥೆಯ ಮೂಲಕ ಅಂತಹಾ ಅರೆಮಲೆನಾಡಿಗೆ ನಿಮ್ಮನ್ನು ಕರೆದೊಯ್ಯುವ ಪ್ರಯತ್ನ ಇದರಲ್ಲಿದೆ. ಪಶ್ಚಿಮಘಟ್ಟ…

  • ಅಯೋಧ್ಯಾ ಪ್ರಕಾಶನ ಇವರ ೧೬ನೆಯ ಕೃತಿಯೇ ರೋಹಿತ್ ಚಕ್ರತೀರ್ಥ ಇವರು ಬರೆದ ‘ಎಂದೆಂದೂ ಬಾಡದ ಮಲ್ಲಿಗೆ. ಈ ಪುಸ್ತಕದಲ್ಲಿ ಸಾಹಿತ್ಯ ಜಗತ್ತಿನ ಸ್ವಾರಸ್ಯಗಳನ್ನು ಸೊಗಸಾಗಿ ವರ್ಣನೆ ಮಾಡಲಾಗಿದೆ. ಹಿರಿಯ ವಿಮರ್ಶಕರಾದ ಮುರಳೀಧರ ಉಪಾಧ್ಯ ಹಿರಿಯಡಕ ಇವರು ತಮ್ಮ ಬೆನ್ನುಡಿಯಲ್ಲಿ “ರೋಹಿತ್ ಚಕ್ರತೀರ್ಥ ವೈವಿಧ್ಯಪೂರ್ಣ ಆಸಕ್ತಿಗಳಿರುವ ಹೊಸ ತಲೆಮಾರಿನ ಕನ್ನಡ ಲೇಖಕ. ಎಂದೆಂದೂ ಬಾಡದ ಮಲ್ಲಿಗೆಯಲ್ಲಿ ಇವರು ಜಿ.ಟಿ.ನಾ, ಕೆ.ಎಸ್.ನ, ತ.ಸು.ಶಾ, ಜಿ.ವೆಂಕಟಸುಬ್ಬಯ್ಯ ಇಂಥ ಲೇಖಕರನ್ನು, ಪಾ.ವೆಂ., ಗುಲ್ವಾಡಿಯವರಂಥ ಪತ್ರಕರ್ತರನ್ನು, ಚಂದಮಾಮ, ಸಂದೇಶಗಳಂಥ ಪತ್ರಿಕೆಗಳನ್ನು ಪರಿಚಯಿಸಿದ್ದಾರೆ. ವಿಮರ್ಶಾತ್ಮಕ ಒಳನೋಟಗಳೂ ಈ ಲೇಖನಗಳಲ್ಲಿವೆ. ತಲಸ್ಪರ್ಶಿ ಅಧ್ಯಯನ, ನಿಖರ ಮಾಹಿತಿಗಳು, ಲಕ್ಷಿಸುವ ಅತಿ ಸಣ್ಣ ವಿವರಗಳು, ಸರಳ ಶೈಲಿ…