ಪುಸ್ತಕ ಸಂಪದ

  • ಓಶೋ ಅವರ ಚಿಂತನೆಗಳು ಬಹಳ ಪ್ರಭಾವಶಾಲಿ. ಇವರ ಪ್ರವಚನಗಳ ಕುರಿತಾದ ಪುಸ್ತಕಗಳು ಹಾಟ್ ಸೇಲ್ ಆಗುತ್ತವೆ. ಓಶೋ ಅವರೇ ಹೇಳುವಂತೆ “ಪ್ರತಿಯೊಬ್ಬರೂ ಪ್ರೇಮದ ಬಾಗಿಲ ಬಳಿಯೇ ಹೋಗುತ್ತಿರುವರು. ವೇಶ್ಯೆಯ ಬಳಿ ಹೋಗುತ್ತಿರಲಿ, ದೇವಸ್ಥಾನಕ್ಕೆ ಹೋಗುತ್ತಿರಲಿ, ಹೋಗುತ್ತಿರುವುದು ಮಾತ್ರ ಪ್ರೇಮದ ದ್ವಾರದ ಬಳಿಗೇ. ಆಯ್ಕೆ ತಪ್ಪಾಗಿರಬಹುದಾದರೂ, ಆಕಾಂಕ್ಷೆ ಪ್ರೇಮದ್ದೇ. ಪ್ರೇಮದ ಅಮೃತವರ್ಷ ಸುರಿಯಲೆಂದು ನೀವು ಬಯಸುವಿರಾದರೆ ನಿಮ್ಮ ಪಾತ್ರೆ ಅಮೃತವನ್ನು ಸಂಬಾಳಿಸಲು ಯೋಗ್ಯವಾಗಿರುವುದಿಲ್ಲ. ಆದ್ದರಿಂದಲೇ ನಿಮ್ಮ ಜೀವನ ಪ್ರೇಮವಿಲ್ಲದೆ ಬಡವಾಗಿ ಕಳೆದುಹೋಗುವುದು.

    ಧ್ಯಾನದ ಅತಿರಿಕ್ತವಾಗಿ ಬೇರಾವ ಮಾರ್ಗವೂ ಇಲ್ಲ. ಮಾರ್ಗ ಯಾವುದೇ ಇರಲಿ. ಅವೆಲ್ಲವೂ ಧ್ಯಾನದ್ದೇ ರೂಪಗಳು. ಪ್ರಾರ್ಥನೆ,…

  • ರಂಗಮ್ಮ ಹೊದೇಕಲ್ ವೃತ್ತಿಯಲ್ಲಿ ಶಿಕ್ಷಕಿ. ಮನೆಯಲ್ಲಿನ ಬಡತನ, ಅಸಹಾಯಕತೆ, ಒಂಟಿತನ, ಬದುಕಿನ ಪ್ರತಿ ಹೆಜ್ಜೆಯೂ ಒಂದು ನೋವಿನ ‘ಕ್ರಿಯೆ’ಯಾಗಿ ಈ ಹುಡುಗಿಯನ್ನು ಕಾಡಿ ಕಾಡಿ, ಈ ಹೊತ್ತು ‘ಕವಿ'ಯನ್ನಾಗಿಸಿರುವುದು ಸುಳ್ಳಲ್ಲ. ರಂಗಮ್ಮ ಹೊದೇಕಲ್ ಆರ್ದ್ಯ ಹೃದಯದ ‘ಹೂ’ ಹುಡುಗಿ! ಎಂದು ಬರೆಯುತ್ತಾರೆ ತುಮಕೂರು ಜಿಲ್ಲಾ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾದ ಶ್ರೀಮತಿ ಬಿ.ಸಿ.ಶೈಲಾ ನಾಗರಾಜ್. ಶೈಲಾ ನಾಗರಾಜ್ ಅವರು ರಂಗಮ್ಮ ಅವರ ಶಕ್ತಿ ಎಂದರೆ ತಪ್ಪಾಗಲಾರದು. ಶೈಲಾ ನಾಗರಾಜ್ ಅವರ ಹೆಸರಿನಲ್ಲೇ ‘ಶೈನಾ’ ಎಂಬ ಕೈಬರಹದ ಪತ್ರಿಕೆಯನ್ನು ರಂಗಮ್ಮ ಬಹಳ ಹಿಂದೆ ಹೊರತರುತ್ತಿದ್ದರು. ರಂಗಮ್ಮನವರ ಕೈಬರಹ ಮುತ್ತು ಪೋಣಿಸಿದಂತೆ ಸುಂದರ ಮತ್ತು ನಯನ ಮನೋಹರ. ರಂಗಮ್ಮನವರ ಕೈ ಬರಹವೇ ಶೈನಾ ಪತ್ರಿಕೆಯ ಪ್ಲಸ್ ಪಾಯಿಂಟ್…

  • *ಡಾ. ವಿಠ್ಠಲ ಭಂಡಾರಿ ಹಾಗೂ ಯಮುನಾ ಗಾಂವ್ಕರ್ ಅವರ   "ಜೋಯ್ಡಾ: ಕಾಡೊಳಗಿನ ಒಡಲು"*

    "ಜೋಯ್ಡಾ: ಕಾಡೊಳಗಿನ ಒಡಲು" (ಮಾನವ ವಸತಿಯ ನಕಾಶೆಯಲ್ಲಿ ಜೋಯ್ಡಾ ಉಳಿಸೋಣ) ಕೃತಿಯನ್ನು ಡಾ. ವಿಠ್ಠಲ ಭಂಡಾರಿ ಹಾಗೂ ಯಮುನಾ ಗಾಂವ್ಕರ್ ದಂಪತಿಗಳು ಜಂಟಿಯಾಗಿ ರಚಿಸಿದ್ದಾರೆ. 184 + 4 ಪುಟಗಳ, 140 ರೂಪಾಯಿ ಬೆಲೆಯ ಕೃತಿಯನ್ನು 2017ರಲ್ಲಿ ಆರ್. ವಿ. ಭಂಡಾರಿ ನೆನಪಿನ 32ನೇ ಪುಸ್ತಕ ಮಾಲೆಯಾಗಿ ಬಂಡಾಯ ಪ್ರಕಾಶನ (ಅರೇಅಂಗಡಿ, ಹೊನ್ನಾವರ - 581 334, ಉತ್ತರ ಕನ್ನಡ ಜಿಲ್ಲೆ) ಪ್ರಕಟಿಸಿದೆ.

    ಬಂಡಾಯ ಪ್ರಕಾಶನದ ಸಂಚಾಲಕರಾದ ಐ. ಕೆ. ಅನಿಲ ಅವರ "ಪ್ರಕಾಶಕರ ಮಾತು" , ಕರ್ನಾಟಕ ಹೈಕೋರ್ಟಿನ ಗೌರವಾನ್ವಿತ ನಿವೃತ್ತ ನ್ಯಾಯಮೂರ್ತಿಗಳಾದ ಹೆಚ್. ಎನ್. ನಾಗಮೋಹನದಾಸ್ ಅವರ "ಮುನ್ನುಡಿ…

  • ‘ನಮ್ಮ ವೃತ್ತಪತ್ರಿಕೆಗಳ ಕಥೆ’ ಎಂಬ ಪುಟ್ಟ ಪುಸ್ತಕವು ಹಳೆಯ ಕಾಲದ ಪತ್ರಿಕೆಗಳ ಬಗ್ಗೆ ಕೊಂಚ ಮಾಹಿತಿ ನೀಡುತ್ತದೆ. ಇದು ಕನ್ನಡಕ್ಕೆ ಅನುವಾದ ಮಾಡಿದ ಪುಸ್ತಕವಾದುದರಿಂದ ಭಾಷೆ ಸ್ವಲ್ಪ ಕಗ್ಗಂಟಾಗಿಯೇ ಇದೆ. ೧೯೯೨ರಲ್ಲಿ ಮೊದಲ ಮುದ್ರಣ ಕಂಡ ಈ ಪುಸ್ತಕವು ೨೦೦೪ರಲ್ಲಿ ನಾಲ್ಕನೇ ಮುದ್ರಣವಾಗಿದೆ.  

    ಈ ಪುಸ್ತಕದಲ್ಲಿ ಪತ್ರಿಕೆಗಳ ಪ್ರಾರಂಭದ ದಿನಗಳನ್ನು ತಿಳಿಸಲಾಗಿದೆ. ಒಂದೆಡೆ ಬರೆಯುತ್ತಾರೆ ‘ ಇಂದಿನ ವೃತ್ತಪತ್ರಿಕೆಗಳ ಜನನ ಮೂಲವನ್ನು ನಾವು ಕಾಣಬೇಕಿದ್ದಲ್ಲಿ ಜೂಲಿಯಸ್ ಸೀಸರನ ರೋಮನ್ ಕಾಲಕ್ಕೆ ತೆರಳಬೇಕಾಗುತ್ತದೆ. ‘ಆಕ್ಟ ಡಯುರ್ನ' ಅಂದರೆ ದೈನಂದಿನ ಘಟನೆಗಳು ಎಂಬ ಹೆಸರಿನ ಕೈಬರಹದ ಸಾರ್ವಜನಿಕ ಪ್ರಕಟನೆಗಳನ್ನು ಅವನು ಹೊರಡಿಸಲು ಪ್ರಾರಂಭಿಸಿದ. ನಂತರ ಕ್ರಿ.ಪೂ.೫೯ರಲ್ಲಿ…

  • ಧರ್ಮ, ತತ್ತ್ವ ದರ್ಶನ ಹಾಗೂ ಪುರಾಣ ಈ ವಿಚಾರಗಳನ್ನು ಒಳಗೊಂಡ ಮಾಹಿತಿಯನ್ನು ಪುಸ್ತಕದ ಮೂಲಕ ಹಂಚಿಕೊಂಡಿದ್ದಾರೆ ಈ ಕೃತಿಯ ಲೇಖಕರಾದ ಡಾ. ಎಂ.ಪ್ರಭಾಕರ ಜೋಶಿಯವರು. ಇವರು ನಿವೃತ್ತ ಪ್ರಾಂಶುಪಾಲರು, ಹಿರಿಯ ಸಂಸ್ಕೃತಿ ತಜ್ಞ, ಅಗ್ರಪಂಕ್ತಿಯ ಅರ್ಥದಾರಿ, ಕಲಾವಿಮರ್ಶಕ, ಸಂಶೋಧಕ, ಕವಿ, ಅಂಕಣಕಾರ, ಕಲಾ ಕಾರ್ಯಕರ್ತ ಹಾಗೂ ನಾಡಿನ ಬಹುಶ್ರುತ ವಿಧ್ವಾಂಸರಲ್ಲೊಬ್ಬರು. ಇವರು ಈ ಪುಸ್ತಕದಲ್ಲಿ ಭಾರತೀಯ ದರ್ಶನ ಶಾಸ್ತ್ರ, ಚಿಂತನ ವಿಧಾನ, ಪುರಾಣ ವಿಚಾರಗಳನ್ನು ಪಂಥೀಯ ಅತಿವಾದಗಳಿಲ್ಲದ, ಒಂದು ಉದಾರ ಗ್ರಹಿಕೆಯಿಂದ ನೋಡುವ, ಅರ್ಥೈಸುವಿಕೆಗೆ ಪ್ರಚೋದಿಸುವ, ಚರ್ಚೆಗಳನ್ನು ಪ್ರೇರಿಸುವ ಬರಹಗಳಿವೆ.

    ಇವರು ತಮ್ಮ ಮುನ್ನುಡಿ ‘ಅರಿಕೆ'ಯಲ್ಲಿ ಬರೆಯುತ್ತಾರೆ “ಧರ್ಮ, ತತ್ತ್ವಶಾಸ್ತ್ರ…

  • ರವಿ ಬೆಳಗೆರೆಯವರ ನಿಧನದ ಬಳಿಕ ಹೊರ ಬಂದ ಪುಸ್ತಕಗಳಲ್ಲಿ ಇದು ಒಂದು. ಬಹಳ ಹಿಂದೆ ‘ಒಟ್ಟಾರೆ ಕಥೆಗಳು' ಹೆಸರಿನಲ್ಲಿ ಹಲವಾರು ಕಥೆಗಳು ಪ್ರಕಟವಾದುದ್ದಿದೆ. ಆ ಪುಸ್ತಕದ ಪ್ರತಿಗಳು ಮುಗಿದಿದ್ದವು. ಅವೇ ಕಥೆಗಳಿಗೆ ಇನ್ನಷ್ಟು ಕಥೆಗಳನ್ನು ಸೇರಿಸಿ ರವಿ ಬೆಳಗೆರೆಯವರ ಸಮಗ್ರ ಕಥೆಗಳನ್ನು ಪುಸ್ತಕ ರೂಪದಲ್ಲಿ ಹೊರತರಲಾಗಿದೆ. ಒಂದು ರೀತಿಯಲ್ಲಿ ಈ ಪುಸ್ತಕವನ್ನು ಓದಿದರೆ ರವಿ ಬೆಳಗೆರೆಯವರ ಎಲ್ಲಾ ಕಥೆಗಳನ್ನು ಒಂದೇ ಗುಕ್ಕಿನಲ್ಲಿ ಓದಿದಂತೆ ಆಗುತ್ತದೆ. ಬೆಳಗೆರೆಯವರ ಕಥೆಗೆಗಳಿಗೆ ತಮ್ಮದೇ ಆದ ಶೈಲಿ ಇದೆ. ಪತ್ರಿಕೋದ್ಯಮದ ಗಿರಣಿಗೆ ಬಿದ್ದ ಇವರು ನಂತರ ಕಥೆ ಬರೆದದ್ದು ಕಮ್ಮಿಯೇ. ಆದುದರಿಂದ ಈ ಪುಸ್ತಕದಲ್ಲಿರುವ ೨೩ ಕಥೆಗಳು ಮಹತ್ವಪೂರ್ಣವಾಗಿವೆ.  

    ತಮ್ಮ ಬೆನ್ನುಡಿಯಲ್ಲಿ ರವಿ…

  • ಸಪ್ನ ಬುಕ್ ಹೌಸ್ ಅವರು ಪ್ರಕಾಶಿಸಿದ ಜಗತ್ತಿನ ಪ್ರಸಿದ್ಧ ವ್ಯಕ್ತಿಗಳು ಪುಸ್ತಕವು ವಾಲ್ಮೀಕಿಯಿಂದ ರಾಜೀವ್ ಗಾಂಧಿವರೆಗಿನ ೩೦೪ ಸ್ತ್ರೀ-ಪುರುಷರ ಜೀವನ - ಸಾಧನೆಗಳ ಮೂಲಕ ಪ್ರಪಂಚದ ಇತಿಹಾಸದ ಒಂದು ಇಣುಕುನೋಟವನ್ನು ತೋರಿಸಲು ಲೇಖಕರು ಹೊರಟಿದ್ದಾರೆ. ತಾಯಿನಾಡಿಗಾಗಿ ದುಡಿದವರ ಬಗ್ಗೆ ಯುವಜನರಿಗೆ ಪರಿಚಯ ಮಾಡಿಕೊಟ್ಟು, ಅವರು ಸಮಾಜದ ಹಿರಿಯರ ಸದ್ಗುಣಗಳಿಂದ ಸ್ಪೂರ್ತಿ ಪಡೆದು, ತ್ಯಾಗ ಮಾಡಬಲ್ಲವರಾಗಿ, ಸಿದ್ಧಿ ಪಡೆಯುವಂತೆ ಮಾಡಬೇಕು. ವಿವಿಧ ಯುಗದ, ವಿವಿಧ ಕ್ಷೇತ್ರಗಳ, ಅನೇಕ ಹಿರಿಯ ಚೇತನಗಳ ಹಾಗೂ ಬದುಕಿಗೆ ಹೆಚ್ಚಿನ ಸಂಸ್ಕಾರವನ್ನು ಒದಗಿಸಬಲ್ಲ ಮಹಾನ್ ವ್ಯಕ್ತಿಗಳ ಪರಿಚಯ ಯುವಜನರಿಗೆ ಆಗಬೇಕು ಎನ್ನುವುದು ಈ ಪುಸ್ತಕದ ಉದ್ದೇಶ.

    ಹಲವಾರು ಜನರ ವಿವರಗಳು ಇವೆಯಾದರೂ ಬಹಳ…

  • ರಘು ಇಡ್ಕಿದು ಇವರು ವೃತ್ತಿಯಲ್ಲಿ ಉಪನ್ಯಾಸಕರು. ಇವರು ಉತ್ತಮ ಕವಿ ಹಾಗೂ ಬರಹಗಾರರು. ಇವರ ಹಲವಾರು ಪುಸ್ತಕಗಳು ಈಗಾಗಲೇ ಪ್ರಕಟವಾಗಿವೆ. ಕೊರಗ ತನಿಯ ಎಂಬುವುದು ಇವರು ಬರೆದಿರುವ ಕನ್ನಡ ನಾಟಕ. ಡಾ.ಬಿ.ಎ.ವಿವೇಕ್ ರೈ ಅವರು ತಮ್ಮ ಮುನ್ನುಡಿಯಲ್ಲಿ ಬರೆಯುತ್ತಾರೆ “ತುಳು ಮತ್ತು ಕನ್ನಡದಲ್ಲಿ ನಿರಂತರ ಸಾಹಿತ್ಯ ಕೃಷಿ ಮಾಡುತ್ತಾ ಬರುತ್ತಿರುವ ರಘು ಇಡ್ಕಿದು ತಮ್ಮ ಸಜ್ಜನಿಕೆ, ಭಾಷಾ ಪ್ರೀತಿ, ಸಾಹಿತ್ಯ ಸೃಷ್ಟಿ ಮತ್ತು ಸಮತೋಲನದ ಜೀವನದೃಷ್ಟಿಗಳ ಕಾರಣವಾಗಿ ಕರಾವಳಿಯ ಹೊಸ ಪೀಳಿಗೆಯ ಲೇಖಕರಲ್ಲಿ ಅನನ್ಯರಾಗಿದ್ದಾರೆ.

    ರಘು ಅವರು ತುಳು ಪಾಡ್ದನದ ಕಥಾಶರೀರವನ್ನು ಇಟ್ಟುಕೊಂಡೇ ಅದರ ಸಾಮಾಜಿಕ ಧ್ವನಿಗಳನ್ನು ಇಂದಿನ ಕಾಲಕ್ಕೂ ಅನ್ವಯಿಸುವಂತೆ ‘ಕೊರಗ ತನಿಯ' ನಾಟಕದಲ್ಲಿ…

  • *ಉಪ್ಪುಂದ ಚಂದ್ರಶೇಖರ ಹೊಳ್ಳರ ಅಭಿನಂದನ ಗ್ರಂಥ "ಉಪ್ಪುಂದದ ಹೊಳಪು"*

    " ಉಪ್ಪುಂದದ ಹೊಳಪು" , ಉಪ್ಪುಂದ ಚಂದ್ರಶೇಖರ ಹೊಳ್ಳರ ಅಭಿನಂದನ ಗ್ರಂಥ. ಡಾ. ಕನರಾಡಿ ವಾದಿರಾಜ ಭಟ್ಟರು ಪ್ರಧಾನ ಸಂಪಾದಕರು. ನೀಲಾವರ ಸುರೇಂದ್ರ ಅಡಿಗ, ಯು. ಗಣೇಶ ಪ್ರಸನ್ನ ಮಯ್ಯ, ಎಂ. ಪ್ರಕಾಶ ಪಡಿಯಾರ್, ಸಂತೋಷ ಕೋಣಿ ಹಾಗೂ ಪ್ರಕಾಶ್ಚಂದ್ರ ಶೆಟ್ಟಿ ಹಲ್ನಾಡು ಇವರು ಸಂಪಾದಕೀಯ ಮಂಡಳಿ ಸದಸ್ಯರು.. 16 + 314 + 16 ಪುಟಗಳ, 400 ರೂಪಾಯಿ ಬೆಲೆಯ ಗ್ರಂಥವನ್ನು 2016ರಲ್ಲಿ "ಕುಂದ ಅಧ್ಯಯನ ಕೇಂದ್ರ" (ಶಂಕರ ಕಲಾ ಮಂದಿರ, ಉಪ್ಪುಂದ- 576232, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ) ಪ್ರಕಟಿಸಿದೆ.

    ಖ್ಯಾತ ಚಿತ್ರ ಕಲಾವಿದ ಪಿ. ಎನ್. ಆಚಾರ್ ಅವರು ರಚಿಸಿದ…

  • ನಮ್ಮ ನಡುವೆ ಬಾಳಿ ಬದುಕಿದ ಮತ್ತು ಇತಿಹಾಸದ ಪುಟಗಳಲ್ಲಿ ಹಾದು ಹೋದ ಹಲವಾರು ಸಾಧಕರು ಅಲ್ಪಾಯುಷಿಗಳಾಗಿದ್ದರು. ಅವರು ಬಾಳಿ ಬದುಕಿದ ಸ್ವಲ್ಪವೇ ಸಮಯದಲ್ಲಿ ಅಪಾರ ಸಾಧನೆ ಮಾಡಿ ಅಜರಾಮರವಾದವರು. ಅವರ ಈ ಬದುಕಿನ ಪುಟಗಳನ್ನು ಅನಾವರಣ ಮಾಡಿದ್ದಾರೆ ಪ್ರೊ.ಗೀತಾ ಶ್ರೀನಿವಾಸ್ ಅವರು. ಇವರು ಆಂಗ್ಲ ಭಾಷಾ ಪ್ರಾಧ್ಯಾಪಕಿ ಹಾಗೂ ಅನುವಾದಕಿ. ಇವರು ಅನೇಕ ರಾಷ್ಟ್ರೀಯ ವಿಚಾರ ಸಂಕಿರಣ ಮತ್ತು ಕಮ್ಮಟಗಳಲ್ಲಿ ಭಾಗವಹಿಸಿದ್ದಾರೆ. ಆಕಾಶವಾಣಿ ಹಾಗೂ ದೂರದರ್ಶನದಲ್ಲಿ ಉಪನ್ಯಾಸಗಳನ್ನು ನೀಡಿದ್ದಾರೆ. ‘ಅಲ್ಪಾಯುಷಿ ಮಹಾನ್ ಸಾಧಕರು” ಇವರ ಮೊದಲ ಕನ್ನಡ ಕೃತಿ.

    ಈ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ ಜ್ಞಾನವಾಣಿ ಬಾನುಲಿ ಕೇಂದ್ರ, ಬೆಂಗಳೂರು ಇದರ ನಿಲಯ ವ್ಯವಸ್ಥಾಪಕರಾದ ಡಾ.ಎಸ್.ಎಸ್.…