ನೋಬೆಲ್ ಪುರಸ್ಕಾರ ದೊರೆತ ಮೊದಲ ಭಾರತೀಯ ಎಂಬ ಖ್ಯಾತಿಗೆ ಪಾತ್ರರಾದವರು ಖ್ಯಾತ ಕವಿ ರವೀಂದ್ರನಾಥ ಠಾಕೂರ್ ಅಥವಾ ಠಾಗೋರ್ ಇವರು. ಇವರ ‘ಗೀತಾಂಜಲಿ' ಕವನ ಸಂಕಲನಕ್ಕೆ ಈ ಪುರಸ್ಕಾರ ದೊರೆಯಿತು ಎಂಬುವುದು ಎಲ್ಲರಿಗೂ ತಿಳಿದ ವಿಷಯ. ಠಾಗೋರರು ಸುಮಾರು ಮೂರು ಸಾವಿರ ಕವನಗಳನ್ನು ಬರೆದಿದ್ದಾರೆ. ಇದರ ಜೊತೆಗೆ ೯೪ ಕಥೆಗಳನ್ನೂ ಬರೆದಿದ್ದಾರೆ. ಠಾಗೋರರು ನಾಟಕಗಳನ್ನೂ, ಕಾದಂಬರಿಗಳನ್ನೂ, ಸಣ್ಣ ಕಥೆಗಳನ್ನೂ ಬರೆಯುತ್ತಿದ್ದುದು ಬಹುತೇಕರಿಗೆ ತಿಳಿದಿಲ್ಲ. ಅವರ ೧೨ ಕಥೆಗಳು ಕನ್ನಡಕ್ಕೆ ಅನುವಾದಗೊಂಡು ‘ಹಸಿದ ಕಲ್ಲು ಮತ್ತು ಇತರ ಕಥೆಗಳು’ ಎಂಬ ಹೆಸರಿನ ಪುಸ್ತಕವಾಗಿ ಹೊರಬಂದಿದೆ.
ಹೆಚ್.ವಿ.ನಯನತಾರಾಮಣಿಯವರು ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ. ಅವರು ಬರೆದ…