ಬೆಂಗಳೂರಿನಲ್ಲಿ ಆರ್ಕಿಟೆಕ್ಟ್ ಆಗಿರುವ ನಾಗರಾಜ ವಸ್ತಾರೆ ಅವರದು ಕಳೆದೆರಡು ದಶಕಗಳಲ್ಲಿ ಹೊಸಗನ್ನಡದ ಕತೆಗಾರರಲ್ಲಿ ಗಮನಾರ್ಹ ಹೆಸರು. ಕತೆ, ಕವನ ಮತ್ತು ಅಂಕಣ ಬರಹ ಅವರ ಆಸಕ್ತಿ. “ಹಳೆಮನೆ ಕತೆ", “ಬಯಲು ಆಲಯ” ಮತ್ತು “ಪಟ್ಟಣ ಪುರಾಣ” ಅವರ ಅಂಕಣ ಬರಹಗಳು. ನಗರ ಬದುಕಿನ ಒಳತೋಟಿಗಳು, ಸಂಕೀರ್ಣ ಸಂಬಂಧಗಳು ಹಾಗೂ ಮೇಲ್ನೋಟಕ್ಕೆ ಕಾಣಿಸದ ಸೂಕ್ಷ್ಮ ಸಂಗತಿಗಳನ್ನು ಕತೆಗಳನ್ನಾಗಿ ಹೆಣೆಯುವುದರಲ್ಲಿ ಅವರು ಸಿದ್ಧಹಸ್ತರು.
ಇಲ್ಲಿನ 18 ಕತೆಗಳ ಬಗ್ಗೆ ಮುನ್ನುಡಿಯಲ್ಲಿ ಕತೆಗಾರ ನಾಗರಾಜ ವಸ್ತಾರೆ ಬರೆದದ್ದು: “..... ಇಲ್ಲಿನಷ್ಟೂ ಕತೆಗಳಷ್ಟೂ ಒಂದಲ್ಲೊಂದು ರೀತಿಯಲ್ಲಿ ಊಹೆಯಲ್ಲದ ವಾಸ್ತವವೆನ್ನುವುದನ್ನು ಮುಲಾಜಿಲ್ಲದೆ ಒಪ್ಪಿಕೊಳ್ಳುತ್ತೇನೆ. ಇಲ್ಲಿನಷ್ಟೂ ಪಾತ್ರಗಳು ನನ್ನ ಮಗ್ಗುಲಿಗೇ, ಆಸುಪಾಸಿನಲ್ಲೇ ಜರುಗಿದಂಥವು…… ಇವೊತ್ತೂ…