ಪುಸ್ತಕ ಸಂಪದ

  • ಪತ್ರಕರ್ತ, ಸಂಘಟಕ ಶ್ರೀರಾಮ ದಿವಾಣರದ್ದು ಬಹುಮುಖ ಪ್ರತಿಭೆ. ಅವರೊಬ್ಬ ಹೋರಾಟಗಾರ, ಸಾಮಾಜಿಕ ಕಾರ್ಯಕರ್ತ. ‘ವ್ಯವಸ್ಥೆಯೆಂಬ ಅವ್ಯವಸ್ಥೆ' ಇದು ಶ್ರೀರಾಮ ದಿವಾಣರ ಎರಡನೇ ಪ್ರಕಟಿತ ಲೇಖನಗಳ ಸಂಕಲನ. ಈಗಾಗಲೇ ೩೧ ಆಯ್ದ ಲೇಖನಗಳನ್ನು ‘ಕೃಷ್ಣಾರ್ಪಣ!’ ಎಂಬ ಹೆಸರಿನಲ್ಲಿ ಪುಸ್ತಕ ರೂಪದಲ್ಲಿ ಬಿಡುಗಡೆ ಮಾಡಿದ್ದಾರೆ. ಪ್ರಸ್ತುತ ಈ ಪುಸ್ತಕದಲ್ಲಿರುವ ಲೇಖನಗಳು ೨೦೧೧ ರಿಂದ ೨೦೧೪ರ ನಡುವಿನ ಅವಧಿಯಲ್ಲಿ ಜಯಕಿರಣ ಪತ್ರಿಕೆ, ಹಾಯ್ ಉಡುಪಿ ಮತ್ತು ಉಡುಪಿ ಬಿಟ್ಸ್.ಇನ್ ಇವುಗಳಲ್ಲಿ ಬರೆದ ಅಂಕಣ ಬರಹಗಳು. ೬೧ ಲೇಖನಗಳನ್ನು ಒಳಗೊಂಡಿರುವ ಈ ಸಂಕಲನವು ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಆಗುತ್ತಿರುವ ಅವ್ಯವಸ್ಥೆಯ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಡುತ್ತದೆ. 

    ಲೇಖಕರಾದ ಶ್ರೀರಾಮ ದಿವಾಣರೇ…

  • ‘ಪಾರಿವಾಳಗಳು’ ಎಂಬ ಲಲಿತ ಪ್ರಬಂಧಗಳನ್ನು ಒಳಗೊಂಡಿರುವ ಪುಸ್ತಕವನ್ನು ಕೈಯಲ್ಲಿ ಓದಲು ಹಿಡಿದುಕೊಂಡಾಗ ನನಗೆ ಅದರ ಕಥಾ ವಸ್ತುವಿನ ಮೇಲೆ ಬಹಳವೇನೂ ಅಪೇಕ್ಷೆಯಿರಲಿಲ್ಲ. ಆದರೆ ಸ್ವಲ್ಪ ಕುತೂಹಲ ಖಂಡಿತಾ ಇತ್ತು. ಇದು ಲೇಖಕರಾದ ವಿಠಲ್ ಶೆಣೈ ಅವರ ಮೊದಲ ಪ್ರಕಟಿತ ಪುಸ್ತಕ. ಈಗಾಗಲೇ ಅವರು ಬಿಟ್ ಕಾಯಿನ್ ಬಗ್ಗೆ ಬರೆದ ‘ನಿಗೂಢ ನಾಣ್ಯ' ಮತ್ತು ‘ಹುಲಿವೇಷ’ ಎಂಬ ಕಥಾ ಸಂಕಲನವನ್ನು ಓದಿ, ಮಾಹಿತಿ ಹಂಚಿಕೊಂಡಿರುವುದರಿಂದ ಅವರ ಮೊದಲ ಪುಸ್ತಕ ಹೇಗಿರಬಹುದು? ಎಂಬುವುದರ ಬಗ್ಗೆ ಕೊಂಚ ಕುತೂಹಲವಿತ್ತು. ಆದರೆ ಪುಸ್ತಕದ ಪುಟಗಳನ್ನು ತೆರೆದು ಓದುತ್ತಾ ಹೋದಂತೆ ಇದು ನನ್ನದೂ ಕತೆಯಲ್ವಾ, ನನಗೂ ಹೀಗೇ ಆಗಿದೆಯಲ್ಲಾ, ವಿದೇಶಕ್ಕೆ ಹೋದರೆ ಹೀಗೂ ಪೀಕಲಾಟವಾಗುತ್ತಾ? ಎಂದೆಲ್ಲಾ ಅನಿಸಿ ಬಹಳ ಆಪ್ತವೆನಿಸಿತು. ಒಂದೆರಡು ಗಂಟೆಯ ಒಳಗೆ…

  • *ಡಾ. ರಘುಪತಿ ಕೆಮ್ತೂರು (ಆರ್.ಕೆ. ಮಣಿಪಾಲ್) ಅವರ "ತುಳುನಾಡಿನ ಸ್ಥಳನಾಮಾಧ್ಯಯನ"*

    ನಿವೃತ್ತ ಪ್ರಾಂಶುಪಾಲರೂ, ಖ್ಯಾತ ವಿಮರ್ಶಕರೂ, ಸಂಶೋಧಕರೂ ಆದ ಡಾ. ರಘುಪತಿ ಕೆಮ್ತೂರು (ಆರ್. ಕೆ. ಮಣಿಪಾಲ್, 7 - 2 - 105 ಎ 5, "ಪುದರ್", ಹರಿಶ್ಚಂದ್ರ ಮಾರ್ಗ, ಉಡುಪಿ- 576101) ಇವರು 1980ರಲ್ಲಿ ರಚಿಸಿದ ಸಂಶೋಧನಾ ಗ್ರಂಥ "ತುಳುನಾಡಿನ ಸ್ಥಳನಾಮಾಧ್ಯಯನ". ಈ ಮಹಾ ಸಂಶೋಧನಾ ಪ್ರಬಂಧಕ್ಕಾಗಿ ಮೈಸೂರು ವಿ.ವಿ.ಯು 1981ರಲ್ಲಿ ಡಾ. ರಘುಪತಿ ಕೆಮ್ತೂರು ಅವರಿಗೆ ಪಿಎಚ್.ಡಿ ಪದವಿಯನ್ನು ನೀಡಿತು.

    ತುಳುನಾಡಿನ ಭೂ ವಿವರ, ಶಾಸನ ಶಾಸ್ತ್ರ, ಭಾಷಾ ಶಾಸ್ತ್ರ, ಜಾನಪದ, ಸಾಮಾಜಿಕ ಮತ್ತು ಸಾಂಸ್ಕೃತಿಕ ಮಾನವ ಶಾಸ್ತ್ರಗಳನ್ನೊಳಗೊಂಡ ಬಹುಮುಖೀ ಅಧ್ಯಯನ…

  • ಕಥೆಗಾರ, ಪತ್ರಕರ್ತ ಜೋಗಿಯವರು ಫೇಸ್ ಬುಕ್ ಡಾಟ್ ಕಾಮ್/ಮಾನಸ ಜೋಶಿ ಎಂಬ ವಿಲಕ್ಷಣ ಹೆಸರುಳ್ಳ ಕಥಾ ಸಂಗ್ರಹವನ್ನು ಬರೆದಿದ್ದಾರೆ. ಇದಕ್ಕೆ ಕಥೆಗಳು ಮತ್ತು ಕಥೆಯಾಗದ ಕಥೆಗಳು ಎಂದು ಹೆಸರು ಬೇರೆ ನೀಡಿದ್ದಾರೆ. ಜೋಗಿಯವರ ಕಥೆಗಳೇ ಹಾಗೆ ಕಾಡುತ್ತಾ ಇರುತ್ತವೆ. ಅವರೇ ಹೇಳುವಂತೆ ‘ಇನ್ನು ಸಣ್ಣ ಕಥೆಗಳನ್ನು ಬರೆಯಬಾರದು ಎಂಬ ಬಹುದಿನದ ನಿರ್ಧಾರ ಕರಗಿದ ನಂತರ ಹುಟ್ಟಿದ ಕಥೆಗಳು ಇವು. ಸಣ್ಣ ಕಥೆಗಳ ದೊಡ್ಡ ಸಮಸ್ಯೆ ಇದು: ಅವು ಪುಟಗಳ ಸಂಖ್ಯೆಯಲ್ಲಿ ಚಿಕ್ಕದಾಗಿದ್ದರೂ ಒಂದು ಕಾದಂಬರಿಯ ಆತ್ಮವನ್ನೇ ನುಂಗಿ ಬಿಡುತ್ತವೆ. ವೈಯಕ್ತಿಕವಾಗಿ ನನಗೆ ಸಣ್ಣ ಕಥೆಗಳಲ್ಲಿ ನಂಬಿಕೆಯೂ ಹೊರಟುಹೋಗಿದೆ. ಅವುಗಳನ್ನು ಕ್ಷಣದ ಓದಿಗೆ ಬರೆಯಬಹುದು. ಓದುಗರೂ ಅದನ್ನು ಓದಿ ಮರೆಯುತ್ತಾರೆ ಎಂಬುದು ಕ್ರಮೇಣ ಅರ್ಥವಾಗಿದೆ.’ 

  • ಸಿರಿಧಾನ್ಯವು ಸರ್ವ ರೋಗಗಳಿಗೆ ರಾಮಬಾಣ ಎನ್ನುವ ವಿಷಯವನ್ನು ಹಲವಾರು ಉದಾಹರಣೆಗಳ ಮೂಲಕ ಈ ಪುಸ್ತಕದ ಮೂಲಕ ಹೇಳಲು ಹೊರಟಿದ್ದಾರೆ ಲೇಖಕರಾದ ಎನ್. ಭವಾನಿಶಂಕರ್. ‘ಸಿರಿಧಾನ್ಯದಲ್ಲಿ ಔಷಧೀಯ ಗುಣಗಳಿವೆ. ಹೈಟೆಕ್ ಆಸ್ಪತ್ರೆಗಳಿಂದ ದೂರವಿರಿ. ಎಲ್ಲಾ ಕಾಯಿಲೆಗಳಿಗೂ ಈ ಆಹಾರಗಳು ಔಷಧ. ಅವುಗಳ ಪರಿಚಯ. ನಿಮ್ಮ ಮಕ್ಕಳಿಗೆ ಈ ವಿಷಯುಕ್ತ ಆಹಾರವನ್ನು ಕೊಡಬೇಡಿ. ನೀವೂ ತಿನ್ನಬೇಡಿ. ಭಯಾನಕ ಕಾಯಿಲೆಗಳು ಬರುತ್ತವೆ. ಹತ್ತು ವರ್ಷದ ಮಕ್ಕಳಿಗೆ ಡಯಾಬೀಟೀಸ್, ಬೇಗ ಮುಟ್ಟಾಗಲು ಕಾರಣವೇನು? ಡಯಾಬಿಟೀಸ್, ಹೃದಯ ಕಾಯಿಲೆ, ಅಧಿಕ ಕೊಲೆಸ್ಟ್ರಾಲ್, ಗ್ಯಾಂಗ್ರೀನ್, ಫಿಟ್ಸ್... ಗುಣವಾಗುತ್ತದೆ. ಪ್ರಖ್ಯಾತ ವೈದ್ಯರಾದ ಡಾ.ಖಾದರ್ ಅವರು ಗುಣಪಡಿಸುತ್ತಿರುವ ರೋಗಗಳು ಮತ್ತು ಔಷಧಗಳು. ಸಿರಿಧಾನ್ಯ ಕೃಷಿ ವಿಧಾನ. ಸಿರಿಧಾನ್ಯದಲ್ಲಿರುವ…

  • *ಹಳೆಕೋಟೆ ಸುಂದರ ಬಂಗೇರಾ ಅವರು ಸಂಪಾದಿಸಿದ ಕವನ ಸಂಕಲನ "ಹದ್ದಿನ ಕವನ"*

    ಇಪ್ಪತ್ತಮೂರು ಮಂದಿ ಕವಿಗಳ ಇಪ್ಪತ್ತೇಳು ಕವನಗಳಿರುವ ಸಂಕಲನ " ಹದ್ದಿನ ಕವನ". ಕವಿ, ಪತ್ರಕರ್ತ ಹಳೆಕೋಟೆ ಸುಂದರ ಬಂಗೇರಾ ಅವರು ಸಂಕಲನವನ್ನು ಸಂಪಾದಿಸಿದ್ದಾರೆ. ಈಗಲ್ ಪ್ರಕಾಶನ, ಕೆ. ಎಂ. ರಸ್ತೆ, ಬಿಳಗುಳ, ಹೆಸಗಲ್ ಅಂಚೆ, ಮೂಡಿಗೆರೆ- 577 132, ಚಿಕ್ಕಮಗಳೂರು ಜಿಲ್ಲೆ ಸಂಸ್ಥೆಯು 2019 ರಲ್ಲಿ ಪ್ರಕಾಶಿಸಿದ ಸಂಕಲನದಲ್ಲಿ 44 + 4 ಪುಟಗಳಿದ್ದು, ಬೆಲೆ 70 ರೂಪಾಯಿ.

    ಸಂಕಲನದ 23 ಮಂದಿ ಕವಿಗಳಲ್ಲಿ ಒಬ್ಬರಾಗಿರುವ, ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ  ಕುಂದೂರು ಅಶೋಕ ಇವರ ಮುನ್ನುಡಿ ಮತ್ತು ಕವನಗಳನ್ನು ಸಂಪಾದಿಸಿದ,…

  • ಕನ್ನಡದ ಖ್ಯಾತ ಪತ್ರಕರ್ತ, ಲೇಖಕ ರವಿ ಬೆಳಗೆರೆಯ ಲೇಖನಿಯಿಂದ ಮೂಡಿ ಬಂದ ‘ಆತ್ಮ' ಕಾದಂಬರಿ ನಿಜಕ್ಕೂ ಕುತೂಹಲಕಾರಿ ಕಥಾ ಹಂದರವನ್ನು ಹೊಂದಿದೆ. ಬೆಳಗೆರೆಯವರೇ ಹೇಳುವಂತೆ ಇದು ವರ್ಷಗಟ್ಟಲೆ ಕಾದು ಕುಳಿತ ಕಾದಂಬರಿಯಂತೆ. ಇದರ ಕೆಲವು ಭಾಗಗಳು ‘ಹಾಯ್ ಬೆಂಗಳೂರು' ಪತ್ರಿಕೆಯಲ್ಲಿ ಮೂಡಿಬಂದು ಓದುಗರ ಆಸಕ್ತಿಯನ್ನು ಕೆರಳಿಸಿದ್ದವು. ಪ್ರತೀ ವಾರ ‘ಮುಂದೇನಾಗುತ್ತೆ' ಎಂದು ಕೇಳುವಂತೆ ಮಾಡಿದ್ದವು. ಕೆಲವರಂತೂ ಹೀಗೆ ಕಂತು ಕಂತುಗಳಲ್ಲಿ ಓದಲು ಪ್ರಾರಂಭಿಸಿದರೆ ಈ ಘಟನೆಗಳೆಲ್ಲಾ ನಮ್ಮ ಜೀವನದಲ್ಲಿ ನಡೆಯುತ್ತದೆ ಅನಿಸುತ್ತದೆ. ಇನ್ನಷ್ಟು ಓದುವ ಚಪಲ ಕಾಣಿಸುತ್ತದೆ. ಹಿಂದೆಯೇ ಭಯವೂ ಕಾಡುತ್ತದೆ. ಅದಕ್ಕೆ ಬೇಗ ಪುಸ್ತಕ ಮಾಡಿ ನಮ್ಮ ಕೈಗಿಡಿ ಎಂದು ಓದುಗರ ಕೋರಿಕೆಯಾಗಿತ್ತು. ರವಿಯವರ ಮಾತಿನಂತೆ' ಇದನ್ನು ಮತ್ತೊಮ್ಮೆ…

  • ಮ.ನವೀನಚಂದ್ರ ಪಾಲ್ (ಮ.ನ) ಎಂಬ ಪತ್ರಕರ್ತರನ್ನು ಬಹುತೇಕರು ಮರೆತೇ ಹೋಗಿದ್ದಾರೆ. ಒಂದು ಸಮಯದ ಧೀಮಂತ ಪತ್ರಕರ್ತ ನವೀನಚಂದ್ರ ಪಾಲ್ ಬಗೆಗಿನ ಪುಸ್ತಕವು ಕನ್ನಡ ಸಂಘ ಕಾಂತಾವರ ತಮ್ಮ ‘ನಾಡಿಗೆ ನಮಸ್ಕಾರ' ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆ ಯೋಜನೆಯ ಅಡಿಯಲ್ಲಿ ಪ್ರಕಟಿಸಿದ ೨೪೮ನೇ ಕುಸುಮ. ಈ ಕೃತಿಯನ್ನು ಪತ್ರಕರ್ತರೇ ಆಗಿರುವ ಉಡುಪಿಯ ಶ್ರೀರಾಮ ದಿವಾಣ ಇವರು ಬರೆದಿದ್ದಾರೆ. ಪುಸ್ತಕ ಸಣ್ಣದಾಗಿದ್ದರೂ ನವೀನಚಂದ್ರ ಪಾಲ್ ಅವರ ಸಾಧನೆ ಸಣ್ಣದಲ್ಲ. 

    ಪುಸ್ತಕದ ಬೆನ್ನುಡಿಯಲ್ಲಿ ಲೇಖಕ, ವಿಮರ್ಶಕ ಡಾ. ಬಿ.ಜನಾರ್ದನ ಭಟ್ ಅವರು ಬರೆಯುತ್ತಾರೆ ‘ಕಥೆ, ಕವನ , ಸಾಹಿತ್ಯದ ಸುತ್ತವೇ ಸುತ್ತುತ್ತಿದ್ದ ಕನ್ನಡ ಪತ್ರಿಕೋದ್ಯಮಕ್ಕೆ ಜನಪರ ಧ್ವನಿಯಾದ ‘ಸಂಗಾತಿ'ಯ ಮೂಲಕ ಹೊಸ ರೂಪು…

  • *ಪೇರೂರು ಜಾರು ಅವರ ಮಹಾಕಾವ್ಯ "ಗುರುಗಳ ಗುರು ನಾರಾಯಣ*"

    ಗುರುಗಳ ಗುರು ನಾರಾಯಣ" , ಪೇರೂರು ಜಾರು ಅವರು ತನ್ನದೇ ಆದ ನೂತನ ಅಯ್ನಿಲೆ ಬಂಧ ಛಂದಸ್ಸಿನಲ್ಲಿ ರಚಿಸಿದ ಮಹಾ ಕಾವ್ಯ. ಲೇಖಕರದ್ದೇ ಆದ "ತೂಟೆ ಪ್ರಕಟನಾಲಯ" , ಅಂಗಡಿ ಮನೆ, ಪೇರೂರು - 576213, ಉಡುಪಿ ಜಿಲ್ಲೆ" ಕೃತಿಯನ್ನು ಪ್ರಕಾಶಿಸಿದೆ. 2018ರಲ್ಲಿ ಪ್ರಕಟವಾದ 216 + 4 ಪುಟಗಳ ಕೃತಿಯ ಬೆಲೆ 150 ರೂಪಾಯಿ.

    "ಗುರುಗಳ ಗುರು ನಾರಾಯಣ"ದಲ್ಲಿ ಕವಿ ಪೇರೂರು ಜಾರು ಅವರ 'ಮೊದಲ ಮಾತು' ಮತ್ತು ಜಾರು ಅವರೇ ಆವಿಷ್ಕರಿಸಿದ ಹೊಸದಾದ  "ಅಯ್ನಿಲೆ ಬಂಧ ಛಂದಸ್ಸು" ವಿನಲ್ಲಿ ಈ ಮಹಾಕಾವ್ಯವನ್ನು ಬರೆದಿರುವುದರಿಂದ ಈ ಅಯ್ನಿಲೆ ಬಂಧ ಛಂದಸ್ಸಿನ ಕುರಿತಾದ ವಿವರವಿರುವ 'ಮಹಾ ಕಾವ್ಯ…

  • ಹಿಂದೂ ವಾಯ್ಸ್ ಸಂಪಾದಕರಾದ ಪಿ.ದೈವಮುತ್ತು ಅವರು ಆಂಗ್ಲ ಭಾಷೆಯಲ್ಲಿ ಬರೆದ ‘655 thruths’ ಎಂಬ ಪುಸ್ತಕವನ್ನು ಆದರ್ಶ್ ಗೋಖಲೆಯವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಪಿ. ದೈವಮುತ್ತು ಅವರು ಹೇಳುವಂತೆ ‘ಇಸ್ಲಾಂ, ಕ್ರೈಸ್ತ ಹಾಗೂ ಕಮ್ಯೂನಿಷ್ಟರಂತೆ ‘ಜಾತ್ಯಾತೀತವಾದ' ಎಂಬುದು ಹಿಂದೂಗಳ ಶತ್ರುವಾಗಿ ರೂಪುಗೊಳ್ಳುತ್ತಿರುವ ಹೊಸದಾದ ಮತ. ನಾಸ್ತಿಕವಾದವೆಂದು ಹೇಳಿಕೊಂಡರೂ ಹಿಂದೂ ಧರ್ಮದ ವಿರುದ್ಧ ದ್ವೇಷ ಕಾರುವುದೇ ಈ ನವಮತದ ಧ್ಯೇಯವಾಗಿದೆ. ಸತ್ಯ ಅರಿಯದೆ ಆ ಮತವನ್ನು ಸೇರಿರುವ ಅನೇಕರು ನಮ್ಮ ನಡುವೆ ಇರಬಹುದು. ಸತ್ಯವೇನೆಂದು ತಿಳಿದ ನಂತರ ರಾಷ್ಟ್ರೀಯವಾದದ ಕಡೆಗೆ ಹೊರಳಬಹುದು. ಅಂತಹವರಲ್ಲಿ ನೀವೂ ಒಬ್ಬರಾಗಿದ್ದರೆ ಈ ಪುಸ್ತಕವು ನಿಮಗಾಗಿಯೇ ಇದೆ. ಯಾವುದೇ ಪೂರ್ವಾಗ್ರಹ ಪೀಡಿತರಾಗದೇ ಈ ಪುಸ್ತಕವನ್ನು ಓದಿ.’…