ಪುಸ್ತಕ ಸಂಪದ

  • ನೋಬೆಲ್ ಪುರಸ್ಕಾರ ದೊರೆತ ಮೊದಲ ಭಾರತೀಯ ಎಂಬ ಖ್ಯಾತಿಗೆ ಪಾತ್ರರಾದವರು ಖ್ಯಾತ ಕವಿ ರವೀಂದ್ರನಾಥ ಠಾಕೂರ್ ಅಥವಾ ಠಾಗೋರ್ ಇವರು. ಇವರ ‘ಗೀತಾಂಜಲಿ' ಕವನ ಸಂಕಲನಕ್ಕೆ ಈ ಪುರಸ್ಕಾರ ದೊರೆಯಿತು ಎಂಬುವುದು ಎಲ್ಲರಿಗೂ ತಿಳಿದ ವಿಷಯ. ಠಾಗೋರರು ಸುಮಾರು ಮೂರು ಸಾವಿರ ಕವನಗಳನ್ನು ಬರೆದಿದ್ದಾರೆ. ಇದರ ಜೊತೆಗೆ ೯೪ ಕಥೆಗಳನ್ನೂ ಬರೆದಿದ್ದಾರೆ. ಠಾಗೋರರು ನಾಟಕಗಳನ್ನೂ, ಕಾದಂಬರಿಗಳನ್ನೂ, ಸಣ್ಣ ಕಥೆಗಳನ್ನೂ ಬರೆಯುತ್ತಿದ್ದುದು ಬಹುತೇಕರಿಗೆ ತಿಳಿದಿಲ್ಲ. ಅವರ ೧೨ ಕಥೆಗಳು ಕನ್ನಡಕ್ಕೆ ಅನುವಾದಗೊಂಡು ‘ಹಸಿದ ಕಲ್ಲು ಮತ್ತು ಇತರ ಕಥೆಗಳು’ ಎಂಬ ಹೆಸರಿನ ಪುಸ್ತಕವಾಗಿ ಹೊರಬಂದಿದೆ. 

    ಹೆಚ್.ವಿ.ನಯನತಾರಾಮಣಿಯವರು ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ. ಅವರು ಬರೆದ…

  • “ಅಚ್ಚ ಕನ್ನಡ ಪ್ರದೇಶವಾದ ಕಾಸರಗೋಡಿನ ಚಿನ್ನಾ... ಎಲ್ಲರಿಗೂ ಚಿನ್ನದ ಮನಸ್ಸಿನ ವ್ಯಕ್ತಿಯಾಗಿ ಬೆಳೆದವರು. ವೃತ್ತಿಯಲ್ಲಿ ವ್ಯಾಪಾರಿಯಾಗಿದ್ದರೂ, ಪ್ರವೃತ್ತಿಯಲ್ಲಿ ನಟನಾಗಿ, ನಿರ್ದೇಶಕನಾಗಿ, ಬೆಳಕು ವಿನ್ಯಾಸ, ರಂಗವಿನ್ಯಾಸ, ವಸ್ತ್ರ ವಿನ್ಯಾಸಗಳಲ್ಲಿ ಪಳಗಿದವರು. ಪ್ರಗತಿಶೀಲ ರಂಗಭೂಮಿಯ ಕೃಷಿಕನಾಗಿ, ಸಂಗೀತದ ಒಳಮಜಲುಗಳನ್ನು ಅರಿತವರಾಗಿ, ಒಳ್ಳೆಯ ಸಂಘಟಕರಾಗಿ ಸಾಧನೆಗೈದವರು. ಲಾರಿ ನಾಟಕ, ಸಂಗೀತ ರಥ, ಯಕ್ಷತೇರು... ಹೀಗೆ ಸಾಗುತ್ತದೆ ಆವರ ಅಭಿಯಾನಗಳ ಸರಮಾಲೆಗಳು. ಚಲನಚಿತ್ರ, ಧಾರವಾಹಿ, ಆಕಾಶವಾಣಿ, ರಂಗಭೂಮಿ, ಸಂಘಟನೆ ಎಲ್ಲದರಲ್ಲೂ ಅವರದ್ದೇ ಛಾಪು. ಕರ್ನಾಟಕ ನಾಟಕ ಅಕಾಡೆಮಿ ಹಾಗೂ ಕೇರಳ ಸಂಗೀತ ನಾಟಕ ಅಕಾಡೆಮಿ ಸದಸ್ಯರಾಗಿ, ಪ್ರಶಸ್ತಿ ವಿಜೇತರಾಗಿ ಪ್ರಶಂಶಿಸಲ್ಪಟ್ಟವರು, ರಂಗಾಸಕ್ತರ ಪ್ರೀತಿಯ…

  • ಈ ಹೊತ್ತಗೆಯು ಕೇರಳದ ಸುಪ್ರಸಿದ್ಧ ವಿಷವೈದ್ಯರಾದ ರಾಜಾ ಕೇರಳವರ್ಮರು ರಚಿಸಿರುವ ‘ವಿಷಚಿಕಿತ್ಸೆ' ಗ್ರಂಥದ ಕನ್ನಡದ ಭಾಷಾಂತರವಾಗಿದೆ. ಇದನ್ನು ಕನ್ನಡಕ್ಕೆ ಅನುವಾದಿಸಿರುವವರು ‘ಆಯುರ್ವೇದ ವಿಶಾರದ' ‘ಬಿಷಕ್' ಎಂದು ಬಿರುದಾಂಕಿತರಾದ ಡಾ॥ ವಿಶ್ವನಾಥರಾವ್ ಅವರು.

    ಈ ವಿಭಾಗದಲ್ಲಿ ಮಾನವನ ಆರೋಗ್ಯಕ್ಕೆ ಹಾಗೂ ಒಮ್ಮೊಮ್ಮೆ ಪ್ರಾಣಕ್ಕೂ ಅಪಾಯವನ್ನೊಡ್ಡುವ ಅನೇಕ ವಿಷವಿರುವ ಪ್ರಾಣಿಗಳು, ಸಸ್ಯಗಳು ಹಾಗೂ ಖನಿಜಗಳ ವಿಚಾರವಾಗಿ ಸವಿಸ್ತಾರವಾದ ವರ್ಣನೆ ಮಾತ್ರವಲ್ಲದೆ, ಆಯಾ ವಿಷಗಳು ಉತ್ಪತ್ತಿ ಮಾಡುವ ಲಕ್ಷಣಗಳು ಹಾಗೂ ಅಂಥ ಸಂದರ್ಭದಲ್ಲಿ ಅನುಸರಿಸಬೇಕಾದ ಚಿಕಿತ್ಸಾ ಕ್ರಮಗಳನ್ನು ವಿವರಿಸಲಾಗಿದೆ.

    ಆಯುರ್ವೇದದ ‘ಬ್ರಹತ್ತ್ರಯಿ'ಗಳೆಂದು…

  • ನಿನ್ನೆಯ ಬೆನ್ನಿಗೆ ಇಂದು ಬಂದು ಅದು ನಾಳೆಗಳಾದಾಗ ಅಲ್ಲಿ ಕೆಲವೊಂದು ಇತಿಹಾಸಗಳು ಸೃಷ್ಟಿಯಾಗುತ್ತವೆ. ಆ ಇತಿಹಾಸ ನಂಬಲಾರ್ಹ ಎನ್ನಬೇಕಾದರೆ ಅದಕ್ಕೆ ಬಲವಾದ ಸಾಕ್ಷಿಗಳು ಇರಬೇಕು. ಅದು ವ್ಯಕ್ತಿ, ವಸ್ತು ಇಲ್ಲ ಕಥನಗಳಾಗಿರಬಹುದು. ತುಳುನಾಡಿನಲ್ಲಿ ಶೋಷಿತರ, ಧಮನಿತರ ಧ್ವನಿಯಾಗಿ ಕಾಣುವಂತದ್ದು ಪಾಡ್ದನಗಳು. ಅವುಗಳಲ್ಲಿ ಉಲ್ಲೇಖ ಮಾಡಲ್ಪಟ್ಟ ಸ್ಥಳ ನಾಮ, ವ್ಯಕ್ತಿ,  ವಂಶ, ಸಾಮಾಜಿಕ ಕಟ್ಟುಪಾಡುಗಳು ಇತಿಹಾಸದ ಸತ್ಯಾಸತ್ಯತೆಯನ್ನು ಬಹಳವಾಗಿ  ಪುಷ್ಟೀಕರಿಸುತ್ತದೆ.

    ಈ ರೀತಿಯ ಎಲ್ಲಾ ಅರ್ಹತೆ ದಾಖಲಾತಿಗಳಿದ್ದೂ ಒಂದು ಇತಿಹಾಸ ಕಡೆಗಣಿಸಲ್ಪಡುತ್ತದೆ ಎಂದಾದರೆ ಅದರ ವಿರುದ್ಧ ದ್ವನಿ ಎತ್ತಬೇಕಾಗುತ್ತದೆ. ಕಾಸರಗೋಡಿನ ಹೆಸರಾಂತ ಕವಿ, ಚಿಂತಕ ರಾಧಾಕೃಷ್ಣ ಉಳಿಯತ್ತಡ್ಕ ಇವರ *…

  • “ಆರು ತಿಂಗಳ ಕಾಲ ಸತತವಾಗಿ ಮನಸ್ಸನ್ನು ಕೇಂದ್ರೀಕರಿಸಿ, ಅಡಿಗರ ಕವನಗಳನ್ನು ಮನನ ಮಾಡಿಕೊಂಡು, ಅವುಗಳ ಅರ್ಥವಂತಿಕೆಯನ್ನು ಕಂಡುಕೊಳ್ಳುತ್ತ, ಆಲೋಚಿಸಿದ್ದನ್ನು ಸ್ಪಷ್ಟವಾಗುವಂತೆ ಬರೆಯಲಿಕ್ಕೆ ಹಲವು ಬಾರಿ ಪ್ರಯತ್ನಿಸಿ, ಮತ್ತೆ ಮತ್ತೆ ತಿದ್ದುತ್ತ ಈ ಮಹಾಪ್ರಬಂಧವನ್ನು ಸಿದ್ಧ ಪಡಿಸುವುದಕ್ಕೆ ಅಣ್ಣಮ್ಮನವರು ಪಟ್ಟ ಪರಿಶ್ರಮ ಅಷ್ಟಿಷ್ಟಲ್ಲ. ಇಂಥ ಪರಿಶ್ರಮವನ್ನು ಕಾಲೇಜಿನ ಉಪನ್ಯಾಸಕರು ಜೀವನದಲ್ಲಿ ಒಮ್ಮೆ ತೆಗೆದುಕೊಂಡರೆ, ಅವರು ತೋರಿಸಿದ ಧಾರಣ ಶಕ್ತಿ, ಧೀಮಂತಿಕೆ ಅವರದ್ದಲ್ಲ ಅನ್ನಿಸುವುದು ಸಾಧ್ಯ. ಹಾಗೆ ಅನ್ನಿಸಲಿಕ್ಕೆ ಬಿಡದೆ ಸ್ವಾಧ್ಯಾಯದಲ್ಲಿ ಮುಳುಗಿ ಧ್ಯಾನ, ಮನನ ಮತ್ತು ಧಾರಣದಿಂದ ತಮ್ಮ ವಿಶ್ಲೇಷಣಾ ಶಕ್ತಿಯನ್ನು ಬೆಳೆಸಿಕೊಂಡಾಗ ಅದು ವಿದ್ವತ್ತಾಗಿ ಉಳಿಯುತ್ತದೆ. ಅದು ಪ್ರವಚನಕ್ಕೂ ಶಕ್ತಿಯನ್ನು…

  • ಪತ್ರಕರ್ತ ಲೇಖಕ ಕೆ.ಗಣೇಶ್ ಕೋಡೂರು ಅವರ ಪುಟ್ಟ ಪುಸ್ತಕವೇ ‘ ಒನ್ ಮಿನಿಟ್ ಸಕ್ಸಸ್'. ಲೇಖಕರ ಪ್ರಕಾರ ಬದುಕಿನ ಅತಿ ದೊಡ್ಡ ಗೆಲುವನ್ನು ಆ ಕೊನೆಯ ಒಂದು ನಿಮಿಷವೇ ನಿರ್ಧರಿಸುತ್ತದೆ. ಒಂದು ನಿಮಿಷವೆಂದರೆ ಅದು ಕೇವಲ ಅರವತ್ತು ಸೆಕೆಂಡುಗಳಲ್ಲ. ಬರೀ ಅರವತ್ತು ಸೆಕೆಂಡುಗಳಲ್ಲಿ ಏನು ಮಾಡಲಿಕ್ಕೆ ಸಾಧ್ಯ ಎಂದುಕೊಂಡು ಸುಮ್ಮನುಳಿದು ಬಿಟ್ಟಿರೋ, ಅದೇ ಸಮಯ ನಿಮ್ಮ ಬಳಿ ಮುಂದೆ ಅರವತ್ತು ವರ್ಷಗಳ ಪೆನಾಲ್ಟಿ ಕೇಳುತ್ತದೆ. ಅದೇ ನೀವು ಈ ಒಂದು ನಿಮಿಷವನ್ನೂ ಸುಮ್ಮನೆ ಬಿಡದೇ ಇಟ್ಟುಕೊಂಡ ಟಾರ್ಗೆಟ್ಟನ್ನು ರೀಚ್ ಆದಿರಿ ಎಂದುಕೊಳ್ಳಿ. ಅರವತ್ತು ಸೆಕೆಂಡುಗಳಲ್ಲಿ ದಕ್ಕಿದ ಈ ಗೆಲುವು ನಿಮ್ಮ ಇಡೀ ಜೀವಮಾನವನ್ನೇ ಶ್ರೀಮಂತಿಕೆಯಲ್ಲಿ ತೂಗಿಸಿ ಬಿಡುತ್ತದೆ…

    ಸುಮಾರು ೫೬ ಪುಟಗಳ ಪುಟ್ಟ…

  • ಯೋಗರಾಜ್ ಭಟ್ ನಿರ್ದೇಶನದ, ಗಣೇಶ್ ಹಾಗೂ ಪೂಜಾ ಗಾಂಧಿ ಅಭಿನಯದ ‘ಮುಂಗಾರು ಮಳೆ' ಸಿನೆಮಾ ಬಿಡುಗಡೆಯಾಗಿ, ಸೂಪರ್ ಹಿಟ್ ಆದದ್ದು ಈಗ ಇತಿಹಾಸ. ಆ ಸಮಯದಲ್ಲಿ ಮಳೆಯಲ್ಲಿ ನೆನೆಯುತ್ತಾ, ಸುಂದರ ಪರಿಸರದಲ್ಲಿ ವಿಹರಿಸುತ್ತಾ, ಕರ್ಣ ಮನೋಹರವಾದ ಹಾಡುಗಳನ್ನು ಕೇಳುತ್ತಾ ಆನಂದಿಸಿದ್ದು ಈಗ ನೆನಪಾಗುತ್ತದೆ. ‘ಪ್ರೀತಿ ಮಧುರ ತ್ಯಾಗ ಅಮರ' ಎಂದು ಹೇಳುವ ಕೊನೇ ದೃಶ್ಯ ಬಹುತೇಕರ ಕಣ್ಣಂಚನ್ನು ಒದ್ದೆ ಮಾಡಿದ್ದು ಸುಳ್ಳಲ್ಲ. ಮುಂಗಾರು ಮಳೆ ಸಿನೆಮಾದ ಹಿಂದಿನ ಕಥೆಯನ್ನು ನಿರ್ದೇಶಕ ಯೋಗರಾಜ್ ಭಟ್ ಅವರು ಬರವಣಿಕೆಯ ರೂಪದಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಕನ್ನಡ ಸಾಹಿತ್ಯ ಲೋಕದಲ್ಲಿ ಇದೊಂದು ರೀತಿಯ ಹೊಸತನ.

    ಸಿನೆಮಾ ತಯಾರಿಕೆಯ ಹಿಂದಿನ ನೋವು-ನಲಿವುಗಳು ಯಾರಿಗೂ…

  • ನಾಡಿನ ಖ್ಯಾತ ಸಾಹಿತಿವರೇಣ್ಯರಾದವರಿಂದ ರಚಿಸಲ್ಪಟ್ಟ ೬೪ ಶ್ರೇಷ್ಠ ಕವನಗಳು, ಕವಿಕಾವ್ಯ ಪರಿಚಯ ಇವುಗಳನ್ನು ಒಳಗೊಂಡ ಹೊತ್ತಗೆಯೇ ‘ನನ್ನದು ಈ ಕನ್ನಡ ನಾಡು'. ಕನ್ನಡ ನಾಡು ನುಡಿಯ ಬಗ್ಗೆ ಯುವಜನರಲ್ಲಿ ಆಸಕ್ತಿ ಮೂಡಿಸಬೇಕೆಂಬ ಉದ್ದೇಶದಿಂದ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹೊರತಂದ ಕವನಗಳ ಗುಚ್ಛವಿದು. ಮುನ್ನುಡಿ,ಹಿನ್ನುಡಿ ಎಂದು ಪ್ರತ್ಯೇಕವಾಗಿ ಇಲ್ಲ. ಪ್ರಧಾನ ಸಂಪಾದಕರಾದ ಬಿ.ಎಂ.ಇದಿನಬ್ಬ ಇವರೇ ಪುಸ್ತಕವನ್ನು ಹೊರತಂದ ಆಶಯವನ್ನು ಬರೆದಿರುತ್ತಾರೆ.

    ನಮ್ಮ ಕನ್ನಡ ನಾಡು ನುಡಿಗೆ ಈಗ ಒದಗಿರುವ ಅವಸ್ಥೆಯನ್ನು ಸರಿಪಡಿಸುವಲ್ಲಿ ಒಂದಷ್ಟು ಕವನಗಳು ಸಹಕಾರಿಯಾಗಬಹುದೆಂಬ ಆಶಯ ಸಂಪಾದಕರದು. ಪಂಜೆ ಮಂಗೇಶರಾಯರ ಬಂತ್ಯೆ ಬಂತೈ ತೆಂಕಣಗಾಳಿ, ಬೆನಗಲ್ ರಾಮರಾವ್ ಅವರ ಕನ್ನಡಾಂಬೆಯ…

  • 'ಸರದಾರ' ಪುಸ್ತಕವು ಹೆಸರೇ ಹೇಳುವಂತೆ ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಜೀವನದ ಮೇಲೆ ಚಿತ್ರಿತವಾಗಿದೆ. ಖ್ಯಾತ ವಾಗ್ಮಿ, ಲೇಖಕ ಚಕ್ರವರ್ತಿ ಸೂಲಿಬೆಲೆ ಇವರ ಲೇಖನಿಯಿಂದ ಹೊರ ಬಂದ ಹೊತ್ತಗೆ ಇದು. ಸರ್ದಾರ್ ಪಟೇಲರ ಬಗ್ಗೆ ಹತ್ತು ಹಲವಾರು ಪುಸ್ತಕಗಳು ಹೊರಬಂದಿವೆ. ಆದರೂ ಚಕ್ರವರ್ತಿಯವರ ಬರವಣಿಗೆ ಧಾಟಿ ಬಹು ಸುಂದರ ಮತ್ತು ಅಪರೂಪ. ಸರ್ದಾರ್ ಪಟೇಲರ ಬಗ್ಗೆ ಅವರು ಬರೆದ ಬೆನ್ನುಡಿ ಹೀಗಿದೆ “ಹಾರೊಲ್ಡ್ ಮ್ಯಾಕ್ ಮಿಲನ್ (ಬ್ರಿಟೀಷ್ ಪ್ರೀಮಿಯರ್) ವೇವೆಲ್ಲರ ಬಳಿ ಒಂದು ಮಾತು ಹೇಳಿದ್ದ ‘ಭಾರತದ ರಾಜಕಾರಣಿಗಳಲ್ಲೆಲ್ಲ ನೆಹರೂ ಆಕರ್ಷಕವಾಗಿ ಕಂಡರೂ ಆತ ಪುಕ್ಕಲ. ಪಟೇಲರು ಮಾತ್ರ ನಾಯಕತ್ವದ ಗುಣಗಳನ್ನು ಹೊಂದಿರುವ ಅಪರೂಪದ ವ್ಯಕ್ತಿ'.

    ಬ್ರಿಟೀಷರು ಭಾರತ…

  • ‘ಕೆಫೆ ಕಾಫಿ ಡೇ’ ಎಂಬ ಸಂಸ್ಥೆಯ ಮಾಲೀಕ ಸಿದ್ಧಾರ್ಥ್ ಮಂಗಳೂರಿನ ನೇತ್ರಾವತಿ ನದಿಯ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡದ್ದು ೨೦೧೯ರ ದೊಡ್ದ ಸಂಗತಿ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಸಿದ್ಧಾರ್ಥ ಪುಟ್ಟದಾದ ‘ಕೆಫೆ ಕಾಫಿ ಡೇ’ ಎಂಬ ಅಂಗಡಿಯನ್ನು ತೆರೆದರು. ಅದು ಅವರ ಭಾಗ್ಯದ ಬಾಗಿಲೇ ತೆರೆಯಿತು. ಅದರ ಉನ್ನತಿಯೇ ಅವರ ಸಾವಿಗೂ ಕಾರಣವಾದದ್ದು ಮಾತ್ರ ದುರಂತವೇ ಸರಿ. ೧೯೯೬ರಲ್ಲಿ ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿ ತಲೆ ಎತ್ತಿದ ಮೊದಲ ‘ಅಡ್ಡಾ’ ಶ್ರೀಮಂತ ಯುವಕ-ಯುವತಿಯರ ಪಾಲಿನ ಹ್ಯಾಂಗ್ ಔಟ್ ಝೋನ್ ಆಯಿತು. ದೇಶದಾದ್ಯಂತ ನೂರಾರು ಮಳಿಗೆಗಳು ತೆರೆಯಲ್ಪಟ್ಟಿತು. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಮಗಳನ್ನು ಮದುವೆಯಾದ ಸಿದ್ದಾರ್ಥ್ ಬಹಳ ಖ್ಯಾತ ವ್ಯಕ್ತಿಯಾದ…