ಪುಸ್ತಕ ಸಂಪದ

  • ‘ಆಜಾದಿ' ಸ್ವದೇಶ ಚಳುವಳಿಯ ವಿಚಾರ ಧಾರೆ ಎಂಬ ಪುಸ್ತಕವು 'ಆಜಾದಿ ಬಚಾವೋ’ ಆಂದೋಲನದ ನೇತಾರ ರಾಜೀವ್ ದೀಕ್ಷಿತ್ ಅವರ ಬರಹಗಳ ಸಂಗ್ರಹ. ಇವರ ವಿಚಾರಧಾರೆಯನ್ನು ರಾಘವೇಂದ್ರ ಜೋಷಿಯವರು ಕನ್ನಡಕ್ಕೆ ಅನುವಾದ ಮಾಡಿ ‘ಹಾಯ್ ಬೆಂಗಳೂರು' ವಾರ ಪತ್ರಿಕೆಯಲ್ಲಿ ಪ್ರತೀ ವಾರ ಪ್ರಕಟ ಮಾಡುತ್ತಿದ್ದರು. ಹಾಯ್ ಬೆಂಗಳೂರು ಸಂಪಾದಕರಾದ ರವಿ ಬೆಳಗೆರೆಯವರು ತಮ್ಮ ಬೆನ್ನುಡಿಯಲ್ಲಿ ಪುಸ್ತಕದ ಬಗ್ಗೆ ಬರೆದದ್ದು ಹೀಗೆ..."ಈ ದೇಶದ ರೈತ ಬೆಳೆದ ಎಳನೀರು- ಅವನ ಶೃದ್ಧೆ, ಶ್ರಮ, ಬೆವರು, ರಕ್ತ, ಕನಸು, ಆಸೆಗಳ ಸಾಂದ್ರರೂಪ. ಅದರ ಬೆಲೆ ಬರೀ ಎರಡೇ ರೂಪಾಯಿ. ಈ ದೇಶಕ್ಕೆ ಎಲ್ಲಿಂದಲೋ ಬಂದು ಬೀಳುವ ‘ಪೆಪ್ಸಿ' - ಅದು ಕೊಳಕು ನೀರು, ಕೆಮಿಕಲ್ಲು ಮತ್ತು ಅಂತರಾಷ್ಟ್ರೀಯ ವ್ಯಾಪಾರೀ ದುರಾಸೆಗಳ ಮೋಸದ ಸೀಸೆ. ಅದರ ಬೆಲೆ ಹತ್ತು ರೂಪಾಯಿ! ನಮ್ಮ…

  • ಪತ್ರಕರ್ತರಾದ ವಿಶ್ವೇಶ್ವರ ಭಟ್ ಇವರು ಬರೆದ ಬಿಡಿ ಬರಹಗಳ ಸಂಗ್ರಹವೇ ‘ಅಕ್ಷರಗಳೊಂದಿಗೆ ಅಕ್ಕರೆಯ ಯಾನ'. ಈ ಪುಸ್ತಕದಲ್ಲಿ ವಿಶ್ವೇಶ್ವರ ಭಟ್ ಅವರ ವಿವಿಧ ಪತ್ರಿಕೆಯಲ್ಲಿ ಪ್ರಕಟವಾದ ಲೇಖನಗಳು ಇವೆ. ಕೆಲವೊಂದು ಲೇಖನಗಳು ಈಗಲೂ ಪ್ರಸ್ತುತವೆನಿಸುತ್ತವೆ. ಸಾಹಿತಿ ಮನು ಬಳಿಗಾರ್ ಅವರು ತಮ್ಮ ಮುನ್ನುಡಿಯಾದ ‘ಎದೆಯಾಳದ ಎರಡು ಮಾತು' ಇದರಲ್ಲಿ ವಿಶ್ವೇಶ್ವರ ಭಟ್ ಹಾಗೂ ಅವರ ಬರಹಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದ್ದಾರೆ. 

    ಅವರು ಒಂದೆಡೆ ಬರೆಯುತ್ತಾರೆ “ಹಲವಾರು ರಾಷ್ಟ್ರಗಳನ್ನು ಸುತ್ತಾಡಿ ಬಂದಿರುವ ವಿಶ್ವೇಶ್ವರ ಭಟ್ ರು ತಮಗೆ ಹಿಡಿಸಿದ ಅಲ್ಲಿಯ ವ್ಯಕ್ತಿಗಳು, ಊರು, ಘಟನೆ ಇತ್ಯಾದಿಗಳ ಬಗ್ಗೆ ಸಾಂದರ್ಭಿಕ ಟಿಪ್ಪಣಿಗಳನ್ನು ಮಾಡಿ ತಂದಿರುವುದರ ಫಲವಾಗಿ ವೇಲ್ಸ್ :…

  • ನಾಗರಾಜ ವಸ್ತಾರೆ ಇವರು ಬರೆದ ವಿಭಿನ್ನ ಶೈಲಿಯ ಸಣ್ಣ ಕಥೆಗಳ, ಕವನಗಳ ಸಂಗ್ರಹವೇ ‘ಹಕೂನ ಮಟಾಟ' ಬೆಂಗಳೂರಿನಲ್ಲಿ ಆರ್ಕಿಟೆಕ್ಟ್ ಆಗಿರುವ ಇವರನ್ನು ೨೦೦೨ರಲ್ಲಿ ದೇಶದ ಪ್ರತಿಭಾನ್ವಿತ ಹತ್ತು ಯುವ ವಿನ್ಯಾಸಕಾರರಲ್ಲಿ ಒಬ್ಬರು ಎಂದು ಗುರುತಿಸಿದ್ದರು. ಇವರು ಉತ್ತಮ ಕಥೆಗಾರರು. ಇವರ ಹಲವಾರು ಕಥೆ, ಕವನ ಹಾಗೂ ಬರಹಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಬೆಳಕು ಕಂಡಿದೆ. 

    ನಾಗರಾಜ ವಸ್ತಾರೆ ತಮ್ಮ ಮುನ್ನುಡಿಯಾದ ‘ನಮಸ್ಕಾರ' ಇಲ್ಲಿ ಬರೆದಂತೆ “ನಾನು ಬರಹದಲ್ಲಿ ತೊಡಗಿದ್ದು ಈ ಉದ್ಧಾಮ ಊರಿನಲ್ಲೊಂದು ಆಕಸ್ಮಿಕವಷ್ಟೇ. ಇಲ್ಲಿರುವ ಮುಕ್ಕಾಲು ಕಥನಗಳು ಇಲ್ಲಿನ ಕ್ಷುದ್ರ ಚರಿತೆಗಳು ಮಾತ್ರ. ಇವು ಊರು ಕಟ್ಟುತ್ತಿದ್ದೇವೆಂದು ನನ್ನ ಪೀಳಿಗೆಗಿರುವ ಹುಂಬ ಭ್ರಮೆಯೇ ಇದ್ದಾವು.…

  • ಮಲೆನಾಡಿನ ರೋಚಕ ಕತೆಗಳು ಸರಣಿಯ ೭ನೇ ಭಾಗವೇ ‘ಮುಂಗಾರಿನ ಕರೆ'. ಮಲೆನಾಡಿನ ಗುಡ್ಡ ಬೆಟ್ಟಗಳಲ್ಲೇ ತಮ್ಮ ಜೀವನವನ್ನು ಸಾಗಿಸುತ್ತಿರುವ ಗಿರಿಮನೆ ಶ್ಯಾಮರಾವ್ ಅವರು ಬರೆಯುವ ಪ್ರತೀ ಕಾದಂಬರಿಯನ್ನು ಅನುಭವಿಸಿಯೇ ಬರೆದಿದ್ದಾರೆ ಅನಿಸುತ್ತೆ. ಪುಸ್ತಕದ ಪ್ರತೀ ಪುಟದಲ್ಲಿ ಪರಿಸರವಿದೆ, ಕಾಡು ಇದೆ, ಗುಡ್ಡ ಬೆಟ್ಟಗಳಿವೆ, ಆನೆ, ಜಿಂಕೆ, ನರಿ, ಕಾಡು ಕೋಣ, ದನ ಮುಂತಾದ ಪ್ರಾಣಿಗಳಿವೆ. ಏಲಕ್ಕಿ, ಕಾಫಿಯ ಘಮವಿದೆ, ಹರಿಯುವ ತೊರೆ, ನದಿಗಳಿವೆ, ಪುರಾತನ ಬಂಗಲೆಯಿದೆ, ರಕ್ತ ಹೀರುವ ಜಿಗಣೆಗಳಿವೆ, ಕಾಡುವ ನೆನಪುಗಳೂ ಇವೆ. ಇವೆಲ್ಲದರ ನಡುವೆ ಭಯಂಕರ ಮಾನವರೂ ಇದ್ದಾರೆ. ಮಾನವೀಯ ಮುಖದ ವ್ಯಕ್ತಿಗಳ ಇರುವಿಕೆಯೂ ಇದೆ.

    ಪುಸ್ತಕದ ಬೆನ್ನುಡಿಯಲ್ಲಿರುವ ಮಾತುಗಳು ಪುಸ್ತಕ ಓದಲೇ ಬೇಕೆಂಬ…

  • ಅಯೋಧ್ಯೆ -ವಿನಾಶಕಾರಿ ವೋಟ್ ಬ್ಯಾಂಕ್ ರಾಜಕೀಯ ಎಂಬ ಪುಸ್ತಕದ ಮೂಲ ಲೇಖಕರು ಮಧು ಲಿಮಯೆ. ಭಾರತದ ಹಿರಿಯ ಸಮಾಜವಾದಿ ಚಿಂತಕ ಮಧು ಲಿಮಯೆ ವಿದ್ಯಾರ್ಥಿ ದೆಸೆಯಲ್ಲೇ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದವರು. ತಮ್ಮ ೧೮ನೆಯ ಪ್ರಾಯದಲ್ಲಿ ಜೈಲಿನ ರುಚಿ ಕಂಡವರು. ಮುಂದೆ ಜೈಲಿಗೆ ಹೋಗುವುದು ಮಾಮೂಲಾಗಿ ಬಿಟ್ಟಿತು. ‘ಭಾರತದಿಂದ ತೊಲಗಿ' ಆಂದೋಲನದ ಕಾಲದಲ್ಲಿ ಭೂಗತರಾದರು. ತುರ್ತು ಪರಿಸ್ಥಿತಿಯ ಸಮಯದಲ್ಲಿ ೧೮ ತಿಂಗಳ ಕಾಲ ಜೈಲಿನಲ್ಲಿ ಬಂದಿಯಾಗಿದ್ದರು. 

    ಲೋಕಸಭೆಗೆ ನಾಲ್ಕು ಸಲ ಆಯ್ಕೆಯಾಗಿ ಅಪ್ರತಿಮ ಸಂಸದೀಯ ಪಟು ಎನಿಸಿಕೊಂಡರು. ಡಾ. ರಾಮ ಮನೋಹರ ಲೋಹಿಯಾ ಹಾಗೂ ಜಯಪ್ರಕಾಶ ನಾರಾಯಣ ಅವರಿಂದ ಪ್ರಭಾವಿತರಾಗಿದ್ದ ಲಿಮಯೆ ಮರಾಠಿ ಮತ್ತು ಇಂಗ್ಲಿಷ್ ನಲ್ಲಿ ಸುಮಾರು ೩೦ ಕೃತಿಗಳನ್ನು…

  • ಆಧುನಿಕ ಜೀವನ ಹಲವು ಸವಾಲುಗಳನ್ನೂ ಬಿಕ್ಕಟ್ಟುಗಳನ್ನೂ ನಮಗೆ ಎದುರಾಗಿಸುತ್ತದೆ. ಇಂತಹ ನಿರಂತರ ಬದಲಾವಣೆಯ ಪ್ರವಾಹದಲ್ಲಿ ಇವುಗಳ ಸೂಕ್ಷ್ಮತೆಗಳನ್ನು ತಮ್ಮ ಬದುಕಿನ ಅನುಭವಗಳ ಬಲದಿಂದ ನಮ್ಮೆದುರು ತೆರೆದಿಡುತ್ತ ನಮ್ಮ “ಅಂತರಂಗದ ಮೃದಂಗ”ವನ್ನು ಮೀಟಿ, ಚಿಂತನೆಗೆ ತೊಡಗಿಸುವುದರಲ್ಲಿ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ಹತ್ತು ಪ್ರಬಂಧಗಳು ಯಶಸ್ವಿಯಾಗುತ್ತವೆ.

    “ನರಹಳ್ಳಿಯವರ ಹರಟೆಗಳಲ್ಲಿ ಅವರ ಇಡೀ ಆಪ್ತ ವಲಯವೇ ಮೂಡಿ ಬಂದಿದೆ ಎಂದರೆ ಅದು ಅತಿಶಯೋಕ್ತಿಯಲ್ಲ. … ಅವರೆಲ್ಲರೂ ಈ ಬರಹಗಳಿಂದಾಗಿ ನಮ್ಮ ಆಪ್ತವಲಯಕ್ಕೂ ಸೇರಿ ಬಿಡುತ್ತಾರೆ. …. ಕೌಟುಂಬಿಕತೆ ನರಹಳ್ಳಿಯವರ ಹರಟೆಗಳ ಆಕರ್ಷಕ ಆಯಾಮವಾದರೂ ಅವುಗಳ ಒಟ್ಟು ಮಹತ್ವದ ದೃಷ್ಟಿಯಿಂದ ಅದಕ್ಕೆ ಸೀಮಿತವಾದ ಅರ್ಥವಿದೆ. ನರಹಳ್ಳಿಯವರು ಕುಟುಂಬಪ್ರೇಮಿಯಿದ್ದಂತೆ ಅಥವಾ ಅದಕ್ಕೂ ಹೆಚ್ಚಾಗಿ,…

  • ‘ರೇಷ್ಮೆ ರುಮಾಲು’ ಎಂಬ ಕಾದಂಬರಿಯನ್ನು ಒಮ್ಮೆ ನೀವು ಓದಲೆಂದು ಕೈಗೆತ್ತಿಕೊಂಡರೆ, ಮುಗಿಯುವ ತನಕ ಕೆಳಗಿಡಲಾರಿರಿ, ಅಂತಹ ಕಥಾ ವಸ್ತುವನ್ನು ಹೊಂದಿದ ರೋಚಕ ಕಾದಂಬರಿ ಇದು. “ಬ್ರಿಟೀಷ್ ಅಧಿಕಾರಿ ಫಿಲಿಪ್ ಮೆಡೋಸ್ ಟೇಲರ್ ಹೀಗೊಂದು ಪುಸ್ತಕ ಬರೆಯುವ ತನಕ ಭಾರತ ದೇಶದಲ್ಲಿ ಥಗ್ ಸಂಪ್ರದಾಯ ಅಂತ ಒಂದಿದೆ ಎಂಬುವುದು ಹೊರ ಜಗತ್ತಿಗೆ ಗೊತ್ತೇ ಇರಲಿಲ್ಲ. ಅತ್ಯಂತ ಸಂಭಾವಿತ ಜೀವನ ಸಾಗಿಸುತ್ತಲೇ ವರ್ಷಕ್ಕೊಂದು ಬಾರಿ ತಂಡ ಕಟ್ಟಿಕೊಂಡು ಯಾತ್ರೆ ಹೊರಡುತ್ತಿದ್ದ ಥಗ್ಗರು ದಾರಿಯುದ್ದಕ್ಕೂ ನೂರಾರು ಕೊಲೆಗಳನ್ನು ಮಾಡಿ, ಶವಗಳ ಸುಳಿವೂ ಸಿಗದಂತೆ ಹೂತು ಹಾಕಿ ಹಿಂತಿರುಗಿ ಮತ್ತೆ ಸಭ್ಯತೆಯ ಪರದೆಯ ಹಿಂದೆ ಬದುಕುತ್ತಿದ್ದರು! ಅವರಲ್ಲಿ ಮಾತಾ ಭವಾನಿಯ ಭಕ್ತರಾದ ಹಿಂದೂಗಳೂ, ಅವರ ಪೈಕಿ ಬ್ರಾಹ್ಮಣರಿಂದ ಹಿಡಿದು ಅಸ್ಪೃಶ್ಯರ ತನಕ…

  • ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಗತ್ ಸಿಂಗ್ ಹೆಸರು ಸದಾಕಾಲ ಮುಂಚೂಣಿಯಲ್ಲಿ ಇದ್ದೇ ಇರುತ್ತದೆ. ೨೦೦೭ರಲ್ಲಿ ಭಗತ್ ಸಿಂಗ್ ಜನ್ಮಶತಮಾನೋತ್ಸವವನ್ನು ಆಚರಿಸಲಾಗಿತ್ತು. ಈ ಸಮಯದಲ್ಲಿ ಹೊರ ತಂದ ಪುಸ್ತಕವೇ ‘ಧೀರ ಹುತಾತ್ಮ ಭಗತ್ ಸಿಂಗ್'. ಭಗತ್ ಸಿಂಗ್ ಬಗ್ಗೆ ಅಧಿಕ ಮಾಹಿತಿ ಬೇಕಾದವರು ಈ ಪುಸ್ತಕವನ್ನು ಓದಬಹುದು.

    ಪುಸ್ತಕದ ಲೇಖಕರಾದ ಡಾ॥ ಬಿ. ಆರ್. ಮಂಜುನಾಥ್ ಅವರು ತಮ್ಮ ಮುನ್ನುಡಿ ‘ಅರಿಕೆ'ಯಲ್ಲಿ ಬರೆಯುತ್ತಾರೆ “ ಮಹಾನ್ ಹುತಾತ್ಮ ಭಗತ್ ಸಿಂಗ್ ಜನ್ಮ ತಳೆದು ೨೦೦೭ರ ಸೆಪ್ಟೆಂಬರ್ ೨೮ಕ್ಕೆ ನೂರು ವರ್ಷಗಳು. ಅಧಿಕೃತ ಮಾಧ್ಯಮಗಳು ಭಗತರ ನೆನಪನ್ನು ಜನರಿಗೆ ಕೊಂಡೊಯ್ಯುವಲ್ಲಿ ವಿಫಲವಾದರೂ ದಿನದಿಂದ ದಿನಕ್ಕೆ ಆತನ ಜನಪ್ರಿಯತೆ ಹೆಚ್ಚುತ್ತಿದೆ. ಅಸಂಖ್ಯಾತ ಎಳೆಯ…

  • ಕಾಸರಗೋಡು ಚಿನ್ನಾ ಎಂದೇ ಖ್ಯಾತಿ ಪಡೆದ ಸುಜೀರ್ ಶ್ರೀನಿವಾಸ್ ಅವರು ಖ್ಯಾತ ರಂಗ ಕರ್ಮಿ, ಚಿತ್ರ ನಟ ಹಾಗೂ ಬರಹಗಾರರು. ಬಂಗಾಳಿ ಸಾಹಿತಿ ಶಂಭುಮಿತ್ರ ಅಮಿತಮೈತ್ರ ಇವರು ಬರೆದ ‘ಕಾಂಚನಗಂಗಾ’ ಎಂಬ ನಾಟಕದ ಅನುವಾದವೇ ‘ಗಾಂಟಿ' (ಗಂಟು). ಪುಸ್ತಕ ಪುಟ್ಟದಾಗಿದ್ದು ಲೇಖಕರಾದ ಡಾ.ನಾ,.ದಾಮೋದರ ಶೆಟ್ಟಿ ಇವರು ಇವರು ಬೆನ್ನುಡಿ ಬರೆದಿದ್ದಾರೆ. ಅವರದ್ದೇ ಮಾತುಗಳಲ್ಲಿ ಹೇಳುವುದಾದರೆ “ಅರ್ಧ ಶತಮಾನದ ಹಿಂದೆ ಕಾಸರಗೋಡಿನ ಕನ್ನಡದ ನೆಲದಲ್ಲಿ ಹುಟ್ಟಿದ ಕೊಂಕಣಿಗ ಸುಜೀರ್ ಶ್ರೀನಿವಾಸ್ ರಾವ್, ಕಾಸರಗೋಡು ಚಿನ್ನಾ ಆಗಿ ಪಲ್ಲಟಗೊಳ್ಳದಿರುತ್ತಿದ್ದರೆ ಗಿರಿಧರ್ ಮೆಟಲ್ ಹೌಸ್ ನಲ್ಲಿ ತಂದೆಯವರು ತೊಡಗಿಟ್ಟ ಅಂಗಡಿಯಲ್ಲಿ ಸ್ಟೀಲ್ ವ್ಯಾಪಾರ ಮಾಡುತ್ತಲೇ ಇರುತ್ತಿದ್ದರು. ಇಂದಿಗೂ ಅದೇ ಅವರ ವೃತ್ತಿ. ಪ್ರವೃತ್ತಿಗಳು ಅನೇಕ.…

  • ಪತ್ರಕರ್ತ ಪ್ರತಾಪ್ ಸಿಂಹ ವಿಜಯ ಕರ್ನಾಟಕ ಹಾಗೂ ಕನ್ನಡ ಪ್ರಭ ಪತ್ರಿಕೆಗಳಲ್ಲಿ ಬರೆಯುತ್ತಿದ್ದ ಅಂಕಣ ಬರಹಗಳ ಸಂಗ್ರಹವೇ ಬೆತ್ತಲೆ ಜಗತ್ತು. ಈಗ ಇಲ್ಲಿರುವುದು ಅದರ ಎಂಟನೇ ಭಾಗ. ಪ್ರತಿ ಶನಿವಾರ ಪ್ರತಾಪ್ ಸಿಂಹ ಅವರ ಅಂಕಣವನ್ನು ಕಾಯುತ್ತಿದ್ದ ದೊಡ್ಡದಾದ ಓದುಗ ಸಮೂಹ ಇತ್ತೆಂದರೆ ಸುಳ್ಳಲ್ಲ. ತೀಕ್ಷ್ಣವಾಗಿ ಚಾಟಿ ಬೀಸುವಂತಹ ರಾಜಕೀಯ ಲೇಖನಗಳಿಂದ ಹಿಡಿದು. ಕ್ರೀಡೆ, ಸಾಹಿತ್ಯ, ಸಿನೆಮಾ ಮುಂತಾದ ಎಲ್ಲಾ ವಿಚಾರಗಳನ್ನು ಅಧ್ಯಯನ ಮಾಡಿ ಬರೆಯುತ್ತಿದ್ದರು. ಪ್ರತಿಯೊಂದು ಲೇಖನಗಳಿಗೆ ಸೂಕ್ತ ಆಧಾರ ಒದಗಿಸುತ್ತಿದ್ದುದು ಇವರ ಹೆಗ್ಗಳಿಕೆ. 

    ಬೆತ್ತಲೆ ಜಗತ್ತು ೮ನೇ ಭಾಗಕ್ಕೆ ಮುನ್ನುಡಿ ಬರೆದಿದ್ದಾರೆ ಇನ್ಫೋಸಿಸ್ ಫೌಂಡೇಶನ್ ಇದರ ಅಧ್ಯಕ್ಷೆಯಾಗಿರುವ ಸುಧಾ ಮೂರ್ತಿಯವರು. ಇವರು…